Mgnrega TP Turuvekere

Mgnrega TP Turuvekere ತಾಲ್ಲೂಕ್ ಪಂಚಾಯತ್ ತುರುವೇಕೆರೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ

ತುಮಕೂರಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಂ ರವರ ಜಯಂತಿಯ ಪ್ರಯುಕ್ತ ಬೋಟ್ ...
13/04/2026

ತುಮಕೂರಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಂ ರವರ ಜಯಂತಿಯ ಪ್ರಯುಕ್ತ ಬೋಟ್ ಪೆರೇಡ್, ಲೈಟ್ ಅಂಡ್ ಸೌಂಡ್ ಷೋ, ಸಂಗೀತ ಕಾರಂಜಿ & ಸಾಂಸ್ಕೃತಿಕ ಕಾರ್ಯಕ್ರಮ

14-04-2026 @ 6pm

ಸ್ಥಳ : ಅಮಾನಿಕೆರೆ, ತುಮಕೂರು
Zilla Panchayath Tumkur DR. G Parameshwara DC Tumakuru CEO Zilla Panchayat Chitradurga

ತಾಲ್ಲೂಕು ಪಂಚಾಯತಿ ತುರುವೇಕೆರೆ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಡಾII ಬಿ ಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ...
02/04/2026

ತಾಲ್ಲೂಕು ಪಂಚಾಯತಿ ತುರುವೇಕೆರೆ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಡಾII ಬಿ ಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆಯ ಪೂರ್ವ ಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನಾಧಿಕಾರಿ ಮಾನ್ಯ ತಹಸೀಲ್ದಾರ್ ರವರು, ಸದಸ್ಯ ಕಾರ್ಯದರ್ಶಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಸಂಘಟನೆಗಳ ಮುಖಂಡರು, ಸಾರ್ವಜನಿಕರು ಹಾಜರಿದ್ದರು. Mgnrega Dharwad Zilla Panchyath Zilla Panchayath Tumkur DR HC Mahadevappa DR. G Parameshwara Taluk Panchayath Kunigal

ತಿಪಟೂರಿಂದ ತುರುವೇಕೆರೆ ಕಡೆಗೆ ತುರುವೇಕೆರೆ ಕಡೆಯಿಂದ ಕೆಬಿ ಕ್ರಾಸ್ ಕಡೆಗೆ ಹಾಗೂ ತಾಲ್ಲೂಕಿನ ಸಂಪಿಗೆ ಹೊಸಹಳ್ಳಿ ಗ್ರಾಮದಿಂದ ಕಲ್ಲೂರು ಕ್ರಾಸ್ ...
26/03/2026

ತಿಪಟೂರಿಂದ ತುರುವೇಕೆರೆ ಕಡೆಗೆ ತುರುವೇಕೆರೆ ಕಡೆಯಿಂದ ಕೆಬಿ ಕ್ರಾಸ್ ಕಡೆಗೆ ಹಾಗೂ ತಾಲ್ಲೂಕಿನ ಸಂಪಿಗೆ ಹೊಸಹಳ್ಳಿ ಗ್ರಾಮದಿಂದ ಕಲ್ಲೂರು ಕ್ರಾಸ್ ಕಡೆಗೆ ತುರ್ತಾಗಿ ಬಸ್ ಗಳನ್ನು ಬಿಡಲು KSRTC ಡಿಪೋ ಅಧಿಕಾರಿಗೆ ಮಾನ್ಯ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಪ್ರಸನ್ನ ಕುಮಾರ್ ರವರು ಹೇಳಿದರು. ಏಕೆಂದರೆ ಈ ಭಾಗಗಳಲ್ಲಿ ಬಸ್ ನ ಕೊರತೆ ಹೆಚ್ಚಿನದಾಗಿದೆ. ಸಂಜೆ 8 ಗಂಟೆಯ ನಂತರ ಕೆಬಿ ಕ್ರಾಸ್ ಕಡೆಯಿಂದ ಹಾಗೂ ತಿಪಟೂರು ಕಡೆಯಿಂದ ತುರುವೇಕೆರೆ ಕಡೆಗೆ ಬರಲು ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಎಂದು ಸಭೆಯ ಗಮನಕ್ಕೆ ತಿಳಿಸಿದರು. ಈ ಸಭೆಯಲ್ಲಿ ಸದಸ್ಯ ಕಾರ್ಯದರ್ಶಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆಯ ಸದಸ್ಯರು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. Zilla Panchayath Tumkur DC Tumakuru Taluk Panchayath Kunigal Priyank Kharge DR. G Parameshwara CEO Zilla Panchayat Chitradurga Team Santosh Lad

ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕು ದಬ್ಬೆಘಟ್ಟ ಹೋಬಳಿಯ ಮಾವಿನಕೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳ ಜನ ಸಂಪರ್ಕ ಸಭೆಯನ್ನ...
25/03/2026

ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕು ದಬ್ಬೆಘಟ್ಟ ಹೋಬಳಿಯ ಮಾವಿನಕೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳ ಜನ ಸಂಪರ್ಕ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಮಾನ್ಯ ಆಪರ ಜಿಲ್ಲಾಧಿಕಾರಿಗಳು ಭಾಗವಹಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ತಮ್ಮ ಆ ದಿನದ ಕೆಲಸ ಕೆಡಿಸಿಕೊಂಡು ಜಿಲ್ಲಾ ಕೇಂದ್ರಕ್ಕೆ ಬರುವ ಕಾರಣ ಡಿಸಿ ಮೇಡಂ ಅವರು, ನಾವೇ ಪ್ರತಿ ತಾಲ್ಲೂಕಿಗೆ ಭೇಟಿ ನೀಡಿ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸೋಣ ಎಂಬ ನಿರ್ಧಾರಕ್ಕೆ ಬಂದ ಕಾರಣ ಈ ಸಭೆಯನ್ನು ಯಶಸ್ವಿಯಾಗಿ ಮುಗಿಸಲು ಕೈ ಜೋಡಿಸಿ ಎಂದರು. ಒಟ್ಟು 450 ಅರ್ಜಿಗಳನ್ನು ಸ್ವೀಕರಿಸಲಾಗಿದೆ. Tumakuru Zilla Panchayat CEO Zilla Panchayat Chitradurga Taluk Panchayath Kunigal Chikkamagaluru Zilla Panchayat DC Tumakuru M T Krishnappa

ಈ ವರ್ಷ ವಸೂಲಿ ಮಾಡಿದ ಹಣ ಈ ವರ್ಷವೇ ಅಂದರೆ ಮಾರ್ಚ್ 30ರ ಒಳಗಾಗಿ ಬ್ಯಾಂಕ್ ಗೆ ಜಮೆ ಮಾಡಬೇಕು ಎಂದು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಂತರಾಜು ...
17/03/2026

ಈ ವರ್ಷ ವಸೂಲಿ ಮಾಡಿದ ಹಣ ಈ ವರ್ಷವೇ ಅಂದರೆ ಮಾರ್ಚ್ 30ರ ಒಳಗಾಗಿ ಬ್ಯಾಂಕ್ ಗೆ ಜಮೆ ಮಾಡಬೇಕು ಎಂದು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಂತರಾಜು ರವರು ಬಿಲ್ ಕಲೆಕ್ಟರ್ ಗಳಿಗೆ ಸೂಚಿಸಿದರು. ತಾಲ್ಲೂಕು ಪಂಚಾಯತಿ ತುರುವೇಕೆರೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯದರ್ಶಿ, ಬಿಲ್ ಕಲೆಕ್ಟರ್ ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ವಸೂಲಾತಿಯಲ್ಲಿ ಕಡಿಮೆ ಪ್ರಗತಿ ಸಾಧಿಸಿರುವ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಮುಂದಿನ ವರ್ಷ ಅಂದರೆ ಏಪ್ರಿಲ್ ತಿಂಗಳಿನಲ್ಲಿ ಬ್ಯಾಂಕ್ ಗೆ ಜಮೆ ಮಾಡಿದರೆ ದಂಡ ವಿಧಿಸಲಾಗುತ್ತದೆ ಎಂದರು. ಈ ಸಭೆಯಲ್ಲಿ ವಿಷಯ ನಿರ್ವಾಹಕರು, ಎಲ್ಲಾ ಕಾರ್ಯದರ್ಶಿಗಳು ಭಾಗವಹಿಸಿದ್ದರು. DC Tumakuru Zilla Panchayath Tumkur Taluk Panchayath Kunigal Priyank Kharge

