08/10/2025
Treks should be booked atleast 1 days in advance. Further, advance bookings are allowed only upto 15 days. For pre-bookin trekking visit https://aranyavihaara.karnataka.gov.in/availability ಕೊಡಗು ಜಿಲ್ಲೆಯ ವಾಯುವ್ಯ ದಿಕ್ಕನಲ್ಲಿರುವ ಪುಷ್ಪಗಿರಿ ವನ್ಯಜೀವಿ ಧಾಮವು ಪಶ್ಚಿಮ ಘಟ್ಟದ ನಿತ್ಯ ಹರಿದ್ವರ್ಣ ಕಾಡುಗಳಿಂದ ಮತ್ತು ಶೋಲಾ ಹುಲ್ಲುಗಾಲುಗಳಿಂದ ಮೈದುಂಬಿದೆ. ಅತ್ಯಂತ ವಿಶಿಷ್ಠವಾದ ಮತ್ತು ಅಪರೂಪದ ಸಸ್ಯ ಮತ್ತು ಇತರೆ ಜೀವ ಸಂಕುಲದ ಮನೆಯಾಗಿರುವ ಈ ಕಾಡು ಅಳಿವಿನಂಚಿನಲ್ಲಿರುವ ವಿವಿಧ ಪ್ರಬೇಧಗಳನ್ನು ಹೊಂದಿದೆ. ಲಿಂಗದಹೊಳೆ, ಕುಮಾರಧಾರಾ, ಮಾರಿಗುಂಡಿಹೊಳೆಗಳ ಉಗಮ ಸ್ಥಾನವೂ ಆಗಿರುವ ಈ ಪ್ರದೇಶದಲ್ಲಿರುವ ಕುಮಾರಪರ್ವತವು ರಾಜ್ಯದ ನಾಲ್ಕನೇ ಎತ್ತರದ ಗಿರಿ ಶಿಖರವಾಗಿರುತ್ತದೆ. ಅಚ್ಚರಿ ಮೂಡಿಸುವ ಮತ್ತು ಆಹ್ಲಾದಮಯವಾದ ಬೃಹನ್ನೋಟಗಳಿಂದ ಕೂಡಿರುವ ಈ ಸಾಲುಗಳು ಚಾರಣಿಗರ ಅತ್ಯಂತ ಪ್ರಿಯವಾದ ತಾಣವಾಗಿದೆ. ರುದ್ರ ರಮಣೀಯ ಕುಮಾರ ಪರ್ವತ ಶಿಖರವನ್ನು ಬೀದಹಳ್ಳಿ ಪ್ರಕೃತಿ ಶಿಬಿರದಿಂದ ತಲುಪಲು 07 ಕಿಮೀ ಕ್ರಮಿಸಬೇಕಿರುತ್ತದೆ. ಕುಮಾರ ಪರ್ವತ ಶಿಖರದಿಂದ ಪುನಃ ಬೀದಹಳ್ಳಿ ಶಿಬಿರಕ್ಕೆ ಮರಳಬಹುದಿದ್ದು ಒಟ್ಟು ಚಾರಣದ ಅಂತರ 14 ಕಿಮಿ ಆಗಿರುತ್ತದೆ. ಇಳಿಜಾರಿನ ಅಷ್ಠೇನು ಕಠಿಣವಲ್ಲದ ಹಾದಿಯನ್ನು ಹೊಂದಿರುವ ಈ ಚಾರಣದ 14 ಕಿಮೀ ದೂರವನ್ನು ಅಂದಾಜು 04 ರಿಂದ 06 ತಾಸುಗಳಲ್ಲಿ ಕ್ರಮಿಸಬಹುದಿರುತ್ತದೆ.