17/12/2014
**********ರೈತರ ಆಕಸ್ಮಿಕ ಮರಣ ಹಾಗೂ ಬಣವೆಗಳ ನಷ್ಟ ಪರಿಹಾರ ಯೋಜನೆ**********
ಒಂದು ದೇಶದಲ್ಲಿ ಕೈಗಾರಿಕೆಗಳಿಗಿರುವಷ್ಟೇ ಮಹತ್ವ ಕೃಷಿ ಕ್ಷೇತ್ರಕ್ಕೂ ಇದೆ. ಅದರಲ್ಲೂ ಭಾರತದಲ್ಲಿ ರೈತರು ದೇಶದ ಬೆನ್ನೆಲುಬು. ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿಯೂ ರೈತರ ಪಾತ್ರ ಗಣನೀಯ. ದೇಶದ ರೈತರ ಹಾದಿ ಸುಗಮವಾದುದ್ದೇನೂ ಅಲ್ಲ. ಶ್ರಮಜೀವಿಗಳಾದ ರೈತರು ಅಸಂಘಟಿತ ಕಾರ್ಮಿಕ ವರ್ಗದ ಭಾಗವಾಗಿದ್ದಾರೆ.
ರೈತರ ಬಿಡುವಿಲ್ಲದ ದುಡಿಮೆಯ ಸಂದರ್ಭಗಳಲ್ಲಿ ಅನೇಕ ಬಾರಿ ಪ್ರಾಣಾಪಾಯಗಳೂ ಸಂಭವಿಸುವುದು ಉಂಟು. ಅಂತಹ ಸಂದರ್ಭಗಳಲ್ಲಿ ಅವನಿಗೆ ನೆರವಾಗಬೇಕೆಂಬುದನ್ನು ಕರ್ನಾಟಕ ಸರ್ಕಾರ ಮನಗಂಡು, ಕೃಷಿ ಇಲಾಖೆ ಮುಖಾಂತರ ರೈತರ ಆಕಸ್ಮಿಕ ಮರಣ ಹಾಗೂ ಬಣವೆಗಳ ನಷ್ಟ ಪರಿಹಾರ ಯೋಜನೆಯನ್ನು ಜಾರಿಗೊಳಿಸಿದೆ.
ಉದ್ದೇಶ:
ರೈತರು ಹಾಗೂ ಕೃಷಿ ಕಾರ್ಮಿಕರು ಹಾವು ಕಡಿತದಿಂದ, ಮರಗಳಿಂದ ಬಿದ್ದು ಅಥವಾ ಇತರೆ ಕೃಷಿ ಸಂಬಂಧಿತ ಆಕಸ್ಮಿಕಗಳಿಂದ ಮರಣ ಹೊಂದಿದ ಸಂದರ್ಭಗಳಲ್ಲಿ ಅವರ ಕುಟುಂಬಗಳಿಗೆ ಪರಿಹಾರ ಒದಗಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ.
ರೈತರಿಗೆ ದೊರೆಯುವ ಸೌಲಭ್ಯಗಳು:
1. ಹಾವು ಕಡಿತದಿಂದ, ಮರಗಳಿಂದ ಬಿದ್ದು, ಕೃಷಿ ಸಂಬಂಧಿತ ಆಕ್ಷ್ಮಿಕಗಳಿಂದ ಮರಣ ಹೊಂದಿದ ರೈತರು ಹಾಗೂ ಕೃಷಿ ಕಾರ್ಮಿಕರ ಪ್ರತಿ ಅರ್ಹ ಕುಟುಂಬಗಳೀಗೆ 1 ಲಕ್ಷ ರೂ.ಸಹಾಯಧನವನ್ನು ಈ ಯೋಜನೆಯಡಿ ನೀಡಲಾಗುವುದು.
2. ಬೆಂಕಿ ಆಕಸ್ಮಿಕಗಳಿಂದ ಹುಲ್ಲು ಮೆದೆ/ಬಣವೆಗಳು ನಷ್ಟವಾದ ಪ್ರಕರಣಗಳಲ್ಲಿ ರೂ.10,000ಗಳ ಈ ಯೋಜನೆಯಡಿ ಪರಿಹಾರ ನೀಡಲಾಗುವುದು.
ಯಾರನ್ನು ಸಂಪರ್ಕಿಸಬೇಕು?
ಸ್ಥಳೀಯ ಮಟ್ಟದಲ್ಲಿ ಜಂಟಿ ನಿರ್ದೇಶಕರ ಕಚೇರಿ, ಕೃಷಿ ಇಲಾಖೆ,
ದೊರವಣಿ ಸಂಖ್ಯೆ:
ಬಾಗಲಕೋಟೆ-08354 236378, ಬೆಂಗಳೂರು ಗ್ರಾಮಾಂತರ-08026715718, ಬೆಂಗಳೂರು ನಗರ- 080 26711186, ಬೆಳಗಾಂ-0831 2407232, ಬೆಳ್ಳಾರಿ-08392 276224, ಬೀದರ್-08482 233138, ಬಿಜಾಪುರ-08352 221599, ಚಾಮರಾಜನಗರ -08226 222432, ಚಿಕ್ಕಮಂಗಳೂರು-08262 221436, ಚಿಕ್ಕಬಳ್ಳಾಪುರ-08156 263136, ಚಿತ್ರದುರ್ಗ-08194 222406, ದಕ್ಷಿಣ ಕನ್ನಡ-0824 2423604, ದಾವಣಗೆರೆ-08192 230311, ಧಾರವಾಡ-0836 2436518, ಗದಗ-08372 235443, ಗುಲ್ಬರ್ಗ-08472 220270, ಹಾಸನ-08172 267158, ಹಾವೇರಿ-08375 249020, ಕೊಡಗು-08272 225732, ಕೋಲಾರ-08152 222246, ಕೊಪ್ಪಳ-08539 221633, ಮಂಡ್ಯ-08232 225073, ಮೈಸೂರು-0821 2442239, ರಾಯಚೂರು-08532 226013, ರಾಮನಗರ-0807276780, ಶಿವಮೊಗ್ಗ-08182 222635, ತುಮಕೂರು-0816 2278474, ಉಡುಪಿ-0820 2528374, ಉತ್ತರ ಕನ್ನಡ-08382 227377, ಯಾದಗಿರಿ-08473 296748.
ಹೆಚ್ಚಿನ ಮಾಹಿತಿಗೆ :
ಕೃಷಿ ಇಲಾಖೆ, ಕೃಷಿ ಆಯುಕ್ತರ ಕಚೇರಿ, ಶೇಷಾದ್ರಿ ರಸ್ತೆ,
ಬೆಂಗಳೂರು-1. ದೂರವಾಣಿ ಸಂಖ್ಯೆ: 22242746/2212804,
ವೆಬ್ಸೈಟ್ – http://raitamitra.kar.nic.in/