Team NalkuChakra - ನಾಲ್ಕುಚಕ್ರ ತಂಡ

Team NalkuChakra - ನಾಲ್ಕುಚಕ್ರ ತಂಡ Contact information, map and directions, contact form, opening hours, services, ratings, photos, videos and announcements from Team NalkuChakra - ನಾಲ್ಕುಚಕ್ರ ತಂಡ, Social service, Gulbarga.

17/12/2024

ಎಲ್ಲರಿಗೂ ನಮಸ್ಕಾರ 🙏🇮🇳

" ಕಲಬುರಗಿ ಚಳಿಗೆ ಹೊದಿಕೆ (ಬ್ಲಾಂಕೆಟ್) ಅಭಿಯಾನ"

ಮಾನವೀಯತೆ ಕಾರ್ಯಕ್ಕಿಂತ ದೊಡ್ಡ ಕಾರ್ಯ ಮತ್ತೊಂದಿಲ್ಲ!

ಯಪ್ಪ ಏನ್ ಚಳಿ ರೀ.....
ಇ ಕೊರೆಯುವ ಚಳಿಯಲ್ಲಿ ಮನೆಯಲ್ಲಿ ಮಲಗುವ ನಾವೇ ನಡುಗುವೆವು ಇನ್ನು ರಸ್ತೆಯ ಬದಿಯಲ್ಲಿ ಚಳಿಯಲ್ಲಿ ನಡುಗುತ್ತ ಪ್ಲಾಸ್ಟಿಕ್ ಹೊದ್ದಿಕೊಂಡು ಮಲಗುವ ಬಡ ಜೀವಗಳ ಪಾಡು ಏನಾಗಿರಬಹುದು...?

ಪ್ರತಿ ವರ್ಷದಂತೆ ಈ ವರ್ಷವೂ ಕೂಡ "ಕಲಬುರಗಿ ಚಳಿಗೆ ಹೊದಿಕೆ (ಬ್ಲಾಂಕೆಟ್)" ಅಭಿಯಾನದ ಅಂಗವಾಗಿ ನಾಲ್ಕುಚಕ್ರ ತಂಡ‌ ನಸುಕಿನ ಜಾವ 4 ಗಂಟೆಗೆ ಪ್ರಾರಂಭಿಸಿ ರಸ್ತೆಯ ಬದಿಯಲ್ಲಿ‌ ಮಲಗುವ ಅಶಕ್ತರಿಗೆ, ನಿರ್ಗತಿಕರಿಗೆ, ಮಾನಸಿಕ ಅಸ್ವಸ್ಥರಿಗೆ, ಭಿಕ್ಷುಕರಿಗೆ, ರೈಲು ನಿಲ್ದಾಣ, ಬಸ ನಿಲ್ದಾಣಗಳಲ್ಲಿ ಚಳಿಯಿಂದ ರಕ್ಷಿಸಿಕೊಳ್ಳಲು ಚಾದರಗಳನ್ನು (ಬ್ಲಾಂಕೆಟ್) ವಿತರಣೆ ಮಾಡಲಾಯಿತು.. 🙌

ಕೆಲವೊಬ್ಬರ ಪಾಡು ಹೇಳತೀರದು ಯಾವುದೋ‌ ಒಂದು‌ ಮೂಲೆಯಲ್ಲಿ ನಡುಗುತ್ತ ಮಲಗಿರುವುದನ್ನು ನೋಡಿದರೆ ಅತೀವ ನೋವಾಗುತ್ತೆ.. ಈ ಜಗತ್ತಿನಲ್ಲಿ ಬಹಳಷ್ಟು ಜನ ಪ್ರೀತಿ ಕಾಳಜಿಯಿಂದ ವಂಚಿತರಿದ್ದಾರೆ ಸಾಧ್ಯವಾದಷ್ಟು ಅಂತವರಿಗೆ ಪ್ರೀತಿ ಹಂಚುವ ಕಾಳಜಿ ತೋರಿಸುವ ಮತ್ತು ಅವರ ಸಹಾಯಕ್ಕೆ ನಿಲ್ಲುವ ಗುಣವನ್ನು ಹೆಚ್ಚಿಸಿಕೊಳ್ಳೊಣ... Yessss! ಇದ್ದುದ್ದರಲ್ಲಿ‌ ಖುಷಿ‌ಯ ಪಡ್ಬೆಕು ಇದೇ ನಿಜವಾದ ಜೀವನ... 💌

ಈ ಅಭಿಯಾನಕ್ಕೆ ಕೈ ಜೋಡಿಸಿ ಇವರೆಲ್ಲರ ಮುಖದಲ್ಲಿ ನಗು ಮೂಡಿಸುವ ಒಂದು ಚಿಕ್ಕ ಪ್ರಯತ್ನಕ್ಕೆ ಸಹಕರಿಸಿದ ದಾನಿಗಳು, ನಾಲ್ಕುಚಕ್ರ ತಂಡಕ್ಕೆ ಮತ್ತು ಸಹೃದಯಿಗಳೆಲ್ಲರಿಗೂ ಅನಂತ ಧನ್ಯವಾದಗಳು...🙏💐

ಎಲ್ಲರೂ ಜೊತೆಗೂಡಿ ಕೈಲಾದಷ್ಟು ಸಮಾಜಮುಖಿ ಸೇವೆ ಮಾಡೋಣ......🙏😊

TeamNalkuChakra

Heartful ಪ್ರೀತಿಯಿಂದಾಗಲಿ, ವೃದ್ಧಾಶ್ರಮಗಳು Houseful ಆಗದಿರಲಿ! 🙏😥ಹೌದು ವೃದ್ಧಾಶ್ರಮ ಎಂದೂ ಮನೆಯಾಗಲು ಸಾಧ್ಯವಿಲ್ಲ ಅಥವಾ ಕುಟುಂಬದ ಭಾವನೆಗಳ...
12/11/2024

Heartful ಪ್ರೀತಿಯಿಂದಾಗಲಿ, ವೃದ್ಧಾಶ್ರಮಗಳು Houseful ಆಗದಿರಲಿ! 🙏😥

ಹೌದು ವೃದ್ಧಾಶ್ರಮ ಎಂದೂ ಮನೆಯಾಗಲು ಸಾಧ್ಯವಿಲ್ಲ ಅಥವಾ ಕುಟುಂಬದ ಭಾವನೆಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ.. 💔

ಹೆತ್ತಿರುವಳು ಮುತ್ತನಿಟ್ಟಿರುವಳು ಲಾಲಿಹಾಡಿರುವಳು ಹೆಸರನಿಟ್ಟಿರುವಳು ಕನಸಕಂಡಿರುವಳು ಆಸೆ ಇಟ್ಟಿರುವಳು ಬದುಕೇ ನೀನೆಂದುಕೊಂಡಿರುವಳು..
ಓ ಮಗನೇ ಎಲ್ಲಿರುವುದು ನಿನ್ನ ಚಿತ್ತ,,
ತಾಯಿಯ ಚಟ್ಟ ಶೃಂಗರಿಸುವುದಲ್ಲ ಅವಳ ಬದುಕು ಸಂಭ್ರಮಿಸುವುದಾಗಲಿ ನಿನ್ನ ಆದ್ಯ ಕರ್ತವ್ಯ.. 🙏☺

