17/04/2025
*ಮಾಜಿ ಸಚಿವ ವಿ. ಮುನಿಯಪ್ಪ ಅವರ ಹುಟ್ಟುಹಬ್ಬ ಹಿನ್ನೆಲೆ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ :- ಪುಟ್ಟು ಆಂಜಿನಪ್ಪ*
*ಶಿಡ್ಲಘಟ್ಟ* :- ಇದೇ ಭಾನುವಾರ ನಗರದ ಸರಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಮಾಜಿ ಸಚಿವರು ವಿ ಮುನಿಯಪ್ಪ ಅವರ ಹುಟ್ಟುಹಬ್ಬ ಪ್ರಯುಕ್ತ ತಾಲೂಕು ಮಟ್ಟದಲ್ಲಿ ಬೃಹತ್ ಆರೋಗ್ಯ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರ ಆಯೋಜನೆ ಮಾಡಿದ್ದೂ.ತಾಲೂಕಿನ ಸಾರ್ವಜನಿಕರು ಭಾಗವಹಿಸಿ ಶಿಬಿರದ ಸದುಪಯೋಗ ಪಡಿಸಿಕೊಳ್ಳಿ ಎಂದು ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ ಮನವಿ ಮಾಡಿದರು.
ಬೆಂಗಳೂರಿನ ಪ್ರತಿಷ್ಠಿತ ಸಪ್ತಗಿರಿ ಆಸ್ಪತ್ರೆ ಮತ್ತು ಸೋಲಂಕಿ ಆಸ್ಪತ್ರೆಯ ಹೆಸರಾಂತ ವೈದ್ಯರ ತಂಡ ಶಿಬಿರದಲ್ಲಿ ಭಾಗವಹಿಸುತ್ತಿದ್ದೂ 15 ವಿಭಾಗಗಳ ನುರಿತ ವೈದ್ಯರು ಬೆಳಗ್ಗೆ 9:00 ರಿಂದ 3:00 ಘಂಟೆಯ ವರೆಗೆ ಲಭ್ಯವಿರುತ್ತಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆಗಳು, ಮಹಿಳೆಯರ ಗರ್ಭಕೋಶದ ತೊಂದರೆ, ಸ್ತ್ರೀ ರೋಗ ಸಮಸ್ಯೆ, ಚರ್ಮ ರೋಗ ಸಮಸ್ಯೆಗಳು ಸಾಮಾನ್ಯವಾಗಿವೆ. ಇವು ಶ್ರೀಮಂತಖಾಯಿಲೆಗಳಾಗಿದ್ದು, ಬಡಜನರು ಆರ್ಥಿಕವಾಗಿ ಭರಿಸಲು ಅಸಾಧ್ಯವಾಗಿದೆ ಗ್ರಾಮೀಣ ಭಾಗದ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆಗೊಳಪಡಿಸಿದಾಗ ಉಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ. ನಾನು ಕೂಡ ಗ್ರಾಮೀಣ ಹಳ್ಳಿ ಹಿನ್ನೆಲೆಯಿಂದ ಬಂದಿದ್ದೇನೆ. ಈ ಹಿಂದೆ ಸಾಕಷ್ಟು ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡುತ್ತ ಬರುತ್ತಿದ್ದು ಈ ಭಾರಿ ಮಾಜಿ ಸಚಿವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ನಿಟ್ಟಿನಲ್ಲಿ ಈ ಭಾರಿ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಗುತ್ತಿದೆ ಈ ಹಿನ್ನೆಲೆಯಲ್ಲಿ ಬಡ ಜನರ ಸೇವೆಯ ಋಣವನ್ನು ಈ ರೀತಿಯ ಶಿಬಿರಗಳ ಮೂಲಕ ತೀರಿಸಲು ಸಾಧ್ಯ ಎಂಬುದನ್ನು ಅರಿತ್ತಿದ್ದೇನೆ ಜೊತೆಗೆ ಶಿಬಿರದಲ್ಲಿ ಭಾಗವಹಿಸುವವರು ಮತ್ತು ಶಸ್ತ್ರ ಚಿಕಿತ್ಸೆಗೆ ಒಳಪಡುವವರು ರೇಷನ್ ಕಾರ್ಡ್ ಆಧಾರ್ ಕಾರ್ಡ್ ಕಡ್ಡಾಯವಾಗಿ ತರುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಪ್ತಗಿರಿ ಆಸ್ಪತ್ರೆಯ ಪರಶುರಾಮ್ ರೆಡ್ಡಿ, ಕಾಂಗ್ರೆಸ್ ಮುಖಂಡರಾದ ಗೌಡನಹಳ್ಳಿ ಮುನಿರಾಜು, ಕಂಬದಹಳ್ಳಿ ನಾಗರಾಜ್,ದೇವರಾಜ್, ಮಾಜಿ ನಗರ ಸಭಾ ಸದಸ್ಯರು ಸಾಧಿಕ್, ರಾಮಾಂಜಿ, ಗ್ರಾಮಪಂಚಾಯತಿ ಸದಸ್ಯರು ದೇವರಾಜ್, ಯೂತ್ ಕಾಂಗ್ರೆಸ್ ದರ್ಶನ್, ರವಿ, ದೇವರ ಮಳ್ಳೂರು ರಾಕೇಶ್, ಚಾಂದ್ ಪಾಷ, ರಾಜಕುಮಾರ್, ಅಪ್ಸರ್, ಖಾಸಿಂ, ವರದ ರಾಜ್ ಗುಡಿಹಳ್ಳಿ ಚಂದ್ರ ಶೇಖರ್,ಮಧು,ಪ್ರದೀಪ್, ಶಿವಕುಮಾರ್, ಸೇರಿದಂತೆ ಮುಂತಾದವರು ಹಾಜರಿದ್ದರು.
@ಆಂಜಿನಪ್ಪ ಪುಟ್ಟು