17/12/2017
ಸರಗಳ್ಳತನ ಪ್ರಕರಣ ಪತ್ತೆ:
ದಿನಾಂಕ 21/11/2017 ರಂದು ಮಾದಾಪುರ ಜಂಬೂರು ಗ್ರಾಮದಲ್ಲಿ ನಡೆದ ಜಂಬೂರು ಗ್ರಾಮದ ಪೌತಿ ಕುಟ್ಟಪ್ಪನವರ ಪತ್ನಿಯಾದ ಚಿಣ್ಣವ್ವ ಎಂಬುವರ ಸರಗಳ್ಳತನದ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆ ಮೊ. ಸಂ. 343/17 ಕಲಂ 392 ರೀತ್ಯ ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣದಲ್ಲಿ ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ರವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ವೃತ್ತ ನಿರೀಕ್ಷಕರು ಅವರ ತಂಡ ಹಾಗೂ ಡಿಸಿಐಬಿ ಪೊಲೀಸ್ ನಿರೀಕ್ಷಕರು ಅವರ ತಂಡ ಮಾದಾಪುರದ ಸೂರ್ಲಬ್ಬಿ ಗ್ರಾಮದ ನಿವಾಸಿಗಳಾದ ಮುದ್ದಂಡ ಎಂ. ಭೀಮಯ್ಯ @ ಭೀಮಣಿ ಹಾಗೂ ಮುದ್ದಂಡ ಬಿ. ಕಾರ್ಯಪ್ಪ @ ಕಿಟ್ಟು ಎಂಬುವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಲಾಗಿ, ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಾಪುರ, ಉಂಜಿಗನಹಳ್ಳಿ ಹಾಗೂ ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಚಿಕ್ಕಬೆಟಗೇರಿಯಲ್ಲಿ 3 ಮನೆಗಳ್ಳತನ, ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಯಡವನಾಡು, ಬಜೆಗುಂಡಿ, ಜಂಬೂರಿನಲ್ಲಿ 3 ಸರಗಳ್ಳತನ ಹಾಗೂ ಇಗ್ಗೊಡ್ಲು ಗ್ರಾಮದ ಸೀತಮ್ಮ ರವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ತಪ್ಪೊಪ್ಪಿಕೊಂಡಿರುತ್ತಾರೆ. ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ಅವರ ವಿವರ ಈ ಕೆಳಕಂಡಂತಿರುತ್ತದೆ.
1) ಮುದ್ದಂಡ ಎಂ. ಭೀಮಯ್ಯ @ ಭೀಮಣಿ ತಂದೆ ಪೌತಿ ಎಂ.ಕೆ. ಮುದ್ದಪ್ಪ, ಪ್ರಾಯ 30 ವರ್ಷ, ವ್ಯವಸಾಯ ವೃತ್ತಿ, ವಾಸ
ಸೂರ್ಲಬ್ಬಿ ಗ್ರಾಮ ಮತ್ತು ಅಂಚೆ, ಮಾದಾಪುರ, ಸೋಮವಾರಪೇಟೆ ತಾಲ್ಲೂಕು.
2) ಮುದ್ದಂಡ ಬಿ. ಕಾರ್ಯಪ್ಪ @ ಕಿಟ್ಟು, ತಂದೆ ಪೌತಿ ಬಿದ್ದಪ್ಪ, ಪ್ರಾಯ 30 ವರ್ಷ, ವ್ಯವಸಾಯ ವೃತ್ತಿ, ವಾಸ ಸೂರ್ಲಬ್ಬಿ ಗ್ರಾಮ
ಮತ್ತು ಅಂಚೆ, ಮಾದಾಪುರ, ಸೋಮವಾರಪೇಟೆ ತಾಲ್ಲೂಕು.
1 ಆರೋಪಿ ಮುದ್ದಂಡ ಭೀಮಯ್ಯ ನು 5 ನೇ ತರಗತಿಯವರೆಗೆ ಸೂರ್ಲಬ್ಬಿ ಗ್ರಾಮದಲ್ಲಿ ವ್ಯಾಸಂಗ ಮಾಡಿದ್ದು, ಮನೆಯಲ್ಲಿ ವ್ಯವಸಾಯ ವೃತ್ತಿ ಮಾಡಿಕೊಂಡಿರುವುದಾಗಿ ತಿಳಿದು ಬಂದಿರುತ್ತದೆ.
