SDPI ಸಜೀಪ ಮುನ್ನೂರು

SDPI ಸಜೀಪ ಮುನ್ನೂರು The Social Democratic Party of India, popularly known as SDPI

*"ಡ್ರಕ್ಸ್ ವ್ಯಸನ ಮತ್ತು ಮಾರಾಟ ಜಾಲದ ವಿರುದ್ಧ ಪ್ರತಿ ಊರಿನ ನಾಗರೀಕರು ಜನಜಾಗೃತಿ ಅಭಿಯಾನ ಕೈಗೊಳ್ಳುವುದು ಅನಿವಾರ್ಯವಾಗಿದೆ"*ಈ ಡ್ರಕ್ಸ್ ಜಾಲ ...
22/08/2023

*"ಡ್ರಕ್ಸ್ ವ್ಯಸನ ಮತ್ತು ಮಾರಾಟ ಜಾಲದ ವಿರುದ್ಧ ಪ್ರತಿ ಊರಿನ ನಾಗರೀಕರು ಜನಜಾಗೃತಿ ಅಭಿಯಾನ ಕೈಗೊಳ್ಳುವುದು ಅನಿವಾರ್ಯವಾಗಿದೆ"*

ಈ ಡ್ರಕ್ಸ್ ಜಾಲ ಎಂಬುವುದು ಕೇವಲ ಒಂದೆರಡು ಊರಿಗೆ ಸೀಮಿತವಾದ ಪಿಡುಗು ಅಲ್ಲ, ಇದು ದೇಶದ ಪ್ರತಿ ರಾಜ್ಯ,ಜಿಲ್ಲೆ, ಪಟ್ಟಣ, ಪಂಚಾಯತ್, ಗಲ್ಲಿ ಗಳಲ್ಲೂ ಹರಡಿಕೊಂಡಿರುವ ಸಾಮಾಜಿಕ ಪಿಡುಗು

ಅದರಲ್ಲೂ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ಬೆಳೆದು ನಿಂತಿದೆ ಈ ಡ್ರಕ್ಸ್ ಜಾಲ. ಇದನ್ನು ವಿರೋಧಿಸಿ ಡ್ರಕ್ಸ್ ಮುಕ್ತ ಜಿಲ್ಲೆಯಾಗಿ ಪರಿವರ್ತಿಸಲು ಪೊಲೀಸ್ ಇಲಾಖೆಗೆ ಸಾತ್ ನೀಡಲು ಜವಾಬ್ದಾರಿಯುತ ನಾಗರೀಕರು ಮುಂದೆ ಬರಬೇಕು ಹಾಗೂ ತಮ್ಮ ತಮ್ಮ ಮೊಹಲ್ಲಾ, ಕೇರಿ, ಗಲ್ಲಿಗಳಲ್ಲಿ ಸಂಘಟಿತರಾಗಿ ಡ್ರಕ್ಸ್ ಜಾಲದ ವಿರುದ್ಧ ಜನಜಾಗೃತಿ ಮೂಡಿಸಿವ ಕಾರ್ಯಕ್ರಮ ನಡೆಸಬೇಕು

ಊರ ಜನರು ಸಂಘಟಿತರಾಗಿ ಡ್ರಕ್ಸ್ ವ್ಯಸನಿಗಳನ್ನು ಗುರುತಿಸಿ ಮನಪರಿವರ್ತನೆ ಮಾಡಿ ಆ ದುಷ್ಚಟದಿಂದ ಅವರನ್ನು ಮುಕ್ತರಾಗಿಸುವ ಶತ ಪ್ರಯತ್ನ ಮಾಡಬೇಕು. ನಮ್ಮ ಪ್ರಯತ್ನಕ್ಕೆ ವ್ಯಸನಿಗಳು ಬೆಲೆ ಕಲ್ಪಿಸದಿದ್ದರೆ ಮಾತ್ರ ಪೊಲೀಸರಿಗೆ ಒಪ್ಪಿಸಬೇಕು ಇಂತಹ ಕಾರ್ಯಗಳಿಂದ 5/6ತಿಂಗಳು ಗಳಲ್ಲಿ ಡ್ರಕ್ಸ್ ಮುಕ್ತ ನಾಡಾನ್ನಾಗಿ ಮಾಡಬಹುದು