ತುರುವೇಕೆರೆ ತಾಲ್ಲೂಕು ದಬ್ಬೆಘಟ್ಟ ಹೋಬಳಿ ಕೆ ಗಂಗನಹಳ್ಳಿ ಗ್ರಾಮದ ಪೃಥ್ವಿ ರಾಜ್ ರವರು ಎರಡು ಎಕರೆ ಜಮೀನಿನಲ್ಲಿ ಮಿರಾಬಲ್ ಪ್ಲಾಂಟೇಷನ್ ಮಾಡಿದ್ದ...
11/03/2026

ತುರುವೇಕೆರೆ ತಾಲ್ಲೂಕು ದಬ್ಬೆಘಟ್ಟ ಹೋಬಳಿ ಕೆ ಗಂಗನಹಳ್ಳಿ ಗ್ರಾಮದ ಪೃಥ್ವಿ ರಾಜ್ ರವರು ಎರಡು ಎಕರೆ ಜಮೀನಿನಲ್ಲಿ ಮಿರಾಬಲ್ ಪ್ಲಾಂಟೇಷನ್ ಮಾಡಿದ್ದೂ, ಇದು ತನ್ನ ಗೆಳೆಯ ತುಮಕೂರಿನ ಶರಣಯ್ಯ ರವರು ಹೆಚ್ಚಿನ ಒತ್ತಡದಲ್ಲಿ ಮಿರಾಬಲ್ ಬೆಳೆಯಲು ಉತ್ತೇಜಿಸಿದ್ದರಿಂದ, ಈ ಬೆಳೆ ಕಡೆ ಮುಖ ಮಾಡಿದ್ದೇನೆ ಎನ್ನುತ್ತಾರೆ. ಇನ್ನು ಇದಕ್ಕೆ ಬೆಂಬಲವಾಗಿ ನರೇಗಾ ಯೋಜನೆಯಿಂದ ಕೂಲಿ ಹಣ, ಗಿಡಗಳಿಗೆ ಪ್ರೋತ್ಸಾಹ ಧನ, ಡ್ರಿಪ್ ಸಬ್ಸಿಡಿ, ಗೊಬ್ಬರ ಎಲ್ಲವೂ ಸಿಕ್ಕಿರುವುದು ಖರ್ಚಿನ ಹಣವನ್ನು ಉಳಿಸಿದೆ ಎಂದು ಮಾಹಿತಿ ತಿಳಿಸುತ್ತಾರೆ.
ತಮಗೂ ಕೂಡ ಮಿರಾಬಲ್ ಬೆಳೆಯುವ ಆಸಕ್ತಿ ಇದ್ದರೆ, ಪೃಥ್ವಿರಾಜ್ ಜಮೀನಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು. (ತಾಲ್ಲೂಕು ಪಂಚಾಯತ್ ತುರುವೇಕೆರೆ ನರೇಗಾ ಶಾಖೆ.)
Zilla Panchayath Tumkur Taluk Panchayath Kunigal Mgnregs Karnataka Mgnregs Harapanahalli TP CEO Zilla Panchayat Chitradurga Priyank Kharge M T Krishnappa Chikkamagaluru Zilla Panchayat DC Tumakuru DR. G Parameshwara K Ganganahalli

ತಾಲ್ಲೂಕು ಪಂಚಾಯತ್ ತುರುವೇಕೆರೆ ಸಭಾಂಗಣದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ವಿಕಲಚೇ...
10/03/2026

ತಾಲ್ಲೂಕು ಪಂಚಾಯತ್ ತುರುವೇಕೆರೆ ಸಭಾಂಗಣದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ವಿಕಲಚೇತನರ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ಈ ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳು ಆರೋಗ್ಯ ಶಿಬಿರದ ಲ್ಲಿ ಪರೀಕ್ಷಿಸುವ ವಿವಿಧ ಖಾಯಿಲೆಗಳ ಬಗ್ಗೆ ವಿವರ ನೀಡಿದರು. ತಾಲ್ಲೂಕು ಪಂಚಾಯತಿ ವ್ಯವಸ್ಥಾಪಕರು ಉಪಸ್ಥಿತರಿದ್ದರು. ಸದರಿ ಸಭೆಯಲ್ಲಿ ತಾಲ್ಲೂಕು ಪಂಚಾಯತಿ ನೌಕರರು, ಆರೋಗ್ಯ ಇಲಾಖೆಯ ವೈದ್ಯರುಗಳು ಹಾಗೂ 27 ಗ್ರಾಮ ಪಂಚಾಯತಿಯ VRW ಗಳು, ವಿಕಲಚೇತನರು ಭಾಗವಹಿಸಿದರು. Zilla Panchayath Tumkur CEO Zilla Panchayat Chitradurga EO TP Koratagere Mgnregs Harapanahalli TP Taluk Panchayath Kunigal

