24/06/2024
ಡಿಮ್ಹಾನ್ಸ್ ಸಂಸ್ಥೆಯಲ್ಲಿ ವಿಶ್ವ ಯೋಗ ದಿನ ಹಾಗೂ ವಿಶ್ವ ಸಂಗೀತ ದಿನದ ಪ್ರಯುಕ್ತ ವಿಶೇಷ ಕಾರ್ಯಕ್ರಮ
ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್) ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ಇವರ ಸಹಯೋಗದಲ್ಲಿ ಜೂನ್೨೧, ೨೦೨೪ ರಂದು “ಅಂತರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ವಿಶ್ವ ಸಂಗೀತ ದಿನಾಚರಣೆ”ಯ ಅಂಗವಾಗಿ ಡಿಮ್ಹಾನ್ಸ್ ಸಂಸ್ಥೆಯ ಸಭಾಂಗಣದಲಿ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಶ್ರೀ ಪತಂಜಲಿ ಮಹರ್ಷಿ ಹಾಗೂ ಪಂಡಿತ ಪುಟ್ಟರಾಜ ಗವಾಯಿಗಳ ಇವರ ಭಾವಚಿತ್ರಕ್ಕೆ ಪುಷ್ಪರ್ಚಾನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಡಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕರಾದ ಡಾ.ಅರುಣಕುಮಾರ ಸಿ ರವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಮಂಜುನಾಥ ಭಜಂತ್ರಿಯವರು ಅಂತರಾಷ್ಟ್ರೀಯ
ಯೋಗದ ದಿನ ಮತ್ತು ಅಂತರಾಷ್ಟ್ರೀಯ ಸಂಗೀತ ದಿನದ ಮಹತ್ವ ಬಗ್ಗೆ ತಿಳಿಸಿಕೊಟ್ಟರು.
ಯೋಗ ಮತ್ತು ಸಂಗೀತದಲ್ಲಿರುವ ಸಾಮ್ಯತೆ ಬಗ್ಗೆ ತಿಳಿಸುತ್ತಾ ಈ ಎರಡು ಪ್ರಕಾರಗಳು ಕ್ರಿಯಾಶೀಲ ರಚನಾತ್ಮಕ ಅಭಿವ್ಯಕ್ತಿಗೆ ಪೂರಕವಾಗಿದ್ದು, ಬೌಧ್ದಿಕ, ಭಾವನಾತ್ಮಕ ಹಾಗೂ ವರ್ತನೆಗಳಲ್ಲಿ ಸಾಮರಸ್ಯವನ್ನು ತರುವಂತಹ ಸಾಮರ್ಥ್ಯವನ್ನು ಹೊಂದಿದ್ದು, ವ್ಯಕ್ತಿಗತ ಹಾಗೂ ಸಮುದಾಯವನ್ನು ಒಟ್ಟುಗೂಡಿಸುವುವಂತಹದ್ದು ಎಂದು ಮಾತನಾಡಿದರು.
ವೈಜ್ಞಾನಿಕ ದೃಷ್ಠಿಕೋನದಲ್ಲಿ ಸಂಗೀತ ಮತ್ತು ಯೋಗದ ಸಂಭವನೀಯ ಚಿಕಿತ್ಸಕ ಪ್ರಯೋಜನಗಳ ಬಗ್ಗೆ ಅಧ್ಯಯನ ನಡೆದೆದ್ದು, ತೀವ್ರತೆರನಾದ ಮಾನಸಿಕ ಕಾಯಿಲೆಗಳಾದಂತರಹ ಖಿನ್ನತೆ, ಆತಂಕ, ಚಿತ್ತವಿಕಲತೆ, ಡಿಮೆನ್ಸಿಯಾ (ಮರೆವಿನ ಕಾಯಿಲೆ), ಘಟನೋತ್ತರ ಒತ್ತಡ ಕಾಯಿಲೆಗಳು, ಮಕ್ಕಳಲ್ಲಿ ಬರುವ ಸ್ವಲೀನತೆ (ಆಟಿಸಂ), ಅಡಿಕ್ಷನ್ಗೆ ಸಂಬAಧಿಸಿದ ಕಾಯಿಲೆಗಳಲ್ಲಿ ಯೋಗ ಹಾಗೂ ಸಂಗೀತ ಚಿಕಿತ್ಸೆಯನ್ನು ಪೂರಕ ಚಿಕಿತ್ಸೆಯಾಗಿ ಉಪಯೋಗಿಸಿ ಅತ್ಯಂತ ಸಮಗ್ರವಾಗಿ ಚಿಕಿತ್ಸಾ ಪದ್ದತಿಗಳಲ್ಲಿ ಸಕರಾತ್ಮಕ ಫಲಿತಾಂಶಗಳನ್ನು ಪಡೆಯಲು ಕಂಡುಕೊಳ್ಳಲಾಗಿದೆಯೆಂದು ಮಾತನಾಡಿದರು.