ನೂರಾರು ದೇವರಿಗೆ ಹರಕೆಯ ಹೊತ್ತು‌ ಮಕ್ಕಳನ್ನು ಹಡೆಯುತ್ತಾರೆ ತಂದೆ ತಾಯಿ ಆದರೆ ಅದೇ ನೂರಾರು ದೇವರ‌ ಎದುರಿಗೆ ತಂದೆತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸುವ‌ ಮಕ್ಕಳು ಇದ್ದರೆಷ್ಟು ಬಿಟ್ಟರೆಷ್ಟು. ಅದರಲ್ಲೂ ನೋಡಿಕೊಳ್ಳಲು ಆಗದೇ ಬಿದಿಗೆ ಹೆತ್ತವರನ್ನು ದಬ್ಬುವ ಮಕ್ಕಳು ಹೇಸಿಗೆಗು ಹೇಸಿಗೆ ಎಂದು ನನಗನಿಸುತ್ತೆ..😑 ಭಾರವಾದ ಮನಸ್ಸಿನಿಂದ ಕಣ್ಣು ತುಂಬಿಕೊಂಡು ಈ‌ ಮಾತನ್ನು ಹೇಳುತ್ತಿರುವೆ. ಯಾಕೆಂದರೆ ನಾಲ್ಕುಚಕ್ರ ತಂಡಕ್ಕೆ ಇಂತಹ ಘಟನೆಗಳು ಸರ್ವೆ ಸಾಮನ್ಯ.. ಮಾನವೀಯತೆ ದೃಷ್ಟಿಯಿಂದ ಇಂತಹ ವಿಷಯದಲ್ಲಿ ಸಹಾಯ ಮಾಡಲು ಮನಸ್ಸಿಗೆ ತುಂಬಾ ಖೇದ ಎನಿಸುತ್ತೆ. ಯಾಕೆ‌ಂದರೆ ಸುಂದರ ಕುಟುಂಬದೊಂದಿಗೆ ಮಕ್ಕಳು ಮೊಮ್ಮಕ್ಕಳೊಂದಿಗೆ ಇರಬೇಕಾದ ವಯಸ್ಸಲ್ಲಿ ಜಾತ್ರೆಯೊಂದರಲ್ಲಿ ಕಳೆದುಹೊದ ಮಗುವಿನಂತೆ ಅಸಹಾಯಕ ಪರಿಸ್ಥಿತಿ ಅದೇಷ್ಟೊ ವೃದ್ದರದ್ದು..😪 ನೆಲೆಯಿಲ್ಲದ ಬಹಳಷ್ಟು ವೃದ್ಧ ಜೀವಗಳಿಗೆ ಆಶ್ರಯ ಸಿಗಲೆಂದು ಅನಿವಾರ್ಯಕ್ಕೆ ವೃದ್ಧಾಶ್ರಮಗಳಲ್ಲಿ ಬಿಟ್ಟು ಬಂದಿದ್ದೆವೆ ಆದರೆ ಇತ್ತಿಚೆಗಷ್ಟೆ ಒಂದು ಘಟನೆ ನಡೆಯುತ್ತೆ.. ಹೀಗೊಬ್ಬ ವಯಸ್ಸಾದ ಅಜ್ಜಿ ಬರ್ರೊಬ್ಬರಿ 70 ರ ಆಸುಪಾಸು ಕನ್ನಡ ಮಾತನಾಡಲು ಬರುವುದಿಲ್ಲ ಮರಾಠಿ ಮಾತ್ರ..‌ ಹಾವನೂರ್ ಹತ್ತಿರ‌ ಕಂಟಿ ಕಮರಿಗಳಲ್ಲಿ ಅಜ್ಜಿ‌ ಕೂತಿರುತ್ತಾಳೆ ಹಾಗಂತ ಹುಚ್ಚಿ ಏನಲ್ಲ ಆದರೆ ಅವಳ‌ ಮಾನಸಿಕ ಒತ್ತಡದಿಂದ ದಿಕ್ಕು ತೋಚದಾಗದೇ ಅಂತಹ ಜಾಗಗಗ ಮೊರೆ ಹೊಗಿರುವಳು.. ಅಲ್ಲಿಂದನೇ ನಮ್ಮೂರಿನ ಸಹೋದರರು ಹಾದು ಬರಬೇಕಾದ್ರೆ ಅಜ್ಜಿ ನಿಗಾಕ್ಕೆ ಬಿಳುತ್ತಾಳೆ.. ಅವಳನ್ನು ಸಮೀಪ ಹೋಗಿ ವಿಚಾರಿಸಬೇಕಾದರೆ ಅಜ್ಜಿ ಹೆದರಲು ಪ್ರಾರಂಭಿಸುತ್ತಾಳೆ ಆದರೂ ಬಿಡದ ಸಹೋದರರು ಅಜ್ಜಿ ಜೊತೆ ಮಾತನಾಡಿ ನಿಮ್ಮನ್ನು ಎಲ್ಲಾದರೂ ಇರುವ ವ್ಯವಸ್ಥೆ ಮಾಡುವೆವು ನಡಿರಿ ಅಂತ ತಮ್ಮ ಬೈಕ್ ಮೇಲೆ ಕ‌ಣ್ಣಿ ಗ್ರಾಮಕ್ಕೆ ಕರೆದುಕೊಂಡು ಬಂದು ಅಜ್ಜಿ ಊಟ ಇಲ್ಲದೇ ಅಶಕ್ತಳಾದ ಕಾರಣ ಅಲ್ಲಿಯೇ ಹೋಟೆಲೊಂದರಲ್ಲಿ ಊಟ ಮಾಡಿಸಿ ರಾತ್ರಿ ತಂಗಲು ವ್ಯವಸ್ಥೆ ಮಾಡಿ ಎಲ್ಲಿ ಬಿಡಬೇಕೆಂದು ತೋಚದೇ ನಾಲ್ಕುಚಕ್ರ ತಂಡಕ್ಕೆ ಕರೆ ಮಾಡಿ ನಡೆದ ಘಟನೆಯನ್ನೆಲ್ಲ ವಿವರಿಸಿದರು..👍 ಇಷ್ಟೆಲ್ಲ ಆಗಿದ್ದು ತಡರಾತ್ರಿ ಆದಕಾರಣ ಬೆಳಿಗ್ಗೆ ಕಲಬುರಗಿ ಕರೆದುಕೊಂಡು ಬರ್ರಿ ಯಾವುದಾದರೂ ವೃದ್ಧಾಶ್ರಮದಲ್ಲಿ ಬಿಡುವ ವ್ಯವಸ್ಥೆ ಮಾಡೊಣ ಅಂತ ಹೇಳ್ದೆ.. ಮಾರ್ಗದರ್ಶಿ ವೃದ್ಧಾಶ್ರಮಕ್ಕೆ‌ ಕೂಡಲೇ ಕಾಲ್‌ ಮಾಡಿ ಅಲ್ಲಿರುವ ಮೇಡಂ ಅವರಿಗೆ ಕೇಳಿದಾಗ ಆಯ್ತು ಕರ್ಕೊಂಡ್ ಬರ್ರಿ ಇಲ್ಲೆ‌ ಇರ್ಲ್ಯಾಕ್ ಅಂದ್ರು. ಯಾರನ್ನೆ ಆಗಲಿ ವೃದ್ಧಾಶ್ರಮಕ್ಕೆ ಸೇರಿಸಬೇಕಾದರೆ ವೃದ್ಧಾಶ್ರಮದ್ದು ಕೆಲವೊಂದು rules ಇರ್ತಾವೆ like ಅವ್ರದ್ದು ಏನಾದ್ರೂ id proof ಬೇಕು or ಅವರ‌ ಮನೆಯವರು ಯಾರದ್ರೂ ಬಂದು admission ಮಾಡಿಸ್ಬೇಕು..‌ ಆದ್ರೆ ಮಾನವೀಯತೆ ಅಂತ ಬಂದಾಗ ಇವೆಲ್ಲ ಗಾಳಿಗೆ ತೂರಿ help ಮಾಡ್ಬೆಕಾಗುತ್ತೆ ಅದರಂತೆ ವೃದ್ಧಾಶ್ರಮದವರು ನಮಗೆ ಯಾವಗಲೂ‌ ಇಂತಹ ವಿವಾರಗಳಲ್ಲಿ ಸಹಕರಿಸುತ್ತ ಬರುತ್ತಿದ್ದಾರೆ ಅವರಿಗೆ ನಮ್ಮ‌ ತಂಡದ ಪರವಾಗಿ ಧನ್ಯವಾದಗಳು..💐🙏 ಅಜ್ಜಿಯನ್ನು ಕರೆತಂದಾಗ ಅವರ ಪರಿಸ್ಥಿತಿ‌ ನೋಡಿ ನನಗೆ ಬೇಜಾರಾಯಿತು ಉಟ್ಟಿರುವ ಸಿರೆಯ ತುಂಬ ತೂತು ಅಜ್ಜಿ ಅದೇಷ್ಟೊ ದಿನವಾಗಿತ್ತು ಸ್ನಾನ ಮಾಡಿ ಕೂದಲು ಬಾಚಿ ನಡೆಯೊಕು ಆಗದ ಪರಿಸ್ಥಿತಿ.. ಮಾನಸಿಕ ಅಸ್ವಸ್ಥಳಂತೆ ಕಂಡಳು..