ಕಾರ್ಮಿಕರ ಕ್ರಾಂತಿ

ಕಾರ್ಮಿಕರ ಕ್ರಾಂತಿ ನೈಜ್ಯ ಸುದ್ದಿ ಕಾರ್ಮಿಕರ ಕ್ರಾಂತಿ ನ್ಯೂಸ್

ನಾಪತ್ತೆಯಾದ ಮಗಳಿಗಾಗಿ ಹುಡುಕಾಟ... ಅಂತಿಮವಾಗಿ ಬಾವಿಯಲ್ಲಿ ಸಿಕ್ಕಿತು ಮೃತದೇಹ!ಭಟ್ಕಳದಲ್ಲಿ ಹೃದಯವಿದ್ರಾವಕ ಘಟನೆ!ನಾಪತ್ತೆಯಾಗಿದ್ದ 19 ವರ್ಷದ ...
13/06/2026

ನಾಪತ್ತೆಯಾದ ಮಗಳಿಗಾಗಿ ಹುಡುಕಾಟ... ಅಂತಿಮವಾಗಿ ಬಾವಿಯಲ್ಲಿ ಸಿಕ್ಕಿತು ಮೃತದೇಹ!

ಭಟ್ಕಳದಲ್ಲಿ ಹೃದಯವಿದ್ರಾವಕ ಘಟನೆ!

ನಾಪತ್ತೆಯಾಗಿದ್ದ 19 ವರ್ಷದ ಬಿಸಿಎ ವಿದ್ಯಾರ್ಥಿನಿ ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಲ್ಕೆ ಪ್ರದೇಶದಲ್ಲಿ ನಡೆದಿದೆ.

ಗಾಯತ್ರಿ ನಾಗರಾಜ್ ನಾಯಕ್ ಎಂಬ ವಿದ್ಯಾರ್ಥಿನಿ ಗುರುವಾರ ನಿಗೂಢವಾಗಿ ಕಾಣೆಯಾಗಿದ್ದಳು. ಕುಟುಂಬಸ್ಥರು ಹಾಗೂ ಸ್ಥಳೀಯರು ಸಾಕಷ್ಟು ಹುಡುಕಾಟ ನಡೆಸಿದರೂ ಆಕೆಯ ಸುಳಿವು ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಭಟ್ಕಳ ಉಪನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಆದರೆ ಶುಕ್ರವಾರ ಮಧ್ಯಾಹ್ನ ವಿದ್ಯಾರ್ಥಿನಿಯ ಮನೆಯ ಸಮೀಪದ ಬಾವಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ.

ಸ್ಥಳೀಯ ಕಾಲೇಜಿನಲ್ಲಿ ಬಿಸಿಎ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದ ಗಾಯತ್ರಿ ಚುರುಕು ಮತ್ತು ಪ್ರತಿಭಾವಂತೆಯಾಗಿದ್ದಳು ಎನ್ನಲಾಗಿದೆ. ಆಕೆಯ ಅಕಾಲಿಕ ನಿಧನದಿಂದ ಕುಟುಂಬಸ್ಥರು, ಸ್ನೇಹಿತರು ಹಾಗೂ ಇಡೀ ಪ್ರದೇಶ ಶೋಕ ಸಾಗರದಲ್ಲಿ ಮುಳುಗಿದೆ.

ಪ್ರಾಥಮಿಕವಾಗಿ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದ್ದರೂ, ಸಾವಿನ ಹಿಂದಿನ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಳಿಕವೇ ಘಟನೆಯ ಸಂಪೂರ್ಣ ಸತ್ಯ ಹೊರಬರಲಿದೆ.

ಈ ಕುರಿತು ಭಟ್ಕಳ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

11 ಲಕ್ಷದ ಶ್ರೀಗಂಧ ಸೀಜ್, ಇಬ್ಬರು ತಸ್ಕರರು ಲಾಕ್ರಿಯಲ್ ಲೈಫ್ ‘ಪುಷ್ಪ’ ಆಟಕ್ಕೆ ನಂದಿನಿ ಲೇಔಟ್ ಪೊಲೀಸರ ಬ್ರೇಕ್: 11 ಲಕ್ಷದ ಶ್ರೀಗಂಧ ಸೀಜ್, ಇ...
13/06/2026

