18/12/2025
ಗ್ರಾಮ ಸಭೆ ಇನ್ನು ಮುಂದೆ ಕೇವಲ 'ಟೀ-ಬಿಸ್ಕೆಟ್' ಸಭೆಯಲ್ಲ! ಹೊಸ ನಿಯಮಗಳು ಬಿಡುಗಡೆ.
ನಮ್ಮ ಊರಿನ ಅಭಿವೃದ್ಧಿಯ ಕೀಲಿ ಕೈ ಇರುವುದು 'ಗ್ರಾಮ ಸಭೆ'ಯಲ್ಲಿ. ಆದರೆ ಎಷ್ಟೋ ಕಡೆ ಗ್ರಾಮ ಸಭೆಗಳು ಕೇವಲ ಹೆಸರಿಗೆ ಮಾತ್ರ ನಡೆಯುತ್ತವೆ, ಇಲ್ಲವೇ ಜನರಿಗೇ ತಿಳಿಯದಂತೆ ಮುಗಿದು ಹೋಗುತ್ತವೆ. ಇದನ್ನು ತಡೆಯಲು ಕರ್ನಾಟಕ ಸರ್ಕಾರ "ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಸಭೆ ಕರೆಯುವ ಮತ್ತು ನಡೆಸುವ) ನಿಯಮಗಳು, 2024"ರ ಕರಡು ಪ್ರಕಟಿಸಿದೆ.
ಈ ಹೊಸ ನಿಯಮಗಳಲ್ಲಿರುವ ಪ್ರಮುಖ ಬದಲಾವಣೆಗಳು ಇಲ್ಲಿವೆ, ಪ್ರತಿಯೊಬ್ಬ ಗ್ರಾಮಸ್ಥರು ತಿಳಿಯಲೇಬೇಕಾದ ಸಂಗತಿಗಳಿವು:
೧. ವರ್ಷಕ್ಕೆ ೪ ಬಾರಿ ಸಭೆ ಕಡ್ಡಾಯ: ಪ್ರತಿ ಕಂದಾಯ ಗ್ರಾಮದಲ್ಲಿ ಏಡಿಗೆ ಕನಿಷ್ಠ ೪ ಬಾರಿ ಗ್ರಾಮ ಸಭೆ ಕರೆಯಲೇಬೇಕು. ಏಪ್ರಿಲ್ 24 ಮತ್ತು ಅಕ್ಟೋಬರ್ 2 ರ ನಂತರದ 7 ದಿನಗಳಲ್ಲಿ 'ಸಾಮಾನ್ಯ ಗ್ರಾಮ ಸಭೆ'. ಆಗಸ್ಟ್ 15 ಮತ್ತು ಜನವರಿ 26 ರ ನಂತರದ 7 ದಿನಗಳಲ್ಲಿ 'ವಿಶೇಷ ಗ್ರಾಮ ಸಭೆ'.
೨. 'ವಾಟ್ಸಾಪ್'ನಲ್ಲೂ ಮಾಹಿತಿ ನೀಡಬೇಕು!
ಸಭೆ ಯಾವಾಗ ಎಂದು ಯಾರಿಗೂ ಗೊತ್ತಾಗಲಿಲ್ಲ ಎಂದು ಇನ್ನು ಅಧಿಕಾರಿಗಳು ಹೇಳುವಂತಿಲ್ಲ. ಡಂಗೂರ (ಟಾಂ ಟಾಂ) ಸಾರುವುದರ ಜೊತೆಗೆ, ಗ್ರಾಮದ ಮತದಾರರಿರುವ 'ವಾಟ್ಸಾಪ್ ಗ್ರೂಪ್'ಗಳಲ್ಲಿ ಸಭೆಯ ನೋಟಿಸ್ ಅನ್ನು ಕಡ್ಡಾಯವಾಗಿ ಹಂಚಿಕೊಳ್ಳಬೇಕು.
೩. ಸುಳ್ಳು ಸಹಿ ನಡೆಯಲ್ಲ - ಬಯೋಮೆಟ್ರಿಕ್ ಕಡ್ಡಾಯ: ಸಭೆಗೆ ಬಂದವರ ಹಾಜರಾತಿಯನ್ನು ಬಯೋಮೆಟ್ರಿಕ್ (ಬೆರಳಚ್ಚು) ಮೂಲಕವೇ ಪಡೆಯಬೇಕು. ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಬಯೋಮೆಟ್ರಿಕ್ ಹಾಜರಾತಿ ಹಾಕಲೇಬೇಕು.
೪. ಕೋರಂ (Quorum) ಇಲ್ಲದಿದ್ದರೆ ಸಭೆ ಇಲ್ಲ: ಸಭೆ ನಡೆಯಲು ಒಟ್ಟು ಮತದಾರರ ಶೇ. 10 ರಷ್ಟು ಇಲ್ಲವೇ 100 ಸದಸ್ಯರು (ಯಾವುದು ಕಡಿಮೆಯೋ ಅಷ್ಟು) ಹಾಜರಿರಲೇಬೇಕು. ಇಲ್ಲದಿದ್ದರೆ ಸಭೆಯನ್ನು ಮುಂದೂಡಲಾಗುತ್ತದೆ.
೫. ಎಲ್ಲಾ ಇಲಾಖೆ ಅಧಿಕಾರಿಗಳು ಬರಲೇಬೇಕು: ಕೇವಲ ಪಿಡಿಒ (PDO) ಬಂದರೆ ಸಾಲದು. ಶಿಕ್ಷಣ, ಆರೋಗ್ಯ, ಬೆಸ್ಕಾಂ (ESCOM), ಕೃಷಿ, ತೋಟಗಾರಿಕೆ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಇಲಾಖೆಯ ಪ್ರತಿನಿಧಿಗಳು ಸಭೆಗೆ ಹಾಜರಾಗಿ ಉತ್ತರ ನೀಡಬೇಕು.
೬. ಫಲಾನುಭವಿಗಳ ಆಯ್ಕೆ ಸಭೆಯಲ್ಲೇ ಆಗಬೇಕು: ವೈಯಕ್ತಿಕ ಕಾಮಗಾರಿಗಳಿಗೆ ಇಲ್ಲವೇ ಆಳಿಕೆ ಸವಲತ್ತುಗಳಿಗೆ ಫಲಾನುಭವಿಗಳನ್ನು (Beneficiaries) ಗ್ರಾಮ ಸಭೆಯಲ್ಲೇ ಗುರುತಿಸಿ ಆಯ್ಕೆ ಮಾಡಬೇಕು. ಕದ್ದು ಮುಚ್ಚಿ ಆಯ್ಕೆ ಮಾಡುವಂತಿಲ್ಲ.
ಗೆಳೆಯರೇ, ಕಾನೂನುಗಳು ಎನಿತು ಬಂದರೂ, ನಾವು ಭಾಗವಹಿಸದಿದ್ದರೆ ಬದಲಾವಣೆ ಅಸಾಧ್ಯ. ಮುಂದಿನ ಗ್ರಾಮ ಸಭೆಗೆ ತಪ್ಪದೇ ಹೋಗಿ, ಪ್ರಶ್ನಿಸಿ!
courtesy: Narekere Jagadish