B D Patil For Indi JDS MLA

B D Patil For Indi JDS MLA """"ಸ್ವಾಭಿಮಾನದ ನಡೆ""""

06/09/2026
06/09/2026

02/09/2026

# # 🚩 ಜೈ ಜವಾನ್ – ಜೈ ಕಿಸಾನ್ 🚩

# # # **ಬೃಹತ್ ರೈತ ಪ್ರತಿಭಟನೆ**

**ದಿನಾಂಕ: 03.09.2026, ಗುರುವಾರ**
**ಸಮಯ: ಬೆಳಿಗ್ಗೆ 10:00 ಗಂಟೆಗೆ**
**ಸ್ಥಳ: ಜಳಕಿ, ಇಂಡಿ ತಾಲ್ಲೂಕು**

ಇಂಡಿ ತಾಲ್ಲೂಕಿನ ಸಮಸ್ತ ರೈತರು ಹಾಗೂ ಗ್ರಾಮಸ್ಥರ ವತಿಯಿಂದ ರೈತರ ಪ್ರಮುಖ ಸಮಸ್ಯೆಗಳ ಪರಿಹಾರಕ್ಕಾಗಿ **ಬೃಹತ್ ಪ್ರತಿಭಟನೆ** ಹಮ್ಮಿಕೊಳ್ಳಲಾಗಿದೆ.

# # # ನಮ್ಮ ಪ್ರಮುಖ ಬೇಡಿಕೆಗಳು:

1. **ಇಂಡಿ ತಾಲ್ಲೂಕನ್ನು ತಕ್ಷಣವೇ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಬೇಕು.**
2. **ಕಬ್ಬಿಗೆ ಪ್ರತಿ ಟನ್‌ಗೆ ₹6,000 ಬೆಲೆ ನಿಗದಿ ಮಾಡಬೇಕು.**
3. **ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ರೈತರಿಗೆ ನೀರು ಒದಗಿಸಬೇಕು.**
4. **ಇಂಡಿ ತಾಲ್ಲೂಕಿನ ಎಲ್ಲಾ ಗ್ರಾಮಗಳ ರಸ್ತೆಗಳನ್ನು ತುರ್ತಾಗಿ ನವೀಕರಿಸಿ ಅಭಿವೃದ್ಧಿಪಡಿಸಬೇಕು.**

📍 **ಈ ಬೃಹತ್ ಪ್ರತಿಭಟನೆ ಜಳಕಿಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಲಿದೆ.**

ಆದ್ದರಿಂದ ಇಂಡಿ ತಾಲ್ಲೂಕಿನ **ಸಮಸ್ತ ರೈತರು, ಯುವಕರು ಹಾಗೂ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ರೈತರ ಹಕ್ಕು ಮತ್ತು ಸಮಸ್ಯೆಗಳಿಗಾಗಿ ನಡೆಯುವ ಈ ಹೋರಾಟವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.**

# # # **ನಮ್ಮ ಹಕ್ಕು – ನಮ್ಮ ಹೋರಾಟ!**

# # # **ರೈತ ಉಳಿದರೆ ದೇಶ ಉಳಿಯುತ್ತದೆ!**

# # 🚩 ಜೈ ಜವಾನ್ – ಜೈ ಕಿಸಾನ್ 🚩

 #ಬರಗಾಲ ಪಟ್ಟಿಯಿಂದ ಇಂಡಿ  ತಾಲೂಕನ್ನು ಕೈಬಿಟ್ಟಿರುವ ರಾಜ್ಯ ಸರ್ಕಾರದ ನಡೆಯನ್ನು ನಾನು ಖಂಡಿಸುತ್ತೇನೆ..
27/08/2026

#ಬರಗಾಲ ಪಟ್ಟಿಯಿಂದ ಇಂಡಿ ತಾಲೂಕನ್ನು ಕೈಬಿಟ್ಟಿರುವ ರಾಜ್ಯ ಸರ್ಕಾರದ ನಡೆಯನ್ನು ನಾನು ಖಂಡಿಸುತ್ತೇನೆ..