ಪ್ರತಿಯೊಬ್ಬರು ಒಳ್ಳೆಯ ಸಂಗೀತವನ್ನು ಕೇಳುವುದನ್ನು ರೂಢಿ ಮಾಡಿಕೊಳ್ಳಬೇಕು ಇದರಿಂದ ಮಾನಸಿಕ ಒತ್ತಡಗಳು ಕಡಿಮೆಯಾಗಿ ಮನಸ್ಸಿಗೆ ಶಾಂತಿಯನ್ನುಂಟು ಮಾಡುವ ಶಕ್ತಿ ಸಂಗೀತಕ್ಕೆ ಇದೆಯೆಂದು ಮಾತನಾಡಿದರು.
ಡಿಮ್ಹಾನ್ಸ್ ಸಂಸ್ಥೆಯ ಸಂಗೀತಕಾರರಾದ ಡಾ.ಶ್ರೀಧರ್ ಕುಲಕರ್ಣಿ ಇವರು “ಸಂಗೀತ ಪ್ರಾತ್ಯಕ್ಷಿಕತೆ”
ನಡೆಸಿಕೊಟ್ಟರು. ವಿವಿಧ ರಾಗಗಳನ್ನು ಪ್ರಸ್ತುತ ಪಡಿಸಿ ಈ ರಾಗಗಳ ಮಹತ್ವದ ಬಗ್ಗೆ ತಿಳಿಸಿದರು. ಇಂಪಾದ ಸಂಗೀತವನ್ನು ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದಲ್ಲದೇ ದೇಹಕ್ಕೆ ಮತ್ತು ಮನಸ್ಸಿಗೆ ಬರುವ ರೋಗಗಳನ್ನು ವಾಸಿಮಾಡಲು ಸಂಗೀತ ಚಿಕಿತ್ಸೆ ನೆರವಾಗುತ್ತದೆಂದು ತಿಳಿಸಿದರು.
ಡಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕರಾದ ಡಾ.ಅರುಣಕುಮಾರ ಸಿ ರವರು ಕಾರ್ಯಕ್ರಮದ ಅಧ್ಯಕ್ಷತೆಯ ಸ್ಥಾನವನ್ನು ವಹಿಸಿ ಮಾತನಾಡಿ, ಅಂತರಾಷ್ಟಿಯ ಯೋಗ ದಿನಾಚರಣೆಯನ್ನು ವಿಶ್ವದಲ್ಲಿ ಅತ್ಯಂತ ಖುಷಿಯಿಂದ ಆಚರಣೆ ಮಾಡುತ್ತಾರೆ. ಈ ವರ್ಷ ೧೦ ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಾಗಿದ್ದು, ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆಯಾಗಿದೆ.
ಯೋಗಾಭ್ಯಾಸ ಮಾಡುವುದನ್ನು ಕೇವಲ ಒಂದು ದಿವಸಕ್ಕೆ ಮಾತ್ರ ಸಿಮಿತ ಮಾಡದೇ ಪ್ರತಿ ದಿನವು ಯೋಗಾಭ್ಯಾಸ ಮಾಡುವುದನ್ನು ಜನರು ರೂಢಿಸಿಕೊಳ್ಳಬೇಕು. ಇದರಿಂದ ಅನೇಕ ಪ್ರಯೋಜನಗಳುಂಟು. ಜೀವನದಲ್ಲಿ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ಯೋಗವು ನೀಡುತ್ತದೆ. ಇದನ್ನು ಜನರು ನಿರ್ಲಕ್ಷ ಮಾಡಬಾರದೆಂದರು.
ಉತ್ತಮ ಆರೋಗ್ಯಕ್ಕಾಗಿ ಯೋಗ ಎನ್ನುವುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಭಾರತವು ಜಗತ್ತಿಗೆ ಅನೇಕ ಒಳ್ಳೆಯ ಕೊಡುಗೆಗಳನ್ನು ನೀಡಿದೆ, ಅದರಲ್ಲಿ ಅತ್ಯುತ್ತಮವಾದ ಒಂದು ಒಳ್ಳೆಯ ಕೊಡುಗೆಯೆಂದರೆ ಅದು ಯೋಗವಾಗಿದೆ. ಹಾಗಾಗಿ ಇಂದು ವಿಶ್ವದಾದ್ಯಂತ ೧೦ ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಯೋಗಾಬ್ಯಾಸವು ಮಾನಸಿಕ, ಶಾರೀರಿಕ ಮತ್ತು ಆಧ್ಯಾತ್ಮಿಕವಾದ ಒಳ್ಳೆಯ ಅಭ್ಯಾಸವಾಗಿದೆ. ವಿದೇಶದಲ್ಲಿ ಅಲ್ಲಿನ ಜನರು ಕೂಡ ಯೋಗಾಭ್ಯಾಸದ ಬಗ್ಗೆ ಆಸಕ್ತಿಯನ್ನು ತೋರಿಸುತ್ತಿದ್ದಾರೆಂದು ಮಾತನಾಡಿದರು.
