18/03/2021
ತಾಲ್ಲೂಕು ಕಛೇರಿಯಲ್ಲಿ ನೆನ್ನೆ ನಡೆದ ದಲಿತರ ಕುಂದು ಕೊರತೆಗಳ ಸಭೆ ಮುಗಿಸಿದ ಬಳಿಕ ಮಾನ್ಯ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ವರ್ಷ ಒಡೆಯರ್ ರವರು ಸಂಜೆ ಸುಮಾರು 4 ಗಂಟೆಯ ಸಮಯದಲ್ಲಿ BSP ಮುಖಂಡರಾದ ನೀಲಿ ರಮೇಶ್ ರವರ ಮನವಿಯ ಮೇರೆಗೆ, ಅವರ ಕೋರಿಕೆಯ ಅನುಸಾರವಾಗಿ ಹಾರೋಹಳ್ಳಿ ಹೋಬಳಿಯ ಮೇಡಮಾರನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದರು. ಅಲ್ಲಿಯ ಸರ್ಕಾರಿ ಗೋಮಾಳದ ಸರ್ವೆ ನಂಬರ್ 55 ರಲ್ಲಿ ಸುಮಾರು ವರ್ಷಗಳಿಂದ ಮನೆಕಟ್ಟಿಕೊಂಡಿರುವ ಪರಿಶಿಷ್ಟ ಜಾತಿಗೆ ಸೇರಿದ ಜನಾಂಗಕ್ಕೆ ಹಕ್ಕು ಪತ್ರ ಕೊಡುವ ಬಗ್ಗೆ ಪ್ರಸ್ತಾಪಿಸಿ, ಕಂದಾಯ ಇಲಾಖೆಯ 94/C ರನ್ವಯ ತಮ್ಮ ಇಲಾಖೆಯ ಅಧಿಕಾರಿ ವರ್ಗದ VA, RI ಗಳ ಜೊತೆ ಸ್ಥಳ ಪರಿಶೀಲನೆ ಮಾಡಿದರು. ಆ ಗ್ರಾಮದ ದಲಿತರ ಅಹವಾಲುಗಳನ್ನು ಸ್ವೀಕರಿಸಿ VA, RI ಗಳ ವರದಿಯನ್ನು ಸ್ಥಳದಲ್ಲೆ ಸಿದ್ದಪಡಿಸಿ ಪ್ರಸ್ತುತ ಸರ್ಕಾರಿ ಗೋಮಾಳದಲ್ಲಿ ಮನೆ ಕಟ್ಟಿಕೊಂಡಿರುವ ದಲಿತರ ಸಮುದಾಯದವರಿಗೆ ಅಕ್ರಮ-ಸಕ್ರಮದಡಿಯಲ್ಲಿ ಶೀಘ್ರದಲ್ಲೆ ಹಕ್ಕು ಪತ್ರ ಕೊಡಿಸುವ ಭರವಸೆಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಗ್ರಾಮದ ಎಲ್ಲಾ ದಲಿತ ನಿವಾಸಿಗಳು ಹಾಜರಿದ್ದರು. ಜನರ ಕಷ್ಟಗಳಿಗೆ ನೇರವಾಗಿ ಸ್ಪಂದಿಸಿ, ಸೂಕ್ತವಾದ ರೀತಿಯಲ್ಲಿ ನ್ಯಾಯ ದೊರಕಿಸಿಕೊಡುವ ನಿಷ್ಠಾವಂತ ಪ್ರಾಮಾಣಿಕ ಅಧಿಕಾರಿ ನಮ್ಮ ತಹಶೀಲ್ದಾರ್ ನಮ್ಮ ಹೆಮ್ಮೆ...