07/10/2025
💥ಭಾರತ ಸಂವಿಧಾನದ ಮೇಲೆ ಮನುವಾದದ ಭಯೋತ್ಪಾದನೆಯ ದಾಳಿ💥
🔵ನೆನ್ನೆ ನಡೆದ ಘಟನೆಯಿಂದ ದೇಶದ ನ್ಯಾಯ ಮಂದಿರವೇ ನಡುಗಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ನಡೆದ ಶೂ ದಾಳಿ ದೇಶದ ಪ್ರಜಾತಂತ್ರದ ಇತಿಹಾಸದ ಪುಟದಲ್ಲಿ ಕಪ್ಪು ಅಧ್ಯಾಯವಾಗಿ ಉಳಿಯಲಿದೆ.
ಇದು ಕೇವಲ ನ್ಯಾಯಾಧೀಶರ ಮೇಲಿನ ಕೃತ್ಯವಲ್ಲ.
ಇದು ನ್ಯಾಯದ ತತ್ವದ ಮೇಲೆನ ದಾಳಿ, ಸಂವಿಧಾನದ ಮೌಲ್ಯಗಳ ಮೇಲೆನ ದಾಳಿ, ಅಂಬೇಡ್ಕರ್ ಕನಸಿನ ಭಾರತದ ಮೇಲೆನ ದಾಳಿ.
🔴ಮನುವಾದಿ ಚಿಂತನೆ ಎಷ್ಟು ಅಪಾಯಕಾರಿ ಎಂಬುದು ಇಂದಿನ ಘಟನೆ ಮತ್ತೆ ಸಾಬೀತಾಗಿದೆ.
ಸಮಾನತೆ, ನ್ಯಾಯ ಮತ್ತು ಮಾನವೀಯತೆ ಇವರಿಗೆ ಕಂಟಕ.
ಅವರ ಕನಸು — ಮನುಸ್ಮೃತಿಯ ಆಧಾರದ ಆಡಳಿತ,
ಅಲ್ಲಿ ಶೋಷಿತರು ಶೋಷಿತರಾಗಿಯೇ ಉಳಿಯಬೇಕು.
🔻ಆದರೆ ಮನುವಾದಿಗಳಿಗೆ ತಿಳಿದಿರಲಿ ಈ ದೇಶ ಬಾಬಾ ಸಾಹೇಬ್ರೆ ಕನಸಿನ ಭಾರತ, ಮೂಲ ನಿವಾಸಿಗಳ ಭಾರತ, ತಳ ಸಮುದಾಯಗಳ ಭಾರತ, ಮೂಲ ದ್ರಾವಿಡರ ಭಾರತ,
💥ಮೂಲ ನಿವಾಸಗಳ ಕಾಡುತಿರುವ ಪ್ರಶ್ನೆ ಏನೆಂದರೆ
• ನ್ಯಾಯಮೂರ್ತಿಗಳ ಮೇಲೆ ಶೂ ಎಸೆದವರ ಧೈರ್ಯಕ್ಕೆ ಬಲ ನೀಡಿದವರು ಯಾರು?
• ಈ ಅಸಹಿಷ್ಣು ಮನೋಭಾವಕ್ಕೆ ರಾಜಕೀಯ ಆಶ್ರಯ ನೀಡುತ್ತಿರುವವರು ಯಾರು?
•ಕೇಂದ್ರ ಸರ್ಕಾರವು ಮೌನವಾಗಿರುವುದು ಏಕೆ?
ನಮ್ಮ ಈ ಎಲ್ಲಾ ಪ್ರಶ್ನೆಗಳಿಗೆ ದೇಶದ ಪ್ರಧಾನಿಗಳಾದ ನರೇಂದ್ರ ಮೋದಿಜೀ ಈ ಘಟನೆಯ ಕುರಿತು ಉತ್ತರ ಕೊಡಬೇಕು!
🇮🇳ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನದ ರಕ್ಷಣೆಯೆಂಬ ಪವಿತ್ರ ಕರ್ತವ್ಯ ಹೊಂದಿದ್ದಾರೆ.
ಹಾಗಾದರೆ —
"ನ್ಯಾಯಾಂಗದ ಮೇಲೆ ದಾಳಿ ನಡೆದಾಗ ಅವರು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಅಥವ ವಿಡಿಯೋ ಮಾಡುವ ಮೂಲಕ ಕಂಡಿಸುತವೇ ಎಂದರೆ ಸಾಲದು. ಅವರ ಇಂತಹ ಹೇಳಿಕೆಗಳು ಗಾಳಿಯಲ್ಲಿ ತೆಲಿಸುವ ನುಡಿಗಳು ಅಷ್ಟೆ. ಈ ಹೇಳಿಕೆಗಳು ಇನ್ನು ಹೆಚ್ಚು ಹೆಚ್ಚು ಮನುವಾದಿಗಳಿಗೆ ಪ್ರೋತ್ಸಾಹವಾಗುತ್ತಿದೆ.
