Umeshgouda C Patil

Umeshgouda C Patil ಹೆಮ್ಮೆಯ ಭಾರತೀಯ, ಬಿಜೆಪಿ ಪಕ್ಷದ ಕಾರ್ಯಕರ್ತ

ಸಾರ್ಥಕ್–ಪಿಡಿಎಸ್‌: 5 ವರ್ಷ ವಿಸ್ತರಣೆಗೆ ಕೇಂದ್ರ ಅಸ್ತು!ತಂತ್ರಜ್ಞಾನ ಅಳವಡಿಕೆ ಮೂಲಕ ಪಡಿತರ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಹಾಗೂ ಆಹಾರ ಧ...
28/05/2026

ಸಾರ್ಥಕ್–ಪಿಡಿಎಸ್‌: 5 ವರ್ಷ ವಿಸ್ತರಣೆಗೆ ಕೇಂದ್ರ ಅಸ್ತು!

ತಂತ್ರಜ್ಞಾನ ಅಳವಡಿಕೆ ಮೂಲಕ ಪಡಿತರ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಹಾಗೂ ಆಹಾರ ಧಾನ್ಯಗಳ ಕಳ್ಳತನಕ್ಕೆ ಕಡಿವಾಣ ಉದ್ದೇಶದಿಂದ ಪಡಿತರ ಸಾಗಣೆ, ನಿರ್ವಹಣೆ ಮತ್ತು ಪಿಡಿಎಸ್ ಯಾಂತ್ರೀಕೃತ ಸಹಾಯ ಯೋಜನೆ (SARTHAK-PDS) ಯನ್ನು ಏಕೀಕೃತ ಯೋಜನೆಯಾಗಿ ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ಯೋಜನೆಯು 81 ಕೋಟಿಗೂ ಹೆಚ್ಚು ಜನರಿಗೆ ಆಹಾರ ಧಾನ್ಯಗಳ ಪಾರದರ್ಶಕ ವಿತರಣೆಯನ್ನು ಖಚಿತಪಡಿಸುತ್ತದೆ.

ಪೂರ್ಣ ವಿವರಗಳಿಗಾಗಿ ಕ್ಲಿಕ್ ಮಾಡಿ : https://bit.ly/43x4O69



BJP Karnataka Pralhad Joshi BJP Yuva Morcha Gadag District

"ಹೇಡಿಗಳು ಎಂದಿಗೂ ಇತಿಹಾಸವನ್ನು ಸೃಷ್ಟಿಸುವುದಿಲ್ಲ, ಕಾಲಮಾನದಲ್ಲಿ ತಮ್ಮ ಹೆಸರುಗಳನ್ನು ಕೆತ್ತುವವರು ಧೈರ್ಯಶಾಲಿಗಳು."ಅಪ್ರತಿಮ ಸ್ವಾತಂತ್ರ್ಯ ಹ...
28/05/2026

"ಹೇಡಿಗಳು ಎಂದಿಗೂ ಇತಿಹಾಸವನ್ನು ಸೃಷ್ಟಿಸುವುದಿಲ್ಲ, ಕಾಲಮಾನದಲ್ಲಿ ತಮ್ಮ ಹೆಸರುಗಳನ್ನು ಕೆತ್ತುವವರು ಧೈರ್ಯಶಾಲಿಗಳು."

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಮಹಾನ್ ಕ್ರಾಂತಿಕಾರಿ ಹಾಗೂ ಚಿಂತಕ ವೀರ ಸಾವರ್ಕರ್ ಅವರ ಜನ್ಮದಿನದಂದು ಗೌರವ ಪೂರ್ವಕ ನಮನಗಳು.

ನಾಲ್ವರು ನಮ್ಮ ಕನ್ನಡಿಗರಿಗೆ ಪದ್ಮ ಪದ್ಮ ಪ್ರಶಸ್ತಿ ಪ್ರಧಾನ..1. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಡಾ. ಎಸ್. ಜಿ. ಸುಶೀಲಮ್ಮ-1975ರಲ್ಲಿ ಕೇವಲ...
26/05/2026

ನಾಲ್ವರು ನಮ್ಮ ಕನ್ನಡಿಗರಿಗೆ ಪದ್ಮ ಪದ್ಮ ಪ್ರಶಸ್ತಿ ಪ್ರಧಾನ..

1. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಡಾ. ಎಸ್. ಜಿ. ಸುಶೀಲಮ್ಮ-1975ರಲ್ಲಿ ಕೇವಲ 15 ರೂಪಾಯಿಗಳೊಂದಿಗೆ, ಒಂದು ಪುಟ್ಟ ಕೋಣೆಯಲ್ಲಿ ಆರಂಭವಾದ 'ಸುಮಂಗಲಿ ಸೇವಾ ಆಶ್ರಮ' ಇಂದು 400ಕ್ಕೂ ಹೆಚ್ಚು ಬಡ ಮಕ್ಕಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದಾರೆ.

2. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಶ್ರೀ ಎಂ.ಜಿ.ಅಂಕೇಗೌಡ - ಒಬ್ಬ ಸಾಮಾನ್ಯ KSRTC ನೌಕರನಾಗಿ ಬದುಕು ಆರಂಭಿಸಿ, ವಿವಿಧ ಭಾಷೆಗಳ 20 ಲಕ್ಷಕ್ಕೂ ಅಧಿಕ ಪುಸ್ತಕಗಳ ಜೊತೆಗೆ ತಮ್ಮ ಸ್ವಂತ ಮನೆಯನ್ನೇ ಒಂದು ಅದ್ಭುತ 'ಪುಸ್ತಕ ಮನೆ'ಯಾಗಿ ಪರಿವರ್ತಿಸಿದವರು.

3. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ಶತಾವಧಾನಿ ಡಾ. ಆರ್. ಗಣೇಶ್ - ಕನ್ನಡ ಮತ್ತು ಸಂಸ್ಕೃತದಲ್ಲಿ 1,300ಕ್ಕೂ ಹೆಚ್ಚು ಅಷ್ಟಾವಧಾನಗಳು, 5 ಶತಾವಧಾನಗಳನ್ನು ಪ್ರಸ್ತುತಪಡಿಸಿ ಪ್ರಾಚೀನ ಸಂಸ್ಕೃತ ಕಲೆಯಾದ ಅಷ್ಟಾವಧಾನದ ಮಹಾಗುರುಗಳಾಗಿದ್ದಾರೆ.

4. ಪದ್ಮಶ್ರೀ ಪುರಸ್ಕೃತರು ಡಾ. ಶ್ರೀ ಹೆಚ್.ವಿ. ಹಂದೆ ಅವರಿಗೆ- ವೈದ್ಯಕೀಯ ಕ್ಷೇತ್ರಕ್ಕೆ ಸಲ್ಲಿಸಿದ ಗಣನೀಯ ಸೇವೆಗಾಗಿ

ಕರುನಾಡಿನ ಕೀರ್ತಿ ಹೆಚ್ಚಿಸಿರುವ ಎಲ್ಲ ಸಾಧಕರಿಗೆ ಹೃತ್ಪೂರ್ವಕ ಅಭಿನಂದನೆಗಳು.

BJP Karnataka Pralhad Joshi
BJP Yuva Morcha Gadag District
Narendra Modi

ಸಮರ್ಥ ನಾಯಕತ್ವಕ್ಕೆ ಸುವರ್ಣ ಯುಗ!'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎನ್ನುವ ಧ್ಯೇಯ ವಾಕ್ಯದಡಿ ಪ್ರಧಾನಮಂತ್ರಿಗಳಾದ ಶ್ರೀ Narendra Modi ji ಅ...
26/05/2026

ಸಮರ್ಥ ನಾಯಕತ್ವಕ್ಕೆ ಸುವರ್ಣ ಯುಗ!

'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎನ್ನುವ ಧ್ಯೇಯ ವಾಕ್ಯದಡಿ ಪ್ರಧಾನಮಂತ್ರಿಗಳಾದ ಶ್ರೀ Narendra Modi ji ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 12 ವರ್ಷಗಳಾದವು. ಅಂತ್ಯೋದಯ ಪರಿಕಲ್ಪನೆಯಲ್ಲಿ ಎಲ್ಲರನ್ನೂ ಅಭಿವೃದ್ಧಿಯತ್ತ ಒಯ್ಯುತ್ತಾ, ಭಾರತವನ್ನು ಜಾಗತಿಕ ಮಟ್ಟದಲ್ಲಿ ಅತ್ಯಂತ ಪ್ರಭಾವಿ, ಶಕ್ತಿಶಾಲಿ ರಾಷ್ಟ್ರವಾಗಿಸುವಲ್ಲಿ ಅವಿರತ ಪ್ರಯತ್ನ ನಡೆಸುತ್ತಿರುವ ಹೆಮ್ಮೆಯ ಪ್ರಧಾನಿಯವರಿಗೆ ಅಭಿನಂದನೆಗಳು.

