Janata Dal Secular - Sira

Janata Dal Secular - Sira Official Account
Political party

ಕೋಡಿ ವೀರಪ್ಪ ಸ್ವಾಮಿ ಸನ್ನಿಧಿಯಲ್ಲಿ ನೆಡೆದ ಲಕ್ಷ್ಮಿಸಾಗರದ ಚಿದಾನಂದಮೂರ್ತಿ ಮತ್ತು ಶಶಿಕಲಾ ರವರ ಮಗನ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ...
05/09/2026

ಕೋಡಿ ವೀರಪ್ಪ ಸ್ವಾಮಿ ಸನ್ನಿಧಿಯಲ್ಲಿ ನೆಡೆದ ಲಕ್ಷ್ಮಿಸಾಗರದ ಚಿದಾನಂದಮೂರ್ತಿ ಮತ್ತು ಶಶಿಕಲಾ ರವರ ಮಗನ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಬಿ.ಎಸ್ ಸತ್ಯಪ್ರಕಾಶ್ ರವರು,ಜೊತೆಯಲ್ಲಿ ಅರ್. ಉಗ್ರೇಶ್,ರಂಗಶಾಮಣ್ಣ, ವಿವೇಕಣ್ಣ,ರಾಮಕೃಷ್ಣಪ್ಪ, ರಾಜು ಇನ್ನು ಹಲವಾರು ಹಾಜರಿದ್ದರು

ಪೌರ ಕಾರ್ಮಿಕರಿಗೆ ನಿವೇಶನ ಹಂಚಿಕೆಯಲ್ಲಿ ವಿಳಂಬ: ಸತ್ಯಪ್ರಕಾಶ್ ನೇತೃತ್ವದಲ್ಲಿ ಎಚ್ಚರಿಕೆ.ಶಿರಾ: ಶಿರಾ ನಗರದ ಪೌರ ಕಾರ್ಮಿಕರಿಗೆ ನಿವೇಶನ ಹಂಚಿಕ...
05/09/2026

ಪೌರ ಕಾರ್ಮಿಕರಿಗೆ ನಿವೇಶನ ಹಂಚಿಕೆಯಲ್ಲಿ ವಿಳಂಬ: ಸತ್ಯಪ್ರಕಾಶ್ ನೇತೃತ್ವದಲ್ಲಿ ಎಚ್ಚರಿಕೆ.

ಶಿರಾ: ಶಿರಾ ನಗರದ ಪೌರ ಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡುವಲ್ಲಿ ವಿಳಂಬವಾಗುತ್ತಿರುವುದಕ್ಕೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾದ ಸತ್ಯಪ್ರಕಾಶ್ ಮತ್ತು ತುಮುಲ್ ನಿರ್ದೇಶಕರಾದ ಎಸ್. ಅರ್ ಗೌಡ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೌರ ಕಾರ್ಮಿಕರಿಗೆ ನಿವೇಶನ ಹಂಚಿಕೆ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ, ಆದಷ್ಟು ಬೇಗ ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದು ಅವರು ನಗರಸಭೆ ಪೌರಾಯುಕ್ತರು ಹಾಗೂ ನಗರಸಭೆ ಅಧ್ಯಕ್ಷರಿಗೆ ಆಗ್ರಹಿಸಿದರು.

ಪೌರ ಕಾರ್ಮಿಕರು ನಗರದ ಸ್ವಚ್ಛತೆ ಹಾಗೂ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಅವರ ಬಹುದಿನಗಳ ನಿವೇಶನದ ಬೇಡಿಕೆಯನ್ನು ನಗರಸಭೆ ಆಡಳಿತ ಗಂಭೀರವಾಗಿ ಪರಿಗಣಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ಅರ್ಹ ಪೌರ ಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಸತ್ಯಪ್ರಕಾಶ್ ಒತ್ತಾಯಿಸಿದರು.