11 ಲಕ್ಷದ ಶ್ರೀಗಂಧ ಸೀಜ್, ಇಬ್ಬರು ತಸ್ಕರರು ಲಾಕ್

ರಿಯಲ್ ಲೈಫ್ ‘ಪುಷ್ಪ’ ಆಟಕ್ಕೆ ನಂದಿನಿ ಲೇಔಟ್ ಪೊಲೀಸರ ಬ್ರೇಕ್: 11 ಲಕ್ಷದ ಶ್ರೀಗಂಧ ಸೀಜ್, ಇಬ್ಬರು ತಸ್ಕರರು ಲಾಕ್!
​ಬೆಂಗಳೂರು: "ಶ್ರೀಗಂಧ ಅಂದ್ರೆ ಫ್ಲವರ್ ಅನ್ಕೊಂಡ್ರಾ... ಫೈಯರ್!" ಅಂತ ಸಿನಿಮಾ ಸ್ಟೈಲಲ್ಲಿ ಕೋಟಿ ಕೋಟಿ ಲೂಟಿ ಮಾಡೋಕೆ ಹೊರಟಿದ್ದ ಇಬ್ಬರು ಕಿಲಾಡಿಗಳ ಸಿನೆಮಾ ಸ್ಟೈಲ್ ಆಟಕ್ಕೆ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸರು ಖಡಕ್ ಕ್ಲೈಮ್ಯಾಕ್ಸ್ ಇಟ್ಟಿದ್ದಾರೆ!
​ನೆಲ್ಲೂರಿನಿಂದ ಬೆಂಗಳೂರಿಗೆ ಬಂದಿದ್ದ ಬರೋಬ್ಬರಿ 11 ಲಕ್ಷ ರೂಪಾಯಿ ಮೌಲ್ಯದ ಶ್ರೀಗಂಧದ ತುಂಡುಗಳನ್ನು ಜಪ್ತಿ ಮಾಡಿರುವ ಪೊಲೀಸರು, ತಾವೂ ಯಾರಿಗೇನು ಕಮ್ಮಿಯಿಲ್ಲ ಅನ್ನೋದನ್ನು ಸಾಬೀತು ಮಾಡಿದ್ದಾರೆ.
​🎬 ನೆಲ್ಲೂರಿನಿಂದ ಲಗ್ಗೆರೆಗೆ ಸ್ಕೆಚ್.. ಕಾರಿನಲ್ಲಿತ್ತು ‘ಕೆಂಪು ಚಿನ್ನ’! 🚗💨
​ತುಮಕೂರು ಮೂಲದ ನವೀನ್ ಮತ್ತು ಮಧುಮಿತಾ ಎಂಬಿಬ್ಬರು ರಾತ್ರೋರಾತ್ರಿ ಶ್ರೀಮಂತರಾಗಲು ಮಾಸ್ಟರ್ ಪ್ಲಾನ್ ಮಾಡಿದ್ದರು. ಆಂಧ್ರಪ್ರದೇಶದ ನೆಲ್ಲೂರಿನಿಂದ ಯಾರಿಗೂ ಅನುಮಾನ ಬಾರದಂತೆ ಕಾರಿನಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ಲೋಡ್ ಮಾಡಿಕೊಂಡು ಸಿಲಿಕಾನ್ ಸಿಟಿಗೆ ಎಂಟ್ರಿ ಕೊಟ್ಟಿದ್ದರು. ಬೆಂಗಳೂರಿನ ಲಗ್ಗೆರೆ ಪ್ರದೇಶದಲ್ಲಿ ಈ ಮಾಲನ್ನು ಯಾರಿಗೋ ಮಾರಾಟ ಮಾಡಿ, ಜೇಬು ತುಂಬಿಸಿಕೊಳ್ಳಲು ಕಾರನ್ನು ಸೈಡಿಗೆ ಹಾಕಿ ಕಾಯುತ್ತಿದ್ದರು.
​ಆದರೆ, ಇವರ ಬ್ಯಾಡ್ ಟೈಮ್... ಇವರು ಅಂದುಕೊಂಡಿದ್ದು ಒಂದು, ಆಗಿದ್ದೇ ಮತ್ತೊಂದು!
​⚡ ಪೊಲೀಸರ ಎಂಟ್ರಿ.. ಪುಷ್ಪರಾಜ್ ಸ್ಟೈಲ್ ಧೂಳೀಪಟ! 🚔
​ಕಾರಿನಲ್ಲಿ ಏನೋ ನಡೀತಿದೆ ಅನ್ನೋ ಖಚಿತ ಮಾಹಿತಿ ನಂದಿನಿ ಲೇಔಟ್ ಪೊಲೀಸರ ಖದರ್ ಆಫೀಸರ್‌ಗಳಿಗೆ ಸಿಕ್ಕಿದ್ದೇ ತಡ, ಸ್ಪಾಟ್‌ಗೆ ಸಿಂಗಂ ತರಹ ಎಂಟ್ರಿ ಕೊಟ್ಟಿದ್ದಾರೆ. ಪೊಲೀಸರನ್ನು ನೋಡಿ ಆರೋಪಿಗಳು ಎಸ್ಕೇಪ್ ಆಗಲು ಟ್ರೈ ಮಾಡುವಷ್ಟರಲ್ಲಿ ಖೆಡ್ಡಾಕ್ಕೆ ಬಿದ್ದಿದ್ದಾರೆ.
​ಕಾರನ್ನು ತಪಾಸಣೆ ಮಾಡಿದಾಗ ಪೊಲೀಸರೇ ಶಾಕ್! ಅಲ್ಲಿ ಸಣ್ಣ ಪುಟ್ಟದ್ದಲ್ಲ, ಬರೋಬ್ಬರಿ 44.780 ಕೆಜಿ ತೂಕದ, 68 ಶ್ರೀಗಂಧದ ಮರದ ತುಂಡುಗಳು ಪತ್ತೆಯಾಗಿವೆ. ಇದರ ಅಂದಾಜು ಮಾರುಕಟ್ಟೆ ಬೆಲೆ ಬರೋಬ್ಬರಿ 11 ಲಕ್ಷ ರೂಪಾಯಿ!
​⚖️ ಸದ್ಯಕ್ಕೆ ಇಬ್ಬರೂ 'ನ್ಯಾಯಾಂಗ ಬಂಧನ'ದ ಜೈಲಿನಲ್ಲಿ ಜೈ ಹೋ!
​ಪೊಲೀಸರು ತಡ ಮಾಡದೆ 11 ಲಕ್ಷದ ಶ್ರೀಗಂಧದೊಂದಿಗೆ, ಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡು ಇಬ್ಬರಿಗೂ ಕೋರ್ಟ್ ದರ್ಶನ ಮಾಡಿಸಿದ್ದಾರೆ. ಸದ್ಯಕ್ಕೆ ಈ ಇಬ್ಬರು ರಿಯಲ್ ಲೈಫ್ 'ಪುಷ್ಪ'ಗಳು ಕಂಬಿ ಎಣಿಸುತ್ತಿದ್ದಾರೆ. ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಈ ನೆಟ್‌ವರ್ಕ್ ಹಿಂದೆ ಇನ್ನು ಯಾರ್ಯಾರಿದ್ದಾರೆ ಅಂತ ಪೊಲೀಸರು ಖದಕ್ ತನಿಖೆ ಮುಂದುವರಿಸಿದ್ದಾರೆ!

