Lohagiri Sandur

Lohagiri Sandur Hi Guys,

I have created a page by Name Lohagiri_Sandur. Let us use the platform to address the issues and for further development of our Taluk.

I had the privilege to express my views /opinions/suggestions on the Policy Frameworks - Issues & Challenges in the Iron...
13/10/2023

I had the privilege to express my views /opinions/suggestions on the Policy Frameworks - Issues & Challenges in the Iron Ore & Steel Sector. The session was chaired by Shri. Saminathan CMD (KIOCl) & Shri. K Madhusudhana, CEO (MSPL).

My Views were purely based on the practical problems being faced by the sector. The audience appreciated my views and opinions.

Thanks FIMI for the opportunity!!

29/07/2023

ನಾಗರ ಹಾವು ಎಲ್ಲರ ಕೈಯ್ಯಲ್ಲೂ ಪಳಗುವಂತ ಜೀವಿಯಲ್ಲ. ಸಂತೋಷ್ ಸಂಡೂರು 8660620156 ಅವರ ಕೈಚಳಕದಲ್ಲಿ ರಕ್ಷಿಸಲ್ಪಟ್ಟ ಹಾವುಗಳು ಅಸಂಖ್ಯಾತ. ಎಲ್ಲಿದ್ದರೂ ಕರೆಗೆ ಓಗೊಟ್ಟು ನಿಸ್ವಾರ್ಥದಿಂದ ಧಾವಿಸಿ ಬರುವ ಈ ಜೀವಿರಕ್ಷಕ ಸಮಾಜಮುಖೀ ಕೆಲಸಗಳು ಪ್ರಶಂಸನೀಯ.

ಸೂಪರ್ ಸಂತೋಷ್ !!

Send a message to learn more

https://youtu.be/l5C2MThWqUoG20 ಪ್ರಯುಕ್ತ ಆಯೋಜಿಲಾಗಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸಂಡೂರು ಪಟ್ಟಣದ ಆದರ್ಶ ಶಾಲೆಯ ಮಕ್ಕಳು ಪಾಲ್ಗೊಂಡ...
20/07/2023

https://youtu.be/l5C2MThWqUo

G20 ಪ್ರಯುಕ್ತ ಆಯೋಜಿಲಾಗಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸಂಡೂರು ಪಟ್ಟಣದ ಆದರ್ಶ ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು.

13/07/2023

ಬಳ್ಳಾರಿಯ 'OAISIS', ಅಷ್ಟಲ್ಲದೆ ಹೇಳಿದ್ದ ಮಹಾತ್ಮ ಗಾಂಧೀಜಿಯವರು ನೋಡು ಬಾ ಸಂಡೂರನ್ನು ಸೆಪ್ಟೆಂಬರ್ ತಿಂಗಳಲ್ಲಿ ಎಂದು, ಇಲ್ಲಿನ ಅದ್ಭುತ ಪರಿಸರ, ನೈಸರ್ಗಿಕ ಸಂಪತ್ತು ಎಂಥವರನ್ನು ಮೂಕ ವಿಸ್ಮಿತರನ್ನಾಗಿಸುತ್ತದೆ.

ಸಂಡೂರಿನ ಸುತ್ತಮುತ್ತಲಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ದಯವಿಟ್ಟು ನಿಮ್ಮ ಸ್ನೇಹಿತರೊಂದಿಗೆ ಕುಟುಂಬದವರೊಂದಿಗೆ ಒಮ್ಮೆ ಭೇಟಿ ಕೊಡಿ. ನೀವು ಪರಿಸರದೊಂದಿಗೆ ಮಾತನಾಡಬಹುದು.

ವಿಡಿಯೋ ಕೃಪೆ : ಎಂಪಿ ಕಾರ್ತಿಕ್

G20 summit ಹಂಪೆಯಲ್ಲಿ ನಡೆಯುತ್ತಿದ್ದು, ಸಾಂಪ್ರದಾಯಿಕ ಲಂಬಾಣಿ ಸಮುದಾಯದ ವಿಶೇಷ ಪ್ರದರ್ಶನ ಹಾಗೂ ಕಲೆಯ ಅದ್ಭುತ ಅನಾವರಣ !
10/07/2023

G20 summit ಹಂಪೆಯಲ್ಲಿ ನಡೆಯುತ್ತಿದ್ದು, ಸಾಂಪ್ರದಾಯಿಕ ಲಂಬಾಣಿ ಸಮುದಾಯದ ವಿಶೇಷ ಪ್ರದರ್ಶನ ಹಾಗೂ ಕಲೆಯ ಅದ್ಭುತ ಅನಾವರಣ !