ನಿವೇಶನ ಹಂಚಿಕೆ ವಿಚಾರದಲ್ಲಿ ಇನ್ನಷ್ಟು ವಿಳಂಬವಾದರೆ, ಪೌರ ಕಾರ್ಮಿಕರ ಪರವಾಗಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪೌರಾಯುಕ್ತರು ಹಾಗೂ ನಗರಸಭೆ ಅಧ್ಯಕ್ಷರಿಗೆ ಸತ್ಯಪ್ರಕಾಶ್ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಕಿಟ್ಟಪ್ಪ,ರಾಘಣ್ಣ, ರಾಮಣ್ಣ, ಮುದಿಮಡುರಂಗಶಾಮಣ್ಣ, ಶ್ರೀರಂಗ, ಹೇಮಂತ್ ಕುಮಾರ್, ರಹಮತ್,ನಾಗಬೂಷಣ್,ಸಾದಿಕ್ ಯಶಸ್ವಿನಿ, ಲಲಿತಮ್ಮ, ತಿಮ್ಮರಾಜು, ಕೋಟೆ ಮಹದೇವ್ ಇನ್ನು ಹಲವರು ಹಾಜರಿದ್ದರು

ಅಗ್ನೆಯ ಪದವೀಧರ ಕ್ಷೇತ್ರದ NDA ಅಭ್ಯರ್ಥಿ ಕೆ. ಎಂ ಸುರೇಶ್ ರವರು ಇಂದು ಶಿರಾ ತಾಲ್ಲೂಕಿನ NDA ನಾಯಕರನ್ನು ಭೇಟಿಮಾಡಿ ಬೆಂಬಲ ಕೋರಿದರು..
04/09/2026

ಅಗ್ನೆಯ ಪದವೀಧರ ಕ್ಷೇತ್ರದ NDA ಅಭ್ಯರ್ಥಿ ಕೆ. ಎಂ ಸುರೇಶ್ ರವರು ಇಂದು ಶಿರಾ ತಾಲ್ಲೂಕಿನ NDA ನಾಯಕರನ್ನು ಭೇಟಿಮಾಡಿ ಬೆಂಬಲ ಕೋರಿದರು..

🦚 ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು 🦚
04/09/2026

🦚 ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು 🦚

ಇಂದು ಜನತಾದಳ ಕಚೇರಿಯಲ್ಲಿ ಸಾಗುವಳಿ ಚೀಟಿ ಇದ್ದರೂ ಸಕ್ರಮವಾಗದೆ ಇರುವ ರೈತರೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಸಾಗುವಳಿ ಸಕ್ರಮಗೊಳಿಸಲು ಅಹೋರಾ...
01/09/2026

ಇಂದು ಜನತಾದಳ ಕಚೇರಿಯಲ್ಲಿ ಸಾಗುವಳಿ ಚೀಟಿ ಇದ್ದರೂ ಸಕ್ರಮವಾಗದೆ ಇರುವ ರೈತರೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಸಾಗುವಳಿ ಸಕ್ರಮಗೊಳಿಸಲು ಅಹೋರಾತ್ರಿ ಹೋರಾಟ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಯಿತು...

ಶಿರಾ ತಾಲ್ಲೂಕು ಆಡಳಿತ ನಮ್ಮ ಮನವಿಗೆ ಸ್ಪಂದಿಸಿ ನಿವೃತ್ತ ತಹಸಿಲ್ದಾರ್ ಚಿಕ್ಕಚೆನ್ನಯ್ಯ ಮತ್ತು ರಾಮದಾಸ್ ಕಾಲದ ಬಗರು ಹುಕುಂ ಸಾಗುವಳಿ ಸಮಸ್ಯೆಗಳನ್ನು ಇನ್ನೂ ಒಂದು ವಾರದಲ್ಲಿ ಪರಿಹರಿಸದಿದ್ದರೆ ಸೆಪ್ಟಂಬರ್ 8 ಮಂಗಳವಾದಿಂದ ಶಿರಾ ಮಿನಿ ವಿಧಾನಸೌಧ (ಹೊಸ ತಾಲ್ಲೂಕು ಕಚೇರಿ) ಮುಂದೆ ರೈತರಿಗೆ ನ್ಯಾಯ ಕೊಡಿಸಲು ಅಹೋರಾತ್ರಿ ಧರಣಿ ನಡೆಸಲಾಗುತ್ತದೆ ಎಂದು
ಶಿರಾ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ
ಬಿ.ಎಸ್.ಸತ್ಯ ಪ್ರಕಾಶ್ ಎಚ್ಚರಿಕೆ ನೀಡಿದರು..