🙃 ಒಳಗಡೆ ಕರೆದುಕೊಂಡು ಹೋಗಿ ಕೂರಿಸಿ ಸಮಾಧಾನದಿಂದ ಮಾತನಾಡಿಸಿದಾಗ ಮನೆ ಊರು ಮಕ್ಕಳ ಎಲ್ಲಾ ವಿಷಯ ಹೇಳಿದಳು ಬಹಳ ಭಾರವಾದ ಮನಸ್ಸಿನಿಂದ ಒಂದು ಮಾತನ್ನು ಹೇಳಿದಳು ಇದ್ದರೆ‌ ಇಲ್ಲೆ‌ ಇರ್ತಿನಿ ಇಲ್ಲ ಸತ್ತರೆ ಇಲ್ಲೆ‌‌ ಸಾಯ್ತಿನಿ ಆದ್ರೆ ನಾನು ಮನೆಗೆ ಹೋಗುವುದಿಲ್ಲ ಮತ್ತೆ ಅವರ್ಯಾರ ಮುಖವೂ ನಾನು ನೋಡುವುದಿಲ್ಲ‌ ಎಂದು ನಿಜಕ್ಕೂ ಭೂಮಿ‌ ಕುಸಿದಂತಾಯಿತು.. 💔😓 ಅದೇಂತಹ ಸಹಾಯ ಮಾಡಲು ನಮಗೆ ಇಲ್ಲಿವರೆಗೂ ತೊಂದರೆಯಾಗಿಲ್ಲ ನೊವಾಗಿಲ್ಲ ಆದರೆ ಈ ವೃದ್ಧಾಶ್ರಮ ವಿಚಾರ ಬಂದಾಗ ಮನಸ್ಸಿಗೆ ಘಾಸಿಯಾಗುತ್ತೆ ಇದೆಂತಹ ಪರಿಸ್ಥಿತಿ ನಾವು ಈ ಅಸುನಿಗಿದ ಸಮಾಜದೊಂದಿಗೆ ಸತ್ತಂತೆ ಎಂದು ಭಾಸವಾಗುತ್ತೆ..😔 ಯಾಕೆ ಇಂತಹ ವಿಕೃತ ಮಕ್ಕಳಿರುತ್ತಾರೆ ತಂದೆ ತಾಯಿಯೂ ಕೂಡ ಹೆತ್ತ ತಕ್ಷಣ ಬಿದಿಗೆ ಎಸೆದಿದ್ದರೆ ನಮ್ಮ ಪಾಡು ಏನಾಗ್ತಿತ್ತು..‌ ಅವರ ಮನೆಯಲ್ಲಿಯ ಸಮಸ್ಯೇ ಏನೇ ಇರಲಿ ಈ ರೀತಿ ಅವಮಾನವೀಯವಾಗಿ ನಡೆದುಕೊಳ್ಳುವುದು ಮನುಷ್ಯ ಕುಲಕ್ಕೆ ಅವಮಾನ.😡 ಕರುಳ ಬಳ್ಳಿಯ ಬಂಧ ಪದಗಳಲ್ಲಿ ಬಿಡಿಸಲಾಗದು ಎಷ್ಟೇ ಕೋಟಿ ಕೊಟ್ಟರೂ ಇಂತಹ ಅನುಬಂಧ ಸಿಗದು.. ಒಂದೊಮ್ಮೆ ಅನಿಸುತ್ತೆ ದೇವರು ತೀಕ್ಷ್ಣವಾಗಿ ವಿಮರ್ಶಿಸಿ ಮಕ್ಕಳಾಗಲ್ಲಿಲ್ಲ ಎನ್ನುವವರಿಗೆ ಮಕ್ಕಳನ್ನು ನೀಡಲಿ ಹೆತ್ತವರಿಲ್ಲ ಅಂತ ಅಳುವ ಅನಾಥ ಮಕ್ಕಳಿಗೆ ಹೆತ್ತವರನ್ನು ನೀಡಲಿ ತಾವು ಊಣ್ಣುವ ಅರ್ಧ ರೊಟ್ಟಿಯಲ್ಲಿ ಇವರಿಗಿಷ್ಟು ನೀಡಿ ಬದುಕುತ್ತಾರೆ ಇಂತಹ ಘಟನೆಗಳಿಗೆ ಆಸ್ಪದವೇ ಸಿಗದಿಲ್ಲವೆನೊ ಅಂತ.. ವೃದ್ಧಾಶ್ರಮ‌ ಎಂದರೇ ನನಗೂ ಮನಸ್ಸು ತುಂಬಾ ಭಾರವಾಗುತ್ತೆ ಅದೇನು ಅಂತ ಬರೆಯಲಿ‌‌ ನಿಜಕ್ಕೂ ತಿಳಿಯುವುದಿಲ್ಲ..😞 ಯಾಕೆಂದರೆ ಹೆತ್ತವರು ಮತ್ತು ಮಕ್ಕಳ ಬಂಧ ಅಂದರೆ ವ್ಯಾಪರವಲ್ಲ ಇಲ್ಲಿ ಕರುಳ ಬಳ್ಳಿ ಭಾವನೆಗಳು ಮಾತನಾಡಲು‌ ಮಾತ್ರ ಸಾಧ್ಯ.‌ ಇದು ಈ ಅಜ್ಜಿಯದೊಬ್ಬರದ್ದಷ್ಟೆ ಸಂಕಟದ ಕಥೆ ಅಲ್ಲ ಅಲ್ಲಿರುವ ಪ್ರತಿ ಹಿರಿಯ ಜೀವದ್ದು ಒಂದೊಂದು ಕಥೆ. ಅಲ್ಲಿ ಹೋದರೆ ತಿಳಿಯುತ್ತೆ ಮಕ್ಕಳನ್ನು ನೆನೆಯುತ್ತ ಬಾಗಿಲತ್ತ ಮುಖಮಾಡಿ ಗೆಟಿನತ್ತ ಕೂತು ಮಕ್ಕಳು ತಮ್ಮನ್ನು ನೋಡಲು ಬರುವವರೆಂದು ಕಾದು ಕಣ್ಣಂಚಲ್ಲಿ ನೀರು ತುಂಬಿಕೊಂಡು ಗೊಡೆಯೊಂದಿಗೆ ತಮ್ಮ ನೋವುಗಳನ್ನು ಹಂಚಿಕೊಳ್ಳುತ್ತಾರೆ ಅಲ್ಲಿ ನಗುವಿನ ಗದ್ದಲಕ್ಕಿಂತ ಅಳುವಿನ ಹಾಹಾಕಾರವೇ ರಾರಾಜಿಸುತ್ತೆ..😭 ಜೊತೆಗಿತುವವರಿಗೆ ಹೇಳಬೇಕೆಂದರೆ ಅವರದ್ದು ತೂಗಿಸಲಾಗದ ವ್ಯಥೆ ಹೀಗಾಗಿ ಅಳುವೊಂದೆ ಅವರ ಸಂಗಾತಿ.. 🤕 ಮೊನ್ನೆ ಅನ್ನ ಸಂತರ್ಪಣೆ ಮಾಡಳು ವೃದ್ಧಾಶ್ರಮಕ್ಕೆ ಹೋದಾಗ ಅಲ್ಲಿಯ ವೃದ್ದೆಯೊಬ್ಬರು ಮರಣಹೊಂದಿದ್ದರಂತೆ ಇದನ್ನು ತಿಳಿಸಲು ಮನೆಯವರಿಗೆ ಮಕ್ಕಳಿಗೆ ಕಾಲ್‌ ಮಾಡಿ ಹೇಳಿದಾಗ confirmation ಸಲುವಾಗಿ ವಿಡಿಯೋ‌ ಕಾಲ್ ಮಾಡಿ ತೋರಿಸಿ ಅಂತ ಕಟುವಾಗಿ ಹೇಳಿದ್ರಂತೆ ಕೊನೆಗೆ ಅಂತ್ಯ ಸಂಸ್ಕಾರ ವೃದ್ಧಾಶ್ರಮದವರೇ ಮಾಡಿದ್ರಂತೆ ಅವರ ಮನೆಯಿಂದ ಒಬ್ಬರೂ ಬರಲಿಲ್ಲವಂತೆ..😕 ಯಪ್ಪಾ ಇಂತಹ ಮಕ್ಕಳು ಇರುತ್ತಾರ! ಅಂತಕರಣ ಇಲ್ಲದ ಇಂತಹ ರಾಕ್ಷಸ ಮಕ್ಕಳನ್ನು ಯಾವ ಭಾಷೆಯಲ್ಲಿ ಬೈಯ್ಯಬೇಕೋ ಏನನ್ನಬೇಕು ಜೀವ ತ್ಯಜಿಸಿದ ಆ ತಾಯಿ ಮನಸ್ಸಿಗೆ ಅದೇಷ್ಟು‌ ನೋವಾಗಿರಬೇಕು ಪಾಪ! ನಮ್ಮಿಂದ ಸ್ವಲ್ಪ ಖುಷಿಯ ಕಾಣುವ ಹಿರಿಯ ಜೀವಗಳಿಗಾಗಿ ನಮಗಿರುವ ಬಿಡುವಿನ ಸಮಯದಲ್ಲಿ ಸಾಧ್ಯವಾದಷ್ಟು ವೃಧ್ಢಾಶ್ರಮಕ್ಕೆ ಭೇಟಿ ನೀಡಿ ಅವರೊಂದಿಗೆ ಕಾಲ ಕಳೆಯೊಣ ಅವರ ಮನಸ್ಸು ಹಗುರಾಗುವುದು ನಮ್ಮೊಂದಿಗೆ ಅವರ ನೋವು ನಲಿವುಗಳನ್ನು ಹಂಚಿಕೊಂಡು ಸಮಾಧಾನವಾಗುವವರು..‌🙏🙂 ಹ್ಮ್ಮ್ಮ್. ಯಾರಿಗೊತ್ತು ನಮ್ಮ ಕೊನೆಯ ದಿನಗಳು ಹೇಗೊ ಏನೊ ನಮ್ಮ ಬದುಕಿನ ಅಂತ್ಯ ಹೇಗೋ ಏನೊ..‌ ನೆನಪಿರಲಿ. ಚಪ್ಪಾಳೆ ತಟ್ಟಿಸುತ್ತೆ, ಕೇಕೆಯೂ ಹಾಕುತ್ತೆ, ನಗಿಸುತ್ತೆ, ಅಳಿಸುತ್ತೆ ಇದೇ ಕರ್ಮ! 👊😠

