30/05/2026
SIR ವಿರೋಧಿ ಹೋರಾಟಕ್ಕೆ ಧಾರವಾಡದಲ್ಲಿ ಶಕ್ತಿಯುತ ಧ್ವನಿ.
ಜಾತ್ಯಾತೀತ ಪಕ್ಷಗಳು ಮತ್ತು ವಿವಿಧ ಪ್ರಜಾಪ್ರಭುತ್ವ ಪರ ಸಂಘಟನೆಗಳ ಸಂಯುಕ್ತ SIR ವಿರೋಧಿ ಒಕ್ಕೂಟದ ವತಿಯಿಂದ, ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ, (ಮೇ 30, 2026) ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಬೆಳಿಗ್ಗೆ 11 ಗಂಟೆಗೆ ಮಹತ್ವದ ಪ್ರತಿಭಟನೆ ನಡೆಯಿತು.
ಜನರ ಹಕ್ಕುಗಳನ್ನು ಕುಗ್ಗಿಸುವ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವ SIR ನೀತಿಯನ್ನು ಖಂಡಿಸಿ, ಈ ಹೋರಾಟವನ್ನು ಸಂಘಟಿಸಲಾಗಿದೆ. ಇದು ಕೇವಲ ಒಂದು ಪ್ರತಿಭಟನೆ ಅಲ್ಲ ಇದು ನಮ್ಮ ಸಂವಿಧಾನಿಕ ಹಕ್ಕುಗಳನ್ನು ಕಾಪಾಡುವ ಹೋರಾಟವಾಗಿದೆ.
ಈ ಪ್ರತಿಭಟನೆಯಲ್ಲಿ ಎಸ್ಡಿಪಿಐ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಸಹ ಭಾಗಿ. ನ್ಯಾಯ, ಸಮಾನತೆ ಮತ್ತು ಹಕ್ಕುಗಳ ರಕ್ಷಣೆಗಾಗಿ ನಮ್ಮ ಧ್ವನಿಯನ್ನು ಬಲಪಡಿಸುವ ಈ ಹೋರಾಟಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು.
ನಿಮ್ಮ ಹಾಜರಾತಿ ನಮ್ಮ ಶಕ್ತಿ – ನಿಮ್ಮ ಧ್ವನಿ ನಮ್ಮ ಹೋರಾಟ.
ಬನ್ನಿ, ಒಂದಾಗಿ ನಿಂತು ಅನ್ಯಾಯದ ವಿರುದ್ಧ ಹೋರಾಡೋಣ.
ಿರೋಧಿ_ಪ್ರತಿಭಟನೆ #ಜನಹಕ್ಕುಗಳು Protest Karnataka SIR_Nillisi