Zilla Panchayat Vijayapur

Zilla Panchayat Vijayapur Rural Development and Panchayat Raj Department

ಇಂದು ದಿನಾಂಕ 10.04.2026 ರಂದು  ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ವಿಜಯಪುರ ಜಿಲ್ಲಾ ...
10/04/2026

ಇಂದು ದಿನಾಂಕ 10.04.2026 ರಂದು ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ. ಡಾ. ಎಂ.ಬಿ. ಪಾಟೀಲ ರವರು ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ರಾಜ್ಯ ಮಟ್ಟದಲ್ಲಿ ರ್ಯಾಂಕ್ ಪಡೆದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಶುಭ ಹಾರೈಸಿದರು.



🎓ದ್ವಿತೀಯ ಪಿಯುಸಿ ಪರೀಕ್ಷೆ -1ರ ಫಲಿತಾಂಶದಲ್ಲಿ ವಿಜಯಪುರ ಜಿಲ್ಲೆಗೆ ಶೇ. 92.03ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ರಾಜ್ಯ ಮಟ್ಟದಲ್ಲಿ...
10/04/2026

🎓ದ್ವಿತೀಯ ಪಿಯುಸಿ ಪರೀಕ್ಷೆ -1ರ ಫಲಿತಾಂಶದಲ್ಲಿ ವಿಜಯಪುರ ಜಿಲ್ಲೆಗೆ ಶೇ. 92.03ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ರಾಜ್ಯ ಮಟ್ಟದಲ್ಲಿ ನಾಲ್ಕನೇ ಸ್ಥಾನ ಲಭಿಸಿದೆ.

🏅ಕಳೆದ ಬಾರಿ 29ನೇ ಸ್ಥಾನ ಪಡೆದಿದ್ದ ಜಿಲ್ಲೆ ಈ ಬಾರಿ ಟಾಪ್-5 ಜಿಲ್ಲೆಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಅನುಪಮ ಸಾಧನೆ ಮೆರೆದಿದೆ.✨⚡



ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿಗದಿತ ಸಮಯದಲ್ಲಿ ಪರಿಹರಿಸಲು ಜಿಲ್ಲಾ ಪಂಚಾಯತಿ ಕಛೇರಿ, ಕಾರ್ಯನಿರ್ವಾಹಕ ಅಭಿ...
10/04/2026

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿಗದಿತ ಸಮಯದಲ್ಲಿ ಪರಿಹರಿಸಲು ಜಿಲ್ಲಾ ಪಂಚಾಯತಿ ಕಛೇರಿ, ಕಾರ್ಯನಿರ್ವಾಹಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಛೇರಿ ಮತ್ತು ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯಿತಿ ಕಛೇರಿಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ.

1. ಜಿಲ್ಲಾ ಪಂಚಾಯತ ವಿಜಯಪುರ - 08352-277293.

2. ಕಾರ್ಯನಿರ್ವಾಹಕ ಅಭಿಯಂತರರು, ಗ್ರಾ.ಕು.ನೀ & ನೈ ವಿಭಾಗ ವಿಜಯಪುರ - 08352-277941.

3. ಮುದ್ದೇಬಿಹಾಳ - 08356-200606.
4. ತಾಳಿಕೋಟಿ - 08356-200103.
5. ಸಿಂದಗಿ - 08488-221772.
6. ದೇವರ ಹಿಪ್ಪರಗಿ - 08424-200114.
7. ಆಲಮೇಲ - 08488-298900.
8. ವಿಜಯಪುರ - 08352-242423.
9. ಬಬಲೇಶ್ವರ -08355-200005.
10. ತಿಕೋಟಾ - 08352-294506.
11. ಇಂಡಿ - 08359-200026.
12. ಚಡಚಣ - 9480831718.
13. ಬ.ಬಾಗೇವಾಡಿ - 08358-245236.
14. ನಿಡಗುಂದಿ - 08426-200163.
15. ಕೊಲ್ಹಾರ - 08426-200103.

ಈ ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ.

🌟 ಶಿಕ್ಷಣ ಕ್ಷೇತ್ರದಲ್ಲಿ ವಿಜಯಪುರ ಜಿಲ್ಲೆಯ ಗರಿಮೆ ಹೆಚ್ಚಿಸಿದ ಸಾಧನೆ! 🌟🎓 ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ವಿದ್ಯಾರ್ಥಿಗಳ...
09/04/2026

🌟 ಶಿಕ್ಷಣ ಕ್ಷೇತ್ರದಲ್ಲಿ ವಿಜಯಪುರ ಜಿಲ್ಲೆಯ ಗರಿಮೆ ಹೆಚ್ಚಿಸಿದ ಸಾಧನೆ! 🌟

🎓 ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡಿ🏅ರಾಜ್ಯಮಟ್ಟದಲ್ಲಿ 4ನೇ ಸ್ಥಾನ ಪಡೆದು ಹೊಸ ಇತಿಹಾಸ ನಿರ್ಮಿಸಿದ್ದಾರೆ!