​Moral of the story: ಸಿನಿಮಾ ಸ್ಟೈಲಲ್ಲಿ ಸ್ಮಗ್ಲಿಂಗ್ ಮಾಡೋಕೆ ಹೋದ್ರೆ, ಪೊಲೀಸರು ರಿಯಲ್ ಸ್ಟೈಲಲ್ಲಿ ಒಳಗಡೆ ಹಾಕ್ತಾರೆ ಬಾಸ್! 😎
​ನಿಮಗೇನನ್ಸುತ್ತೆ? ಪೊಲೀಸರ ಈ ಭರ್ಜರಿ ಕಾರ್ಯಾಚರಣೆಗೆ ಒಂದು ಲೈಕ್ ಇರಲಿ! ಇನ್ಫಾರ್ಮೇಷನ್ ಇಷ್ಟವಾದರೆ ಈಗಲೇ ಶೇರ್ ಮಾಡಿ! 👇


ಯುವಕನೊಬ್ಬ ನಡುರಸ್ತೆಯಲ್ಲೇ ಆತನಿಗೆ ಇರಿದು ಕೊಂದಆಸ್ತಿ ಮಾಲೀಕತ್ವ ವಾಪಸ್ ನೀಡುವ ವಿಚಾರದಲ್ಲಿ ನಡೆಯುತ್ತಿದ್ದ ಕೋರ್ಟ್ ಕೇಸ್ನಲ್ಲಿ ಸೋತ ಹಿನ್ನೆಲ...
13/06/2026

ಯುವಕನೊಬ್ಬ ನಡುರಸ್ತೆಯಲ್ಲೇ ಆತನಿಗೆ ಇರಿದು ಕೊಂದ

ಆಸ್ತಿ ಮಾಲೀಕತ್ವ ವಾಪಸ್ ನೀಡುವ ವಿಚಾರದಲ್ಲಿ ನಡೆಯುತ್ತಿದ್ದ ಕೋರ್ಟ್ ಕೇಸ್ನಲ್ಲಿ ಸೋತ ಹಿನ್ನೆಲೆ, ತಂದೆಯ ಮೇಲೆ ಸಿಟ್ಟಾದ ಯುವಕನೊಬ್ಬ ನಡುರಸ್ತೆಯಲ್ಲೇ ಆತನಿಗೆ ಇರಿದು ಕೊಂದ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದಿದೆ.

82 ವರ್ಷದ ಜಾಫರ್ ಖಮರುದ್ದೀನ್ ಸಯ್ಯದ್ ಪಟೇಲ್ ಜಲಸಂಪನ್ಮೂಲ ಇಲಾಖೆಯ ನಿವೃತ್ತ ಉದ್ಯೋಗಿ.