ಮುಂದಿನ ದಿನಗಳಲ್ಲಿ ಅವರ ನೇತೃತ್ವದಲ್ಲಿ ಭಾರತ ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಪ್ರಾರ್ಥಿಸುತ್ತೇನೆ.



Narendra Modi BJP Karnataka Pralhad Joshi BJP Yuva Morcha Gadag District Vijayendra Yediyurappa Basavaraj Bommai

ಒಂದು ಕಾಲದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುತ್ತಿದ್ದ ದೇಶಗಳಲ್ಲೊಂದಾಗಿದ್ದ ಭಾರತವಿಂದು ಮೋದಿ ಸರ್ಕಾರದ ಆತ್ಮನಿರ...
26/05/2026

ಒಂದು ಕಾಲದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುತ್ತಿದ್ದ ದೇಶಗಳಲ್ಲೊಂದಾಗಿದ್ದ ಭಾರತವಿಂದು ಮೋದಿ ಸರ್ಕಾರದ ಆತ್ಮನಿರ್ಭರ ಭಾರತ ಮತ್ತು ಮೇಕ್‌ ಇನ್‌ ಇಂಡಿಯಾ ಯೋಜನೆಗಳ ಮೂಲಕ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವ ಪ್ರಮುಖ ದೇಶವಾಗಿ ಹೊರಹೊಮ್ಮುತ್ತಿದೆ.

ಜಾಗತಿಕ ಮಟ್ಟದಲ್ಲಿ ಭಾರತೀಯ ರಕ್ಷಣಾ ಉತ್ಪನ್ನಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದ್ದು, ಜಾಗತಿಕ ರಕ್ಷಣಾ ಮಾರುಕಟ್ಟೆಯಲ್ಲಿ ನಂಬಿಕಸ್ಥ ಮತ್ತು ಕೈಗೆಟುಕುವ ದರದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸುವ ರಕ್ಷಣಾ ಉತ್ಪಾದನಾ ಕೇಂದ್ರವಾಗಿ ಭಾರತ ಪರಿವರ್ತನೆಗೊಳ್ಳುತ್ತಿದೆ.



BJP Karnataka Narendra Modi Pralhad JoshiBJP Yuva Morcha Gadag District

25/05/2026

ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಇಂದಿನ ಕಾಂಗ್ರೆಸ್ ಸರ್ಕಾರದಷ್ಟು ಜನ ವಿರೋಧಿ ಸರ್ಕಾರವನ್ನು ರಾಜ್ಯದ ಜನತೆ ಎಂದೂ ಕಂಡಿಲ್ಲ.

ಸುಳ್ಳು ಭರವಸೆಗಳು ಹಾಗೂ ಯೋಜನೆಗಳನ್ನು ಪೂರೈಸಲಾಗದೇ ರಾಜ್ಯದ ಖಜಾನೆಯನ್ನು ಬರಿದು ಮಾಡಿಕೊಂಡಿರುವ ಈ ಸರ್ಕಾರ ಜನಕಲ್ಯಾಣವನ್ನು ಮರೆತು ಭ್ರಷ್ಟಾಚಾರದಲ್ಲಿ ತೊಡಗಿ ರಾಜ್ಯದ ಜನತೆಯನ್ನು ಸಂಕಷ್ಟಕ್ಕೆ ತಳ್ಳುತ್ತಿದೆ.

BJP Karnataka Pralhad Joshi BJP Yuva Morcha Gadag District Basavaraj BommaiVijayendra Yediyurappa
R Ashoka

“ಸಬ್ಕಾ ಸಾಥ್, ಸಬ್ಕಾ ವಿಕಾಸ್” ಎಂಬ ಸಂಕಲ್ಪವನ್ನು ಮೋದಿ ಸರ್ಕಾರ ಕಾರ್ಯರೂಪಕ್ಕೆ ತರುತ್ತಿದೆ!2022ರಿಂದ ಇದುವರೆಗೆ ದೇಶದಾದ್ಯಂತ 47 ಸ್ಥಳಗಳಲ್ಲಿ...
25/05/2026

“ಸಬ್ಕಾ ಸಾಥ್, ಸಬ್ಕಾ ವಿಕಾಸ್” ಎಂಬ ಸಂಕಲ್ಪವನ್ನು ಮೋದಿ ಸರ್ಕಾರ ಕಾರ್ಯರೂಪಕ್ಕೆ ತರುತ್ತಿದೆ!