ಕೊನೆಯದಾಗಿ ನಮ್ಮೂರಿನ ಯುವಕರು ಮಾಡಿರುವ ಈ ಪುಣ್ಯದ ಕಾರ್ಯ ನನಗಂತೂ ಹೆಮ್ಮೆ ತರುವಂತೆ ಮಾಡಿತು ಯಾಕೆಂದರೆ ಇಂದಿನ ಯುವ ಪೀಳಿಗೆ ಇಂದು ದುಷ್ಚಟಗಳಿಗೆ ಬಲಿಯಾಗುವುದು ಮೊಜು ಮಸ್ತಿಗಳಲ್ಲಿ ಜೀವನ ಹಾಳು ಮಾಡುಕೊಳ್ಳುತ್ತಿರುವವರು ಆದರೆ ಮಾನವೀಯತೆ ಗುಣಗಳನ್ನು ರೂಢಿಸಿಕೊಂಡು ಪಾಪ ಪುಣ್ಯದ ಅರಿವಿನಲ್ಲಿರುವ ಇಂತಹವರ ಸಂಖ್ಯೆ ಹೆಚ್ಚಾಗಲಿ ಸಾವಿರ ಸಾವಿರ ಶಬ್ಬಾಷ್ ಸಹೋದರರೇ ಇದೊಂದೆ ನಾ ಹೇಳಬಲ್ಲೆ...👏🙌

