20/03/2026
ಅಥಣಿ ತಾಲೂಕಿನ ಕೊಕಟನೂರ, ದೇಸಾರಹಟ್ಟಿ, ಬಾಡಗಿ, ಬಡಚಿ ಹಲವೆಡೆ ಆಲಿಕಲ್ಲು ಸಹಿತವಾಗಿ ಸುರಿದ ಅಕಾಲಿಕ ಮಳೆಯಿಂದಾಗಿ ಹಲವು ರೈತರ ದ್ರಾಕ್ಷಿ ಹಾಗೂ ಇನ್ನಿತರ ಬೆಳೆಗಳಿಗೆ ತುಂಬಾ ನಷ್ಟವಾಗಿದೆ ಇಂದು ಭೇಟಿ ನೀಡಿ,ಹಾನಿ ಬಗ್ಗೆ ಪರಿಶೀಲಿಸಿದೆ. ಕೂಡಲೆ ತಂದೆಯವರ ಗಮನಕ್ಕೆ ತಂದು ಸರಕಾರದಿಂದ ಪರಿಹಾರ ಒದಗಿಸಿವು ಭರವಸೆಯನ್ನು ರೈತರಿಗೆ ನೀಡಿದೆ.
ಈ ಸಂದರ್ಭದಲ್ಲಿ ಅಥಣಿ ತಾಲೂಕಾ ದಂಡಾಧಿಕಾರಿಗಳಾದ ಶ್ರೀ ಸಿದ್ದರಾಯ ಬೋಸಗಿ, ಹಾಗೂ ಸಹಾಯಕ ತೋಟಗಾರಿಕೆ ನಿರ್ದೇಶಕರು,ಅಥಣಿ ಶ್ರೀಮತಿ ರೇಖಾ ಹಳ್ಳೂರ ಅವರು ಉಪಸ್ಥಿತರಿದ್ದರು.