05/03/2026
ಗಂಧದಗುಡಿ ಬಳಗ (ರಿ) ಕರ್ನಾಟಕ ಸಾಮಾಜಿಕ ಸೇವಾ ತಂಡ ಹುಟ್ಟಿ ೩ ವರ್ಷವಾಗಿದೆ...💛❤️
ಈ ಮೂರು ವರ್ಷಗಳ ಪಯಣದಲ್ಲಿ ಕರ್ನಾಟಕ ರತ್ನ ಶ್ರೀ ಡಾ ಪುನೀತ್ ರಾಜಕುಮಾರ್ ಗೌರವಾರ್ಥ ಕರ್ನಾಟಕ ರಾಜ್ಯಾದ್ಯಂತ ಒಟ್ಟು ೨೫(ಹಾಸನ, ಚಿಕ್ಕಮಗಳೂರು , ದಾವಣಗೆರೆ, ಬೀದರ್, ಚಿತ್ರದುರ್ಗ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ,ಉಡುಪಿ, ವಿಜಯನಗರ, ಬೆಂಗಳೂರು ನಗರ)ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ಮತ್ತು ಮಕ್ಕಳಿಗೆ ದಾನಿಗಳಿಂದ ಸಹಾಯಧನ ಪಡೆದು ಅಗತ್ಯ ಶೈಕ್ಷಣಿಕ ಮತ್ತು ಕ್ರೀಡಾ ಸಾಮಾಗ್ರಿಗಳನ್ನು ತಲುಪಿಸಿದ್ದೇವೆ.
ದಾವಣಗೆರೆ,ಹಾಸನ, ಚಿಕ್ಕಮಗಳೂರು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಇರುವ ಒಟ್ಟು ೩ ಸರ್ಕಾರಿ ಕನ್ನಡ ಶಾಲೆಗಳಿಗೆ ಬಣ್ಣ ಬಳಿದು ಚಿತ್ರಗಳನ್ನು ಬಿಡಿಸಿ ಹೊಸ ರೂಪ ನೀಡಿದ್ದೇವೆ.
ಹೆಣ್ಣು ಮಕ್ಕಳಿಗಾಗಿ 3 ಹೊಸ ಶೌಚಾಲಯವನ್ನು ಸರ್ಕಾರಿ ಕನ್ನಡ ಶಾಲೆ ಹುಣಸೂರು ತಾಲೂಕಿನಲ್ಲಿ ಕಟ್ಟಿಸಿಕೊಟ್ಟಿದ್ದೇವೆ..
ಈ ಶೌಚಾಲಯ ನಿರ್ಮಾಣ ಆದ ಮೇಲೆ ಮಕ್ಕಳ ದಾಖಲಾತಿ ಹೆಚ್ಚಾಗಿದೆ, ಸ್ವತಃ ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ...
ಸರ್ಕಾರಿ ಕನ್ನಡ ಶಾಲೆಗಳಲ್ಲಿ ೨೫೦೦+ಉಪಯುಕ್ತ ಮಕ್ಕಳು ಓದುವ ಪುಸ್ತಕಗಳನ್ನು ಶಾಲೆಯ ಗ್ರಂಥಾಲಯಕ್ಕೆ ದಾನಿಗಳಿಂದ ಸಂಗ್ರಹಿಸಿ ತಲುಪಿಸಿ ಕೊಟ್ಟಿದ್ದೇವೆ..
