Suryakanth Nagamarapalli

Suryakanth Nagamarapalli Official Page of Suryakanth Nagamarapalli - JDS MLA Candidate, Bidar North Constituency

🌍🌱 ವಿಶ್ವ ಪರಿಸರ ದಿನಾಚರಣೆಯ ಹಾರ್ದಿಕ ಶುಭಾಶಯಗಳು 🌱🌍"ಒಂದು ಮರ – ಸಾವಿರ ಉಸಿರು, ಒಂದು ಹೆಜ್ಜೆ – ಉತ್ತಮ ಪರಿಸರದತ್ತ."ಪರಿಸರವು ನಮ್ಮ ಜೀವನದ ಅ...
05/06/2026

🌍🌱 ವಿಶ್ವ ಪರಿಸರ ದಿನಾಚರಣೆಯ ಹಾರ್ದಿಕ ಶುಭಾಶಯಗಳು 🌱🌍

"ಒಂದು ಮರ – ಸಾವಿರ ಉಸಿರು, ಒಂದು ಹೆಜ್ಜೆ – ಉತ್ತಮ ಪರಿಸರದತ್ತ."

ಪರಿಸರವು ನಮ್ಮ ಜೀವನದ ಅಮೂಲ್ಯ ಸಂಪತ್ತು. ಶುದ್ಧ ಗಾಳಿ, ಸ್ವಚ್ಛ ನೀರು, ಹಸಿರು ವನಸಿರಿ ಮತ್ತು ಸಮೃದ್ಧ ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಈ ವಿಶ್ವ ಪರಿಸರ ದಿನದಂದು ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡ ನೆಟ್ಟು, ಅದರ ಪೋಷಣೆಯ ಸಂಕಲ್ಪ ಮಾಡೋಣ. ಪರಿಸರ ಸಂರಕ್ಷಣೆಯ ಮೂಲಕ ಆರೋಗ್ಯಕರ, ಸುಂದರ ಮತ್ತು ಸಮೃದ್ಧ ಭವಿಷ್ಯವನ್ನು ನಿರ್ಮಿಸೋಣ.

🌿 ಪರಿಸರ ಉಳಿಸಿ – ಭವಿಷ್ಯ ಬೆಳೆಸಿ
🌎 ಹಸಿರು ಭೂಮಿ – ಆರೋಗ್ಯಕರ ಜೀವನ
🌱 ಪ್ರಕೃತಿ ರಕ್ಷಣೆ ನಮ್ಮೆಲ್ಲರ ಕರ್ತವ್ಯ

📰 ಇಂದಿನ ಪತ್ರಿಕಾ ಪ್ರಕಟಣೆಗಳು 📰
05/06/2026

📰 ಇಂದಿನ ಪತ್ರಿಕಾ ಪ್ರಕಟಣೆಗಳು 📰

ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ (ರಿ), ಭಾಲ್ಕಿ ವತಿಯಿಂದ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ...
04/06/2026

ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ (ರಿ), ಭಾಲ್ಕಿ ವತಿಯಿಂದ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು *ನಾರಂಜ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಶ್ರೀ ಸೂರ್ಯಕಾಂತ್ ನಾಗಮಾರಪಳ್ಳಿ* ಅವರು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬಹುದು. ಇಂದು ಸನ್ಮಾನಗೊಳ್ಳುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಪರಿಶ್ರಮ, ಶಿಸ್ತು, ನಿರಂತರ ಅಭ್ಯಾಸ ಹಾಗೂ ಏಕಾಗ್ರತೆಯಿಂದ ಈ ಸಾಧನೆಯನ್ನು ಮಾಡಿದ್ದಾರೆ. ಇವರ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಹಾರೈಸಿದರು.

ಅಲ್ಲದೇ, ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿರುವ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ನ ಪದಾಧಿಕಾರಿಗಳು, ದಾನಿಗಳು ಹಾಗೂ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ ಅವರು, ಶಿಕ್ಷಣಕ್ಕೆ ನೀಡುವ ಪ್ರೋತ್ಸಾಹವು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಭದ್ರ ಬುನಾದಿಯಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಇಂದಿನ ಗೌರವವನ್ನು ತಮ್ಮ ಮುಂದಿನ ಸಾಧನೆಗಳಿಗೆ ಮೆಟ್ಟಿಲಾಗಿಸಿಕೊಳ್ಳಬೇಕು ಹಾಗೂ ತಮ್ಮ ತಂದೆ-ತಾಯಿಗಳು, ಗುರುಗಳು ಮತ್ತು ಸಮಾಜದ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಂತೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಪ್ರತಿಭಾ ಪುರಸ್ಕಾರ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಅವರ ಭವಿಷ್ಯ ಉಜ್ವಲವಾಗಿರಲೆಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಗುರು ಬಸವ ಪಟ್ಟದ್ದೇವರು,ಶ್ರೀ ಬಾಳಪ್ಪ ನಂದಗಂವಿ ಜೀ, ಶ್ರೀ ಶಿವು ಲೋಖಂಡೆ, ಶ್ರೀ ಶಶಿಧರ್ ಕೋಸಂಬೆ, ಶ್ರೀ ಅಶೋಕ್ ಬಾವಗೆ, ಶ್ರೀ ಬಸವರಾಜ್ ದಾನ, ಡಾ. ಸಜ್ಜನ್ ಬಳತೆ, ಡಾ. ಜಗದೀಶ್ ಕಡದೆ, ಪಾಲಕರು, ಗಣ್ಯರು, ಶಿಕ್ಷಕರು,ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಯರು ಉಪಸ್ಥಿತರಿದ್ದರು.

