KBOCWWB

KBOCWWB Karnataka Building And Other Construction Workers Welfare Board

ಮಾನ್ಯ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವರು ಹಾಗೂ ಮಂಡಳಿಯ ಅಧ್ಯಕ್ಷರಾದ ಶ್ರೀ Santosh Lad ಅವರು ವಿಕಾಸ ಸೌಧದಲ್ಲಿ ಕಾರ್ಮಿಕ ಇಲಾಖೆಯ ಸಭೆ ನಡೆ...
04/09/2026

ಮಾನ್ಯ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವರು ಹಾಗೂ ಮಂಡಳಿಯ ಅಧ್ಯಕ್ಷರಾದ ಶ್ರೀ Santosh Lad ಅವರು ವಿಕಾಸ ಸೌಧದಲ್ಲಿ ಕಾರ್ಮಿಕ ಇಲಾಖೆಯ ಸಭೆ ನಡೆಸಿದರು.

ಕಾರ್ಮಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಶ್ರೀಮತಿ ಸಲ್ಮಾ ಕೆ. ಫಹೀಮ್ ಐಎಎಸ್‌, ಕಾರ್ಮಿಕ ಆಯುಕ್ತರಾದ ಶ್ರೀಮತಿ ರಾಗಪ್ರಿಯ, ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ರವಿ ಡಿ. ಚನ್ನಣ್ಣವರ್ ಭಾ.ಪೊ.ಸೇ, ಆರ್ಥಿಕ ಇಲಾಖೆಯ(ವೆಚ್ಚ) ಕಾರ್ಯದರ್ಶಿಗಳಾದ ಶ್ರೀ ಅಭಿರಾಂ, ಅಪರ ಕಾರ್ಮಿಕ ಆಯುಕ್ತರಾದ ಡಾ. ಮಂಜುನಾಥ್, ಕಾರ್ಖಾನೆಗಳು ಮತ್ತು ಬಾಯ್ಲರುಗಳ ಇಲಾಖೆಯ ನಿರ್ದೇಶಕರಾದ ಶ್ರೀ ನಂಜಪ್ಪನವರು, ಜಂಟಿ ಕಾರ್ಮಿಕ ಆಯುಕ್ತರಾದ ಶ್ರೀ ರವಿಕುಮಾರ್, ಕಾರ್ಮಿಕ ಕಲ್ಯಾಣ ಆಯುಕ್ತರಾದ ಶ್ರೀ ಆಂಜನೇಯ, ಜಂಟಿ ಕಾರ್ಮಿಕ ಆಯುಕ್ತರಾದ ಶ್ರೀ ಚಿದಾನಂದ, ಜಂಟಿ ಕಾರ್ಮಿಕ ಆಯುಕ್ತರು ಹಾಗೂ ಜಂಟಿ ಕಾರ್ಯದರ್ಶಿ ಗಳಾದ ಶ್ರೀ ಎ.ಎಚ್‌. ಉಮೇಶ, ಉಪ ಕಾರ್ಮಿಕ ಆಯುಕ್ತರಾದ ಶ್ರೀ ಗುರುಪ್ರಸಾದ್, ಉಪ ಕಾರ್ಮಿಕ ಆಯುಕ್ತರಾದ ಶ್ರೀ ತಮ್ಮಣ್ಣ ಹಾಗೂ ಇಲಾಖೆಯ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

#ಕಾರ್ಮಿಕ_ಇಲಾಖೆ

ಮಾನ್ಯ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವರು ಹಾಗೂ ಮಂಡಳಿಯ ಅಧ್ಯಕ್ಷರಾದ ಶ್ರೀ Santosh Lad ಅವರು ವಿಕಾಸ ಸೌಧದಲ್ಲಿ ಕಾರ್ಮಿಕ ಇಲಾಖೆಯ ಪ್ರಗತಿ ...
28/08/2026