ಎಲ್ಲರಲ್ಲೂ ಒಂದು ಮನವಿ ದಯವಿಟ್ಟು ವಯಸ್ಸಾದ ತಂದೆ ತಾಯಿಯೊಂದಿಗೆ ಯಾರೂ ಕೂಡ ಈ ರೀತಿ ನಡೆದುಕೊಳ್ಳದಿರೊಣ ವೃದ್ಧ್ಯಾಪದಲ್ಲಿ ಅವರು ಮತ್ತೆ ಮಕ್ಕಳಾಗುತ್ತಾರೆ ಅವರು ಯಾವ ಐಶ್ವರ್ಯ ಸಂಪತ್ತು ಬಯಸುವುದಿಲ್ಲ ಬದಲಾಗಿ ಮಕ್ಕಳ ಹಿಡಿಯಷ್ಟು‌ ಪ್ರೀತಿ‌ ಕಾಳಜಿ ಆಶ್ರಯ ತಾಣ ಸಾಕಿಷ್ಟು ಆ ಜೀವಗಳಿಗೆ.. 🙏😇

ಎಷ್ಟೊ ಜನಕ್ಕೆ ತಮ್ಮ ತಂದೆತಾಯಿ ಯಾರೆಂದೂ ತಿಳಿದಿಲ್ಲ ಎಷ್ಟೊ ಜನಕ್ಕೆ ಮಕ್ಕಳೆ ಆಗಿಲ್ಲ ಎಂಬ ಕೊರಗಿನಿಂದ ಜೀವನ ಕಳೆಯುತ್ತಿರುವವ್ರು..‌ ಇಂತಹವರ ಮಧ್ಯ ನಾವು ಹೆತ್ತವರನ್ನು ಪಡೆದಿದ್ದಿವಿ ನಮ್ಮೊಂದಿಗೆ ಇದ್ದಾರೆ ಅಂದರೆ ಅದು ನಮ್ಮ ಯಾವುದೋ‌ ಜನ್ಮದ ಪುಣ್ಯವಿರಬೇಕು ಒಂದೊಮ್ಮೆ ಕಳೆದುಕೊಂಡರೆ ಕೋಟಿ ಕೊಟ್ಟರು ಸಿಗಲಾರರು ಮುಕ್ಕೋಟಿ ದೇವರಿಗೆ ಸಮನಾಗಿರುವ ನಮ್ಮ ತಂದೆ ತಾಯಂದಿರನ್ನು ದಯವಿಟ್ಟು ಪ್ರೀತೊಸೊಣ ಗೌರವಿಸೊಣ ಉಳಿಸಿಕೊಳ್ಳೊಣ..‌ 🙏🙏🤗🤗

ಧನ್ಯವಾದಗಳು..🙏💐
ಮಾಲಾ ಹೆಚ್ ಕಣ್ಣಿ .... ✍️

ನಾಲ್ಕುಚಕ್ರ ಚಾರಿಟೆಬಲ್ ಟ್ರಸ್ಟ್ ಕಲಬುರಗಿ Team NalkuChakra - ನಾಲ್ಕು ಚಕ್ರ ತಂಡ

ಅನ್ನ ಸಂತರ್ಪಣೆ.. 🙏🚩 ದಾಸೋಹ ಸೇವೆ.. 😇ಪ್ರತಿ ಅಕ್ಕಿಯ ಕಾಳಿನಲ್ಲೂ ತಿನ್ನೊರ ಹೆಸರು ಬರೆದಿರುತ್ತಂತೆ. 🤗ವೈದ್ಯರು ಹೌದು ಸೇವಕರು ಹೌದು. : ಡಾ. ರಾ...
12/11/2024

ಅನ್ನ ಸಂತರ್ಪಣೆ.. 🙏🚩 ದಾಸೋಹ ಸೇವೆ.. 😇

ಪ್ರತಿ ಅಕ್ಕಿಯ ಕಾಳಿನಲ್ಲೂ ತಿನ್ನೊರ ಹೆಸರು ಬರೆದಿರುತ್ತಂತೆ. 🤗

ವೈದ್ಯರು ಹೌದು ಸೇವಕರು ಹೌದು. : ಡಾ. ರಾಹುಲ್ ಮಂದಕನಳ್ಳಿ.

ನಾಲ್ಕುಚಕ್ರ ತಂಡದ ಮಾರ್ಗದರ್ಶಕರು, ಹಿತೈಷಿಗಳು ಕಲಬುರಗಿ ಜಿಲ್ಲೆಯ ಖ್ಯಾತ ವೈದ್ಯರಾದ ಡಾ ರಾಹುಲ್ ಮಂದಕನಳ್ಳಿ ಅವರ ಸುಪುತ್ರಿಯ ಹುಟ್ಟು ಹಬ್ಬದ ಅಂಗವಾಗಿ ಕಲಬುರಗಿಯ ಕುಷ್ಠರೋಗ ಬಡಾವಣೆಯಲ್ಲಿ ಹಾಗೂ ವೃದ್ಧಾಶ್ರಮದಲ್ಲಿ
ಅನ್ನಸಂತರ್ಪಣೆ ಮಾಡಲಾಯಿತು.. 🇮🇳🙏🚩

ಇಂತಹ ಪುಣ್ಯದ ಕಾರ್ಯಕ್ರಮಕ್ಕೆ ಸಹಕರಿಸಿದ ಸಹೋದರ ಡಾ ರಾಹುಲ್ ಮಂದಕನಳ್ಳಿ ಹಾಗೂ ಕುಟುಂಬದವರಿಗೆ ದೇವರು ಆಯುಷ್ಯ ಆರೋಗ್ಯ ಸಂಪತ್ತು ಕೊಟ್ಟು ಕಾಪಾಡಲಿ ಎಂದು ನಾಲ್ಕುಚಕ್ರ ತಂಡದಿಂದ ಶುಭ ಹಾರೈಸುವೆವು.. 💐🙏

ಅನ್ನ ಸಂತರ್ಪಣೆಯಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಟ್ಟ ವೈದ್ಯ ಕುಟುಂಬಕ್ಕೆ ನಾಲ್ಕುಚಕ್ರ ತಂದಿಂದ ಧನ್ಯವಾದಗಳು..🙏😊

ಶುಭವಾಗಲಿ ಶುಭದಿನ.. 👍😊

#2022

ನಾಲ್ಕುಚಕ್ರ ಚಾರಿಟೆಬಲ್ ಟ್ರಸ್ಟ್ ಕಲಬುರಗಿ Team NalkuChakra - ನಾಲ್ಕು ಚಕ್ರ ತಂಡ

ಅನ್ನ ಸಂತರ್ಪಣೆ 🙏🚩   ಕಲಬುರಗಿ ನಗರದಲ್ಲಿ‌ ನಡೆದ ನೇಕಾರ್ ಸಮಾಜದ ಕಾರ್ಯಕ್ರಮ ಒಂದರಲ್ಲಿ ಊಳಿದ ಉಪಹಾರವನ್ನು ವಕೀಲರು, ಸಮಾಜ ಸೇವಕರು, ಆತ್ಮೀಯ ಸಹ...
11/11/2024

ಅನ್ನ ಸಂತರ್ಪಣೆ 🙏🚩

ಕಲಬುರಗಿ ನಗರದಲ್ಲಿ‌ ನಡೆದ ನೇಕಾರ್ ಸಮಾಜದ
ಕಾರ್ಯಕ್ರಮ ಒಂದರಲ್ಲಿ ಊಳಿದ ಉಪಹಾರವನ್ನು ವಕೀಲರು, ಸಮಾಜ ಸೇವಕರು, ಆತ್ಮೀಯ ಸಹೋದರರಾದ ಶ್ರೀ ವಿನೋದ್ ಜನೆವರಿ ಅವರ ಸಹಕಾರದೊಂದಿಗೆ ಮೂಕ ಮತ್ತು ಕಿವುಡ ಮಕ್ಕಳ ಶಾಲೆಯಲ್ಲಿ ಹಂಚಲಾಯಿತು..🙏❤️ ಇಂತಹ ಪೂಣ್ಯದ ಕಾರ್ಯಕ್ಕೆ ಸಹಕರಿಸಿದ ತಮಗೆ ಧನ್ಯವಾದಗಳು.. 🙏😊

ಎಲ್ಲಿ ಯಾರ ಹೆಸರಿನ ಅನ್ನವಿರುವುದೋ, ಸಮಯ ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತದೆ..! ಯಾರು ಕೂಡ, ಯಾರೋ ಕೊಟ್ಟಿದ್ದನ್ನು ತಿನ್ನುವುದಿಲ್ಲ.!! ತನ್ನ ಅದೃಷ್ಟದಲ್ಲಿ ಇರುವುದನ್ನೇ ತಿನ್ನುತ್ತಾರೆ.!! 🙏☺️

Team NalkuChakra - ನಾಲ್ಕು ಚಕ್ರ ತಂಡ
ನಾಲ್ಕುಚಕ್ರ ಚಾರಿಟೆಬಲ್ ಟ್ರಸ್ಟ್ ಕಲಬುರಗಿ

ಎಲ್ಲರಿಗೂ ನಮಸ್ಕಾರ 🙏😊"ಸಸಿ ನೆಡುವ ಕಾರ್ಯಕ್ರಮ ಯಶಸ್ವಿ" 🌳🌱🌳🌱🌳ನಮ್ಮ ಕಲಬುರಗಿಯನ್ನು ಹಸಿರಾಗಿಸುವ ಚಿಕ್ಕ ಪ್ರಯತ್ನದೊಂದಿಗೆ ನಾಲ್ಕುಚಕ್ರ ಚಾರಿಟೆ...
05/08/2024

