16/08/2024
*ಮೂಡುಬಿದಿರೆ ಕಾಂಗ್ರೆಸ್ಸಿನ ಗೊಂಡಾ ರಾಜ್ಯದಲ್ಲಿ ಪೊಲೀಸರು ಸುರಕ್ಷಿತರಿಲ್ಲ...*
ಇದು ನಿನ್ನೆ ನಡೆದ ಘಟನೆ ಮೂಡುಬಿದಿರೆಯ No Entry ರಸ್ತೆಯಲ್ಲಿ ಬಂದ ಕೆಲವು ಕಾಂಗ್ರೆಸ್ ಪುಡಾರಿಗಳನ್ನ ಅಲ್ಲಿಯೇ ಬೀಟ್ ನಲ್ಲಿದ್ದ ಮೂಡುಬಿದಿರೆ ಪೊಲೀಸ್ ಠಾಣೆಯ ASI ಕೃಷ್ಣಪ್ಪನವರು ತಡೆದಿದ್ದಾರೆ. ಆದರೆ, ತಾವು ರಾಹುಲ್ ಗಾಂಧಿಯ ದತ್ತು ಪುತ್ರರೆಂದು ಭಾವಿಸಿರುವ ಮೂಡುಬಿದಿರೆಯ ಕಾಂಗ್ರೆಸ್ಸಿಗರು ಇದನ್ನು ತಮಗೆ ಆದ ದೊಡ್ಡ ಅವಮಾನ ಎಂದು ತಿಳಿದು ಪೊಲೀಸ್ ಮೇಲೆ ಜಗಳಕ್ಕೆ ನಿಂತಿದ್ದಾರೆ. ಎಷ್ಟು ಹೇಳಿದರು ಕೇಳದೆ ಬೀದಿ ಗೂಂಡಾಗಳ ಹಾಗೆ ಆಡಿದ್ದಾರೆ ಈ ಜಗಳ ವಿಕೋಪಕ್ಕೆ ತಿರುಗಿ ಹೊಯ್ ಕೈ ಮಾಡುವ ಮಟ್ಟಕ್ಕೆ ಹೋಗಿದೆ.
ನಂತರ, ಬೀದಿಯಲ್ಲಿ ತಮ್ಮ ಮರ್ಯದಿ ಹೋಯಿತು ಎಂದು ತಲೆಗೆ ಬಂದ ಮೇಲೆ ತಮ್ಮ ತಪ್ಪನ್ನು ಪೊಲೀಸ್ ಮೇಲೆ ಹೊರಿಸಲು ಲಂಚಕ್ಕಾಗಿ ಬೇಡಿಕೆ ಎಂದೆಲ್ಲ ಪುಂಗಿದ್ದಾರೆ. ಆದರೆ, ಇಲ್ಲಿ ಇವರ ಗಲಾಟೆಯಿಂದ ಬೇಸತ್ತು ಇವರ ಮೇಲೆ ಪೊಲೀಸರು ಕೇಸ್ ದಾಖಳಿಸಿದ್ದಾರೆ. ಇದಕ್ಕೆ ಇವರು ಇದ್ದ ಬದ್ದ ಕಾಂಗ್ರೆಸ್ ನಾಯಕರ ಬಳಿ ಕರೆ ಮಾಡಿಸಿದ್ದಾರೆ ಆದರೆ ಮೂಡುಬಿದಿರೆ ಠಾಣೆಯ ಅಧಿಕಾರಿಗಳು ಸೊಪ್ಪು ಹಾಕಲ್ಲಿಲ್ಲ.
ಅದಕ್ಕೆ ಈಗ ಇಂಗು ತಿಂದ ಮಂಗನಂತೆ ಶಾಂತಿ ಮಾತುಕತೆಗೆ ಹೋಗಿದ್ದಾರೆ.
ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ದಲಿತರನ್ನು ದತ್ತು ಪಡೆದುಕೊಂಡಂತೆ ಆಡುವ ಕಾಂಗ್ರೆಸ್ಸಿಗರು ಒಬ್ಬ ದಲಿತ ASI ಮೇಲೆ ದರ್ಪ ತೋರಿ ಹಲ್ಲೆ ಮಾಡಲು ಹೋಗುತ್ತಾರೆ ಎಂದರೆ ಇವರ ದಲಿತ ಪ್ರೇಮ ಯಾವ ಮಟ್ಟದ್ದು ಇರಬಹುದು.