JDS Updates-BIDAR / ಜೆಡಿಎಸ್ ಸುದ್ದಿ ಮನೆ ಬೀದರ್

  • Home
  • India
  • Bidar
  • JDS Updates-BIDAR / ಜೆಡಿಎಸ್ ಸುದ್ದಿ ಮನೆ ಬೀದರ್

JDS Updates-BIDAR / ಜೆಡಿಎಸ್ ಸುದ್ದಿ ಮನೆ ಬೀದರ್ ಇದು ಜೆಡಿಎಸ್ ಪಕ್ಷಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳುವ ವೇದಿಕೆಯಾಗಿದೆ.

ವಚನ ಸಾಹಿತ್ಯದ ಮೂಲಕ ಸಮಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ ಶ್ರೇಷ್ಠ ಶರಣರು, ಸಮಾಜ ಸುಧಾರಣೆಗಾಗಿ ಹೋರಾಡಿದ ಶ್ರೇಷ್ಠ ವಚನಕಾರರಾದ ವಿಶ್ವಗುರು ಜಗಜ...
20/04/2026

ವಚನ ಸಾಹಿತ್ಯದ ಮೂಲಕ ಸಮಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ ಶ್ರೇಷ್ಠ ಶರಣರು, ಸಮಾಜ ಸುಧಾರಣೆಗಾಗಿ ಹೋರಾಡಿದ ಶ್ರೇಷ್ಠ ವಚನಕಾರರಾದ ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಜಯಂತೋತ್ಸವ ದಿನದಂದು ಅವರಿಗೆ ಶತಕೋಟಿ ನಮನಗಳು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ.
ಸಮಸ್ತ ನಾಡಿನ ಜನತೆಗೆ ಬಸವ ಜಯಂತಿಯ ಶುಭಾಶಯಗಳು

ಜಗತ್ತೇ ಮೆಚ್ಚುವಂತಹ ಲಿಖಿತ ಸಂವಿಧಾನವನ್ನು ಸ್ವಾತಂತ್ರ್ಯ ಭಾರತಕ್ಕೆ ನೀಡಿದ ಸಂವಿಧಾ‌ನ ಶಿಲ್ಪಿ, ಸರ್ವರ ಒಳಿತಿಗಾಗಿ ಶ್ರಮಿಸಿದ ಮಹಾನ್ ಚೇತನ, ವಿ...
14/04/2026

ಜಗತ್ತೇ ಮೆಚ್ಚುವಂತಹ ಲಿಖಿತ ಸಂವಿಧಾನವನ್ನು ಸ್ವಾತಂತ್ರ್ಯ ಭಾರತಕ್ಕೆ ನೀಡಿದ ಸಂವಿಧಾ‌ನ ಶಿಲ್ಪಿ, ಸರ್ವರ ಒಳಿತಿಗಾಗಿ ಶ್ರಮಿಸಿದ ಮಹಾನ್ ಚೇತನ, ವಿಶ್ವಕ್ಕೆ ಮಾದರಿಯಾದ ವಿಶ್ವರತ್ನ ಡಾ. ಬಿ.ಆರ್ ಅಂಬೇಡ್ಕರ್ ರವರ ಜನ್ಮದಿನವಿಂದು. ರಾಷ್ಟ್ರದ ಒಳಿತಿಗಾಗಿ ಉತ್ತಮ ಸಂವಿಧಾನ ನೀಡಿದ ಅವರಿಗೆ ಶತಕೋಟಿ ನಮನಗಳು.
ಸಮಸ್ತ ನಾಡಿನ ಜನತೆಗೆ ವಿಶ್ವರತ್ನ ಡಾ. ಬಿ.ಆರ್ ಅಂಬೇಡ್ಕರ್ ರವರ ಜಯಂತಿಯ ಶುಭಾಶಯಗಳು

ಜೆಡಿಎಸ್ Janata Dal Secular ಬೀದರ್ ಜಿಲ್ಲಾಧ್ಯಕ್ಷರಾಗಿರುವ ಶ್ರೀ ರಮೇಶ್ ಪಾಟೀಲ್ ಸೋಲಪೂರ್   ರವರಿಗೆ ಜನ್ಮ ದಿನದ ಶುಭಾಶಯಗಳು. ಭಗವಂತ ಅವರಿಗ...
09/04/2026

ಜೆಡಿಎಸ್ Janata Dal Secular ಬೀದರ್ ಜಿಲ್ಲಾಧ್ಯಕ್ಷರಾಗಿರುವ ಶ್ರೀ ರಮೇಶ್ ಪಾಟೀಲ್ ಸೋಲಪೂರ್ ರವರಿಗೆ ಜನ್ಮ ದಿನದ ಶುಭಾಶಯಗಳು. ಭಗವಂತ ಅವರಿಗೆ ಒಳ್ಳೆಯ ಆರೋಗ್ಯ ಕೊಟ್ಟು ಸದಾಕಾಲವೂ ಕಾಪಾಡಲಿ. ಅವರಿಗೆ ಉನ್ನತ ಸ್ಥಾನಮಾನಗಳು ಲಭಿಸಲಿ ಎಂದು ಶುಭ ಹಾರೈಸೋಣ..