ಎಲ್ಲರಿಗೂ ನಮಸ್ಕಾರ 🙏😊

"ಸಸಿ ನೆಡುವ ಕಾರ್ಯಕ್ರಮ ಯಶಸ್ವಿ" 🌳🌱🌳🌱🌳

ನಮ್ಮ ಕಲಬುರಗಿಯನ್ನು ಹಸಿರಾಗಿಸುವ ಚಿಕ್ಕ ಪ್ರಯತ್ನದೊಂದಿಗೆ ನಾಲ್ಕುಚಕ್ರ ಚಾರಿಟೆಬಲ್ ಟ್ರಸ್ಟ್ ಕಲಬುರಗಿ ವತಿಯಿಂದ ಪ್ರತಿ ವರ್ಷದಂತೆ ಇ ವರ್ಷವೂ ಕೂಡ "ಹಸಿರು ಕ್ರಾಂತಿ" ಧ್ಯೇಯದಡಿಯಲ್ಲಿ ಕಲಬುರಗಿ ನಗರದ ಬಿದ್ದಾಪೂರ್ ಬಡಾವಣೆಯ ಉದ್ಯಾನವನದಲ್ಲಿ 20 ‌ಸಸಿಗಳನ್ನು ನೆಡಲಾಯಿತು ಹಾಗೆಯೇ ಅಲ್ಲಿರುವ ನಿವಾಸಿಗಳಿಗೆ ಪರಿಸರ ಜಾಗೃತಿ, ಪ್ಲಾಸ್ಟಿಕ್ ಬ್ಯಾನ್, ಹಸಿಕಸಿ ಒಣಕಸ ಕುರಿತು ಜಾಗೃತಿ ಮೂಡಿಸಿ ಸಸಿಗಳ ಪಾಲನೆ ಪೋಷಣೆಯ ಜವಬ್ದಾರಿ ನೀಡಲಾಯಿತು.✌💚
ಆರೋಗ್ಯವಂತ ಹಾಗೂ ಸ್ವಾಸ್ಥ್ಯ ಸಮಾಜಕ್ಕಾಗಿ ನಾವೆಲ್ಲರೂ ಹೆಚ್ಚೆಚ್ಚು ಸಸಿಗಳನ್ನು‌ ನೆಟ್ಟು ಪಾಲನೆ ಪೋಷಣೆ ಮಾಡೊಣ..🙏🌳
ಈ ಒಂದು ಅಭಿಯಾನಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು... 🙏🙏

#ಸ್ವಚ್ಛನಗರಸುಂದರನಗರ
#ಪರಿಸರಸಂರಕ್ಷಣೆನಮ್ಮೆಲ್ಲರಹೊಣೆ
#ಹಸಿರುಕಲಬುರಗಿ



TeamNalkuChakra - ನಾಲ್ಕುಚಕ್ರ ತಂಡ ಕಲಬುರಗಿ

03/08/2024

ಎಲ್ಲರಿಗೂ ನಮಸ್ಕಾರ 🙏😊

"ಸಸಿ ನೆಡುವ ಕಾರ್ಯಕ್ರಮ ಯಶಸ್ವಿ" 🌳🌱🌳🌱🌳

ನಮ್ಮ ಕಲಬುರಗಿಯನ್ನು ಹಸಿರಾಗಿಸುವ ಚಿಕ್ಕ ಪ್ರಯತ್ನದೊಂದಿಗೆ ನಾಲ್ಕುಚಕ್ರ ಚಾರಿಟೆಬಲ್ ಟ್ರಸ್ಟ್ ಕಲಬುರಗಿ ವತಿಯಿಂದ ಪ್ರತಿ ವರ್ಷದಂತೆ ಇ ವರ್ಷವೂ ಕೂಡ "ಹಸಿರು ಕ್ರಾಂತಿ" ಧ್ಯೇಯದಡಿಯಲ್ಲಿ ಕಲಬುರಗಿ ನಗರದ ಬಿದ್ದಾಪೂರ್ ಬಡಾವಣೆಯ ಉದ್ಯಾನ ನಗರದಲ್ಲಿ 20 ‌ಸಸಿಗಳನ್ನು ನೆಡಲಾಯಿತು ಹಾಗೆಯೇ ಅಲ್ಲಿರುವ ನಿವಾಸಿಗಳಿಗೆ ಪರಿಸರ ಜಾಗೃತಿ, ಪ್ಲಾಸ್ಟಿಕ್ ಬ್ಯಾನ್, ಹಸಿಕಸಿ ಒಣಕಸ ಕುರಿತು ಜಾಗೃತಿ ಮೂಡಿಸಿ ಸಸಿಗಳ ಪಾಲನೆ ಪೋಷಣೆಯ ಜವಬ್ದಾರಿ ನೀಡಲಾಯಿತು.✌💚
ಆರೋಗ್ಯವಂತ ಹಾಗೂ ಸ್ವಾಸ್ಥ್ಯ ಸಮಾಜಕ್ಕಾಗಿ ನಾವೆಲ್ಲರೂ ಹೆಚ್ಚೆಚ್ಚು ಸಸಿಗಳನ್ನು‌ ನೆಟ್ಟು ಪಾಲನೆ ಪೋಷಣೆ ಮಾಡೊಣ..🙏🌳
ಈ ಒಂದು ಅಭಿಯಾನಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು... 🙏🙏

#ಸ್ವಚ್ಛನಗರಸುಂದರನಗರ
#ಪರಿಸರಸಂರಕ್ಷಣೆನಮ್ಮೆಲ್ಲರಹೊಣೆ
#ಹಸಿರುಕಲಬುರಗಿ



TeamNalkuChakra - ನಾಲ್ಕುಚಕ್ರ ತಂಡ ಕಲಬುರಗಿ

01/08/2024

TeamNalkuChakra ✨ಎಲ್ಲರಿಗೂ ನಮಸ್ಕಾರ.. 🙏

ಸೋ ಕೇರ್ ಆಶ್ರಮದಲ್ಲಿರುವ ಮಕ್ಕಳಿಗೆ ನಾಲ್ಕುಚಕ್ರ ತಂಡದಿಂದ ಶಾಲಾ ಬ್ಯಾಗ್ ವಿತರಣೆ. ❤💫

ಕಲಬುರಗಿ ನಗರದ ಎಮ್ ಎಸ್‌ಕೆ ಮಿಲ್ ಬಡಾವಣೆಯಲ್ಲಿರುವ ಶ್ರೀ ಶೃಂಗೇರಿ ಶಾರದಾ ಪೀಠದ ಅಡಿಯಲ್ಲಿ‌ ನಡೆಯುವ ಸೋ ಕೇರ್ ಸಂಸ್ಥೆಯಲ್ಲಿ ಆಶ್ರಯ ಪಡೆಯುತ್ತಿರುವ‌ ಮಕ್ಕಳಿಗೆ
ಶಾಲಾ ಬ್ಯಾಗ್ ವಿತರಣೆ ಮಾಡಲಾಯಿತು..🙏 ಬ್ಯಾಗ್ ಪಡೆದ ಮಕ್ಕಳ ಖುಷಿಗೆ ಪಾರವೇ ಇರಲಿಲ್ಲ, ಸಾರ್ಥಕದ ಕಾರ್ಯ ಧನ್ಯೊಸ್ಮಿ.. 👏😊 ಯಾವೊಂದು ಮುಗು ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ನಮ್ಮ ತಂಡದ ಉದ್ದೇಶ..👍 ಸಹಕರಿಸಿದ ದಾನಿಗಳಿಗೆ ಅನಂತ ಅನಂತ ಧನ್ಯವಾದಗಳು...🙏💐
Standard Of Living ಬದಲಾಗಿ Standard Of Giving ಎಲ್ಲರೂ ಪಾಲಿಸೊಣ, ಎಲ್ಲರಿಗೂ ಒಳಿತಾಗಲಿ ಜೈಹಿಂದ್..

