18/08/2024
ರಾಜ್ಯ ಕಂಡ ಅತ್ಯಂತ ಜನಪ್ರಿಯ Chief Minister of Karnataka ಹಾಗೂ ದೇಶದ ಶ್ರೇಷ್ಠ ಅಹಿಂದ ನೇತಾರ ಸನ್ಮಾನ್ಯ Siddaramaiah ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಅನುಮತಿ ನೀಡುವ ಮಟ್ಟಕ್ಕೆ ಇಳಿದಿದ್ದು ನಿಜಕ್ಕೂ ಅಸಂವಿಧಾನಿಕ.
ತಮ್ಮ 4 ದಶಕಗಳ ರಾಜಕೀಯ ಜೀವನದಲ್ಲಿ ಒಂದೂ ಕಪ್ಪುಚುಕ್ಕೆ ಬಾರದಂತೆ ಜವಾಬ್ದಾರಿಯಿಂದ ರಾಜಕಾರಣ ಮಾಡಿದ ಧೀಮಂತ ನಾಯಕನ ಯಶಸ್ಸು ಸಹಿಸದ ಕೇಂದ್ರ ಬಿಜೆಪಿ ಸರ್ಕಾರ ಮತ್ತು ಪಕ್ಷ ಈ ಮಟ್ಟದ ನೀಚತನಕ್ಕಿಳಿಯುತ್ತವೆ ಎಂದು ಭಾವಿಸಿರಲಿಲ್ಲ.
ನಾಡಿನ ಬಡವರ ಕಲ್ಯಾಣಕ್ಕೆ ಭಾಗ್ಯಗಳ ಸರಮಾಲೆ ನೀಡಿದ ಬಡವರ ಭಾಗ್ಯವಿಧಾತ, ಗ್ಯಾರಂಟಿಗಳ ಮೂಲಕ ಜನರ ಜೀವನ ಬೆಳಗಿದ ಮಹಾನ್ ನಾಯಕ ಸಿದ್ದರಾಮಯ್ಯನವರ ಜತೆಗೆ ಇಡೀ ಕರುನಾಡಿದೆ. ಹಾಗೆಯೇ ಸಂವಿಧಾನವನ್ನು ಗೌರವಿಸುವ ಪ್ರತಿಯೊಬ್ಬ ಭಾರತೀಯರಿದ್ದಾರೆ.
#ಜೈಭೀಮ್ #ಜೈಸಂವಿಧಾನ #ಜೈಪ್ರಜಾಪ್ರಭುತ್ವ