ಡಿಮ್ಹಾನ್ಸ್ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಾದ ಡಾ.ರಾಘವೇಂದ್ರ ನಾಯಕ್, ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕರಾದ ಡಾ.ಮೋಹನಕುಮಾರ ಥಂಬದ, ಡಿಮ್ಹಾನ್ಸ್ ಸಂಸ್ಥೆಯ ಶೂಶ್ರೂಷಕ ಅಧಿಕ್ಷಕರಾದ ಶ್ರೀಮತಿ ಗಾಯತ್ರಿ ಶಿಂಧೆ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಿಮ್ಹಾನ್ಸ್ ಸಂಸ್ಥೆಯ ಯೋಗ ಶಿಕ್ಷಕಿ ಕು.ವಾಣಿ ತುಪ್ಪದ ಇವರು ವಿವಿಧ ಯೋಗಾಸನಗಳನ್ನು ಯೋಗ ಪ್ರಾತ್ಯಾಕ್ಷಿಕತೆ ಮಾಡುವುದರ ಮೂಲಕ ಪ್ರದರ್ಶಿಸಿದರು. ಯೋಗ ನೃತ್ಯವನ್ನು ಪ್ರಸ್ತುತ ಪಡಿಸಿ, ಯೋಗ ಮತ್ತು ಮಹಿಳೆ ಆರೋಗ್ಯದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ನರ್ಸಿಂಗ್ ಪ್ರಶಿಕ್ಷಣಾರ್ಥಿಗಳು ಯೋಗದ ಕುರಿತು ಕಿರು ನಾಟಕವನ್ನು ಪ್ರದರ್ಶಿಸಿದರು.
ಸೈಕಿಯಾಟ್ರಿಕ್ ನರ್ಸಿಂಗ್ ವಿಭಾಗದ ಪ್ರಾಧ್ಯಾಪಕಿ ಡಾ.ಆರ್.ಶ್ರೀವಾಣಿ, ಉಪನ್ಯಾಸಕರಾದ ಶ್ರೀ.ಸುಶೀಲಕುಮಾರ ರೋಣದ, ಡಿಮ್ಹಾನ್ಸ್ ಸಹಾಯಕ ಆಡಳಿತಾಧಿಕಾರಿ ಶ್ರೀಮತಿ ವಿಜಯಲಕ್ಷ್ಮೀ ತೋರಗಲ್ಮಠ, ಅರವಳಿಕೆ ವಿಭಾಗದ ಪ್ರಾಧ್ಯಾಪಕಿ ಶ್ರೀಮತಿ ಡಾ.ಜಸ್ವಿಂದರ ಕೌರ್, ಮನೋರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಮೇಘಮಾಲಾ ತಾವರಗಿ, ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ.ಸತೀಶ್ ಕೌಜಲಗಿ, ಟೆಲಿಮಾನಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಸುಧೀಂದ್ರ ಹುದ್ದಾರ್, ಮನೋವೈದ್ಯಕೀಯ ಸಮಾಜ ಕಾರ್ಯಕರ್ತರಾದ
ಶ್ರೀ ಓಬಾ ನಾಯ್ಕ, ಪ್ರಶಾಂತ ಪಾಟೀಲ್, ನರ್ಸಿಂಗ್ ಅಧಿಕಾರಿ ಶ್ರೀ ಪ್ರಶಾಂತ ಬೇವೂರ, ನರ್ಸಿಂಗ್ ಅಧಿಕಾರಿಗಳು ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹನುಂತ ಮುದೆವಗೋಳ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ರೇವತಿ ಭಂಡಾರಿ ಪ್ರಾರ್ಥಿಸಿದರು. ಶ್ರೀ ಆರ್.ಎಮ್.ತಿಮ್ಮಾಪೂರ ಸ್ವಾಗತಿಸಿದರು, ಶ್ರೀ ಅಶೋಕ.ಎಸ್.ಕೋರಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ನರ್ಸಿಂಗ್ ಪ್ರಶೀಕ್ಷಾಣರ್ಥಿಗಳು, ಡಿಮ್ಹಾನ್ಸ್ ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ಸ್ವಾಮಿ ವಿವೇಕಾನಂದಯೂತ್ ಮೂವಮೆಂಟ್ ಸಂಸ್ಥೆಯ ಸಿಬ್ಬಂದಿಗಳು ಭಾಗವಹಿಸಿದ್ದರು