ಮಾನ್ಯ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವರು ಹಾಗೂ ಮಂಡಳಿಯ ಅಧ್ಯಕ್ಷರಾದ ಶ್ರೀ Santosh Lad ಅವರು ವಿಕಾಸ ಸೌಧದಲ್ಲಿ ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಕಾರ್ಮಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಶ್ರೀಮತಿ ಸಲ್ಮಾ ಫಾಹಿಮ್ ಐಎಎಸ್‌, ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ರವಿ ಡಿ ಚನ್ನಣ್ಣವರ್ ಭಾ.ಪೊ.ಸೇ, ಕಾರ್ಮಿಕ ಆಯುಕ್ತರಾದ ಶ್ರೀಮತಿ ರಾಗಪ್ರಿಯ, ಇಎಸ್ಐ ಆಯುಕ್ತರಾದ ಶ್ರೀ ದಿನೇಶ್ ಕುಮಾರ್, ಅಪರ ಕಾರ್ಮಿಕ ಆಯುಕ್ತರಾದ ಡಾ.ಮಂಜುನಾಥ್, ಜಂಟಿ ಕಾರ್ಮಿಕ ಆಯುಕ್ತರಾದ ಶ್ರೀ ರವಿಕುಮಾರ್, ಜಂಟಿ ಕಾರ್ಮಿಕ ಆಯುಕ್ತರು ಹಾಗೂ ಜಂಟಿ ಕಾರ್ಯದರ್ಶಿ ಗಳಾದ ಶ್ರೀ ಉಮೇಶ್, ಉಪ ಕಾರ್ಮಿಕ ಆಯುಕ್ತರಾದ ಶ್ರೀ ಗುರುಪ್ರಸಾದ್, ಕಾರ್ಮಿಕ ಕಲ್ಯಾಣ ಆಯುಕ್ತರಾದ ಶ್ರೀ ಆಂಜನೇಯ, ಕಾರ್ಖಾನೆಗಳು ಮತ್ತು ಬಾಯ್ಲರುಗಳ ಇಲಾಖೆಯ ನಿರ್ದೇಶಕರಾದ ಶ್ರೀ ನಂಜಪ್ಪನವರು ಹಾಗೂ ಇಲಾಖೆಯ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.

#ಕಾರ್ಮಿಕ_ಇಲಾಖೆ

ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಾಗಿ ಮಂಡಳಿಯಲ್ಲಿ ನೋಂದಣಿಯಾಗಲು ಅಗತ್ಯ ದಾಖಲೆಗಳನ್ನು ಹೊಂದಿರುವುದು ಅತೀ ಅವಶ್ಯ. ನಕಲಿ ದಾಖಲೆಗಳನ್ನು ಮಂಡ...
19/08/2026

ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಾಗಿ ಮಂಡಳಿಯಲ್ಲಿ ನೋಂದಣಿಯಾಗಲು ಅಗತ್ಯ ದಾಖಲೆಗಳನ್ನು ಹೊಂದಿರುವುದು ಅತೀ ಅವಶ್ಯ. ನಕಲಿ ದಾಖಲೆಗಳನ್ನು ಮಂಡಳಿಗೆ ಸಲ್ಲಿಸಿ ನೋಂದಾಯಿಸಿಕೊಂಡು ಸೌಲಭ್ಯ ಪಡೆಯುವುದು ಶಿಕ್ಷಾರ್ಹ ಅಪರಾಧ.

#ಶ್ರಮೇವ_ಕರ್ನಾಟಕ
#ಕಾರ್ಮಿಕ_ಇಲಾಖೆ

ನೋಂದಾಯಿತ ಫಲಾನುಭವಿಯು ಕಟ್ಟಡ ಕಾಮಗಾರಿಗಳಲ್ಲಿ ಕೆಲಸ ಮಾಡುವಾಗ ಉಂಟಾದ ಅಪಘಾತದಿಂದ ಅಥವಾ ನಿರ್ದಿಷ್ಟವಾದ ಖಾಯಿಲೆಗಳಿಂದ ಶಾಶ್ವತ/ ಭಾಗಶಃ ಅಂಗವಿಕಲ...
18/08/2026

ನೋಂದಾಯಿತ ಫಲಾನುಭವಿಯು ಕಟ್ಟಡ ಕಾಮಗಾರಿಗಳಲ್ಲಿ ಕೆಲಸ ಮಾಡುವಾಗ ಉಂಟಾದ ಅಪಘಾತದಿಂದ ಅಥವಾ ನಿರ್ದಿಷ್ಟವಾದ ಖಾಯಿಲೆಗಳಿಂದ ಶಾಶ್ವತ/ ಭಾಗಶಃ ಅಂಗವಿಕಲತೆ ಉಂಟಾದರೆ ಮಂಡಳಿಯ ವತಿಯಿಂದ ದುರ್ಬಲತೆ ಪಿಂಚಣಿ ನೀಡಲಾಗುವುದು. ಈ ಸೌಲಭ್ಯವನ್ನು ಪಡೆಯಲು ಕೆಲವು ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

