15/08/2025
ರಾಜ್ಯದ ಎಲ್ಲಾ ವಿದ್ಯಾರ್ಥಿ ಯುವ ಮಿತ್ರರಿಗೆ 79 ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.,,,
ಸ್ವಾತಂತ್ರ್ಯ ಭಾರತವನ್ನಾಗಿ ಮಾಡಲು, ಬ್ರಿಟಿಷ್ ಭಾರತದಿಂದ ಮುಕ್ತಗೊಂಡಾಗ ಅಂದಿನ ಹೋರಾಟಗಾರರು ಕಂಡ ಕನಸುಗಳನ್ನು ನೆರೆವೇರಿಸದಿದ್ದರು ಪರವಾಗಿಲ್ಲ ಕೊಲ್ಲಬಾರದು.
ನಮಗೆ ಯಾರೋ ನಟರು ಮಾದರಿ ಅಲ್ಲ. ಪ್ರಬುದ್ಧ ಭಾರತದ ಕನಸು ಕಂಡು, ತಮ್ಮ ಬದುಕನ್ನೇ ದೇಶಕ್ಕಾಗಿ ಮುಡಿಪಿಟ್ಟವರು ನಮಗೆ ಆದರ್ಶವಾಗಬೇಕು.
ಸ್ವಾತಂತ್ರ್ಯ ಬಂದು 79ವರ್ಷ ಸಂದಿವೆ ಆದರೂ ದೇಶದಲ್ಲಿ ಪುರಾತನ ಕಾಲದ ಅನಿಷ್ಟ ಪದ್ದತಿಯನ್ನು ಮುಂದುವರಿಸುತ್ತಿದ್ದೇವೆ. ಪಾಳೆಯಗಾರಿ, ಮತಾಂದತೆ, ಜಾತಿವಾದ, ಕೋಮುವಾದ, ಭಯೋತ್ಪಾದಕ ಕೃತ್ಯಗಳು, ಮಹಿಳೆಯರ ಅತ್ಯಾಚಾರ ಕೊಲೆ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಸಮಾಜ ನಮಗೆ ಬೇಕಿಲ್ಲ. ಇಂತಹ ವ್ಯವಸ್ಥೆ ವಿರುದ್ಧ ನಾವು ಹೋರಾಟಕ್ಕೆ ಸಿದ್ದರಾಗಬೇಕಿದೆ.