2022ರಿಂದ ಇದುವರೆಗೆ ದೇಶದಾದ್ಯಂತ 47 ಸ್ಥಳಗಳಲ್ಲಿ ನಡೆದ "ರೋಜ್ಗಾರ್ ಮೇಳ"ಗಳ ಮೂಲಕ 12 ಲಕ್ಷಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ. ಇದೀಗ ಮತ್ತೊಮ್ಮೆ 51,000ಕ್ಕೂ ಅಧಿಕ ಯುವಕರಿಗೆ ನೇಮಕಾತಿ ಪತ್ರ ವಿತರಿಸಿರುವುದು, ಯುವಶಕ್ತಿಗೆ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ Narendra Modi ಅವರ ನೇತೃತ್ವದ ಕೇಂದ್ರ ಸರ್ಕಾರ ನೀಡುತ್ತಿರುವ ಬದ್ಧತೆಯ ಸ್ಪಷ್ಟ ನಿದರ್ಶನ.

ರೈಲ್ವೆ, ಬ್ಯಾಂಕಿಂಗ್, ಶಿಕ್ಷಣ, ರಕ್ಷಣಾ ಸೇರಿದಂತೆ ಹಲವು ಪ್ರಮುಖ ಇಲಾಖೆಗಳಲ್ಲಿನ ಉದ್ಯೋಗಾವಕಾಶಗಳಿಂದ ಲಕ್ಷಾಂತರ ಕುಟುಂಬಗಳಿಗೆ ಹೊಸ ಆಶಾಕಿರಣ ದೊರಕಿದೆ.

"ಯುವಕರೇ ದೇಶದ ಶಕ್ತಿ" -ಇದೇ ಮೋದಿಜಿಯವರ ಅಭಿವೃದ್ಧಿ ಮಂತ್ರ!



BJP Karnataka Pralhad Joshi Narendra ModiBJP Yuva Morcha Gadag District

ರಾಜ್ಯ ಕಾಂಗ್ರೆಸ್ ಸರ್ಕಾರವೇ ಅಪರಾಧಿಗಳಿಗೆ ಅಭಯ ನೀಡುತ್ತಿರುವುದನ್ನು ಸ್ವತಃ ಪೊಲೀಸ್ ಅಧಿಕಾರಿಗಳೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಓಲೈಕೆಯ ರಾಜಕಾ...
24/05/2026

ರಾಜ್ಯ ಕಾಂಗ್ರೆಸ್ ಸರ್ಕಾರವೇ ಅಪರಾಧಿಗಳಿಗೆ ಅಭಯ ನೀಡುತ್ತಿರುವುದನ್ನು ಸ್ವತಃ ಪೊಲೀಸ್ ಅಧಿಕಾರಿಗಳೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಓಲೈಕೆಯ ರಾಜಕಾರಣಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಕಾನೂನು ವ್ಯವಸ್ಥೆಯನ್ನೇ ಬಲಿಕೊಡುತ್ತಿದೆ ಎಂಬುದಕ್ಕೆ 52 ಕ್ರಿಮಿನಲ್ ಪ್ರಕರಣವನ್ನು ಹಿಂಪಡೆಯುವ ನಿರ್ಧಾರವೇ ಸ್ಪಷ್ಟ ಉದಾಹರಣೆಯಾಗಿದೆ.

ಈ ನಿರ್ಧಾರಕ್ಕೆ ಸ್ವತಃ ಪೊಲೀಸ್ ಅಧಿಕಾರಿಗಳೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಪರಾಧ ಪ್ರಕರಣ ಹಿಂಪಡೆಯುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ ಕಾನೂನು ವ್ಯವಸ್ಥೆಯ ಮೇಲೆ ಜನರಿಗೆ ನಂಬಿಕೆ ಕುಸಿಯುತ್ತದೆ ಎಂದು ಅಧಿಕಾರಗಳು ಎಚ್ಚರಿಕೆ ನೀಡಿದ್ದಾರೆ.

