06/09/2026
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.), ಔರಾದ್ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಉದ್ಘಾಟನಾ ಸಮಾರಂಭ
ಇಂದು ಔರಾದ್ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.), ಔರಾದ್ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯ ಅಧ್ಯಕ್ಷರಾದ ಶ್ರೀ ತರುಣ್ ಸೂರ್ಯಕಾಂತ್ ನಾಗಮಾರಪಳ್ಳಿ ಅವರು ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ, ಪತ್ರಿಕೋದ್ಯಮವು ಸಮಾಜದ ಅಭಿವೃದ್ಧಿ ಹಾಗೂ ಜನಪರ ಧ್ವನಿಯಾಗಿ ಕಾರ್ಯನಿರ್ವಹಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಶುಭ ಹಾರೈಸಿದರು.
ಈ ಶುಭ ಸಂದರ್ಭದಲ್ಲಿ ಶ್ರೀ ಹುಲಿ ಅಮರನಾಥ್, ಶ್ರೀ ಚಂದ್ರಶೇಖರ ಎಸ್.ಕೆ., ಶ್ರೀ ಖಾಜಾ ಖಾಲಿಲುಲ್ಲಾ, ಶ್ರೀ ಮಹೇಶ್ ಪಾಟೀಲ್, ಶ್ರೀ ಕಿರಣ್ ಪಾಟೀಲ್, ಶ್ರೀ ಶಿವಕುಮಾರ್ ಘಾಟಿ, ಶ್ರೀ ರಘುವೀರಸಿಂಗ್ ಠಾಕೂರ್, ಶ್ರೀ ರವಿ ಸುಕುಮಾರ್, ಶ್ರೀ ನಂದಾದೀಪ್, ಶ್ರೀ ಅಲೀಮ್ ಪಾಶಾ, ಶ್ರೀ ಘಾಳೆಪ್ಪ ಡೋಣ್ಣೆ, ಶ್ರೀ ಲಕ್ಷ್ಮಣ ರಾಠೋಡ್, ಶ್ರೀ ಶಿವಾನಂದ್, ಶ್ರೀ ಕಿರಣ್ ಅವಲಕೊಂಡೆ, ಶ್ರೀ ಹರಿದೇವ ಖಿರಾನಾಯಕ್, ಶ್ರೀ ರಾಮದಾಸ್ ಪಾಟೀಲ್, ಶ್ರೀ ಸಂಜುಕುಮಾರ್ ರಾಠೋಡ್, ಶ್ರೀ ಮಿಲಿಂದ್ ರಾಜಾರಾಮ್, ಶ್ರೀಮತಿ ರಂಜನಾ ಮಿಲಿಂದ್, ಡಾ. ಮೊಹಮ್ಮದ್ ಇಮ್ರಾನ್ ಸೈಯದ್, ಶ್ರೀ ಭೀಮರಾವ್ ಭಾವಿಕಟ್ಟಿ, ಶ್ರೀ ಶಿವಾನಂದ ಬೇದ್ರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.