16/06/2021
ಜನ್ಮದಿನಕ್ಕೆ ಶುಭ ಹಾರೈಸಿದ ನನ್ನೆಲ್ಲಾ ಸಹೃದಯಿಗಳಿಗೆ ಮುಗಿದ ಕೈ ಬಾಗಿದ ಶಿರದಿಂದ ಶರಣು ಶರಣಾರ್ಥಿಗಳು
"ಅಹಂಕಾರ ಬೇಡ ಅಭಿಮಾನವಿರಲಿ" ಎಂಬ ಅನುಭಾವದಿಂದ ಸಾರ್ವಜನಿಕ ಸೇವೆಯಲ್ಲಿರುವ ನನಗೆ ನಿಮ್ಮ ಹಾರೈಕೆಯೇ ಶ್ರೀರಕ್ಷೆ.
ನಾನು ಯಾವತ್ತು ಜನುಮ ದಿನ ಆಚರಿಸಿಕೊಂಡಿಲ್ಲ.
ನನಗೆ ಜನ್ಮ ಕೊಟ್ಟ ತಂದೆ ತಾಯಿಯ ಕೃಪೆ ಜೊತೆಗೆ ನಿಮ್ಮೆಲ್ಲರ ಪ್ರೀತಿ,ವಾತ್ಸಲ್ಯ, ಮಮತೆ,ಕರುಣೆ,ಕಾಳಜಿ, ಅಭಿಮಾನದ ಆಶೀರ್ವಾದವೇ ನಿರಂತರವಾಗಿ ನನಗೆ ಮುಖ್ಯ.ಆದರೆ ಅಭಿಮಾನ ಕಡಿಮೆಯಾಗಿಲ್ಲ.
ನನ್ನ ಹುಟ್ಟುಹಬ್ಬಕ್ಕೆ ವಿವಿಧ ಮೂಲಗಳ ಮೂಲಕ ತಮ್ಮದೇಯಾದ ಶೈಲಿ,ರೀತಿಯಲ್ಲಿ ಸಂದೇಶಗಳನ್ನು ಕಳುಹಿಸುವ ಮುಖಾಂತರ ಶುಭಾಶಯ ಕೋರಿದ್ದಿರಿ
ಕ್ಷಮೆಯಿರಲಿ,ನಿಮ್ಮ ಶುಭ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗಿಲ್ಲ ಆದ ಕಾರಣ ಈ ಮೂಲಕ ತಮಗೆ ಅಭಿನಂದನೆಗಳನ್ನು ತಿಳಿಸಲು ಇಚ್ಛಿಸುತ್ತೇನೆ .
ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ(ವಿಶೇಷವಾಗಿ ತಮ್ಮ ಮನದಲ್ಲಿಯೇ ಶುಭಾಶಯ ಕೋರಿದ),ಹರ ಗುರು ಚರಮೂರ್ತಿಗಳಿಗೆ,ಸಾರ್ವಜನಿಕ ರಂಗದ ಎಲ್ಲಾ ಮಹನೀಯರಿಗೆ,ಹಿತೈಷಿಗಳಿಗೆ ಸ್ನೇಹಿತರಿಗೆ,ಆಪ್ತರಿಗೆ,ಕುಟುಂಬ ವರ್ಗದವರಿಗೆ ಹಾಗೂ ಮುಖ್ಯವಾಗಿ ನನ್ನ ಗ್ರಾಮಸ್ಥರಿಗೆ ಅನಂತ ಅನಂತ ಪ್ರಣಾಮಗಳು.
ನಿಮ್ಮ ಆಶೀರ್ವಾದ ಹೀಗೆ ಇದ್ದರೆ ನಾನು ಸಾರ್ವಜನಿಕ ಸೇವೆಯಲ್ಲಿಯೇ ಜೀವನ ಸವೆಸುವೆ.ನೀವು ನಂಬಿರುವ ದೈವ ನಿಮ್ಮೆಲ್ಲರಿಗೂ ಉತ್ತಮ ಆರೋಗ್ಯ, ಸಂತಸ ಹಾಗೂ ಸುಖಮಯ ಜೀವನ ನೀಡಲಿ ನೂರಾರು ಕಾಲ ನನ್ನ ಜನ್ಮದಿನಕ್ಕೆ ಹಾರೈಸುವಂತಾಗಲಿ.ಪ್ರೀತಿಯೊಂದುಳಿದೆಲ್ಲವೂ ವಿಷ,ನನ್ನ ಜೀವ ಮಣ್ಣು ಸೇರುವವರೆಗೂ ತಮ್ಮ ಪ್ರೀತಿಯನ್ನೇ ನಿರೀಕ್ಷಿಸುತ್ತೆನೆ.ನಿಮ್ಮ ಸಂದೇಶಗಳು ನನ್ನನ್ನು ಭಾವನಾತ್ಮಕವಾಗಿ ಸೆಳೆದಿವೆ.ಶುಭವನ್ನೇ ನುಡಿದ ಮುನ್ನುಡಿಗಳಗಳಿಂದ ತುಂಬಾ ಸಂತೋಷವಾಗಿದ್ದೇನೆ. ಕೊನೆಯವರೆಗೂ ಹೀಗೆ ಇರಲಿ ನಿಮ್ಮ ಪ್ರೀತಿ,ಸ್ನೇಹ,ವಿಶ್ವಾಸ.
ಮತ್ತೊಮ್ಮೆ ನಿಮ್ಮೆಲ್ಲರಿಗೂ ಅಭಿಮಾನಪೂರ್ವಕ ಧನ್ಯವಾದಗಳು.
"ಎನಗಿಂತ ಕಿರಿಯರಿಲ್ಲ,ಶಿವಭಕ್ತರಿಗಿಂತ ಹಿರಿಯರಿಲ್ಲ" ವಚನದ ಅನುಸಾರ ನಿಮ್ಮೆಲ್ಲರಿಗೂ ವಂದಿಸುತ್ತೇನೆ.
ಜಗವೇಲ್ಲಾ ಶೀಘ್ರದಲ್ಲಿ ಕೊರೋನಾ ಮಹಾಮಾರಿಯಿಂದ ಮುಕ್ತವಾಗಲಿ,
ಉತ್ತಮ ಮಳೆ ಬೆಳೆಯೊಂದಿಗೆ ರೈತನ ಬದುಕು ಹಸನಾಗಲಿ.
ಜೈ ಜವಾನ್ ಜೈ ಕಿಸಾನ್ ಜೈ ವಿಜ್ಞಾನ
-ಅರುಣರೆಡ್ಡಿ ಶಿವಪುರ
Doddappagouda Patil Naribol