22/04/2026
"ಸರ್, ಶೂ ಖರೀದಿ ಮಾಡಲು ಹಣವಿರಲಿಲ್ಲ..." : ಛತ್ರಪತಿ ಸಂಭಾಜಿನಗರದ CRPF ಪೊಲೀಸ್ ನೇಮಕಾತಿ ಮೈದಾನದಲ್ಲಿ ಒಂದು ವಿಶಿಷ್ಟ ಕಥೆ ಕಂಡುಬಂದಿತು. ಖಾಕಿ ಸಮವಸ್ತ್ರದ ಕನಸನ್ನು ಕಣ್ಣಲ್ಲಿ ಇಟ್ಟುಕೊಂಡು ನೂರಾರು ಯುವಕರು ನೇಮಕಾತಿಗಾಗಿ ಮೈದಾನಕ್ಕೆ ಇಳಿದರು. ನೇಮಕಾತಿ ಪರೀಕ್ಷೆಗೆ ಬಂದ ಬಹುತೇಕರು ಬ್ರಾಂಡೆಡ್ ದುಬಾರಿ ಶೂಗಳನ್ನು ಧರಿಸಿದ್ದರೆ, ಓರ್ವ ಯುವಕ ಮಾತ್ರ ಹಳೆಯ ಚಪ್ಪಲಿಗಳನ್ನು ಧರಿಸಿದ್ದನು. ನೇಮಕಾತಿ ಪ್ರಕ್ರಿಯೆಯನ್ನು ಪರಿಶೀಲಿಸಲು ಬಂದ ಎಸ್ಆರ್ಪಿಎಫ್ನ ಎಸ್ಪಿ ವಿಕ್ರಮ್ ಸಾಲಿ ಈ ಯುವಕನನ್ನು ನೋಡಿದರು. ಅವನನ್ನು ಹತ್ತಿರ ಕರೆದ ಎಸ್ಪಿ ವಿಕ್ರಮ್ “ನೀವು ಶೂ ಧರಿಸದೆ ಏಕೆ ಬಂದಿದ್ದೀರಿ. ಚಪ್ಪಲಿ ಧರಿಸಿ 5 ಕಿಲೋ ಮೀಟರ್ ಓಡುವುದು ಸಾಧ್ಯನಾ ?" ಎಂದು ಕೇಳಿದರು.
ಆಗ ಉತ್ತರಿಸಿದ ಆ ಯುವಕ ‘ಸರ್, ಶೂ ಖರೀದಿಸಲು ಹಣವಿರಲಿಲ್ಲ. ಆದರೆ ಪೊಲೀಸ್ ಆಗುವುದು ನನ್ನ ಕನಸು. ನಾನು ಖಂಡಿತವಾಗಿಯೂ ಅದನ್ನು ಪೂರ್ಣಗೊಳಿಸುತ್ತೇನೆ’.
ಈ ಮಾತುಗಳನ್ನು ಕೇಳಿದ ನಂತರ, ಅಲ್ಲಿದ್ದ ಅನೇಕ ಜನರು ಭಾವುಕರಾದರು, ಯುವಕನ ಹೋರಾಟ ಮತ್ತು ಕನಸು, ಇದು ಎಲ್ಲರ ಹೃದಯವನ್ನು ಮುಟ್ಟಿತು.
ಯುವಕನ ಮನೆಯ ಆರ್ಥಿಕ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಎರಡು ಬಾರಿ ಊಟ ಮಾಡುವುದೇ ಕಷ್ಟಕರವಾಗಿತ್ತು.. ಅಂತಹ ಪರಿಸ್ಥಿತಿಯಲ್ಲಿ ಅಭ್ಯಾಸಕ್ಕಾಗಿ ಶೂಗಳನ್ನು ಖರೀದಿಸುವುದು ದೂರದ ಮಾತಾಗಿತ್ತು. ಆದರೆ ಪೊಲೀಸ್ ಆಗುವ ಕನಸು ಆ ಯುವಕನಲ್ಲಿ ಬೇರೂರಿತ್ತು. ಆ ಯುವಕ ಚಪ್ಪಲಿ ಧರಿಸಿ 5 ಕಿಲೋಮೀಟರ್ ಓಟಕ್ಕಾಗಿ ಮೈದಾನಕ್ಕೆ ಇಳಿದನು. ಅವನ ಧೈರ್ಯವನ್ನು ನೋಡಿದ ಎಸ್ಪಿ ಸ್ವತಃ ಯುವಕನಿಗೆ ಹೊಸ ಶೂಗಳನ್ನು ಉಡುಗೊರೆಯಾಗಿ ನೀಡಿದರು. ಬಡವನಾಗಿದ್ದರೂ ಯುವಕನ ಆತ್ಮವಿಶ್ವಾಸ ಹಾಗೂ ಛಲ ಒಂದೆಡೆಯಾದರೆ, ಅದರೊಂದಿಗೆ ಎಸ್ಪಿ ವಿಕ್ರಮ ಸಾಲಿಯವರ ಮಾನವೀಯತೆಯೂ ಎಲ್ಲರ ಗಮನ ಸೆಳೆಯಿತು.