29/06/2024
#ಸ್ವಯಂದೀಪ_ಝೆನ್_ಕೇಂದ್ರ (ರಿ.) ಧಾರವಾಡ*
ಸ್ವಯಂದೀಪ ಕಲಿವೀಡು
🥀1 ವರ್ಷದ #ಕೃಷಿ ಮತ್ತು #ರಂಗಭೂಮಿ ಕೋರ್ಸು🚦*
*ಯಾರಿಗೆ?*
• ಕನ್ನಡ ಓದಲು ಬರೆಯಲು ಬಲ್ಲ 20 ವರ್ಷ ಮೇಲ್ಪಟ್ಟು 35 ವರ್ಷ ವಯೋಮಾನದ ಯುವಕ ಯುವತಿಯರಿಗಾಗಿ
• ಕಲೆ, ಸಾಹಿತ್ಯ, ಕೃಷಿ, ಗುಡಿಕೈಗಾರಿಕೆ ಮುಂತಾದ ಚಟುವಟಿಕೆಗಳಲ್ಲಿ ಸಹಜ ತಿಳುವಳಿಕೆ ಇದ್ದರೆ ಒಳ್ಳೆಯದು
• ಕೃಷಿ ಮತ್ತು ರಂಗಭೂಮಿ ಯಲ್ಲಿ ಅನುಭವ ಇರುವವರಿಗೆ ಮೊದಲ ಆದ್ಯತೆ.
🌿 *ಕೋರ್ಸ್ ನಲ್ಲಿ ಏನೇನು ಇರುತ್ತದೆ?* 🐯
ಸಹಜ ಕೃಷಿ, ಸಾವಯವ ಕೃಷಿ ಮತ್ತು ವಿವಿಧ ರೀತಿಯ ಪರಿಸರ ಪೂರಕ ಕೃಷಿಯ ಅನುಭವಾತ್ಮಕ ಕಲಿಕೆಗಳು, ಸಹಜ ರಂಗಭೂಮಿಯ ವಿವಿಧ ಕಲಿಕೆಗಳು, ಜೀವನ ವಿದ್ಯಾ ಶಿಬಿರಗಳು, ಸ್ವ ಅರಿವಿನ ಪಯಣ ಶಿಬಿರಗಳು, ಕರ್ನಾಟಕ ಮತ್ತು ಜಗತ್ತಿನ ವಿಶಿಷ್ಟ ಸಂಪನ್ಮೂಲ ವ್ಯಕ್ತಿಗಳ ವಿವಿಧ ಶಿಬಿರಗಳು, ಕರಾವಳಿ -ಮಲೆನಾಡು -ಬಯಲನಾಡು ಗಳ ಕೃಷಿ ಮತ್ತು ರಂಗ ಒಡನಾಟ ಮತ್ತು ಅಭ್ಯಾಸ, ಆಯ್ಕೆಯಾದ ಕಲಿಗಳಿಗೆ ಪ್ರತಿ ತಿಂಗಳು 5ಸಾವಿರ ಮಾಸಿಕ ಕಲಿವೇತನ, ಉಚಿತ ವಸತಿ, ಕಲಿಕಾ ಪ್ರವಾಸಗಳು, ವ್ಯಕ್ತಿತ್ವ ವಿಕಸನ ತರಬೇತಿಗಳು, ಚರಕ ನೂಲು ಕಲಿಕೆ -ಅಭ್ಯಾಸ -ಧ್ಯಾನ, ಓದು -ಸಿನಿಮಾ -ಒಡನಾಟಗಳು...
🌱 *ಹೇಗೆ ಸೇರಬಹುದು?*
* ನಿಮ್ಮ ವಿವರಗಳನ್ನು ಕೆಳಗಿನ mail ID ಗೆ mail ಮಾಡಬಹುದು ಅಥವಾ ವಾಟ್ಸಾಪ್ ಮಾಡಬಹುದು.
* ಕರೆ ಮಾಡಿ ನೋಂದಾಯಿಸಬಹುದು.
*ಆಯ್ಕೆ ಪ್ರಕ್ರಿಯೆ ಹೇಗಿರತ್ತೆ?*
* ನಾವು ಕರೆ ಮಾಡಿ ಬರಮಾಡಿದ ಕಲಿಕಾರ್ಥಿಗಳು ಧಾರವಾಡ ದಡ್ಡಿಕಮಲಾಪುರ ದ ಸುಮನ ಸಂಗಮ ಕಾಡುತೋಟದಲ್ಲಿ ಅನುಭವಾತ್ಮಕ ಸಂದರ್ಶನದಲ್ಲಿ ಭಾಗವಹಿಸುವುದು.
*ನೀವು ವಿವರಗಳನ್ನು ಸಲ್ಲಿಸಬೇಕಾದ ಕಡೆಯ ದಿನಾಂಕ ಜುಲೈ 2, 2024, ಮಂಗಳವಾರ*
* ಅನುಭವಾತ್ಮಕ ಸಂದರ್ಶನ ನಡೆಯುವ ದಿನಾಂಕ 2024ರ ಜುಲೈ 4,5,6,7.
* ಸಂದೇಹಗಳಿಗೆ ಕರೆ ಮಾಡಬಹುದು.
*[email protected]*
*Ph : 9901410127 / 9448143100*