ಕೃಷ್ಣಾ ಉಪಕಾಲುವೆ-24ಕ್ಕೆ ನೀರು ಹರಿಸಲು ರೈತರ ಮನವಿಇಂಡಿ: ತಾಲೂಕಿನ ಹಿರೇಬೇವನೂರ ಪ್ರದೇಶದ ಮೂಲಕ ಹಾದುಹೋಗುವ ಕೃಷ್ಣಾ ಉಪಕಾಲುವೆ-24 ಸುಮಾರು 17...
27/08/2026

ಕೃಷ್ಣಾ ಉಪಕಾಲುವೆ-24ಕ್ಕೆ ನೀರು ಹರಿಸಲು ರೈತರ ಮನವಿ

ಇಂಡಿ: ತಾಲೂಕಿನ ಹಿರೇಬೇವನೂರ ಪ್ರದೇಶದ ಮೂಲಕ ಹಾದುಹೋಗುವ ಕೃಷ್ಣಾ ಉಪಕಾಲುವೆ-24 ಸುಮಾರು 17 ಕಿ.ಮೀ. ಉದ್ದವಿದ್ದು, ಪ್ರಸ್ತುತ ಕೇವಲ 5 ಕಿ.ಮೀ.ವರೆಗೆ ಮಾತ್ರ ನೀರು ಹರಿದು ನಿಂತುಹೋಗುತ್ತಿದೆ. ಇದರಿಂದ ಕಾಲುವೆಯ ಕೊನೆಯ ಭಾಗದಲ್ಲಿರುವ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರೆಯದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಒಂದೆಡೆ ಮಳೆಯ ಕೊರತೆ, ಮತ್ತೊಂದೆಡೆ ಆಲಮಟ್ಟಿ ಅಣೆಕಟ್ಟು ಭರ್ತಿಯಾಗಿದ್ದರೂ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪದಿರುವುದು ಕೃಷಿಕರ ಆತಂಕಕ್ಕೆ ಕಾರಣವಾಗಿದೆ. ತೀವ್ರ ಬರ ಪರಿಸ್ಥಿತಿಯಲ್ಲಿ ಉಪಕಾಲುವೆಗೆ ಸಮರ್ಪಕವಾಗಿ ನೀರು ಹರಿಸಿದರೆ ಹಳ್ಳ-ಕೊಳ್ಳಗಳು ತುಂಬಿ, ಜಾನುವಾರುಗಳಿಗೆ ನೀರು ಹಾಗೂ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ರೈತರು ತಿಳಿಸಿದ್ದಾರೆ.

ಸಂಬಂಧಪಟ್ಟ ಇಲಾಖೆ ಹಾಗೂ ಸರ್ಕಾರ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಮಾನವೀಯ ದೃಷ್ಟಿಕೋನದಿಂದ ಕೂಡಲೇ ಕೃಷ್ಣಾ ಉಪಕಾಲುವೆ-24ಕ್ಕೆ ಸಮರ್ಪಕವಾಗಿ ನೀರು ಹರಿಸುವಂತೆ ರೈತರು ಆಗ್ರಹಿಸಿದರು.

ಈ ಕುರಿತು ಇಂಡಿ ರೈಲು ನಿಲ್ದಾಣದಲ್ಲಿರುವ ಕೃಷ್ಣಾ ಜಲನಿಗಮದ ಕಚೇರಿ ಎದುರು ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಅವರ ನೇತೃತ್ವದಲ್ಲಿ ಹಿರೇಬೇವನೂರ, ಇಂಗಳಗಿ, ಆಳೂರ ಸೇರಿದಂತೆ ವಿವಿಧ ಗ್ರಾಮಗಳ ರೈತರು ಪ್ರತಿಭಟನೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಿಂಗನಗೌಡ ಪಾಟೀಲ, ಅನೀಲ ಜಾದವ್, ಸೋಮು ಕುಂಬಾರ, ರಾಜಶೇಖರ ಯರಗಲ್ಲ, ಗಡೇಪ್ಪ ಸೋಲಾಪೂರ, ಭೀಮ ಕುಂಬಾರ, ಸೈಪನ ಮುಜಾವರ, ಮೈಬೂಬಸಾಬ ಮುಜಾವರ, ಲಾಲಸಾಬ ಮಕಾನದಾರ, ಶೇಖರ ಕನ್ನೂರ, ಬಂದುಸಾಬ ನದಾಫ್,ಶಿವರಾಯ ಬಿರಾದಾರ,ಲಾಯಪ್ಪ ಮೇತ್ರಿ,ಮಹ್ಮದಸಾಬ ಮುಜಾವರಿ, ಇಸಾಕಸಾಬ ಮುಜಾವರ,ಅರವೀದ ಬಿರಾದಾರ, ಸಿದ್ದಪ್ಪ ಸೋಲಾಪುರ,ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಬಿಡದಿ ಟೌನ್‌ಶಿಪ್ ವಿರೋಧಿಸಿ ಬೃಹತ್ ಪಾದಯಾತ್ರೆ”ಯಲ್ಲಿ ಭಾಗವಹಿಸಿ, ನೊಂದ ರೈತರು ಹಾಗೂ ಸಾರ್ವಜನಿಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದೆ.ಆಗಸ್ಟ...
10/08/2026