ಇವರನ್ನು ವೈದ್ಯಕೀಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ ಮಗ ಅಬ್ದುಲ್ ರೆಹಮಾನ್ ಅಬ್ದುಲ್ ಜಾಫರ್ ಕೊಂದಿದ್ದಾನೆ ಎನ್ನಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ ಎನ್ನಲಾಗಿದೆ.

ನಿತ್ಯ ಮನೆಯಲ್ಲಿ ಜಗಳ

ಜಾಫರ್ ಖಮರುದ್ದೀನ್ ಸಯ್ಯದ್ ಪಟೇಲ್ ಅವರು ಅಬ್ದುಲ್ ರೆಹಮಾನ್ ಅಬ್ದುಲ್ ಜಾಫರ್ನನ್ನು ಮನೆಯಿಂದ ಹೊರ ಹಾಕಲು ಎರಡು ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ್ದರು. ಮಗ ನಿಯಮಿತವಾಗಿ ಮನೆಯವ ಜೊತೆಗೆ ಜಗಳವಾಡಿ, ಹಲ್ಲೆ ಮಾಡುತ್ತಿದ್ದ ಎಂದು ಆರೋಪಿಸಿದ್ದರು.

ಇದರಿಂದ ಬೇಸತ್ತ ಜಾಫರ್ ಖಮರುದ್ದೀನ್ ಸಯ್ಯದ್ ಪಟೇಲ್ ಮಗನ ಹೆಸರಲ್ಲಿದ್ದ ಮನೆಯನ್ನು ವಾಪಸ್ ತಮ್ಮದಾಗಿಸಿಕೊಳ್ಳು ಕೋರ್ಟ್ ಮೊರೆಹೋಗಿದ್ದರು. ಕೋರ್ಟ್ ಅವರ ಪರವೇ ತೀರ್ಪು ನೀಡಿತ್ತು, ಇಷ್ಟೇ ಅಲ್ಲದೇ ಮಗನನ್ನು ಮನೆಯಿಂದ ಹೊರಹಾಕುವಂತೆ ಆದೇಶಿಸಿ, ಮರಳಿ ಮನೆ ಮಾಲೀಕತ್ವವನ್ನು ಪಟೇಲ್ರಿಗೆಕೊಟ್ಟಿತು.

ಮಗಳಿಗೂ ಗಾಯ

ಇದರಿಂದ ತೀವ್ರ ಕುಪಿತಗೊಂಡಿದ್ದ ಆತ ವಾಪಸ್ ಮನೆಗೆ ಆಟೋದಲ್ಲಿ ತೆರಳುತ್ತಿದ್ದ ವೇಳೆ ಕಂಡ ತಂದೆಯ ಬಳಿ ರಿಕ್ಷಾ ನಿಲ್ಲಿಸಿ, ಸಾರ್ವಜನಿಕರ ಮುಂದೆ ಅವರನ್ನು ಮಾರಣಾಂತಿಕವಾಗಿ ಇರಿದು ಕೊಂದಿದ್ದಾನೆ. ಈ ಗಲಾಟೆಯಲ್ಲಿ ಮಗಳು ಕೂಡ ಗಾಯಗೊಂಡಿದ್ದಾರೆ ಎನ್ನಲಾಗಿದೆ,

ವಿವಾಹಿತ ಮಹಿಳೆಯ ಅತ್ಯಾಚಾರ ಆರೋಪ| ಅಂಚೆವಿತರಕ ಸುರೇಶ್ ಬಂಧನವಿವಾಹಿತ ಮಹಿಳೆಯನ್ನು ಬಲವಂತವಾಗಿ ಅತ್ಯಾಚಾರ ಮಾಡಿದ ಪ್ರಕರಣ ಸಂಬಂಧ ಧರ್ಮಸ್ಥಳ ಪೊಲ...
13/06/2026

ವಿವಾಹಿತ ಮಹಿಳೆಯ ಅತ್ಯಾಚಾರ ಆರೋಪ| ಅಂಚೆವಿತರಕ ಸುರೇಶ್ ಬಂಧನ

ವಿವಾಹಿತ ಮಹಿಳೆಯನ್ನು ಬಲವಂತವಾಗಿ ಅತ್ಯಾಚಾರ ಮಾಡಿದ ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ವಿವಾಹಿತ ಮಹಿಳೆಯನ್ನು ಬಲವಂತವಾಗಿ ಅತ್ಯಾಚಾರ ಮಾಡಿದ ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕುತ್ತೋಡಿ ನಿವಾಸಿ ಪ್ರಸ್ತುತ ಅರಸಿಮಕ್ಕಿ ಗ್ರಾಮೀಣ ಅಂಚೆ ವಿತರಕ ಸುರೇಶ್ (35) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯ ವಿವಾಹಿತ ಮಹಿಳೆಯನ್ನು 2023ರ ಡಿಸೆಂಬರ್ ನಲ್ಲಿ ಅತ್ಯಾಚಾರ ಮಾಡಿದ ಪ್ರಕರಣ ಸಂಬಂಧ ಸಂತ್ರಸ್ತ ಮಹಿಳೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜೂ.7 ರಂದು ದೂರು ನೀಡಿದ್ದರು.