ಹಾಸ್ಟೆಲ್ ಮಕ್ಕಳಿಗೆ, ಶಾಲೆಗಳಿಗೆ ಸುಸಜ್ಜಿತವಾದ ಶೌಚಾಲಯವನ್ನು ನಿರ್ಮಿಸಿ ಸ್ವಚ್ಛತೆಯನ್ನು ಕಾಪಾಡಿ, ನಾನು ಕೆಲವು ಹಾಸ್ಟೆಲ್ ಗಳಿಗೆ ಭೇಟಿ ನೀಡಿದ...
29/12/2025

ಹಾಸ್ಟೆಲ್ ಮಕ್ಕಳಿಗೆ, ಶಾಲೆಗಳಿಗೆ ಸುಸಜ್ಜಿತವಾದ ಶೌಚಾಲಯವನ್ನು ನಿರ್ಮಿಸಿ ಸ್ವಚ್ಛತೆಯನ್ನು ಕಾಪಾಡಿ, ನಾನು ಕೆಲವು ಹಾಸ್ಟೆಲ್ ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಡುಗೆ ಕೊಣೆಗಳು ಸಹ ಸ್ವಚ್ಛತೆಯಿಲ್ಲದಿರುವುದು ಕಂಡು ಬಂದಿರುತ್ತದೆ, ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಮಾನ್ಯ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ ಟಿ ಕೃಷ್ಣಪ್ಪನವರು ಹೇಳಿದರು. ತಾಲ್ಲೂಕು ಪಂಚಾಯತಿ ತುರುವೇಕೆರೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಹಾಗೂ ಮಾನ್ಯ ಶಾಸಕರು, ತುರುವೇಕೆರೆ ವಿಧಾನ ಸಭಾ ಕ್ಷೇತ್ರ ತುಮಕೂರು ಜಿಲ್ಲೆ ರವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಭೆಯಲ್ಲಿ ಸದಸ್ಯ ಕಾರ್ಯದರ್ಶಿ ಕಾರ್ಯನಿರ್ವಾಹಕ ಅಧಿಕಾರಿಗಳು, ತಹಶೀಲ್ದಾರ್ ಉಪಸ್ಥಿತರಿದ್ದರು. ಈ ಸಭೆಯಲ್ಲಿ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು. Zilla Panchayath Tumkur Taluk Panchayath Kunigal DC Tumakuru Tumakuru Zilla Panchayat V Somanna CEO Zilla Panchayat Chitradurga Turuvekere team MTK

ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಜಿ ಎಂ ಲಕ್ಷ್ಮಿಕಾಂತ ಅವರು ಇಂದು ತುರುವೇಕೆರೆ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ...
20/12/2025

ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಜಿ ಎಂ ಲಕ್ಷ್ಮಿಕಾಂತ ಅವರು ಇಂದು ತುರುವೇಕೆರೆ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಗೆ ಅಧ್ಯಕ್ಷತೆ ವಹಿಸಿದರು. ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷರು, ಸದಸ್ಯ ಕಾರ್ಯದರ್ಶಿ, ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚ ಗ್ಯಾರಂಟಿ ಯೋಜನೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ತಾಲ್ಲೂಕು ಪಂಚಾಯತಿ ನೌಕರರು ಸಭೆಯಲ್ಲಿ ಉಪಸ್ಥಿತರಿದ್ದರು. #ಗ್ಯಾರಂಟಿಯೋಜನೆ #ಕರ್ನಾಟಕ Zilla Panchayath Tumkur Taluk Panchayath Kunigal DC Tumakuru Priyank Kharge Tumakuru Zilla Panchayat DR. G Parameshwara EO TP Koratagere

ಇಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ  ತುರುವೇಕೆರೆ ತಾಲ್ಲೂಕಿನ ಕೊಡಗಿಹಳ್ಳಿ  ಗ್ರಾಮ ಪಂಚಾಯಿತಿಯು ಮಾನ್ಯ ಗ್ರಾಮೀಣಾಭಿವೃದ್ಧ...
01/12/2025

ಇಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ತುರುವೇಕೆರೆ ತಾಲ್ಲೂಕಿನ ಕೊಡಗಿಹಳ್ಳಿ ಗ್ರಾಮ ಪಂಚಾಯಿತಿಯು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಿಂದ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಕೊಡಗಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ ಹಾಜರಿದ್ದರು. Taluk Panchayath Kunigal CEO Zilla Panchayat Chitradurga Zilla Panchayath Tumkur Priyank Kharge DC Tumakuru

ಶ್ರೀ ಶಕ್ತಿ ಗಣಪತಿ ಆಸ್ಥಾನ ಮಂಟಪದಲ್ಲಿ ತುರುವೇಕೆರೆ ತಾಲ್ಲೂಕು ಆಡಳಿತದಿಂದ ಇಂದು ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಬಾಬಾ ಸಾಹೇಬ್ ಅಂಬೇ...
26/11/2025

ಶ್ರೀ ಶಕ್ತಿ ಗಣಪತಿ ಆಸ್ಥಾನ ಮಂಟಪದಲ್ಲಿ ತುರುವೇಕೆರೆ ತಾಲ್ಲೂಕು ಆಡಳಿತದಿಂದ ಇಂದು ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ತಳಿ, ಸಂವಿಧಾನದ ಕರಡು ಪ್ರತಿಯನ್ನು ತುರುವೇಕೆರೆ ಪ್ರವಾಸಿ ಮಂದಿರದಿಂದ ಮುಖ್ಯ ರಸ್ತೆಯ ಮುಖಾಂತರ, ಶಕ್ತಿ ಗಣಪತಿ ಮಂಟಪಕ್ಕೆ ಕೊನೆಗೊಂಡಿತ್ತು. ಈ ಮೆರವಣಿಗೆಯಲ್ಲಿ ತಹಶೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿ, ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಭಾಗವಹಿಸಿದ್ದರು. Taluk Panchayath Kunigal CEO Zilla Panchayat Chitradurga Turuvekere team MTK Zilla Panchayath Tumkur DC Tumakuru Tumakuru Zilla Panchayat

ತುರುವೇಕೆರೆ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಾನ್ಯ ನೂತನ ಕಾರ್ಯನಿರ್ವಾಹಕ ಅಧಿಕಾರಿಗಳ ಆಗಮನದ ಸ್ವಾಗತ ಕಾರ್ಯಕ್ರಮ ಹಾಗೂ ಈ ತ...
30/10/2025

ತುರುವೇಕೆರೆ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಾನ್ಯ ನೂತನ ಕಾರ್ಯನಿರ್ವಾಹಕ ಅಧಿಕಾರಿಗಳ ಆಗಮನದ ಸ್ವಾಗತ ಕಾರ್ಯಕ್ರಮ ಹಾಗೂ ಈ ತಾಲ್ಲೂಕಿನಿಂದ ಬೇರೆ ತಾಲ್ಲೂಕಿಗೆ ವರ್ಗಾವಣೆಗೊಂಡ ನರೇಗಾ ತಾಂತ್ರಿಕ ಸಹಾಯಕರಾಧ ಲೋಕೇಶ್ N L, ಹಾಗೂ ಮಂಜುನಾಥ್ D K ರವರನ್ನು ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಸಹಾಯಕ ನಿರ್ದೇಶಕರು (ಗ್ರಾ.ಉ) ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಉಪಸ್ಥಿತರಿದ್ದರು. Zilla Panchayath Tumkur Taluk Panchayath Kunigal Chikkamagaluru Zilla Panchayat CEO Zilla Panchayat Chitradurga Turuvekere team MTK

Address

Turuvekere
572227

Website

Alerts

Be the first to know and let us send you an email when Mgnrega TP Turuvekere posts news and promotions. Your email address will not be used for any other purpose, and you can unsubscribe at any time.

Share