📈 ಇದು ಕೇವಲ ಒಂದು ರ್ಯಾಂಕ್ ಅಲ್ಲ —
👉 ವಿದ್ಯಾರ್ಥಿಗಳ ಪರಿಶ್ರಮ
👉 ಶಿಕ್ಷಕರ ನಿಷ್ಠೆ
👉 ಪೋಷಕರ ಬೆಂಬಲ
ಇವುಗಳ ಒಟ್ಟುಗೂಡಿದ ಫಲವಾಗಿದೆ.
ಅವರ ಪರಿಶ್ರಮ, ಸಮರ್ಪಣೆ ಮತ್ತು ಸಾಧನೆ ಇತರ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ....

ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು! 👏

💬 ನಿರೀಕ್ಷಿತ ಫಲಿತಾಂಶ ಬಾರದ ವಿದ್ಯಾರ್ಥಿಗಳಿಗೆ:
ನಿರಾಶೆಯಾಗಬೇಡಿ…
👉 ಪ್ರತಿಯೊಂದು ವಿಫಲತೆ ಹೊಸ ಅವಕಾಶದ ದಾರಿ
👉 ಆಸಕ್ತಿಯಿಂದ ಓದನ್ನು ಮುಂದುವರೆಸಿ
👉 ಮತ್ತೆ ಪ್ರಯತ್ನಿಸಿ — ಯಶಸ್ಸು ನಿಮ್ಮದೇ ಆಗಲಿದೆ!
✨ “ಇಂದು ಪ್ರಯತ್ನ… ನಾಳೆ ಜಯ!”

ಒಮ್ಮೆ ಬಿಸಿಲಿನ ತಾಪಕ್ಕೆ ಬರಿದಾಗಿದ್ದ ನಮ್ಮ ಜಿಲ್ಲಾ ಪಂಚಾಯಿತಿ ಆವರಣ…ಇಂದು ಹಸಿರು ಹೊದಿಕೆಯಲ್ಲಿ ಮಿನುಗುತ್ತಿದೆ 🌿ಮೊದಲು:ಒಣ ಮಣ್ಣು, ಬಿಸಿಲಿನ ...
09/04/2026

ಒಮ್ಮೆ ಬಿಸಿಲಿನ ತಾಪಕ್ಕೆ ಬರಿದಾಗಿದ್ದ ನಮ್ಮ ಜಿಲ್ಲಾ ಪಂಚಾಯಿತಿ ಆವರಣ…
ಇಂದು ಹಸಿರು ಹೊದಿಕೆಯಲ್ಲಿ ಮಿನುಗುತ್ತಿದೆ 🌿

ಮೊದಲು:
ಒಣ ಮಣ್ಣು, ಬಿಸಿಲಿನ ತೀವ್ರತೆ, ನೆರಳಿನ ಕೊರತೆ…
ಪ್ರಕೃತಿಯ ಸ್ಪರ್ಶವಿಲ್ಲದ ನಿಶ್ಶಬ್ದ ವಾತಾವರಣ.

ನಂತರ:
ಹಸಿರು ಗಿಡಗಳು, ತಂಪಾದ ಗಾಳಿ, ನೆರಳಿನ ಮಡಿಲು…
ಜೀವಂತಿಕೆಯು ಮಿಂಚುವ ಸುಂದರ ಪರಿಸರ.

ಈ ಬದಲಾವಣೆ ಸಹಜವಾಗಿ ಬಂದದ್ದಲ್ಲ —
ಇದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಿಷಿ ಆನಂದ ರವರ ಸಂಕಲ್ಪ, ಶ್ರದ್ಧೆ , ಶ್ರಮ, ಮಾರ್ಗದರ್ಶನ ಮತ್ತು ಪರಿಸರದ ಮೇಲೆ ಇರುವ ಕಾಳಜಿಯ ಪ್ರತಿಫಲ.

ಪ್ರತಿ ನೆಟ್ಟ ಗಿಡವೂ ಒಂದು ಕನಸು,
ಪ್ರತಿ ಬೆಳೆದ ಮರವೂ ಒಂದು ಸಾಧನೆ… 🌱

ಇದು ಕೇವಲ ನಮ್ಮ ಕಛೇರಿಯ ಆವರಣದ ಪರಿವರ್ತನೆ ಅಲ್ಲ,
ಇದು ನಮ್ಮ ಮನೋಭಾವದ ಬದಲಾವಣೆಯ ಪ್ರತಿಬಿಂಬ.