ಹೀರಾಲಾಲ್ ಪನಾಲಾಲ ಶಿಕ್ಷಣ ಸಂಸ್ಥೆಗೆ ನಾರಂಜ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಶ್ರೀ ಸೂರ್ಯಕಾಂತ್ ನಾಗಮಾರಪಳ್ಳಿ  ಬೇಟಿ ನೀಡಿದರು. ಈ ಶುಭ...
04/06/2026

ಹೀರಾಲಾಲ್ ಪನಾಲಾಲ ಶಿಕ್ಷಣ ಸಂಸ್ಥೆಗೆ ನಾರಂಜ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಶ್ರೀ ಸೂರ್ಯಕಾಂತ್ ನಾಗಮಾರಪಳ್ಳಿ ಬೇಟಿ ನೀಡಿದರು. ಈ ಶುಭ ಸಂಧರ್ಭದಲ್ಲಿ ಸಂಸ್ಥೆಯ ಹಿರಿಯರಾದ ಶ್ರೀ ರಾಜಕುಮಾರ್ ಅಗರವಾಲ್ ಜೀ, ಶ್ರೀ ಚಂದ್ರಕಾಂತ್ ಕುಲಕರ್ಣಿ ಜೀ, ಡಾ. ವಿಜಯ್ ಬಳ್ಳೂರಕರ್ ಜೀ , ಬ್ರಿಜಕಿಶೋರ್ ಮಲಾನಿ ಜೀ ಇತರರು ಇದ್ದರು.

ಬೀದರ್ ಜಿಲ್ಲೆಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷರಾದ ಸನ್ಮಾನ ಶ್ರೀ ಬಿ.ವೈ. ವಿಜಯೇಂದ್ರ ಅವರನ್ನು ನಾರಂಜ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರ...
01/06/2026

ಬೀದರ್ ಜಿಲ್ಲೆಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷರಾದ ಸನ್ಮಾನ ಶ್ರೀ ಬಿ.ವೈ. ವಿಜಯೇಂದ್ರ ಅವರನ್ನು ನಾರಂಜ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಶ್ರೀ ಸೂರ್ಯಕಾಂತ್ ನಾಗಮಾರಪಳ್ಳಿ ರವರು ಆತ್ಮೀಯವಾಗಿ ಸ್ವಾಗತಿಸಿ, ಸನ್ಮಾನಿಸಿ ಗೌರವಿಸಿದರು.

ಬೀದರ ನಗರದ ಹೋಟೆಲ್ ವೈಭ ನಡೆದ ಶ್ರೀ ಶಿವಕುಮಾರ್ ಪಾಟೀಲ್ ರವರ 25ನೇ ಮದುವೆ ವಾರ್ಷಿಕೋತ್ಸವದ ಸಮಾರಂಭದಲ್ಲಿ ನಾರಂಜ ಸಹಕಾರ ಸಕ್ಕರೆ ಕಾರ್ಖಾನೆಯ ಅಧ...
31/05/2026

ಬೀದರ ನಗರದ ಹೋಟೆಲ್ ವೈಭ ನಡೆದ ಶ್ರೀ ಶಿವಕುಮಾರ್ ಪಾಟೀಲ್ ರವರ 25ನೇ ಮದುವೆ ವಾರ್ಷಿಕೋತ್ಸವದ ಸಮಾರಂಭದಲ್ಲಿ ನಾರಂಜ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ *ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ* ರವರು ಪಾಲ್ಗೊಂಡು ಶುಭ ಹಾರೈಸಿದರು.

ಬೀದರ ನಗರದ ಜೀರಾ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಬಸವರಾಜ್ ಧನ್ನೂರೆ ರವರ  ಮಗಳ್ ನಿಶ್ಚಿತಾರ್ಥ  ಸಮಾರಂಭದಲ್ಲಿ ನಾರಂಜ ಸಹಕಾರ ಸಕ್ಕರೆ ಕಾರ್ಖಾನೆ...
31/05/2026

ಬೀದರ ನಗರದ ಜೀರಾ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಬಸವರಾಜ್ ಧನ್ನೂರೆ ರವರ ಮಗಳ್ ನಿಶ್ಚಿತಾರ್ಥ ಸಮಾರಂಭದಲ್ಲಿ ನಾರಂಜ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ* ರವರು ಪಾಲ್ಗೊಂಡು ಶುಭ ಹಾರೈಸಿದರು.