2ನೇ ಆರೋಪಿ ಮುದ್ದಂಡ ಬಿ. ಕಾರ್ಯಪ್ಪ ನು ದ್ವೀತಿಯ ಪಿ.ಯು.ಸಿ. ವರೆಗೆ ಸೂರ್ಲಬ್ಬಿ ಗ್ರಾಮದಲ್ಲಿ ಹಾಗೂ ಮಾದಾಪುರದಲ್ಲಿ ವ್ಯಾಸಾಂಗ ಮಾಡಿದ್ದು 2009ನೇ ಇಸವಿಯಲ್ಲಿ ಬೆಂಗಳೂರಿನ ಓಂ ಸೆಕ್ಯೂರಿಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದ ಸಿಂಡಿಕೇಟ್ ಬ್ಯಾಂಕ್ ನ ಎ.ಟಿ.ಎಂ., ಹಣ ಕಳ್ಳತನದ ಪ್ರಕರಣದಲ್ಲಿ ಆರೋಪಿಯಾಗಿರುವುದಾಗಿದೆ.
ಮೇಲ್ಕಂಡ ಆರೋಪಿಗಳು ಭಾಗಿಯಾಗಿದ್ದ ಪ್ರಕರಣಗಳ ವಿವರ ಈ ಕೆಳಕಂಡಂತಿದೆ
1. ಸೋಮವಾರಪೇಟೆ ಠಾಣೆ ಮೊ.ಸಂ.137/2014 ಕಲಂ 454, 457, 380 ಐಪಿಸಿ ಪ್ರಕರಣದ ಫಿರ್ಯಾದುದಾರರಾದ ರತನ್ ತಿಮ್ಮಯ್ಯ, ವಕೀಲರು, ಮೂವತ್ತೊಕ್ಲು ಗ್ರಾಮ ರವರಿಗೆ ಸೇರಿದ 22 ಗ್ರಾಂ ಚಿನ್ನದ ಗಟ್ಟಿ ಮತ್ತು ಒಂದು ಪೀಚೆ ಕತ್ತಿ-
2. ಸೋಮವಾರಪೇಟೆ ಠಾಣೆ ಮೊ.ಸಂ.278/14 ಕಲಂ 392 ಐಪಿಸಿ ಪ್ರಕರಣದ ಫಿರ್ಯಾದುದಾರರಾದ ಶ್ರೀಮತಿ ಶೀಲ ಯಡವನಾಡು ಗ್ರಾಮ ಇವರಿಗೆ ಸೇರಿದ 22 ಗ್ರಾಂ ಚಿನ್ನದ ಗಟ್ಟಿ-
3. ಸೋಮವಾರಪೇಟೆ ಠಾಣೆ ಮೊ.ಸಣ.36/15 ಕಲಂ 454, 457, 380 ಐಪಿಸಿ ಪ್ರಕರಣದ ಫಿರ್ಯಾದುದಾರರಾದ ಅಯ್ಯಪ್ಪ, ಉಂಜಿಗನ ಹಳ್ಳಿ ಗ್ರಾಮ ಇವರಿಗೆ ಸೇರಿದ 22 ಗ್ರಾಂ ಚಿನ್ನದ ಗಟ್ಟಿ, 1 ಬೆಳ್ಳಿಯ ಚೈನು.
4. ಸೋಮವಾರಪೇಟೆ ಠಾಣೆ ಮೊ.ಸಣ 193/15 ಕಲಂ 392 ಐಪಿಸಿ ಪ್ರಕರಣದ ಫಿರ್ಯಾದುದಾರರಾದ ಪ್ರೇಮ, ಬಜೆಗುಂಡಿ ಗ್ರಾಮ ಇವರಿಗೆ ಸೇರಿದ 16 ಗ್ರಾಂ ಚಿನ್ನದ ಗಟ್ಟಿ-
5. ಕುಶಾಲನಗರ ಗ್ರಾಮಾಂತರ ಠಾಣೆ ಮೊ.ಸಂ 70/15 ಕಲಂ 454, 380 ಐಪಿಸಿ ಪ್ರಕರಣದ ಫಿರ್ಯಾದುದಾರರಾದ ಗಣೇಶ, ಚಿಕ್ಕಬೆಅಗೇರಿ ಗ್ರಾಮ ಇವರಿಗೆ ಸೇರಿದ 16 ಗ್ರಾಂ ಚಿನ್ನದ ಗಟ್ಟಿ-
6. ಸೋಮವಾರಪೇಟೆ ಠಾಣೆ ಮೊ.ಸಂ299/17 ಕಲಂ 302, 201 ಐಪಿಸಿ ಪ್ರಕರಣದ ಫಿರ್ಯಾದುದಾರರಾದ ಇಗ್ಗೋಡ್ಲು ಗ್ರಾಮದ ಸೀತಮ್ಮರವರ ಕೊಲೆ ಪ್ರಕರಣಕ್ಕೆ ಸಮಬಂಧಿಸಿದಂತೆ 16 ಗ್ರಾಂ ಚಿನ್ನದ ಗಟ್ಟಿ-
7. ಸೋಮವಾರಪೇಟೆ ಠಾಣೆ ಮೊ.ಸಂ. 343/17 ಕಲಂ 392 ಐಪಿಸಿ ಪ್ರಕರಣದ ಫಿರ್ಯಾದುದಾರರಾದ , ಜಂಬೂರು ಗ್ರಾಮದ ಚಿಣ್ಣವ್ವ ಇವರಿಗೆ ಸೇರಿದ 12 ಗ್ರಾಂ. ಚಿನ್ನದ ಗಟ್ಟಿ, 2 ಗ್ರಾಂ ಚಿನ್ನದ ಚೈನು ಚೂರು, 1 ಪಲ್ಸರ್ ಬೈಕ್, 1 ಹೆಲ್ಮಟ್, 1 ಬ್ಯಾಗ್ - ವಶಪಡಿಸಿಕೊಳ್ಳಲಾಗಿದೆ.