ಪ್ರಕರಣದ ಬಗ್ಗೆ ತನಿಖೆ ನಡೆಸಿದ ಧರ್ಮಸ್ಥಳ ಪೊಲೀಸರು ಆರೋಪಿ, ಅಂಚೆ ವಿತರಕ ಸುರೇಶ್ ನನ್ನು ಕಳೆಂಜದಲ್ಲಿ ಜೂ.8ರಂದು ರಾತ್ರಿ ಬಂಧಿಸಿ ವಿಚಾರಣೆ ನಡೆಸಿ ಜೂ.9 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಗಾಳಿಯ ಅಬ್ಬರಕ್ಕೆ ತೆಂಗಿನ ಮರ ಮುರಿದು ಬಿದ್ದು ವ್ಯಕ್ತಿ ಮೃತ್ಯು...!!! ಗಾಳಿಯ ಅಬ್ಬರಕ್ಕೆ ತೆಂಗಿನ ಮರ ಮುರಿದು ಬಿದ್ದು ವ್ಯಕ್ತಿಯೋರ್ವರು ಮೃತಪ...
13/06/2026

ಗಾಳಿಯ ಅಬ್ಬರಕ್ಕೆ ತೆಂಗಿನ ಮರ ಮುರಿದು ಬಿದ್ದು ವ್ಯಕ್ತಿ ಮೃತ್ಯು...!!!

ಗಾಳಿಯ ಅಬ್ಬರಕ್ಕೆ ತೆಂಗಿನ ಮರ ಮುರಿದು ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟು, ಇನ್ನಿಬ್ಬರು ಅಪಾಯದಿಂದ ಪಾರಾದ ಘಟನೆ ಇಂದು ಬೆಳಿಗ್ಗೆ ಕುಂಬಳೆ ಸಮೀಪದ ಪೆರುವಾಡ್ ಮೈದಾನ ಬಳಿ ನಡೆದಿದೆ. ಪೆರುವಾಡಿನ ಅಬ್ದುಲ್ಲ (65) ಮೃತಪಟ್ಟವರು.

ಮೀನುಗಾರರಾಗಿದ್ದ ಇವರು ಬೆಳಿಗ್ಗೆ 8.30 ರ ಸುಮಾರಿಗೆ ಸ್ನೇಹಿತರಾದ ಇಬ್ರಾಹಿಂ ಮತ್ತು ಹಸೈನಾರ್ ಜೊತೆ ಕುಳಿತು ಮಾತನಾಡುತ್ತಿದ್ದಾಗ ಈ ದುರಂತ ನಡೆದಿದೆ. ಜೊತೆಗಿದ್ದ ಇಬ್ಬರು ಶಬ್ದ ಕೇಳಿ ಓಡಿದ್ದರಿಂದ ಅಪಾಯ ತಪ್ಪಿದೆ. ಗಂಭೀರ ಗಾಯಗೊಂಡ ಅಬ್ದುಲ್ಲ ರವರನ್ನು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ ಎಂದು ವರದಿಯಾಗಿದೆ. ಇನ್ನು ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಹೆಣ್ಣು ಮಕ್ಕಳನ್ನು ನೇಣು ಹಾಕಿ ಕೊಂದ ತಾಯಿ! ತಾನೂ ಆತ್ಮಹತ್ಯೆಗೆ ಯತ್ನ!!ಮೈಸೂರಿನಲ್ಲಿ ಕರುಳು ಹಿಂಡುವ ಘಟನೆ; ಇಬ್ಬರು ಹೆಣ್ಣು ಮಕ್ಕಳನ್ನು ನೇಣು...
13/06/2026

ಹೆಣ್ಣು ಮಕ್ಕಳನ್ನು ನೇಣು ಹಾಕಿ ಕೊಂದ ತಾಯಿ! ತಾನೂ ಆತ್ಮಹತ್ಯೆಗೆ ಯತ್ನ!!

ಮೈಸೂರಿನಲ್ಲಿ ಕರುಳು ಹಿಂಡುವ ಘಟನೆ; ಇಬ್ಬರು ಹೆಣ್ಣು ಮಕ್ಕಳನ್ನು ನೇಣು ಹಾಕಿ ಕೊಂದ ತಾಯಿ! ತಾನೂ ಆತ್ಮಹತ್ಯೆಗೆ ಯತ್ನ!!