29/05/2026

*"ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ | ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ ||"*

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ನಮ್ಮ ದೇಶದ ಪ್ರಮುಖ ಮಹಾಶಕ್ತಿ ಪೀಠಗಳಲ್ಲೊಂದಾದ ಸುಪ್ರಸಿದ್ಧ ಶ್ರೀ ಮಹಾಲಕ್ಷ್ಮಿ ದೇವಾಲಯಕ್ಕೆ
ನಾರಂಜ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ *ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ* ರವರು
ಭೇಟಿ ನೀಡಿ ತಾಯಿ ಮಹಾಲಕ್ಷ್ಮಿಯ ದರ್ಶನ ಪಡೆದು ಕ್ಷೇತ್ರದ ನಾಡಿನ ಜನರ ಸುಖ–ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. 🙏

19/05/2026

ದೇಶದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಜನ್ಮದಿನ ನಿಮಿತ್ತ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿಸೂಪರ್ ಸ್ಪೇಷಾಲಿಟಿ ಸಹಕಾರ ಆಸ್ಪತ್ರೆಯಿಂದ ಬೀದರ್ ತಾಲೂಕಿನ ಹಳೆಯಂಬರ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.
ಆಸ್ಪತ್ರೆಯ ಅಧ್ಯಕ್ಷರಾದ ತರುಣ್ ಸೂರ್ಯಕಾಂತ ನಾಗಮಾರಪಳ್ಳಿ ಅವರು ಶಿಬಿರವನ್ನು ಉದ್ಘಾಟಿಸಿದರು. ಮಣ್ಣಿನ ಮಗ ಎಂದೇ ಹೆಸರಾಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ದೇಶದ ಅತ್ಯಂತ ಅಪರೂಪದ ನಾಯಕರಾಗಿದ್ದಾರೆ. ರೈತರು ಸೇರಿದಂತೆ ಎಲ್ಲ ವರ್ಗಗಳ ಏಳಿಗೆಗೆ ಶ್ರಮಿಸಿದ್ದಾರೆ. ಪ್ರಧಾನಿಯಾಗಿದ್ದಾಗ ರಾಜ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಮಾಜಿ ಪ್ರಧಾನಿಯವರ ಜನ್ಮದಿನ ನಿಮಿತ್ತ ನಾಗಮಾರಪಳ್ಳಿ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಆಸ್ಪತ್ರೆಯ ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸುವರು. ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೋರಿದರು.
ನಾರಂಜಾ ಸಹಕಾರಿ ಸಕ್ಕರೆ ಕಾರಖಾನೆಯ ನಿರ್ದೇಶಕ ಸಂಗಮೇಶ ಪಾಟೀಲ್, ಮಹಾದೇವ ಬಿರಾದಾರ, ಸಿದ್ದು ಲೌಟೆ, ಅಶ್ವಿನ್, ಸಾಗರ ರಿಕ್ಕೆ, ಜಗನ್ನಾಥ ಪಾಪದೆ, ಡಾ. ಕಾರ್ತಿಕ ಪಾಟಿಲ್ ಸೇರಿದಂತೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ಗಣ್ಯರು ಉಪಸ್ಥಿತರಿದ್ದರು.

18/05/2026

ದೇಶದ ಬಡವರ ಕಣ್ಣೀರೊರೆಸಿ, ರೈತರ ಬಾಳಿಗೆ ಬೆಳಕಾದ ‘ಮಣ್ಣಿನ ಮಗ’! 🌾

ಮಾಜಿ ಪ್ರಧಾನಮಂತ್ರಿಗಳು, ಧೀಮಂತ ಜನನಾಯಕರು ಹಾಗೂ ನಮ್ಮ ಹೆಮ್ಮೆಯ ಶ್ರೀ ಹೆಚ್.ಡಿ. ದೇವೇಗೌಡ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.

ಅನ್ನದಾತನಿಗೆ ಗೌರವ ತಂದಿತ್ತ ಶಕ್ತಿ, ನೀರಾವರಿ ಯೋಜನೆಗಳ ಮೂಲಕ ನಾಡನ್ನು ಸಮೃದ್ಧಗೊಳಿಸಿದ ಭಗೀರಥ, ಮತ್ತು ಮಹಿಳಾ ಮೀಸಲಾತಿಯ ಹರಿಕಾರರಾದ ಗೌಡರ ಕೊಡುಗೆಗಳು ಇತಿಹಾಸದಲ್ಲಿ ಸದಾ ಅಮರ. ಇಮ್ಮಡಿ ಪುಲಕೇಶಿಯ ನಂತರ ಅಖಂಡ ಭಾರತವನ್ನಾಳಿದ ಹೆಮ್ಮೆಯ ಕನ್ನಡಿಗನಿಗೆ ಕೋಟಿ ಕೋಟಿ ಪ್ರಣಾಮಗಳು.

ಭಗವಂತನು ಅವರಿಗೆ ಸುದೀರ್ಘ ಆಯುಷ್ಯ ಮತ್ತು ಉತ್ತಮ ಆರೋಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. 🙏💐

Address

Khb Colony
Bidar
585401

Alerts

Be the first to know and let us send you an email when Suryakanth Nagamarapalli posts news and promotions. Your email address will not be used for any other purpose, and you can unsubscribe at any time.

Contact The Organization

Send a message to Suryakanth Nagamarapalli:

Share