TeamNalkuChakra - ನಾಲ್ಕುಚಕ್ರ ತಂಡ ಕಲಬುರಗಿ

ಎಲ್ಲರಿಗೂ‌ ನಮಸ್ಕಾರ 🙏😊ಅನ್ನ ಸಂತರ್ಪಣೆ... 🇮🇳🙏 ಅನ್ನದಾನ ಮಹಾದಾನ27-07-2024 ರಂದು ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಊ...
30/07/2024

ಎಲ್ಲರಿಗೂ‌ ನಮಸ್ಕಾರ 🙏😊

ಅನ್ನ ಸಂತರ್ಪಣೆ... 🇮🇳🙏 ಅನ್ನದಾನ ಮಹಾದಾನ

27-07-2024 ರಂದು ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಊಳಿದ ಉಪಹಾರವನ್ನು ಕಿವುಡ ಮತ್ತು ಮೂಕ ಶಾಲೆಯ ಮಕ್ಕಳಿಗೆ ಹಂಚಲಾಯಿತು..
ಸಾರ್ಥಕ ದಿನ ಸಾರ್ಥಕ ಕಾರ್ಯ...👏❤️

ಇಂತಹ ಮಹತ್ಕಾರ್ಯಕ್ಕೆ ಸಹಕರಿಸಿದ ಬಿರಾಳ್ ಕುಟುಂಬದವರಿಗೆ ಶುಭವಾಗಲಿ.. ಶುಭದಿನ..
TeamNalkuChakra - ನಾಲ್ಕುಚಕ್ರ ತಂಡ ಕಲಬುರಗಿ

ಎಲ್ಲರಿಗೂ ನಮಸ್ಕಾರ 🙏ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆ ನಿಷೇಧ ನಮ್ಮ ಆದ್ಯತೆ ಆಗಲಿ..ನಗರದ ರೋಟರಿ ಕ್ಲಬ್ ಆಫ಼್ ಗುಲ್ಬರ್ಗ್ ಸಖಿ ವತಿಯಿಂದ ನೂ...
23/07/2024

ಎಲ್ಲರಿಗೂ ನಮಸ್ಕಾರ 🙏

ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆ ನಿಷೇಧ ನಮ್ಮ ಆದ್ಯತೆ ಆಗಲಿ..

ನಗರದ ರೋಟರಿ ಕ್ಲಬ್ ಆಫ಼್ ಗುಲ್ಬರ್ಗ್ ಸಖಿ ವತಿಯಿಂದ ನೂತನ ವಿದ್ಯಾಲಯ ಕನ್ಯಾ ಪ್ರೌಢ ಶಾಲೆಯಲ್ಲಿ ಆಯೋಜಿಸಿದಂತಹ ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಬ್ಯಾನ್ ಮತ್ತು ಮರುಬಳಕೆ ವಿಷ್ಯಯದ ಕುರಿತಾಗಿ ನಾಲ್ಕುಚಕ್ರ ತಂಡದ ಮುಖ್ಯಸ್ಥರಾದ ಮಾಲಾ ಹೆಚ್ ಕಣ್ಣಿ ಅವರು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಕ್ಕಳಿಗೆ ಜಾಗೃತಿ‌ ಹಾಗೂ ಉಪನ್ಯಾಸ ನೀಡಿದರು.. 🙏😊

ನಾಲ್ಕುಚಕ್ರ ತಂಡದ ಮುಖ್ಯಸ್ಥರಾದ ಮಾಲಾ ಕಣ್ಣಿ ಮಾತನಾಡಿ,
ಪರಿಸರ ಸಂರಕ್ಷ ಣೆ ಮತ್ತು ಪರಿಸರದ ಸ್ವಚ್ಛತೆ ಆಗಬೇಕಾಗದರೆ ಪ್ಲಾಸ್ಟಿಕ್‌ ಸಂಪೂರ್ಣವಾಗಿ ನಿಷೇಧಿಸಲು ಸಾರ್ವಜನಿಕರು ಪಣ ತೊಡಬೇಕು. ಪ್ಲಾಸ್ಟಿಕ್‌ ಬಳಕೆಯಿಂದ ಮಣ್ಣು, ನೀರು, ನಮ್ಮ ನಮ್ಮ ಸುತ್ತ ಮುತ್ತಲಿನ ಜೀವ ಸಂಕುಲ ಮತ್ತು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತದೆ. ಪ್ಲಾಸ್ಟಿಕ್‌ನಲ್ಲಿರುವ ಹಾನಿಕಾರಕ ಅಂಶಗಳು ಮನುಷ್ಯನ ದೇಹಕ್ಕೆ ನಾನಾ ಹಂತಗಳಲ್ಲಿ ಸೇರಿಕೊಂಡು ಮಾರಕ ರೋಗಗಳಿಗೆ ಕಾರಣವಾಗುತ್ತವೆ. ಥೈರಾಯ್ಡ್‌, ಆಸ್ತಮಾ, ಹೃದಯ ಕಾಯಿಲೆಗಳು, ಕೂದಲು ಮತ್ತು ಚರ್ಮದ ಸಮಸ್ಯೆ, ನರಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ಹಾಗಾಗಿ ಯಾರೂ ಪ್ಲಾಸ್ಟಿಕ್‌ ವಸ್ತುಗಳನ್ನು ಬಳಕೆ ಮಾಡಬಾರದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಖಿ ಅಧ್ಯಕ್ಷೆ ರೋಹಿಣಿ ಯಳಸಂಗಿಕರ್, ರೋಟರಿ ಪದಾಧಿಕಾರಿಗಳು, ಲತಾ ದೇಶಪಾಂಡೇ, ಶಾಲಾ ಮುಖ್ಯೊಪಾಧ್ಯಯರಾದ ರಫ಼ಿಕ್, ನಾಲ್ಕುಚಕ್ರ ತಂಡದ ವಿಜಯಲಕ್ಷ್ಮಿ ಹಿರೇಮಠ, ಲಿಂಗರಾಜ್ ಡಾಂಗೆ, ನಾಗರಜ್ ಹೆಂಬಾಡಿ, ಶಾಲಾ ಬೋಧನಾ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಉಪಸ್ಥಿರಿದ್ದರು.