ಭಗವಂತನಾದ ವಿಷ್ಣುವಿನ ಏಳನೇ ಅವತಾರ ಎಂದು ಪೂಜಿಸಲ್ಪಡುವ ಮರ್ಯಾದಾ ಪುರುಷೋತ್ತಮ ಶ್ರೀರಾಮರ ಜನ್ಮದಿನವಿಂದು. ಈ ದಿನವನ್ನು ರಾಷ್ಟ್ರದೆಲ್ಲಡೇ ಶ್ರೀರ...
26/03/2026

ಭಗವಂತನಾದ ವಿಷ್ಣುವಿನ ಏಳನೇ ಅವತಾರ ಎಂದು ಪೂಜಿಸಲ್ಪಡುವ ಮರ್ಯಾದಾ ಪುರುಷೋತ್ತಮ ಶ್ರೀರಾಮರ ಜನ್ಮದಿನವಿಂದು. ಈ ದಿನವನ್ನು ರಾಷ್ಟ್ರದೆಲ್ಲಡೇ ಶ್ರೀರಾಮ ನವಮಿ ಎಂದು ಆಚರಿಸಲಾಗುತ್ತದೆ. ಉಪವಾಸ, ಭಜನೆ, ಕೀರ್ತನೆಗಳ ಮೂಲಕ ಶ್ರೀರಾಮನ ಸ್ಮರಣೆ ಮಾಡಲಾಗುತ್ತದೆ. ನಾಡಿನ ಜನತೆಯ ಒಳಿತಿಗಾಗಿ ಶ್ರೀರಾಮನಲ್ಲಿ ಪ್ರಾರ್ಥಿಸುತ್ತೇನೆ.
ಸಮಸ್ತ ನಾಡಿನ ಜನತೆಗೆ ಶ್ರೀರಾಮ ನವಮಿಯ ಶುಭಾಶಯಗಳು


ಇಸ್ಲಾಂ ಧರ್ಮದ ಪವಿತ್ರ ಹಬ್ಬ ರಂಜಾನ್ ದಿನವಿಂದು. ರೋಜಾ (ಉಪವಾಸ) ಮಾಡಿ ಭಗವಂತನಾದ ಅಲ್ಲಾಹನ ಸೇವೆ ಮಾಡಿದವರು ಸೇರಿದಂತೆ ಪ್ರತಿಯೊಬ್ಬರಿಗೂ ಭಗವಂತ...
21/03/2026

ಇಸ್ಲಾಂ ಧರ್ಮದ ಪವಿತ್ರ ಹಬ್ಬ ರಂಜಾನ್ ದಿನವಿಂದು. ರೋಜಾ (ಉಪವಾಸ) ಮಾಡಿ ಭಗವಂತನಾದ ಅಲ್ಲಾಹನ ಸೇವೆ ಮಾಡಿದವರು ಸೇರಿದಂತೆ ಪ್ರತಿಯೊಬ್ಬರಿಗೂ ಭಗವಂತನಾದ ಅಲ್ಲಾಹನು ಒಳಿತು ಮಾಡಲಿ ಎಂದು ಪ್ರಾರ್ಥಿಸುತ್ತೇನೆ.
ಸಮಸ್ತ ನಾಡಿನ ಜನತೆಗೆ ರಂಜಾನ್ ಹಬ್ಬದ ಶುಭಾಶಯಗಳು


eidmubarak EidulFitr2026 eidmubarak2026 Eid2026

ಸುತ್ತಮುತ್ತಲಿನ ಪರಿಸರ, ಪ್ರಕೃತಿ, ವಾತಾವರಣಗಳಲ್ಲಿ ಹೊಸ ಬದಲಾವಣೆಗಳನ್ನು ಹೊತ್ತು ತರುವ ಯುಗಾದಿ, ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ, ನಾಡಿನೆಲ...
19/03/2026