"ಮುಗ್ದರನ್ನು ತಮ್ಮ ಮೋಸದ ಬಲೆಗೆ ಸಿಲುಕಿಸಿ ಜೇಬು ತುಂಬಿಸಿಕೊಳ್ಳುವ ಡ್ರಕ್ಸ್ ಪೆಡ್ಲರ್ ಗಳನ್ನು ಕ್ಷಮಿಸದಿರಿ"

ಬಹುತೇಕ ವ್ಯಸನಿಗಳು ಮೋಜು, ಮಸ್ತಿಯ ಗೋಜಿನಲ್ಲಿ ಡ್ರಕ್ಸ್ ಜಾಲಕ್ಕೇ ಬಲಿಯಾಗಿದ್ದಾರೆ. ಇಂತಹ ಯುವಕ, ಯುವತಿಯಾರನ್ನು ಟಾರ್ಗೆಟ್ ಮಾಡಿ ಡ್ರಕ್ಸ್ ಮಾರಾಟ ಮಾಡುವುದೇ ಪೆಡ್ಲರ್ ಗಳ ಕೆಲಸ ಈ ಪೆಡ್ಲರ್ ಗಳಿಗೆ ಸೀಮಿತ ಗುರುತು ಇರುವುದಿಲ್ಲ ಸಾಮಾನ್ಯ ವ್ಯಕ್ತಿಗಳಂತೆ ನಮ್ಮ ನಡುವೆಯೇ ಇದ್ದು, ಕದ್ದು ಮುಚ್ಚಿ ಡ್ರಕ್ಸ್ ಸಾಗಾಟ,ಮಾರಾಟ ನಡೆಸುತ್ತಾ ಜೇಬು ತುಂಬಿಸಿಕೊಳ್ಳುತ್ತಾರೆ ಈ ಬಗ್ಗೆ ಎಚ್ಚರ ವಹಿಸೋಣ

ದ. ಕ ಜಿಲ್ಲಾ ಪೊಲೀಸ್ ಇಲಾಖೆಯೂ ಡ್ರಕ್ಸ್ ಜಾಲದ ವಿರುದ್ಧ ರಾಜಿ ಇಲ್ಲದ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಡ್ರಕ್ಸ್ ದಂಧೆಕೋರರಿಗೆ ಎಂದಿಗೂ ಕ್ಷಮಿಸಬೇಡಿ

29/03/2023
29/03/2023
ನಾಗರೀಕ ಸಮಿತಿಯ ಹೋರಾಟಕ್ಕೆ SDPI ಸಂಪೂರ್ಣ ಬೆಂಬಲ: ಹಂಝ ನಂದಾವರದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಕ್ಷೇತ್ರದ ನಗರಗಳಿಗೆ ಶುದ್ಧ ಕುಡಿಯುವ ನಿರೋದೋ...
13/03/2023

ನಾಗರೀಕ ಸಮಿತಿಯ ಹೋರಾಟಕ್ಕೆ SDPI ಸಂಪೂರ್ಣ ಬೆಂಬಲ: ಹಂಝ ನಂದಾವರ

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಕ್ಷೇತ್ರದ ನಗರಗಳಿಗೆ ಶುದ್ಧ ಕುಡಿಯುವ ನಿರೋದೋಗಿಸುವ ಯೋಜನೆಯ ಕಾಮಗಾರಿ ಸಜೀಪ ಮುನ್ನೂರು ಗ್ರಾಮದ ಆಲಾಡಿಯಲ್ಲಿ ನಡೆಯುತ್ತಿದ್ದು. ಈ ಯೋಜನೆಯಲ್ಲಿ ನಮ್ಮ ಸಜೀಪ ಮುನ್ನೂರು ಗ್ರಾಮಕ್ಕೆ ಪೂರ್ಣ ಪ್ರಮಾಣದ ನೀರು ಒದಗಿಸಿ ಕೊಡಬೇಕೆಂದು ಒತ್ತಾಯಿಸಿ ಹಿಂದಿನಿಂದಲೂ ಪ್ರತಿಭಟನೆ ನಡೆಸುತ್ತ ಕಾಮಗಾರಿಗೆ ತಡೆ ನೀಡುತ್ತಾ ಬಂದಿದ್ದೇವೆ