TeamNalkuChakra - ನಾಲ್ಕುಚಕ್ರ ತಂಡ ಕಲಬುರಗಿ

ಕಲಬುರಗಿ ‌ನಗರದ ಭವಾನಿ ನಗರ ಶಿವಾಜಿ ನಗರದಲ್ಲಿ"ಸಸಿ ನೆಡುವ ಕಾರ್ಯಕ್ರಮ ಯಶಸ್ವಿ"🌳🌱🌳🌱🌳🌱🌳🌱🌳🌱🌳ನಮ್ಮ ಕಲಬುರಗಿಯನ್ನು ಹಸಿರಾಗಿಸುವ ಚಿಕ್ಕ ಪ್ರಯತ್ನ...
18/07/2024

ಕಲಬುರಗಿ ‌ನಗರದ ಭವಾನಿ ನಗರ ಶಿವಾಜಿ ನಗರದಲ್ಲಿ
"ಸಸಿ ನೆಡುವ ಕಾರ್ಯಕ್ರಮ ಯಶಸ್ವಿ"
🌳🌱🌳🌱🌳🌱🌳🌱🌳🌱🌳

ನಮ್ಮ ಕಲಬುರಗಿಯನ್ನು ಹಸಿರಾಗಿಸುವ ಚಿಕ್ಕ ಪ್ರಯತ್ನದೊಂದಿಗೆ ನಾಲ್ಕುಚಕ್ರ ಚಾರಿಟೆಬಲ್ ಟ್ರಸ್ಟ್ ಕಲಬುರಗಿ ವತಿಯಿಂದ ಪ್ರತಿ ವರ್ಷದಂತೆ ಇ ವರ್ಷವೂ ಕೂಡ "ಹಸಿರು ಕ್ರಾಂತಿ" ಧ್ಯೇಯದಡಿಯಲ್ಲಿ ಕಲಬುರಗಿ ‌ನಗರದ ಭವಾನಿ ನಗರ ಶಿವಾಜಿ ನಗರದಲ್ಲಿ ಸಸಿಗಳನ್ನು ನೆಡಲಾಯಿತು ಹಾಗೆಯೇ ಅಲ್ಲಿರುವ ನಿವಾಸಿಗಳಿಗೆ ಪರಿಸರ ಕುರಿತು ಜಾಗೃತಿ ಮೂಡಿಸಿ ಸಸಿಗಳ ಪಾಲನೆ ಪೋಷಣೆಯ ಜವಬ್ದಾರಿ ನೀಡಲಾಯಿತು.✌💚
ಭವಾನಿ ನಗರ ಬಡಾವಣೆಯ ಮಹಾನಗರ ಪಾಲಿಕೆ ಸದಸ್ಯರಾದ ಬಸವರಾಜ್ ಮುನ್ನೋಳಿ ಅವರು ಮಾತನಾಡಿ
ಪ್ರಕೃತಿ ವಿಕೋಪಗಳು ಈಗಾಗಲೇ ಮನುಕುಲಕ್ಕೆ ಪಾಠ ಹೇಳಿಕೊಡುತ್ತಿವೆ. ಪರಿಸರ ಸಂರಕ್ಷ ಣೆ ಈಗಿರುವ ಮಾರ್ಗವಾಗಿದೆ. ಈಗ ನೆಟ್ಟಿರುವ ಸಸಿಗಳನ್ನು ಗಿಡ, ಮರಗಳನ್ನಾಗಿ ಪೋಷಿಸುವ ಜವಾಬ್ದಾರಿಯನ್ನು ನಮ್ಮ ಬಡಾವಣೆಯ ನಿವಾಸಿಗಳಿಗೆ ಒಂದೊಂದು ಸಸಿ ಪೋಷಣೆ ನಿರ್ವಹಣೆಗೆ ಒಪ್ಪಿಸಲಾಗುತ್ತದೆ ಎಂದರು..

ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಇನ್ನೊಬ್ಬ ಸದಸ್ಯರಾದ ಸಂಗಮೇಶ್ ಮುನ್ನೊಳ್ಳಿ, ಮುಖಂಡರಾದ ಶಾಂತು ದುಧನಿ ಅವರು ಪರಿಸರ ಕುರಿತಾಗಿ‌ ಮಾತನಾಡಿ ನಾಲ್ಕುಚಕ್ರ ತಂಡದ ಸೇವಾ ಕಾರ್ಯ ಶ್ಲಾಘನೀಯ ನಮ್ಮ ಜಿಲ್ಲೆಯಲ್ಲಿ ಸಾಮಾಜಿಕ ಕಾರ್ಯಗಳ‌ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಸಮಾಜದಲ್ಲೆ ಸಕಾರಾತ್ಮಕವಾಗಿ ಬದಲಾವಣೆ ಪರ್ವ ಮೂಡಿಸುತ್ತಿರುವ ನಿಮ್ಮ‌ ತಂಡಕ್ಕೆ ಅಭಿನಂದನೆಗಳು ಎಂದು ಹೇಳಿದರು..

ನಾಲ್ಕುಚಕ್ರ ತಂಡದ ಮುಖ್ಯಸ್ಥೆ ಮಾಲಾ ಕಣ್ಣಿ ಮಾತನಾಡಿ,
ಹಸಿರನ್ನು ಹೆಚ್ಚಿಸಿ ಶುದ್ಧ ಗಾಳಿಯನ್ನು ಪಡೆಯಲು ಪ್ರತಿಯೊಬ್ಬ ಮಗು, ಪ್ರತಿಯೊಬ್ಬ ನಾಗರಿಕರು ಮರಗಿಡಗಳನ್ನು ನೆಟ್ಟು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ. ನಮ್ಮ‌ ನಗರ ಹಾಗೂ ಜಿಲ್ಲೆಯ ಅಭಿವೃದ್ಧಿ ನಮ್ಮ ತನದ ಜೀವಂತಿಕೆಗೆ ಸಾಕ್ಷಿ... ಆ ನಿಟ್ಟಿನಲ್ಲಿ ನಗರದಾದ್ಯಂತ ಸಸಿ ನೆಡುವ ಮೂಲಕ ಪರಿಸರದ ಮಹತ್ವವನ್ನು ಸಾರುವುದು ನಾಲ್ಕುಚಕ್ರ ತಂಡದ ಉದ್ದೇಶ ಎಂದು ಹೇಳಿದರು🙏👍

ಆರೋಗ್ಯವಂತ ಹಾಗೂ ಸ್ವಾಸ್ಥ್ಯ ಸಮಾಜಕ್ಕಾಗಿ ನಾವೆಲ್ಲರೂ ಹೆಚ್ಚೆಚ್ಚು ಸಸಿಗಳನ್ನು‌ ನೆಟ್ಟು ಪಾಲನೆ ಪೋಷಣೆ ಮಾಡೊಣ..

ಈ ಸಂದರ್ಭದಲ್ಲಿ ಸಿದ್ದು ತಳಮಡಗಿ, ಕಿರಣಕುಮಾರ್, ಪ್ರಮುಖ ಮುಖಂಡರು, ಬಡಾವಣೆಯ ನಿವಾಸಿಗಳು, ನಾಲ್ಕುಚಕ್ರ ತಂಡದ ಸದಸ್ಯರಾದ ವಿಜಯಲಕ್ಷ್ಮಿ ಹಿರೇಮಠ, ಲಿಂಗರಾಜ್ ಡಾಂಗೆ, ಸುಭಾಷ್ ಮೇತ್ರೆ ಉಪಸ್ಥಿತರಿದ್ದರು..

ಈ ಒಂದು ಅಭಿಯಾನಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು... 🙏🙏

#ಸ್ವಚ್ಛನಗರಸುಂದರನಗರ
#ಪರಿಸರಸಂರಕ್ಷಣೆನಮ್ಮೆಲ್ಲರಹೊಣೆ
#ಹಸಿರುಕಲಬುರಗಿ

TeamNalkuChakra - ನಾಲ್ಕುಚಕ್ರ ತಂಡ ಕಲಬುರಗಿ

Address

Gulbarga
585103

Website

Alerts

Be the first to know and let us send you an email when Team NalkuChakra - ನಾಲ್ಕುಚಕ್ರ ತಂಡ posts news and promotions. Your email address will not be used for any other purpose, and you can unsubscribe at any time.

Share

Category