ಎರಡು ದಿನಗಳ ಸಂಘಟನಾತ್ಮಕ ಕಾರ್ಯಕ್ರಮಗಳಿಗಾಗಿ ನಮ್ಮ ಕರ್ನಾಟಕಕ್ಕೆ ಆಗಮಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ನಿತಿನ್‌ ನಬಿನ್‌ ಅವ...
23/05/2026

ಎರಡು ದಿನಗಳ ಸಂಘಟನಾತ್ಮಕ ಕಾರ್ಯಕ್ರಮಗಳಿಗಾಗಿ ನಮ್ಮ ಕರ್ನಾಟಕಕ್ಕೆ ಆಗಮಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ನಿತಿನ್‌ ನಬಿನ್‌ ಅವರಿಗೆ ಆದರದ ಸುಸ್ವಾಗತ



BJP Karnataka Nitin Nabin

22/05/2026

"ವಿಶ್ವಸಂಸ್ಥೆಯಿಂದ ವಿಶ್ವ ನಾಯಕನಿಗೆ ಅತ್ಯುನ್ನತ ‘ಅಗ್ರಿಕೋಲಾ ಮೆಡಲ್’ ಗೌರವ"

ಭಾರತದ ಕೃಷಿ ಸಾಧನೆಗೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹತ್ವದ ಗೌರವ ಲಭಿಸಿದೆ.

ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ (FAO) ಅತ್ಯುನ್ನತ ಗೌರವ ʻಎಫ್‌ಎಒ ಅಗ್ರಿಕೋಲಾ ಪದಕ 2026ʼ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು ದೇಶದ ಬೆನ್ನೆಲುಬಾಗಿರುವ 11 ಕೋಟಿಗೂ ಅಧಿಕ ರೈತರಿಗೆ ಸಂದ ಗೌರವವಾಗಿದೆ.

ಈ ಪ್ರತಿಷ್ಠಿತ ಗೌರವವು ಭಾರತದ ಆಹಾರ ಭದ್ರತೆ, ಸುಸ್ಥಿರ ಕೃಷಿ, ನೈಸರ್ಗಿಕ ಕೃಷಿ ಮತ್ತು ನಮ್ಮ ರೈತರ ಡಿಜಿಟಲ್ ಸಬಲೀಕರಣದಲ್ಲಾದ ಪರಿವರ್ತನಾತ್ಮಕ ಪಯಣದ ಯಶಸ್ಸನ್ನು ಪ್ರತಿಬಿಂಬಿಸುತ್ತದೆ.

ಬ್ರಹ್ಮ ಸಮಾಜದ ಸ್ಥಾಪಕ, ಭಾರತೀಯ ಪುನರುಜ್ಜೀವನದ ಪಿತಾಮಹ ರಾಜಾರಾಮ್ ಮೋಹನ್ ರಾಯ್ ಅವರ ಜನ್ಮದಿನದಂದು ಗೌರವ ಪೂರ್ವಕ ನಮನಗಳು.ಸತಿ ಪದ್ಧತಿ, ಬಾಲ್ಯ...
22/05/2026

ಬ್ರಹ್ಮ ಸಮಾಜದ ಸ್ಥಾಪಕ, ಭಾರತೀಯ ಪುನರುಜ್ಜೀವನದ ಪಿತಾಮಹ ರಾಜಾರಾಮ್ ಮೋಹನ್ ರಾಯ್ ಅವರ ಜನ್ಮದಿನದಂದು ಗೌರವ ಪೂರ್ವಕ ನಮನಗಳು.

ಸತಿ ಪದ್ಧತಿ, ಬಾಲ್ಯ ವಿವಾಹದಂತ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿ, ಬ್ರಹ್ಮ ಸಮಾಜ ಸ್ಥಾಪಿಸಿ, ದೇಶದ ಸಾಮಾಜಿಕ ಬದಲಾವಣೆಗೆ ಬಹುದೊಡ್ಡ ಕೊಡುಗೆ ನೀಡಿದ ಮೋಹನ್ ರಾಯ್ ಅವರ ಜೀವನವೇ ಸ್ಫೂರ್ತಿದಾಯಕ.

Address

Nargund

Website

Alerts

Be the first to know and let us send you an email when Umeshgouda C Patil posts news and promotions. Your email address will not be used for any other purpose, and you can unsubscribe at any time.

Share

Category