ರಾಜ್ಯವನ್ನೇ ಬೆಚ್ಚಿಬೀಳಿಸುವ ಹಿರಿಯ ಕರುಳಿನ ಕ್ರೌರ್ಯವೊಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿಯೊಬ್ಬಳು ತನ್ನ ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಉಸಿರುಗಟ್ಟಿಸಿ, ನೇಣು ಬಿಗಿದು ಕೊಲೆ ಮಾಡಿ, ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಘಟನೆಯ ವಿವರ:

ಮೈಸೂರಿನ ಅನಿಲ್ ಕುಮಾರ್ ಎಂಬುವವರ ಪತ್ನಿ ಪ್ರಿಯಾಂಕಾ (26) ಈ ಭೀಕರ ಕೃತ್ಯ ಎಸಗಿದ ದುರ್ದೈವಿ ತಾಯಿ. ಕೇವಲ 3 ವರ್ಷದ ಧೃತಿ ಹಾಗೂ ಒಂದೂವರೆ ವರ್ಷದ ದಿಶಾ ಎಂಬ ಪುಟ್ಟ ಕಂದಮ್ಮಗಳೇ ಹೆತ್ತ ತಾಯಿಯ ಕೈಯಿಂದಲೇ ಜೀವ ಕಳೆದುಕೊಂಡ ದುರ್ದೈವಿಗಳು. ಮಕ್ಕಳನ್ನು ನೇಣು ಬಿಗಿದು ಕೊಂದ ಬಳಿಕ ಪ್ರಿಯಾಂಕಾ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ತೀವ್ರ ರಕ್ತಸ್ರಾವ ಹಾಗೂ ಗಂಭೀರ ಸ್ಥಿತಿಯಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ದುರಂತಕ್ಕೆ ಕಾರಣವೇನು?

ಪ್ರಾಥಮಿಕ ಮಾಹಿತಿಗಳ ಪ್ರಕಾರ, ಕಳೆದ ಕೆಲವು ದಿನಗಳಿಂದ ಕುಟುಂಬದಲ್ಲಿ ತೀವ್ರ ಭಿನ್ನಾಭಿಪ್ರಾಯ ಮತ್ತು ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಇದರಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಪ್ರಿಯಾಂಕಾ, ಭಾನುವಾರ ಈ ಹೆದರಿಕೆ ಹುಟ್ಟಿಸುವ ನಿರ್ಧಾರ ಕೈಗೊಂಡಿದ್ದಾರೆ.

ಸ್ಥಳೀಯರ ಆಕ್ರೋಶ: "ಗಂಡ-ಹೆಂಡತಿ ಜಗಳ ಏನೇ ಇರಲಿ, ಪ್ರಪಂಚ ಏನೆಂದೇ ತಿಳಿಯದ ಆ ಹಸುಗೂಸುಗಳು ಏನು ತಪ್ಪು ಮಾಡಿದ್ದವು? ಇಂತಹ ಕ್ರೂರ ನಿರ್ಧಾರ ತೆಗೆದುಕೊಳ್ಳುವ ಮುನ್ನ ಆ ತಾಯಿಗೆ ಒಮ್ಮೆಯೂ ದಯೆ ಬರಲಿಲ್ಲವೇ?" ಎಂದು ಸ್ಥಳೀಯರು ಕಣ್ಣೀರು ಹಾಕುತ್ತಿದ್ದಾರೆ.

🚓 ಸ್ಥಳಕ್ಕೆ ಧಾವಿಸಿದ ಖಾಕಿ ಪಡೆ:

ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತ ಮಕ್ಕಳ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಮಹಿಳೆಯ ಹೇಳಿಕೆ ಹಾಗೂ ಕುಟುಂಬಸ್ಥರ ವಿಚಾರಣೆಯ ಬಳಿಕವಷ್ಟೇ ಘಟನೆಯ ನಿಖರ ಕಾರಣ ಹೊರಬರಬೇಕಿದೆ.

'ಮಾನಸಿಕ ಒತ್ತಡ'ಕ್ಕೆ ಮಕ್ಕಳ ಬಲಿ ಬೇಡ!

ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ಕೌಟುಂಬಿಕ ಕಲಹಗಳು, ಮಾನಸಿಕ ಖಿನ್ನತೆಗಳು ಇಡೀ ಕುಟುಂಬವನ್ನೇ ಬಲಿಪಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಯಾವುದೇ ಸಮಸ್ಯೆಗಾದರೂ ಆತ್ಮಹತ್ಯೆ ಅಥವಾ ಕೊಲೆ ಪರಿಹಾರವಲ್ಲ. ಇಂತಹ ಪರಿಸ್ಥಿತಿಯಲ್ಲಿ ಆಪ್ತ ಸಮಾಲೋಚನೆ (Counseling) ಪಡೆಯುವುದು ಅನಿವಾರ್ಯವಾಗಿದೆ.