ಬನ್ನಿ, ನಾವು ಕೂಡ ಹಸಿರು ಹೆಜ್ಜೆ ಇಡೋಣ…
ನಾಳೆಯ ತಲೆಮಾರಿಗೆ ಸುಂದರ ಪ್ರಕೃತಿಯನ್ನು ಕೊಡುಗೆಯಾಗಿ ನೀಡೋಣ 💚

#ಹಸಿರುಬದಲಾವಣೆ #ಪರಿಸರಸಂರಕ್ಷಣೆ

ಇಂದು ದಿನಾಂಕ 04.04.2026 ರಂದು ಇಂದು ವಿಜಯಪುರ ತಾಲೂಕು ವ್ಯಾಪ್ತಿಯ ವಿವಿಧ  ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಶನಿವಾರ ಆಚರಣೆ ಮಾಡಲಾಯಿತು...
04/04/2026

ಇಂದು ದಿನಾಂಕ 04.04.2026 ರಂದು ಇಂದು ವಿಜಯಪುರ ತಾಲೂಕು ವ್ಯಾಪ್ತಿಯ ವಿವಿಧ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಶನಿವಾರ ಆಚರಣೆ ಮಾಡಲಾಯಿತು.

ಇಂದು ದಿನಾಂಕ 04.04.2026 ರಂದು ಇಂದು ತಾಳಿಕೋಟಿ ತಾಲೂಕು ವ್ಯಾಪ್ತಿಯ ವಿವಿಧ  ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಶನಿವಾರ ಆಚರಣೆ ಮಾಡಲಾಯಿತ...
04/04/2026

ಇಂದು ದಿನಾಂಕ 04.04.2026 ರಂದು ಇಂದು ತಾಳಿಕೋಟಿ ತಾಲೂಕು ವ್ಯಾಪ್ತಿಯ ವಿವಿಧ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಶನಿವಾರ ಆಚರಣೆ ಮಾಡಲಾಯಿತು.

ಇಂದು ದಿನಾಂಕ 04.04.2026 ರಂದು ಇಂದು ಕೊಲ್ಹಾರ ತಾಲೂಕು ವ್ಯಾಪ್ತಿಯ ವಿವಿಧ  ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಶನಿವಾರ ಆಚರಣೆ ಮಾಡಲಾಯಿತು...
04/04/2026

ಇಂದು ದಿನಾಂಕ 04.04.2026 ರಂದು ಇಂದು ಕೊಲ್ಹಾರ ತಾಲೂಕು ವ್ಯಾಪ್ತಿಯ ವಿವಿಧ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಶನಿವಾರ ಆಚರಣೆ ಮಾಡಲಾಯಿತು.

ಇಂದು ದಿನಾಂಕ 04.04.2026 ರಂದು ಇಂದು ಮುದ್ದೇಬಿಹಾಳ ತಾಲೂಕು ವ್ಯಾಪ್ತಿಯ ವಿವಿಧ  ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಶನಿವಾರ ಆಚರಣೆ ಮಾಡಲಾ...
04/04/2026

ಇಂದು ದಿನಾಂಕ 04.04.2026 ರಂದು ಇಂದು ಮುದ್ದೇಬಿಹಾಳ ತಾಲೂಕು ವ್ಯಾಪ್ತಿಯ ವಿವಿಧ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಶನಿವಾರ ಆಚರಣೆ ಮಾಡಲಾಯಿತು.

ಇಂದು ದಿನಾಂಕ 04.04.2026 ರಂದು ಇಂದು ಇಂಡಿ ತಾಲೂಕು ವ್ಯಾಪ್ತಿಯ ವಿವಿಧ  ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಶನಿವಾರ ಆಚರಣೆ ಮಾಡಲಾಯಿತು.
04/04/2026

ಇಂದು ದಿನಾಂಕ 04.04.2026 ರಂದು ಇಂದು ಇಂಡಿ ತಾಲೂಕು ವ್ಯಾಪ್ತಿಯ ವಿವಿಧ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಶನಿವಾರ ಆಚರಣೆ ಮಾಡಲಾಯಿತು.

Address

Kanaka Das Badavane
Vijayapura

Website

Alerts

Be the first to know and let us send you an email when Zilla Panchayat Vijayapur posts news and promotions. Your email address will not be used for any other purpose, and you can unsubscribe at any time.

Share