10/09/2026
*ಅಂಬಡಗಟ್ಟಿ ಗ್ರಾಪಂನಲ್ಲಿ ಗ್ರಾಕೂಸ ಕಾಯಕಬಂಧುಗಳ ಸಭೆ*
*ಚನ್ನಮ್ಮನ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಪಂ ಕಾರ್ಯಾಲಯದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯ ಗ್ರಾಮೀಣ ಕೂಲಿಕಾರ್ಮಿಕರ ಸಂಘದ ಕಾಯಕಬಂಧುಗಳ ಕುಂದುಕೊರತೆ ಸಭೆ ನಡೆಯಿತು.*
*ತಾಪಂ ಚ.ಕಿತ್ತೂರು ಸಹಾಯಕ ನಿರ್ದೇಶಕರು (ವಿಬಿ-ಜಿ ರಾಮ್ ಜಿ)* ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಯಕಬಂಧುಗಳ ಸಮಸ್ಯೆಗಳು, ಕೆಲಸದ ಬೇಡಿಕೆ, ಜಾಬ್ ಕಾರ್ಡ್ ಹಾಗೂ ಯೋಜನೆಯ ಅನುಷ್ಠಾನದ ಕುರಿತು ಚರ್ಚಿಸಲಾಯಿತು.
ಅರ್ಹ ಪ್ರತಿಯೊಂದು ಕುಟುಂಬಕ್ಕೆ ವರ್ಷದಲ್ಲಿ 125 ದಿನಗಳ ಕೆಲಸ ಹಾಗೂ ದಿನಕ್ಕೆ ₹382 ಕೂಲಿ ದೊರೆಯಲಿದೆ. NMMS ಹಾಜರಾತಿ, ಕೂಲಿ ಪಾವತಿ ಹಾಗೂ ಮೇಟ್ ಪೇಮೆಂಟ್ ನಿಗದಿತ ಸಮಯದಲ್ಲಿ ಜಮೆಯಾಗುವ ಕುರಿತು ಮಾಹಿತಿ ನೀಡಲಾಯಿತು.
ಮಹಿಳಾ ಕೂಲಿಕಾರ್ಮಿಕರ ಭಾಗವಹಿಸುವಿಕೆಗೆ ಆದ್ಯತೆ ನೀಡುವುದು ಹಾಗೂ ನೀಡಲಾದ ಅಳತೆಯಂತೆ ಕೆಲಸ ಪೂರ್ಣಗೊಳಿಸಿ ಪೂರ್ಣ ಕೂಲಿ ಪಡೆಯುವಂತೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಪಿಡಿಒ, ಐಇಸಿ ಸಂಯೋಜಕಿ, ಬಿಎಫ್ಟಿ, ಗ್ರಾಮ ಕಾಯಕಮಿತ್ರ, ಡಿಇಒ ಹಾಗೂ ಗ್ರಾಕೂಸು ಸಂಘದ ಸದಸ್ಯರು ಉಪಸ್ಥಿತರಿದ್ದರು.
#ವಿಕಸಿತಭಾರತ