#ಶ್ರಮೇವ_ಕರ್ನಾಟಕ
#ಕಾರ್ಮಿಕ_ಇಲಾಖೆ

ಕಾರ್ಮಿಕರು ಕೆಲಸದ ಕಡೆಗೆ ಗಮನ ಹರಿಸುವ ಜೊತೆಗೆ ಸುರಕ್ಷತೆಯ ಕಡೆಗೂ ಗಮನ ನೀಡಬೇಕು. ಸಣ್ಣ ನಿರ್ಲಕ್ಷ್ಯವು ದೊಡ್ಡ ಅಪಾಯವನ್ನು ತಂದೊಡ್ಡಬಹುದು. ಸುರ...
18/08/2026

ಕಾರ್ಮಿಕರು ಕೆಲಸದ ಕಡೆಗೆ ಗಮನ ಹರಿಸುವ ಜೊತೆಗೆ ಸುರಕ್ಷತೆಯ ಕಡೆಗೂ ಗಮನ ನೀಡಬೇಕು. ಸಣ್ಣ ನಿರ್ಲಕ್ಷ್ಯವು ದೊಡ್ಡ ಅಪಾಯವನ್ನು ತಂದೊಡ್ಡಬಹುದು. ಸುರಕ್ಷತಾ ಪರಿಕರಗಳನ್ನು ಧರಿಸಿದರೆ ಸಾಲದು ಪ್ರತಿಕ್ಷಣ ಜಾಗ್ರತೆ ವಹಿಸುವುದು ಅತೀ ಅವಶ್ಯ. ಕೆಲಸದ ಸ್ಥಳಗಳಲ್ಲಿ ಉತ್ತಮ ಸಂವಹನ, ಮಾರ್ಗದರ್ಶನಕ್ಕೆ ಆದ್ಯತೆ ನೀಡಿ.

#ಶ್ರಮೇವ_ಕರ್ನಾಟಕ
#ಕಾರ್ಮಿಕ_ಇಲಾಖೆ

ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡುವಾಗ ಅಡಿಪಾಯಗಳಿಗೆ ಮಣ್ಣು ತುಂಬುವಾಗ ಅಗತ್ಯ ಎಚ್ಚರಿಕೆ ವಹಿಸಬೇಕು. ಮಣ್ಣನ್ನು ಬೃಹತ್‌ ವಾಹನಗಳಿಂದ ತಂದು ಸುರಿಯ...
18/08/2026

ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡುವಾಗ ಅಡಿಪಾಯಗಳಿಗೆ ಮಣ್ಣು ತುಂಬುವಾಗ ಅಗತ್ಯ ಎಚ್ಚರಿಕೆ ವಹಿಸಬೇಕು. ಮಣ್ಣನ್ನು ಬೃಹತ್‌ ವಾಹನಗಳಿಂದ ತಂದು ಸುರಿಯುವಾಗ, ಮಣ್ಣನ್ನು ಹರಡುವಾಗ ಜಾಗ್ರತೆ ವಹಿಸಿ. ಇಳಿಜಾರು ಮತ್ತು ನೀರು ತುಂಬಿದ ಜಾಗಗಳಲ್ಲಿ ವಾಹನಗಳಿಂದ ಸುರಕ್ಷಿತ ಅಂತರ ಕಾಪಾಡಿ. ಕಾರ್ಮಿಕರು ಮಣ್ಣು ತುಂಬುವ ಜಾಗಕ್ಕೆ ಬಾರದಂತೆ ನೋಡಿಕೊಳ್ಳಿ.

#ಶ್ರಮೇವ_ಕರ್ನಾಟಕ
#ಕಾರ್ಮಿಕ_ಇಲಾಖೆ

ನಿರ್ಮಾಣ ಉದ್ದೇಶಗಳಿಗಾಗಿ ಭೂಮಿಯನ್ನು ಸಮತಟ್ಟು ಮಾಡುವಾಗ ಸಾಮಾನ್ಯವಾಗಿ ಬೃಹತ್‌ ಯಂತ್ರಗಳನ್ನೇ ಉಪಯೋಗಿಸಲಾಗುತ್ತದೆ. ಅರ್ಥ್‌ ಮೂವರ್ಸ್‌, ರೋಡ್‌ ...
18/08/2026

ನಿರ್ಮಾಣ ಉದ್ದೇಶಗಳಿಗಾಗಿ ಭೂಮಿಯನ್ನು ಸಮತಟ್ಟು ಮಾಡುವಾಗ ಸಾಮಾನ್ಯವಾಗಿ ಬೃಹತ್‌ ಯಂತ್ರಗಳನ್ನೇ ಉಪಯೋಗಿಸಲಾಗುತ್ತದೆ. ಅರ್ಥ್‌ ಮೂವರ್ಸ್‌, ರೋಡ್‌ ರೋಲರ್‌ಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು. ಕೆಲಸ ಮಾಡುವ ಜಾಗದ ಬಗ್ಗೆ, ಮಣ್ಣಿನ ಗುಣಮಟ್ಟದ ಬಗ್ಗೆಯೂ ಗಮನವಿಡಿ. ಚಾಲಕರೊಂದಿಗೆ ಸರಿಯಾದ ಸಂವಹನ ಇರಲಿ.