ಆತ್ಮೀಯ ರೈತ ಬಾಂಧವರೇ ಶಿರಾ ತಾಲ್ಲೂಕಿನ ತಹಶೀಲ್ದಾರಾಗಿದ್ದ ಚಿಕ್ಕ ಚನ್ನಯ್ಯ ಮತ್ತು ರಾಮದಾಸ್ ಕಾಲದಲ್ಲಿ ಮಂಜೂರಾಗಿದ್ದ  ಸಾಗುವಳಿ ಜಮೀನನ್ನು ರೈತ...
30/08/2026

ಆತ್ಮೀಯ ರೈತ ಬಾಂಧವರೇ

ಶಿರಾ ತಾಲ್ಲೂಕಿನ ತಹಶೀಲ್ದಾರಾಗಿದ್ದ ಚಿಕ್ಕ ಚನ್ನಯ್ಯ ಮತ್ತು ರಾಮದಾಸ್ ಕಾಲದಲ್ಲಿ ಮಂಜೂರಾಗಿದ್ದ ಸಾಗುವಳಿ ಜಮೀನನ್ನು ರೈತರಿಗೆ ಸಕ್ರಮ ಮಾಡಿಕೊಡುವ ವಿಚಾರವಾಗಿ ಹೋರಾಟದ ಬಗ್ಗೆ ಚರ್ಚಿಸಲು ದಿನಾಂಕ:01-09-2026 ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಚಂಗಾವರ ರಸ್ತೆಯ ಜನತಾದಳ ಪಕ್ಷದ ಕಚೇರಿಯಲ್ಲಿ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿದ್ದು ಈ ಸಭೆಗೆ ಫಲಾನುಭವಿಗಳು,ಕಾರ್ಯಕರ್ತರು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮುಂದಿನ ಹೋರಾಟಕ್ಕೆ ಬೇಕಾದ ಸಲಹೆ ಸೂಚನೆಗಳನ್ನು ನೀಡಲು ಕೋರುತ್ತೇನೆ...

ಪ್ರಕಟಣೆ:
ಬಿ‌.ಎಸ್.ಸತ್ಯಪ್ರಕಾಶ್
ಅಧ್ಯಕ್ಷರು
ಜನತಾದಳ (ಜಾ)
ಶಿರಾ ವಿಧಾನಸಭಾ ಕ್ಷೇತ್ರ

🙏✨ ಶಿರಾ ತಾಲೂಕಿನ ಹೊಸಹಳ್ಳಿ ಗ್ರಾಮದ ಪವಿತ್ರ ನೆಲದಲ್ಲಿ ಭಕ್ತಿಯ ಸಂಭ್ರಮ! ✨🙏ಶಿರಾ ತಾಲೂಕಿನ ಹೊಸಹಳ್ಳಿ ಗ್ರಾಮದ ಶ್ರೀ ವಿದ್ಯಾ ಗಣಪತಿ, ಶ್ರೀ ಆಂ...
30/08/2026