ನಂದಿ ಗಣಿಯಲ್ಲಿ ಅರಳಿದ ಕಲಾಕೃತಿ !! ಕೌಶಲ್ಯ ಅಭಿವೃದ್ಧಿಗೆ ಪ್ರೋತ್ಸಾಹ ಬೇಕಿದೆ, ಸಂಬಂಧಪಟ್ಟವರು ಈ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
28/06/2023

ನಂದಿ ಗಣಿಯಲ್ಲಿ ಅರಳಿದ ಕಲಾಕೃತಿ !!

ಕೌಶಲ್ಯ ಅಭಿವೃದ್ಧಿಗೆ ಪ್ರೋತ್ಸಾಹ ಬೇಕಿದೆ, ಸಂಬಂಧಪಟ್ಟವರು ಈ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

ಭುವನೇಶ್ವರದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಜನಜಾತಿಯ ಖೆಲ್ ಮಹೋತ್ಸವ ಕ್ರೀಡಾಕೂಟದಲ್ಲಿ ಸಂಡೂರಿನ ಪ್ರತಿಭೆ ನಂದೀಶ್(ಗುಂಡ) ವಾಲಿಬಾಲ್ ವಿಭಾಗ...
13/06/2023

ಭುವನೇಶ್ವರದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಜನಜಾತಿಯ ಖೆಲ್ ಮಹೋತ್ಸವ ಕ್ರೀಡಾಕೂಟದಲ್ಲಿ ಸಂಡೂರಿನ ಪ್ರತಿಭೆ ನಂದೀಶ್(ಗುಂಡ) ವಾಲಿಬಾಲ್ ವಿಭಾಗದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಚಿನ್ನದ ಪದಕವನ್ನು ಗಳಿಸಿರುತ್ತಾರೆ ಇವರಿಗೆ ತುಂಬು ಹೃದಯದ ಅಭಿನಂದನೆಗಳು.

ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಇವರಿಂದ ಬರಲಿ, ಸೂಕ್ತ ಅನುಕೂಲಗಳು, ಸೌಲಭ್ಯಗಳು ಇಂತಹ ಪ್ರತಿಭೆಗಳಿಗೆ ದೊರೆಯಲಿ ಎಂದು ಹಾರೈಸೋಣ.

30/05/2023

ಮೈಸೂರಿನ ತಿ. ನರಸೀಪುರದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬಳ್ಳಾರಿಯ 12 ಜನ ಸಾವನ್ನಪ್ಪಿದ್ದಾರೆ.

ಒಂದು ಸಣ್ಣ ಅಜಾಗರೂಕತೆಗೆ ಅಮಾಯಕರು ಬಲಿಯಾಗಿದ್ದು ನಿಜಕ್ಕೂ ದುರಂತ. ಎಚ್ಚರಿಕೆಯಿಂದ ವಾಹನ ಚಲಾಯಿಸಿ, ಅತಿಯಾದ ವೇಗ ಯಾವತ್ತಿಗೂ ಅಪಾಯಕಾರಿ!

ಭೀಕರವಾಗಿ ಅಸುನೀಗಿದ ಜೀವಗಳ ಸದ್ಗತಿಗೆ ಎಲ್ಲರೂ ಪ್ರಾರ್ಥಿಸೋಣ!

#ಓಂಶಾಂತಿ‌

18/04/2023

ವಿಕೃತ ಮನಸ್ಸಿನ ಕೆಲಸ ಎಂದಷ್ಟೇ ಹೇಳಬಹುದು !!

ಸಂಡೂರಿನಲ್ಲಿ ಬೇಸಿಗೆ ಸಂದರ್ಭದಲ್ಲಿ ಕಾಡಿನಲ್ಲಿ ಬೆಂಕಿ ಹಚ್ಚುವುದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಈ ರೀತಿ ಸುಟ್ಟರೆ ಮುಂದಿನ ದಿನಗಳಲ್ಲಿ ಹುಲ್ಲು ಚೆನ್ನಾಗಿ ಬರುತ್ತದೆ ಎನ್ನುವ ಅಭಿಪ್ರಯವಿದೆ. ಆದರೆ ಇಂತಹ ಕೃತ್ಯ ಎಸಗಿದಾಗ ಆಗುವ ನಷ್ಟದ ಅಂದಾಜು ಇವರಿಗಿದೆಯೆ ??