“ಬಿಡದಿ ಟೌನ್‌ಶಿಪ್ ವಿರೋಧಿಸಿ ಬೃಹತ್ ಪಾದಯಾತ್ರೆ”ಯಲ್ಲಿ ಭಾಗವಹಿಸಿ, ನೊಂದ ರೈತರು ಹಾಗೂ ಸಾರ್ವಜನಿಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದೆ.

ಆಗಸ್ಟ್ 9ರಿಂದ 11ರವರೆಗೆ ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ನಡೆಯಲಿರುವ ಈ ಪಾದಯಾತ್ರೆ, ಕೃಷಿ ಭೂಮಿ ಮತ್ತು ರೈತರ ಬದುಕಿನ ರಕ್ಷಣೆಯ ಸಂಕಲ್ಪದ ಧ್ವನಿಯಾಗಲಿ.

ರೈತರ ನ್ಯಾಯಯುತ ಬೇಡಿಕೆಗಳಿಗೆ ಸದಾ ಧ್ವನಿಯಾಗಿರುತ್ತೇನೆ

03/08/2026

ಇಂದು ಬೆಂಗಳೂರಿನ ಬ್ರಹ್ಮಕುಮಾರಿ ಆಶ್ರಮದಲ್ಲಿ ನಡೆದ ಸಮಾರಂಭದಲ್ಲಿ ರಾಜಕೀಯ ರಂಗದ ಸಾಧನೆಗಾಗಿ ಬಿ.ಡಿ. ಪಾಟೀಲ ಅವರಿಗೆ "ಈಶ್ವರೀಯ ಸೇವಾ ರತ್ನ ಪ್ರ...
03/08/2026

ಇಂದು ಬೆಂಗಳೂರಿನ ಬ್ರಹ್ಮಕುಮಾರಿ ಆಶ್ರಮದಲ್ಲಿ ನಡೆದ ಸಮಾರಂಭದಲ್ಲಿ
ರಾಜಕೀಯ ರಂಗದ ಸಾಧನೆಗಾಗಿ ಬಿ.ಡಿ. ಪಾಟೀಲ ಅವರಿಗೆ "ಈಶ್ವರೀಯ ಸೇವಾ ರತ್ನ ಪ್ರಶಸ್ತಿ" ನೀಡಿ ಗೌರವಿಸಿದರು..💐

31/07/2026

ಇಂದು ರೋಡಗಿ ಗ್ರಾಮದಲ್ಲಿ ಭೀಮಾನದಿಗೆ ಬಾಗೀನ ಅರ್ಪಣೆ ಮಾಡಲಾಯಿತು ಈ ಸಂದರ್ಭದಲ್ಲಿ ಶ್ರೀಗಳು ಹಾಗೂ ನೂರಾರು ರೈತರು ಉಪಸ್ಥಿತರಿದ್ದರು

Address

Indi
Vijayapura
586209

Telephone

+19342981133

Website

Alerts

Be the first to know and let us send you an email when B D Patil For Indi JDS MLA posts news and promotions. Your email address will not be used for any other purpose, and you can unsubscribe at any time.

Shortcuts

Share