🙏✨ ಶಿರಾ ತಾಲೂಕಿನ ಹೊಸಹಳ್ಳಿ ಗ್ರಾಮದ ಪವಿತ್ರ ನೆಲದಲ್ಲಿ ಭಕ್ತಿಯ ಸಂಭ್ರಮ! ✨🙏

ಶಿರಾ ತಾಲೂಕಿನ ಹೊಸಹಳ್ಳಿ ಗ್ರಾಮದ ಶ್ರೀ ವಿದ್ಯಾ ಗಣಪತಿ, ಶ್ರೀ ಆಂಜನೇಯ ಸ್ವಾಮಿ ಹಾಗೂ ಶ್ರೀ ಭೈರಲಿಂಗೇಶ್ವರ ಸ್ವಾಮಿಯ ನೂತನ ದೇವಸ್ಥಾನಗಳ ಪ್ರತಿಷ್ಠಾಪನ ಮಹೋತ್ಸವವು ಭಕ್ತಿಭಾವ ಹಾಗೂ ಸಂಭ್ರಮದಿಂದ ನೆರವೇರಿತು. 🛕🙏

ಈ ಪುಣ್ಯ ಕಾರ್ಯಕ್ರಮದಲ್ಲಿ ಜಾತ್ಯತೀತ ಜನತಾದಳದ ಅಧ್ಯಕ್ಷರಾದ ಬಿ.ಎಸ್ ಸತ್ಯಪ್ರಕಾಶ್ ಅಣ್ಣನವರು, MLC ಚಿದಾನಂದ ಗೌಡರು, ಹನುಮಂತರಾಯಪ್ಪರು,ನಾಗರಾಜು ಆರ್‌ಟಿಓ ಹನುಮಂತಪ್ಪರು, ರಾಮಚಂದ್ರನಪ್ಪರು ಸೇರಿದಂತೆ ಗ್ರಾಮದ ಮುಖಂಡರು, ಹಿರಿಯರು, ಯುವಕರು ಹಾಗೂ ಸಮಸ್ತ ಗ್ರಾಮಸ್ಥರು ಭಾಗವಹಿಸಿ ದೇವರ ದರ್ಶನ ಪಡೆದು ಶ್ರೀ ದೇವರ ಆಶೀರ್ವಾದ ಪಡೆದರು. 🙏❤️

ಈ ಸಂದರ್ಭದಲ್ಲಿ ಸತ್ಯಪ್ರಕಾಶ್ ಅಣ್ಣನವರಿಗೆ ಗ್ರಾಮಸ್ಥರು, ಮುಖಂಡರು ಹಾಗೂ ಯುವಕರು ಆತ್ಮೀಯವಾಗಿ ಸನ್ಮಾನಿಸಿ ಗೌರವ ಸಲ್ಲಿಸಿದರು. ❤️🙏

ಹೊಸಹಳ್ಳಿ ಗ್ರಾಮದ ಪವಿತ್ರ ನೆಲಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ಭಕ್ತರೊಂದಿಗೆ ಈ ಶುಭ ಕ್ಷಣವನ್ನು ಹಂಚಿಕೊಂಡ ಸಂತೋಷ ನಮಗಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಗ್ರಾಮಸ್ಥರು, ಭಕ್ತರು ಹಾಗೂ ಅಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. 🙏❤️

ಗ್ರಾಮದ ಸಮಸ್ತ ಭಕ್ತರಿಗೆ ಶುಭ ಹಾರೈಸುತ್ತಾ,
ಶ್ರೀ ವಿದ್ಯಾ ಗಣಪತಿ, ಶ್ರೀ ಆಂಜನೇಯ ಸ್ವಾಮಿ ಹಾಗೂ ಶ್ರೀ ಭೈರಲಿಂಗೇಶ್ವರ ಸ್ವಾಮಿಯ ಅನುಗ್ರಹ ಸದಾ ಎಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತೇವೆ. 🙏✨

🚩 ಜೈ ಶ್ರೀ ಆಂಜನೇಯ ಸ್ವಾಮಿ 🚩
🙏 ಶ್ರೀ ಭೈರಲಿಂಗೇಶ್ವರ ಸ್ವಾಮಿಗೆ ಜಯ 🙏
🕉️ ಶ್ರೀ ವಿದ್ಯಾ ಗಣಪತಿ ಮಹಾರಾಜ್ ಕೀ ಜೈ 🕉️