#ಶ್ರಮೇವ_ಕರ್ನಾಟಕ
#ಕಾರ್ಮಿಕ_ಇಲಾಖೆ

ನೋಂದಾಯಿತ ಮಹಿಳಾ ಫಲಾನುಭವಿಯ ಮೊದಲ ಎರಡು ಹೆರಿಗೆಗೆ ಸಹಾಯಧನವನ್ನು ಮಂಡಳಿಯ ವತಿಯಿಂದ ನೀಡಲಾಗುತ್ತದೆ. ಅರ್ಜಿಯೊಂದಿಗೆ ಪೂರಕ ದಾಖಲಾತಿಗಳನ್ನು ಸಲ್...
18/08/2026

ನೋಂದಾಯಿತ ಮಹಿಳಾ ಫಲಾನುಭವಿಯ ಮೊದಲ ಎರಡು ಹೆರಿಗೆಗೆ ಸಹಾಯಧನವನ್ನು ಮಂಡಳಿಯ ವತಿಯಿಂದ ನೀಡಲಾಗುತ್ತದೆ. ಅರ್ಜಿಯೊಂದಿಗೆ ಪೂರಕ ದಾಖಲಾತಿಗಳನ್ನು ಸಲ್ಲಿಸಿ ಸೌಲಭ್ಯ ಪಡೆಯಬಹುದು.

#ಕಾರ್ಮಿಕ_ಇಲಾಖೆ

ನಿರ್ಮಾಣ ಉದ್ದೇಶಗಳಿಗಾಗಿ ಭೂಮಿಯನ್ನು ಸಮತಟ್ಟು ಮಾಡುವಾಗ ಸಾಮಾನ್ಯವಾಗಿ ಬೃಹತ್‌ ಯಂತ್ರಗಳನ್ನೇ ಉಪಯೋಗಿಸಲಾಗುತ್ತದೆ. ಅರ್ಥ್‌ ಮೂವರ್ಸ್‌, ರೋಡ್‌ ...
18/08/2026

ನಿರ್ಮಾಣ ಉದ್ದೇಶಗಳಿಗಾಗಿ ಭೂಮಿಯನ್ನು ಸಮತಟ್ಟು ಮಾಡುವಾಗ ಸಾಮಾನ್ಯವಾಗಿ ಬೃಹತ್‌ ಯಂತ್ರಗಳನ್ನೇ ಉಪಯೋಗಿಸಲಾಗುತ್ತದೆ. ಅರ್ಥ್‌ ಮೂವರ್ಸ್‌, ರೋಡ್‌ ರೋಲರ್‌ಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು. ಕೆಲಸ ಮಾಡುವ ಜಾಗದ ಬಗ್ಗೆ, ಮಣ್ಣಿನ ಗುಣಮಟ್ಟದ ಬಗ್ಗೆಯೂ ಗಮನವಿಡಿ. ಚಾಲಕರೊಂದಿಗೆ ಸರಿಯಾದ ಸಂವಹನ ಇರಲಿ.

#ಕಾರ್ಮಿಕ_ಇಲಾಖೆ

80 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಂಡಳಿಯ ಕೇಂದ್ರ ಕಚೇರಿ ಆವರಣದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ಮಾನ್ಯ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧ...
15/08/2026

80 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಂಡಳಿಯ ಕೇಂದ್ರ ಕಚೇರಿ ಆವರಣದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ಮಾನ್ಯ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳಾದ ಶ್ರೀ. ರವಿ ಡಿ. ಚನ್ನಣ್ಣವರ್ ಭಾ. ಪೊ.ಸೇ ರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಂಡಳಿಯ ಜಂಟಿ ಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Address

Kalyana Suraksha Bhavan, Dairy Circle
Bangalore
560029

Opening Hours

Monday 10am - 5:30pm
Tuesday 10am - 5:30pm
Wednesday 10am - 5:30pm
Thursday 10am - 5:30pm
Friday 10am - 5:30pm
Saturday 10am - 5:30pm

Alerts

Be the first to know and let us send you an email when KBOCWWB posts news and promotions. Your email address will not be used for any other purpose, and you can unsubscribe at any time.

Contact The Organization

Send a message to KBOCWWB:

Shortcuts

Share