ಕಾಡಿನ ಪ್ರಾಣಿಗಳು, ಏಷ್ಟೋ ವರ್ಷಗಳ ಮರಗಳು, ಪಕ್ಷಿ ಸಂಕುಲ ಅಲ್ಲದೆ ಇಲ್ಲಿ ಸಿಗುವ ವಿವಿಧ ಬಗೆಯ ಔಷದಿ ಗುಣಗಳುಳ್ಳ ಗಿಡಗಳು ಎಲ್ಲವೂ ನಾಶವಾಗುತ್ತವೆ. ಈಗಾಗಲೇ ಉರಿ ಬಿಸಿಲಿಗೆ ತತ್ತರಿಸುತ್ತಿರುವ ನಮಗೆ ಈ ರೀತಿಯ ಘಟನೆಗಳು ಮುಂದಿನ ದಿನಗಳು ಇನ್ನೂ ಕಷ್ಟಕರವಾಗಿರಲಿದೆ ಎನ್ನುವ ಮುನ್ಸೂಚನೆ.

ಕಾಡಿನ ನಾಶ ಒಂದೆಡೆ ಆದರೆ, ಇದನ್ನು ಆರಿಸುವ ಕೆಲಸ ಮಾಡುವ ಅರಣ್ಯ ಇಲಾಖೆಯ ಸಿಬ್ಬಂದಿಗಳ ಪಾಡು ಹೇಳಿರಿ, ಅವರಿಗೂ ಕುಟುಂಬ , ಮಕ್ಕಳು ಇರುತ್ತಾರೆ ಅಲ್ಲವೇ ?? ನೀವು ಮಾಡುವ ಇಂತಹ ಕೃತ್ಯಗಳು ಮತ್ತೊಬ್ಬರ ಜೀವನಕ್ಕೆ ಕಂಟಕ ತರುತ್ತದೆ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲವೇ.

ಪ್ರತಿ ಬಾರಿ ಅರಣ್ಯ ಇಲಾಖೆಯ ಕಡೆ ಕೈ ಮಾಡುವ ನಾವುಗಳು ಇಂದು ಏನು ಹೇಳಬೇಕು. ಅರಣ್ಯ ಇಲಾಖೆಯ ಸಿಬ್ಬಂದಿಗಳ ಶ್ರಮ ಹಾಗೂ ಕಷ್ಟ ಯಾರಿಗೂ ಬೇಡ. ದಯವಿಟ್ಟು ಇಂಥ ಕೆಲಸ ಮಾಡುವವರ ಬಗ್ಗೆ ಮಾಹಿತಿ ಸಿಕ್ಕರೆ ಸಂಭಂದಪಟ್ಟ ಇಲಾಖೆಗೆ ತಿಳಿಸಿ.

ಬೇರೆಯವರು ಬದಲಾಗಬೇಕು, ನಮಗೆ ಒಳ್ಳೆಯದನ್ನು ಮಾಡಬೇಕು ಎಂದು ಬಯಸುವ ನಾವು ನಮ್ಮ ಬದಲಾವಣೆ ಮರೆತ್ತಿದ್ದೇವೆ. ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಆಗದಂತೆ ಸಹಕರಿಸಿ.

ಮತ್ತೊಮ್ಮೆ ಇಂತಹ ಕೃತ್ಯ ಎಸಗಿದ ನೀಚ ಮನಸುಗಳಿಗೆ ಧಿಕ್ಕಾರ !!

#ಅರಣ್ಯಉಳಿಸಿ

23/03/2023

ಸಂಡೂರು ಪಟ್ಟಣದಲ್ಲಿ ಶ್ರೀ ಪೇಟೆ ಬಸವೇಶ್ವರ ಮಹಾ ರಥೋತ್ಸವ ಬಹಳ ಅದ್ದೂರಿಯಾಗಿ ಜರುಗಿತು.

ವಿಡಿಯೋ ೨

ಯುಗಾದಿ ಹಬ್ಬದ ಶುಭಾಶಯಗಳು ಸರ್ವರಿಗೂ !!

23/03/2023

ಸಂಡೂರು ಪಟ್ಟಣದಲ್ಲಿ ಶ್ರೀ ಪೇಟೆ ಬಸವೇಶ್ವರ ಮಹಾ ರಥೋತ್ಸವ ಬಹಳ ಅದ್ದೂರಿಯಾಗಿ ಜರುಗಿತು.

07/03/2023

ಶ್ರೀ ಗಂಡಿ ಲಕ್ಷ್ಮಿನರಸಿಂಹಸ್ವಾಮಿಯ ಅನುಗ್ರಹ ಸದಾ ಕಾಲ ನಿಮ್ಮ ಮೇಲಿರಲಿ.

ಸರ್ವ ಭಕ್ತಾದಿಗಳಿಗೆ ಸ್ವಾಮಿಯ ಮಹಾರಥೋತ್ಸವಕ್ಕೆ ಸ್ವಾಗತ 🙏

Address

Sandur
583119

Telephone

+918310628890

Website

Alerts

Be the first to know and let us send you an email when Lohagiri Sandur posts news and promotions. Your email address will not be used for any other purpose, and you can unsubscribe at any time.

Contact The Organization

Send a message to Lohagiri Sandur:

Share