05/10/2024
ದಾಸರಹಳ್ಳಿ ವಿಧಾನಸಭಾ ಕ್ಷೇತ್ರ, ರಾಜಗೋಪಾಲ ನಗರ ವಾರ್ಡ್ ನಂ.70ಕ್ಕೆ ಒಳಪಡುವ ದೊಡ್ಡಣ್ಣ ಕೈಗಾರಿಕಾ ಪ್ರದೇಶ, ಶ್ರೀಗಂಧ ನಗರ, ಕೆಂಪೇಗೌಡ ಬಡಾವಣೆ, ಶಾಂಭವಿ ನಗರ, ಕಸ್ತೂರಿ ಬಡಾವಣೆ, ಕರೀಂ ಸಾಬ್ ಲೇಔಟ್, ಕೋನಿಕ ಗಾರ್ಮೆಂಟ್ಸ್ ರಸ್ತೆಗಳು, ಭೈರವೇಶ್ವರ ನಗರ, ರಾಜೇಶ್ವರಿ ನಗರ ಮತ್ತು ರಾಜಗೋಪಾಲ ನಗರಕ್ಕೆ ಒಳಪಡುವ ವಿವಿಧ ಅಡ್ಡರಸ್ತೆ ಹಾಗೂ ಮುಖ್ಯರಸ್ತೆಗಳ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದ ಆದೇಶ ಸಂಖ್ಯೆ: ನಅಇ 153 ಎಂಎನ್ ವೈ 2022(ಇ) ಬೆಂಗಳೂರು, ದಿನಾಂಕ: 08.04.2022ರ ಅನ್ವಯ ಅಮೃತ ನಗರೋತ್ಥಾನ ಯೋಜನೆ ಅಡಿಯಲ್ಲಿ ರೂ. 12 ಕೋಟಿಗಳ ಅನುದಾನವನ್ನು ನನ್ನ ಅವಧಿಯಲ್ಲಿ ಬಿಡುಗಡೆಗೊಳಿಸಿ, ಕಾಮಗಾರಿ Job Code ದಿನಾಂಕ: 28.03.2023ರಂದು ಸೃಷ್ಟಿಯಾಗಿದ್ದು, ಈ ದಿನದಂದೇ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಕಾಮಗಾರಿಗೆ ಚಾಲನೆ ನೀಡಲು ತೊಂದರೆಯಾಗಿರುತ್ತದೆ.
ಅಂದು ನನ್ನ ಅವಧಿಯಲ್ಲಿ ದೊಡ್ಡಣ್ಣ ಕೈಗಾರಿಕಾ ಪ್ರದೇಶದ ಪ್ರತಿಯೊಂದು ರಸ್ತೆಗಳನ್ನು ಪರಿಶೀಲನೆ ಮಾಡಿ, ಅನುದಾನ ನಿಗಧಿಮಾಡಿ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಲು ರಾಜಕೀಯ ದ್ವೇಷದಿಂದ ನಿರಂತರ ತೊಂದರೆ ನೀಡಿರುವುದು ಮತದಾರ ಬಂಧುಗಳಿಗೆ ತಿಳಿದಿರುವ ವಿಷಯ.
ಇದೀಗ ಸದರಿ ಕಾಮಗಾರಿಗೆ ಚಾಲನೆ ದೊರಕಿದ್ದು, ದೊಡ್ಡಣ್ಣ ಕೈಗಾರಿಕಾ ಸಂಘ ಮತ್ತು ಸಾರ್ವಜನಿಕರು ತಮ್ಮೆಲ್ಲರ ತೆರಿಗೆ ಹಣದಿಂದ ನಡೆಯುತ್ತಿರುವ ಒಳಚರಂಡಿ, ರಸ್ತೆಗಳಿಗೆ ಡಾಂಬರೀಕರಣ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿಸಿಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇನೆ.
ಸದರಿ ಕಾಮಗಾರಿಗಳ ವಿಚಾರವಾಗಿ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಈ ಕೆಳಕಂಡ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದೆ.
9686105696