ನಮ್ಮ ಬೇಡಿಕೆಗಳಿಗೆ ಮಣಿದು ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳೀಯ ಶಾಸಕರು ಹಲವು ಆಶ್ವಷಣೆಗಳನ್ನು ನೀಡಿದ್ದಾರೆ.
ಅದರೆ ಈ ಆಶ್ವಾಷಣೆಗಳು ಈಡೇರಬಹುದೇ?? ಎಂಬ ಹಂತಕ ನಮ್ಮಲ್ಲಿದೆ!!

ಏಕೆಂದರೆ ಈ ಹಿಂದೇ ಕೂಡ ನಮ್ಮ ಗ್ರಾಮದಿಂದ ಬಹುಜನ ಕುಡಿಯುವ ನೀರು ಯೋಜನೆಯಲ್ಲಿ ಕರೋಪಾಡಿ ಗ್ರಾಮಕ್ಕೆ ಮತ್ತು ಏತ ನೀರಾವರಿ ಯೋಜನೆಯ ಅಡಿಯಲ್ಲಿ ಜಾಕ್ ವೆಲ್ ಮೂಲಕ ಬೇರೆಡೆಗೆ ನೀರು ಕೊಂಡೋಯ್ದಗ ನಮ್ಮ ಗ್ರಾಮಕ್ಕೂ ನೀರು ನೀಡುವ ಆಶ್ವಷಣೆ ದೊರೆದಿತ್ತು ಹೊರತು ಯೋಜನೆ ಪೂರ್ಣಗೊಂಡಾಗ ಬೇರೆ ಬೇರೆ ಸಮಸ್ಯೆ ಹೇಳಿಕೊಂಡು ನಮ್ಮ ಸಜೀಪ ಮುನ್ನೂರು ಗ್ರಾಮಕ್ಕೆ ವಂಚಿಸಿದ್ದಾರೆ

ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಉಳ್ಳಾಲ ಕ್ಷೇತ್ರದ ನಗರಗಳಿಗೆ ಸರಬರಾಜು ಮಾಡುವ ಜಾಕ್ ವೆಲ್ ಯೋಜನೆಯ ಶುದ್ಧ ಕುಡಿಯುವ ನೀರು ನಮ್ಮ ಗ್ರಾಮಕ್ಕೂ ನೀಡುವ ಸಂಪೂರ್ಣ ಭರವಸೆ ನೀಡುವ ತನಕ SDPI ಪಕ್ಷವು ತನ್ನ ಹೋರಾಟ ಮುಂದುವರಿಸಲಿದೆ.

ಈ ನಿಟ್ಟಿನಲ್ಲಿ ನಾಗರೀಕ ಸಮಿತಿ ನಡೆಸುತ್ತಿರುವ ಹೋರಾಟಕ್ಕೆ SDPI ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ

ಹಂಝ ನಂದಾವರ
(ಅಧ್ಯಕ್ಷರು : SDPI ಸಜೀಪ ಮುನ್ನೂರು ಗ್ರಾಮ ಸಮಿತಿ)

Address

Sajipamunnuru
Bantval
574231

Alerts

Be the first to know and let us send you an email when SDPI ಸಜೀಪ ಮುನ್ನೂರು posts news and promotions. Your email address will not be used for any other purpose, and you can unsubscribe at any time.

Contact The Organization

Send a message to SDPI ಸಜೀಪ ಮುನ್ನೂರು:

Share