ಮೈಸೂರು ಜಿಲ್ಲೆಯ,ರಾಜೀವ್ ನಗರ ಎರಡನೇಯ ಹಂತದಲ್ಲಿ ಕನ್ನಡ ಪ್ರೇಮಿ ಸೈಯದ್ ಇಸಾಕ್ ರವರು ನಡೆಸುವ ಖಾಸಗಿ ಗ್ರಂಥಾಲಯಕ್ಕೆ ದಾನಿಗಳಿಂದ ಪುಸ್ತಕ ಮತ್ತು ರೂ೧,೫೦,೦೦೦/- ಸಹಾಯಧನದ ನೆರವು ಪಡೆದು ಒಟ್ಟು ೧೦೫೭+ಉಪಯುಕ್ತ ಪುಸ್ತಕ ಮತ್ತು ಪುಸ್ತಕಗಳನ್ನು ಇಟ್ಟುಕೊಳ್ಳಲು ರೂ೩೨,೦೦೦/-ಸ್ಟೀಲ್ ಕಪಾಟುಗಳನ್ನು ತಲುಪಿಸಿದ್ದೇವೆ.
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಮುಸ್ಲಿಂ ಸಮುದಾಯದ ಬಡ ಕುಟುಂಬದ ಯುವಕನೊಬ್ಬನಿಗೆ ಶೈಕ್ಷಣಿಕ ಅಭ್ಯಾಸಕ್ಕಾಗಿ ರೂ೩೫,೦೦೦/- ಮೌಲ್ಯದ ಗಣಕಯಂತ್ರ ತಲುಪಿಸಿಕೊಟ್ಟಿದ್ದೇವೆ.
ಇದಲ್ಲದೇ ಮಾರ್ಚ್ ೨೬,೨೦೨೫ರಿಂದ ಹ್ಯಾಪಿ ಟು ಹೆಲ್ಪ್ ಎಂಬ ಹೊಸ ಘಟಕ( ಶೈಕ್ಷಣಿಕ ಶುಲ್ಕ ಪಾವತಿಸಲು ಕಷ್ಟಪಡುವ ಬಡ ಕುಟುಂಬದ ವಿದ್ಯಾರ್ಥಿಗಳಿಗೆ,ವಿದ್ಯಾರ್ಥಿನಿಯರಿಗೆ) ದಾನಿಗಳಿಂದ ನೆರವು ಪಡೆದು ತಲುಪಿಸಲು ಪ್ರಾರಂಭಿಸಿದ್ದು ಒಟ್ಟು ೧೫ಯಶಸ್ವಿ ಅಭಿಯಾನಗಳನ್ನು ಮಾಡಿದ್ದೇವೆ..
ಇದುವರೆಗೆ ಒಟ್ಟು ೫ ಪ್ರಶಸ್ತಿಗಳನ್ನು ವಿವಿಧ ಸಂಘ ಸಂಸ್ಥೆಗಳಿಂದ (ನಮ್ಮ ಪಾರದರ್ಶಕ ಮತ್ತು ಪ್ರಾಮಾಣಿಕ) ಸೇವೆಯನ್ನು ಗುರುತಿಸಿ ಪಡೆದುಕೊಂಡಿದ್ದೆವೆ.
ಈ ಎಲ್ಲಾ ಅಭಿಯಾನಗಳಿಗೆ ನೆರವಾಗಿರುವ ಸಹೃದಯಿ ದಾನಿಯವರಿಗೆ ಹೃತ್ಪೂರ್ವಕ ಧನ್ಯವಾದಗಳು 💛 ❤️
ಜೊತೆಗೆ ನಿಂತಿರುವ ತಂಡದ ಎಲ್ಲಾ ಸದಸ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು 💛❤️
ಸಹಾಯದಾನಿಗಳಾಗಿ/ ಸ್ವಯಂಸೇವಕರಾಗಿ ನಮ್ಮೊಡನೆ ಕೈಜೋಡಿಸಲು ನಿಮಗೆ ಇಚ್ಚೆ ಇದ್ದರೆ 9743190122/8861052632ಗೆ ಕರೆ ಮಾಡಿ.
ಅಸಾಧ್ಯವಾದುದು ಯಾವುದು ಇಲ್ಲ ಮನಸಿದ್ದರೆ ಮಾರ್ಗ..
#ಗಂಧದಗುಡಿಬಳಗ
#ನಮ್ಮಶಾಲೆನಮ್ಮಕೊಡುಗೆಅಭಿಯಾನ