ಸದರಿ ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಮಾಲಿನ ವಿವರ ಈ ಕೆಳಕಂಡಂತಿರುತ್ತದೆ.
(1) 114 ಗ್ರಾಂ. ಚಿನ್ನ
(2) ಒಂದು ಬೆಳ್ಳಿಯ ಚೈನು
(3) 94 ಕೆ.ಜಿ. ಕರಿಮೆಣಸು
(4) ಒಂದು ಪೀಚೆ ಕತ್ತಿ
(5) ರೂ 5,000/- ನಗದು
(6) ಪಲ್ಸರ್ ಬೈಕ್ ನಂ. ಕೆಎ-04-ಹೆಚ್.ಜೆ.-7361 (ಕೃತ್ಯ ಮಾಡಲು ಉಪಯೋಗಿಸಿದ ವಾಹನ)
(7) ಒಂದು ಹೆಲ್ಮೆಟ್ ಹಾಗೂ ಒಂದು ಬ್ಯಾಗ್
ಈ ಪ್ರಕರಣವನ್ನು ಮಾನ್ಯ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರುರವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪಿ. ಮುರಳೀಧರ ರವರ ನೇತೃತ್ವದಲ್ಲಿ ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ನಂಜುಂಡೇಗೌಡ ಮಡಿಕೇರಿ ಡಿ.ಸಿ.ಐ.ಬಿ., ವಿಭಾಗದ ಆರಕ್ಷಕ ನಿರೀಕ್ಷಕರಾದ ಎಂ.ಮಹೇಶ, ಶನಿವಾರಸಂತೆ ಪೊಲೀಸ್ ಠಾಣಾ ಆರಕ್ಷಕ ಉಪನಿರೀಕ್ಷಕರಾದ ಹೆಚ್.ಎಂ. ಮರಿಸ್ವಾಮಿ, ಸೋಮವಾರಪೇಟೆ ಪೊಲೀಸ್ ಠಾಣಾ ಆರಕ್ಷಕ ಉಪನಿರೀಕ್ಷಕರಾದ ಎಂ. ಶಿವಣ, ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ಆರಕ್ಷಕ ಉಪನಿರೀಕ್ಷಕರಾದ ಪಿ. ಜಗದೀಶ ಹಾಗೂ ಸೋಮವಾರಪೇಟೆ ಉಪವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಯವರಾದ ದಯಾನಂದ, ಸಜಿ, ಪ್ರಕಾಶ, ಸಂದೇಶ, ಜೋಸೆಫ್, ಉದಯ, ಸುಧೀಶ, ಮುಸ್ತಾಫ, ಸುರೇಶ, ಪ್ರದೀಪ, ಹರೀಶ, ಪರಮೇಶ, ಮಂಜು, ಕುಮಾರಸ್ವಾಮಿ, ಅನಂತ, ಸ್ವಾಮಿ ಮತ್ತು ಡಿಸಿಐಬಿ ಸಿಬ್ಬಂದಿಯಾದ ಯೋಗೇಶ್ ರವರುಗಳು ಪತ್ತೆಹಚ್ಚಿರುತ್ತಾರೆ. ಇವರ ಕಾರ್ಯವೈಖರಿಯನ್ನು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ನಗದು ಬಹುಮಾನವನ್ನು ಘೋಷಿಸಿರುತ್ತಾರೆ.