ಪ್ರಧಾನಿಯವರ ಸಂದೇಶಗಳು ಕೇವಲ ಸಂದೇಶವಾಗಿ ಉಳಿದು ಬಿಟ್ಟಿದೆ.
ಅವರು ಯಾವ ಬದಿಯಲ್ಲಿದ್ದಾರೆ ಎನ್ನುವುದನ್ನು ದೇಶದ ಜನತೆ ಈಗ ತಿಳಿಯಬೇಕಿದೆ".
⚖️ನ್ಯಾಯವನ್ನು ನಂದಿಸಲು ಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ನಾವು ಅಂದರೆ ಮೂಲ ನಿವಾಸಿಗಳು ಮತ್ತು ನಮ್ಮ ಸರ್ಕಾರ ಎದ್ದೆ ತಟ್ಟಿ ನಿಲ್ಲುತೇವೆ.
📜 ಅಂಬೇಡ್ಕರ್ರವರು ಬರೆದ ಸಂವಿಧಾನ ನಮ್ಮ ಈ ದೇಶದ ಆತ್ಮ — ಅದನ್ನು ನಾಶಮಾಡಲು ಯಾರಿಗೂ ಎಂದಿಗು ಸಾಧ್ಯವಿಲ್ಲ.
🔶ಬಾಬಾಸಾಹೇಬರು ಹೇಳುತ್ತಾರೆ
“ಹೆಚ್ಚು ಶಿಕ್ಷಣ ಪಡೆಯಿರಿ, ಸಂಘಟಿತರಾಗಿರಿ, ಹೋರಾಡಿ.”
ಈ ಮಾತುಗಳ ಅರ್ಥ ಇಂದು ಇನ್ನಷ್ಟು ಪ್ರಸ್ತುತವಾಗಿದೆ.
ಮನುವಾದಿಗಳು ಅಸಹನೆ, ದ್ವೇಷ ಮತ್ತು ವರ್ಗಭೇದದ ಮೂಲಕ ಸಮಾಜವನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ;
ಆದರೆ ಸಂವಿಧಾನವು ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಬಾಂಧವ್ಯ ಎಂಬ ಮೌಲ್ಯಗಳೆ ನಮಗೆ ಸ್ಫೂರ್ತಿ".
ಸಂವಿಧಾನವನ್ನು ನಾಶಮಾಡಲು ಯತ್ನಿಸುವ ಪ್ರತಿಯೊಬ್ಬರೂ ಈ ದೇಶದ ಪ್ರಜಾಪ್ರಭುತ್ವದ ಶತ್ರುಗಳು.
ನ್ಯಾಯಮೂರ್ತಿಯ ಮೇಲೆ ನಡೆದ ಈ ದಾಳಿ, ನ್ಯಾಯಾಂಗದ ಮೇಲೆ ದಾಳಿ ಅಲ್ಲ — ಇದು ಸಂವಿಧಾನದ ಕಮಾನದ ಮೇಲೆ ಕಲ್ಲು ಎಸೆಯುವ ಕೃತ್ಯ.
ನಾವು ಮೌನವಾಗಿದ್ದರೆ ನಾಳೆ ಈ ಶೂಗಳು ಸಂವಿಧಾನದ ಪ್ರತಿಯೊಂದು ವಿಧಾನದ ಮೇಲೆ ಎಸೆಯಲ್ಪಡುತ್ತವೆ.
ಆದ್ದರಿಂದ
⚖️ ನಾವು ಸಂವಿಧಾನದ ಪರ ನಿಲ್ಲಬೇಕು.
🗣️ ಮನುವಾದದ ಕತ್ತಲೆಯ ವಿರುದ್ಧ ಧ್ವನಿ ಎತ್ತಬೇಕು.
ನ್ಯಾಯ, ಸಮಾನತೆ ಮತ್ತು ಪ್ರಜಾತಂತ್ರದ ಮೌಲ್ಯಗಳನ್ನು ಕಾಪಾಡಬೇಕು.
ಇಂತಿ:-
ಮಧುಸೂದನ್ B K
ಕರ್ನಾಟಕ ಪ್ರಾದೇಶ ಕಾಂಗ್ರೆಸ್ ಕಮಿಟಿ ಪದವೀಧರರ
ವಿಭಾಗದ ರಾಜ್ಯ ಪ್ರದಾನ ಕಾರ್ಯದರ್ಶಿ ಹಾಗು ಸಾಮಾಜಿಕ ಜಾಲತಾಣ ಉಸ್ತುವಾರಿಗಳು
ಜೈ ಭೀಮ್ ✊, ಜೈ ಸಂವಿಧಾನ್✊