ಈ ಕರುಣಾಜನಕ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಮೆಂಟ್ ಮಾಡಿ ತಿಳಿಸಿ ಹಾಗೂ ಇಂತಹ ಘಟನೆಗಳು ಮರುಕಳಿಸದಿರಲು ಏನು ಮಾಡಬೇಕು ಎಂಬುದನ್ನು ಹಂಚಿಕೊಳ್ಳಿ.

ಶೀಲ ಶಂಕಿಸಿ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಹತ್ಯೆಗೈದ ಪತಿ!ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಲ್ಲೂರ್ (ಕೆ) ಗ್ರಾಮದಲ್ಲಿ ಘಟನೆ.ಸಿದ್ದಮ್...
13/06/2026

ಶೀಲ ಶಂಕಿಸಿ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಹತ್ಯೆಗೈದ ಪತಿ!

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಲ್ಲೂರ್ (ಕೆ) ಗ್ರಾಮದಲ್ಲಿ ಘಟನೆ.
ಸಿದ್ದಮ್ಮ ನಾಯ್ಕೋಡಿ (30) ಮೃತ ದುರ್ದೈವಿ.
ಭೂತಾಳಿ ನಾಯ್ಕೋಡಿ ಕೊಲೆ ಮಾಡಿ ಎಸ್ಕೆಪ್‌ ಆದ ಆರೋಪಿ.
ಹೊಲಕ್ಕೆ ಹೋಗೋಣಾ ಬಾ ಎಂದು ಬೈಕ್ ಮೇಲೆ ಕರೆದ್ಯೂಯ್ದು ಮಾರ್ಗ ಮಧ್ಯೆ ಹತ್ಯೆ.
ಮಚ್ಚಿನಿಂತ ಕೊಚ್ಚಿ ಸ್ಥಳದಿಂದ ಪರಾರಿಯಾದ ಆರೋಪಿ ತೀವ್ರ ರಕ್ತಸ್ರಾವದಿಂದ ಸಿದ್ದಮ್ಮ ಸ್ಥಳದಲ್ಲೇ ಸಾವು.

ಅನೈತಿಕ ಸಂಬಂಧ ವಿಚಾರವಾಗಿ ಕುಡಿದು ಬಂದು ಮನೆಯಲ್ಲಿ ಭೂತಾಳಿ ಆಗಾಗ ಗಲಾಟೆ ಕೂಡ ಮಾಡ್ತಿದ್ದ,ಊರಿನ ಹಿರಿಯರು ಹಲವು ಬಾರಿ ನ್ಯಾಯ ಪಂಚಾಯತಿ ಮಾಡಿ ತಿಳಿಹೇಳಿ‌ ಕಳಿಸಿದ್ರು.

ಇಂದು ಜಮೀನಿಗೆ ಕರೆದೋಯುವ ನೆಪದಲ್ಲಿ ಮಾರ್ಗ ಮಧ್ಯೆ ಕೊಚ್ಚಿ ಕೊಲೆಗೈದ ಪತಿ.
ನೆಲೋಗಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲು....

13/06/2026

ಅತಿ ವೇಗವೇ ಅಪಘಾತಕ್ಕೆ ಕಾರಣ, ದಯವಿಟ್ಟು ವಾಹನಗಳನ್ನು ನಿಧಾನವಾಗಿ ಚಲಿಸಿ

ದೇವಾಲಯ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಅಂದರ್.ಸರಣಿ ಕಳ್ಳತನ ಮಾಡಿ ಪೋಲೀಸರ ಅತಿಥಿಯಾದ ತಂದೆ ಮಕ್ಕಳು.ಜಾತ್ರೆ ನಡೆಯುವ ಗ್ರಾಮಗಳೇ ಇವರ ಟಾರ್ಗೆಟ್...
13/06/2026

ದೇವಾಲಯ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಅಂದರ್.

ಸರಣಿ ಕಳ್ಳತನ ಮಾಡಿ ಪೋಲೀಸರ ಅತಿಥಿಯಾದ ತಂದೆ ಮಕ್ಕಳು.

ಜಾತ್ರೆ ನಡೆಯುವ ಗ್ರಾಮಗಳೇ ಇವರ ಟಾರ್ಗೆಟ್.

ಮಹೇಶ್, ರಘು ಜಿ, ಅಂಜನ್ ಕುಮಾರ್ ಬಂಧಿತ ಆರೋಪಿಗಳು.

ಗಂಗಾರೆಡ್ಡಿ ತಲೆಮರೆಸಿಕೊಂಡಿರುವ ಆರೋಪಿ.