#ಶಿರಾ #ಹೊಸಹಳ್ಳಿ #ಶ್ರೀವಿದ್ಯಾಗಣಪತಿ #ಶ್ರೀಆಂಜನೇಯಸ್ವಾಮಿ #ಶ್ರೀಭೈರಲಿಂಗೇಶ್ವರ #ದೇವಸ್ಥಾನ #ಪ್ರತಿಷ್ಠಾಪನಮಹೋತ್ಸವ #ಭಕ್ತಿಸಂಭ್ರಮ

ಶ್ರೀ ಭೂತೇಶ್ವರ ಸ್ವಾಮಿ ಕ್ರಿಕೆಟರ್ಸ್ ಕೆ ರಂಗನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಜನ ಮೆಚ್ಚಿದ ನಾಯಕರು, ಯುವಕರ...
30/08/2026

ಶ್ರೀ ಭೂತೇಶ್ವರ ಸ್ವಾಮಿ ಕ್ರಿಕೆಟರ್ಸ್ ಕೆ ರಂಗನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಜನ ಮೆಚ್ಚಿದ ನಾಯಕರು, ಯುವಕರ ಕಣ್ಮಣಿ, ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷರಾದ ಸ್ನೇಹಜೀವಿ ಸತ್ಯಪ್ರಕಾಶ್ ಅಣ್ಣನವರ ಜೊತೆಗೆ ಭುವನಹಳ್ಳಿ ರಘು, ದೇವರಾಜ್, ಮಹಾಂತೇಶ್, ಹೇಮಂತ್, ರಂಗನಾಥ್, ಶ್ರೀನಿವಾಸ್, ಮಂಜುನಾಥ್ ಹಾಗೂ ಊರಿನ ಗ್ರಾಮಸ್ಥರು, ಯುವಕರು ಉಪಸ್ಥಿತರಿದ್ದರು

ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿರುವ  ಚನ್ನಮ್ಮನವರ ಸಮಾಧಿಗೆ ನಮಿಸಿ ದೇಶದ ಮಾಜಿ ಪ್ರಧಾನಮಂತ್ರಿಗಳಾದ ಮಾನ್ಯ  ಶ್ರೀ ಹೆಚ್.ಡಿ.ದೇವೇಗೌಡ...
29/08/2026

ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿರುವ ಚನ್ನಮ್ಮನವರ ಸಮಾಧಿಗೆ ನಮಿಸಿ ದೇಶದ ಮಾಜಿ ಪ್ರಧಾನಮಂತ್ರಿಗಳಾದ ಮಾನ್ಯ ಶ್ರೀ ಹೆಚ್.ಡಿ.ದೇವೇಗೌಡರನ್ನು ಮತ್ತು ಶ್ರೀ ಹೆಚ್.ಡಿ.ರೇವಣ್ಣನವರನ್ನು ತಾಲ್ಲೂಕು ಜನತಾದಳ ಅಧ್ಯಕ್ಷರಾದ ಬಿ.ಎಸ್.ಸತ್ಯಪ್ರಕಾಶ್ ರವರು ಕುಟುಂಬ ಸಮೇತರಾಗಿ ಭೇಟಿ ಮಾಡಿ ಆಶೀರ್ವಾದ ಪಡೆದರು...

ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದ ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ ಕುಮಾರಸ್ವಾಮಿ ಅವರು ಮತ್ತು ಯುವ ಜನತ...
28/08/2026

ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದ ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ ಕುಮಾರಸ್ವಾಮಿ ಅವರು ಮತ್ತು ಯುವ ಜನತಾದಳದ ರಾಜ್ಯಾಧ್ಯಕ್ಷರಾದ ಶ್ರೀ ನಿಖಿಲ್ ಕುಮಾರಸ್ವಾಮಿ ಅವರು.

Address

Sira
Sira
SIRA

Alerts

Be the first to know and let us send you an email when Janata Dal Secular - Sira posts news and promotions. Your email address will not be used for any other purpose, and you can unsubscribe at any time.

Shortcuts

Share