ಸುತ್ತಮುತ್ತಲಿನ ಪರಿಸರ, ಪ್ರಕೃತಿ, ವಾತಾವರಣಗಳಲ್ಲಿ ಹೊಸ ಬದಲಾವಣೆಗಳನ್ನು ಹೊತ್ತು ತರುವ ಯುಗಾದಿ, ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ, ನಾಡಿನೆಲ್ಲಡೆ ಬೇವು, ಬೆಲ್ಲದೊಂದಿಗೆ ವಿಶೇಷವಾಗಿ ಆಚರಿಸುವ ಶ್ರೇಷ್ಠ ಹಬ್ಬವಾಗಿದೆ. ನಾಡಿನ ಜನತೆಯ ಒಳಿತಿಗಾಗಿ ಭಗವಂತನಲ್ಲಿ ಈ ದಿನ ಪ್ರಾರ್ಥಿಸೋಣ.
ಸಮಸ್ತ ನಾಡಿನ ಜನತೆಗೆ ಯುಗಾದಿ (ಉಗಾದಿ) ಹಬ್ಬದ ಶುಭಾಶಯಗಳು

ugadifestival

ಹದಿಹರೆಯದಲ್ಲಿಯೇ ಯುದ್ಧಭೂಮಿಯಲ್ಲಿ ಪರಾಕ್ರಮ ಪ್ರದರ್ಶಿಸಿ, ಸ್ವಾಭಿಮಾನಿ ರಾಷ್ಟ್ರ ನಿರ್ಮಾಣ ಮಾಡಿ, ಹಿಂದೂಸ್ಥಾನವನ್ನು ಒಗ್ಗೂಡಿಸುವ ಛಲದೊಂದಿಗೆ ...
19/02/2026

ಹದಿಹರೆಯದಲ್ಲಿಯೇ ಯುದ್ಧಭೂಮಿಯಲ್ಲಿ ಪರಾಕ್ರಮ ಪ್ರದರ್ಶಿಸಿ, ಸ್ವಾಭಿಮಾನಿ ರಾಷ್ಟ್ರ ನಿರ್ಮಾಣ ಮಾಡಿ, ಹಿಂದೂಸ್ಥಾನವನ್ನು ಒಗ್ಗೂಡಿಸುವ ಛಲದೊಂದಿಗೆ ಶ್ರಮಿಸಿದ ಪರಾಕ್ರಮಿ, ಶೌರ್ಯ ಸಾಹಸಕ್ಕೆ ಹೆಸರಾಗಿದ್ದ ಅರಸ ಛತ್ರಪತಿ ಶಿವಾಜಿ ಮಹಾರಾಜ (ಶಿವಾಜಿರಾಜೆ ಶಹಾಜಿರಾಜೆ ಭೋಸ್ಲೆ) ರ ಜನ್ಮದಿನವಾದ ಇಂದು ಅವರನ್ನು ಸ್ಮರಿಸಿ ಗೌರವಿಸೋಣ.
ಸಮಸ್ತ ನಾಡಿನ ಜನತೆಗೆ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಶುಭಾಶಯಗಳು

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಶ್ರೀ ಸಿ.ಬಿ ಸುರೇಶ್ ಬಾಬು ರವರ ಜ...
16/02/2026

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಶ್ರೀ ಸಿ.ಬಿ ಸುರೇಶ್ ಬಾಬು ರವರ ಜನ್ಮದಿನ ವಿಂದು. ಭಗವಂತ ಅವರಿಗೆ ಒಳ್ಳೆಯ ಆರೋಗ್ಯ ಕೊಟ್ಟು ಸದಾಕಾಲವೂ ಕಾಪಾಡಲಿ. ಅವರಿಗೆ ಉನ್ನತ ಸ್ಥಾನಮಾನಗಳು ಲಭಿಸಲಿ ಎಂದು ಹಾರೈಸುತ್ತೇನೆ.
ಇಂದ:-
ಶ್ರೀ ಬಂಡೆಪ್ಪ ಖಾಶೆಂಪುರ್
ಮಾಜಿ ಸಚಿವರು, ಕರ್ನಾಟಕ ಸರ್ಕಾರ

ರಾಷ್ಟ್ರದೆಲ್ಲೆಡೆ ಸಡಗರ ಸಂಭ್ರಮ, ಭಕ್ತಿ ಭಾವದಿಂದ ಆಚರಿಸಲ್ಪಡುವ ವಿಶೇಷ ಹಬ್ಬಗಳಲ್ಲಿ ಮಹಾಶಿವರಾತ್ರಿಯೂ ಒಂದಾಗಿದೆ. ಈ ಹಬ್ಬದಂದು ರಾತ್ರಿ ಇಡೀ ಜ...
15/02/2026

ರಾಷ್ಟ್ರದೆಲ್ಲೆಡೆ ಸಡಗರ ಸಂಭ್ರಮ, ಭಕ್ತಿ ಭಾವದಿಂದ ಆಚರಿಸಲ್ಪಡುವ ವಿಶೇಷ ಹಬ್ಬಗಳಲ್ಲಿ ಮಹಾಶಿವರಾತ್ರಿಯೂ ಒಂದಾಗಿದೆ. ಈ ಹಬ್ಬದಂದು ರಾತ್ರಿ ಇಡೀ ಜಾಗರಣೆಯಿದ್ದು ಪರಮೇಶ್ವರನನ್ನು ಪೂಜಿಸಿ ಆರಾಧಿಸಲಾಗುತ್ತದೆ. ಭಗವಂತನಾದ ಶಿವ ಪರಮೇಶ್ವರನು ನಾಡಿನ ಜನತೆಗೆ ಸುಖ, ಶಾಂತಿ, ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಸಮಸ್ತ ನಾಡಿನ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು


2019ರ ಫೆಬ್ರವರಿ - 14ರಂದು ಪುಲ್ವಾಮಾದಲ್ಲಿ ಭಯೋತ್ಪಾದಕರು ನಡೆಸಿದ ಕುತಂತ್ರದಿಂದ ರಾಷ್ಟ್ರ ಸೇವೆಯಲ್ಲಿ ತೊಡಗಿದ್ದ 40 ಜನ ಹೆಮ್ಮೆಯ ಯೋಧರು ಹುತಾ...
14/02/2026

2019ರ ಫೆಬ್ರವರಿ - 14ರಂದು ಪುಲ್ವಾಮಾದಲ್ಲಿ ಭಯೋತ್ಪಾದಕರು ನಡೆಸಿದ ಕುತಂತ್ರದಿಂದ ರಾಷ್ಟ್ರ ಸೇವೆಯಲ್ಲಿ ತೊಡಗಿದ್ದ 40 ಜನ ಹೆಮ್ಮೆಯ ಯೋಧರು ಹುತಾತ್ಮರಾಗಿದ್ದರು. ದೇಶ ಸೇವೆಗಾಗಿ ಪ್ರಾಣಾರ್ಪಣೆ ಮಾಡಿದ ಅವರ ಸೇವೆಯನ್ನು ಎಂದಿಗೂ ಮರೆಯಲಾಗದು.
ರಾಷ್ಟ್ರಕ್ಕಾಗಿ ಹೋರಾಡಿ ಮಡಿದ ಹೆಮ್ಮೆಯ ಯೋಧರಿಗೆ ಶತಕೋಟಿ ನಮನಗಳು

ಬೆಂಗಳೂರಿನ ಜೆಪಿ ಭವನದ ಜೆಡಿಎಸ್ ಪಕ್ಷದ ರಾಜ್ಯ ಕಛೇರಿಯ ಆವರಣದಲ್ಲಿ ಇಂದು ಹಮ್ಮಿಕೊಂಡಿದ್ದ 77ನೇ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ಕಾರ್ಯಕ...
26/01/2026

ಬೆಂಗಳೂರಿನ ಜೆಪಿ ಭವನದ ಜೆಡಿಎಸ್ ಪಕ್ಷದ ರಾಜ್ಯ ಕಛೇರಿಯ ಆವರಣದಲ್ಲಿ ಇಂದು ಹಮ್ಮಿಕೊಂಡಿದ್ದ 77ನೇ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಶ್ರೀ ಬಂಡೆಪ್ಪ ಖಾಶೆಂಪುರ್ ರವರು ಪಾಲ್ಗೊಂಡು, ಗಣರಾಜ್ಯೋತ್ಸವ ದಿನಾಚರಣೆಯ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಪಕ್ಷದ ಕೋರ್ ಕಮಿಟಿಯ ಅಧ್ಯಕ್ಷರು, ಪಕ್ಷದ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷರು, ಮಾಜಿ ಸಚಿವರು, ಹಾಲಿ ಹಾಗೂ ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ಸೇರಿದಂತೆ ಅನೇಕರಿದ್ದರು.


ನಾಡಿನ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಸ್ವಾಭಿಮಾನಿ, ಈ ನಾಡಿನಲ್ಲಿ ಮತ್ತೊಮ್ಮೆ ಹುಟ್ಟಿ ಬಂದು ...
26/01/2026

ನಾಡಿನ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಸ್ವಾಭಿಮಾನಿ, ಈ ನಾಡಿನಲ್ಲಿ ಮತ್ತೊಮ್ಮೆ ಹುಟ್ಟಿ ಬಂದು ಬ್ರಿಟಿಷರನ್ನು ಹೊರಹಾಕುತ್ತೇನೆಂದು ಹೇಳಿ ಹುತಾತ್ಮರಾದ ಕ್ರಾಂತಿಯ ಕಿಡಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರು ಹುತಾತ್ಮರಾದ ದಿನವಿಂದು.
ಸ್ವಾಭಿಮಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರಿಗೆ ಶತಕೋಟಿ ನಮನಗಳು

Address

Bidar

Website

Alerts

Be the first to know and let us send you an email when JDS Updates-BIDAR / ಜೆಡಿಎಸ್ ಸುದ್ದಿ ಮನೆ ಬೀದರ್ posts news and promotions. Your email address will not be used for any other purpose, and you can unsubscribe at any time.

Share