ದೊಡ್ಡಬೆಳವಂಗಲ ಪೋಲೀಸರಿಂದ ಆರೋಪಿಗಳ ಬಂಧನ

ದೊಡ್ಡಬಳ್ಳಾಪುರದ ಹಾದ್ರೀಪುರ ಪಾಳ್ಯದ ಲಕ್ಷ್ಮೀ ದೇವಾಲಯದಲ್ಲಿ ಕಳ್ಳತನ ನಡೆದಿತ್ತು.

ಇದನ್ನ ಬೆನ್ನತ್ತಿದ್ದ ಪೋಲೀಸರಿಗೆ ಸಿಸಿ ಟಿವಿ ಸುಳಿವು ನೀಡಿದೆ.

ಕಬ್ಬಿಣದ ರಾಡ್ ಸಹಾಯದಿಂದ ದೇವಾಲಯದ ಬಾಗಿಲು ಹೊಡೆಯುತ್ತಿದ್ದ ಖದೀಮರು.

ಮೂಲತಃ ಚಿಕ್ಕಬಳ್ಳಾಪುರ ಮೂಲಕದ ಕಳ್ಳರ ಗ್ಯಾಂಗ್.

ಜಾತ್ರೆ ನಡೆದ ದಿನ ಎಲ್ಲರೂ ಮಲಗಿದ್ದಾಗ ಕಳ್ಳತನ..

ವಿವಿಧ ಠಾಣೆಗಳ ವ್ಯಾಪ್ತಿಯ ಹತ್ತಕ್ಕೂ ಹೆಚ್ಚು ದೇವಾಲಯಗಳಲ್ಲಿ ಕಳ್ಳತನದ ಮಾಡಿದ್ದ ಆರೋಪಿಗಳು

ಇನ್ಸ್ ಪೆಕ್ಟರ್ ಕಲ್ಲಪ್ಪ ನೇತೃತ್ವದಲ್ಲಿ ಕಳ್ಳರ ಬಂಧನ.

ದೊಡ್ಡಬೆಳವಂಗಲ ಪೋಲೀಸರ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ

ಕೆಎಸ್‌ಆರ್‌ಟಿಸಿ ಹಾಗೂ ಬಸ್‌ ಬೈಕ್ ಡಿಕ್ಕಿ; 30 ವರ್ಷದ ಯುವಕನ ದು*ರ್ಮರಣ..!!ಶಿರಸಿ: ತಾಲೂಕಿನ ಹುಬ್ಬಳ್ಳಿ ರಸ್ತೆಯ ಇಸಳೂರು ಸಮೀಪದ ದೊಡ್ಡೂರು ಕ...
13/06/2026

ಕೆಎಸ್‌ಆರ್‌ಟಿಸಿ ಹಾಗೂ ಬಸ್‌ ಬೈಕ್ ಡಿಕ್ಕಿ; 30 ವರ್ಷದ ಯುವಕನ ದು*ರ್ಮರಣ..!!

ಶಿರಸಿ: ತಾಲೂಕಿನ ಹುಬ್ಬಳ್ಳಿ ರಸ್ತೆಯ ಇಸಳೂರು ಸಮೀಪದ ದೊಡ್ಡೂರು ಕ್ರಾಸ್ ಬಳಿ ಶನಿವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸಾವನ್ನಪ್ಪಿದ್ದಾನೆ.
ಮೃತರನ್ನು ಬುಗುಡಿಕೊಪ್ಪ ಗ್ರಾಮದ ಅನಿಲ್ ನಾಯ್ಕ (30) ಎಂದು ಗುರುತಿಸಲಾಗಿದೆ. ಹಾವೇರಿ-ಶಿರಸಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ತೀವ್ರ ಡಿಕ್ಕಿಯಿಂದ ಅನಿಲ್ ನಾಯ್ಕ ಗಂಭೀರವಾಗಿ ಗಾಯಗೊಂಡಿದ್ದರು.

ಅಪಘಾತದ ತಕ್ಷಣ ಸ್ಥಳೀಯರು ಮಾನವೀಯತೆ ಮೆರೆದು ಗಾಯಾಳುವನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲು ಮುಂದಾದರೂ, ಚಿಕಿತ್ಸೆಗಾಗಿ ಕರೆದೊಯ್ಯುವ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ಪಡೆದ ಶಿರಸಿ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ನಿಖರ ಕಾರಣದ ಕುರಿತು ತನಿಖೆ ಮುಂದುವರಿಸಿದ್ದಾರೆ

Address

Bangalore

Website

Alerts

Be the first to know and let us send you an email when ಕಾರ್ಮಿಕರ ಕ್ರಾಂತಿ posts news and promotions. Your email address will not be used for any other purpose, and you can unsubscribe at any time.

Share

Category