BJP Chikamagaluru Mahila Morcha

BJP Chikamagaluru Mahila Morcha “We are not here for any positions but for a Responsibility” - Narendra Modi

ರಾಷ್ಟ್ರದಾದ್ಯಂತ ಮೊಳಗಿದ ಕಮಲದ ಹೂಂಕಾರ! 🚩ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭೂತಪೂರ್ವ ಯಶಸ್ಸು ಹಾಗೂ ಐತಿಹಾಸಿಕ...
07/05/2026

ರಾಷ್ಟ್ರದಾದ್ಯಂತ ಮೊಳಗಿದ ಕಮಲದ ಹೂಂಕಾರ! 🚩

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭೂತಪೂರ್ವ ಯಶಸ್ಸು ಹಾಗೂ ಐತಿಹಾಸಿಕ ಸಾಧನೆಯ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾದ ವಿಜಯೋತ್ಸವದ ಬೈಕ್ ಜಾಥಾ..🚩

ಸತತ ಪರಿಶ್ರಮ ಮತ್ತು ದಣಿವರಿಯದ ಹೋರಾಟಕ್ಕೆ ಪ್ರತಿಫಲ ದೊರೆತಿದ್ದು, ಹೈಕೋರ್ಟ್ ಆದೇಶದಂತೆ ನಡೆದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ...
03/05/2026

ಸತತ ಪರಿಶ್ರಮ ಮತ್ತು ದಣಿವರಿಯದ ಹೋರಾಟಕ್ಕೆ ಪ್ರತಿಫಲ ದೊರೆತಿದ್ದು, ಹೈಕೋರ್ಟ್ ಆದೇಶದಂತೆ ನಡೆದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಪಕ್ಷದ ಶ್ರೀ ಡಿ. ಎನ್. ಜೀವರಾಜ್ ಅವರು ಗೆಲುವು ಸಾಧಿಸಿದ್ದಾರೆ. ಅವರಿಗೆ ಮತ್ತು ಶೃಂಗೇರಿ ಕ್ಷೇತ್ರದ ಮತದಾರ ಬಂಧುಗಳಿಗೆ ಅಭಿನಂದನೆಗಳು.

03/05/2026

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಜೀವರಾಜ್ ಅವರು ಜಯ ಗಳಿಸಿದ್ದಾರೆ. ಆದರೆ ಸಿದ್ದರಾಮಯ್ಯ ಸರ್ಕಾರ ಅಧಿಕಾರಿಗಳ ಮೇಲೆ ವಿಪರೀತ ಒತ್ತಡ ಹೇರುತ್ತಿದೆ, ಫಲಿತಾಂಶ ಘೋಷಣೆಗೂ ಅಡ್ಡಿ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಷಡ್ಯಂತ್ರ ಮುಂದುವರಿಸದೆ, ಜನರ ತೀರ್ಪನ್ನು ಒಪ್ಪಿಕೊಳ್ಳಬೇಕು. ಜನರ ಆಶೀರ್ವಾದದಿಂದ ಜೀವರಾಜ್ ಅವರು ಜಯ ಗಳಿಸಿದ್ದಾರೆ.

- ಶ್ರೀ ವಿಜಯೇಂದ್ರ ಯಡಿಯೂರಪ್ಪ, ರಾಜ್ಯಾಧ್ಯಕ್ಷರು

21/04/2026

ಮಹಿಳೆಯರಿಗೆ ವಂಚಿಸುವುದು Indian National Congress ಪಕ್ಷಕ್ಕೆ ಸಿದ್ದಿಸಿದ ಕಲೆ.! ಮಹಿಳಾ ಮೀಸಲಾತಿಗೆ ಕಲ್ಲು ಹಾಕಿ, ಮಹಿಳೆಯರ ಹಕ್ಕುಗಳನ್ನು ತುಳಿಯುತ್ತಿರುವ ಕಾಂಗ್ರೆಸ್‌ಗೆ ದೇಶದ ಮತದಾರರು ಬುದ್ಧಿ ಕಲಿಸಲಿದ್ದಾರೆ. ಮಹಿಳಾ ವಿರೋಧಿ ಕಾಂಗ್ರೆಸ್‌ಗೆ ಹೆಣ್ಣುಮಕ್ಕಳ ಶಕ್ತಿ ಏನೆಂದು ತೋರಿಸುವ ಕಾಲವೂ ಹತ್ತಿರದಲ್ಲಿದೆ.


17/04/2026

ನಾರಿ ಶಕ್ತಿ ವಂದನಾ ಕೇವಲ ಕಾನೂನು ಅಲ್ಲ, ಇದು ಕೋಟ್ಯಂತರ ಮಹಿಳೆಯರ ಕನಸುಗಳಿಗೆ ಹೊಸ ಅವಕಾಶ ಮತ್ತು‌ ದಾರಿ. ರಾಜಕೀಯ ಕ್ಷೇತ್ರದಲ್ಲಿ 33% ಮೀಸಲಾತಿ ಕಲ್ಪಿಸುವುದರ ಮೂಲಕ ಭಾರತೀಯ ನಾರಿ ಶಕ್ತಿಗೆ ಹೊಸ ಭಾಷ್ಯವನ್ನು ಪ್ರಧಾನಿ ಮೋದಿ ಅವರು ಬರೆದಿದ್ದಾರೆ.

ಸಂಸತ್ತಿನಲ್ಲಿ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ 'ನಾರಿಶಕ್ತಿ ವಂದನಾ ಅಧಿನಿಯಮ-2026' ಕೇವಲ ಕಾನೂನಲ್ಲ, ...
15/04/2026

ಸಂಸತ್ತಿನಲ್ಲಿ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ 'ನಾರಿಶಕ್ತಿ ವಂದನಾ ಅಧಿನಿಯಮ-2026' ಕೇವಲ ಕಾನೂನಲ್ಲ, ಅದು ವಿಕಸಿತ ಭಾರತದತ್ತ ದೇಶದ ಪಯಣದಲ್ಲಿ ಮಹಿಳಾ ಸಬಲೀಕರಣದ ಹೊಸ ಮೈಲಿಗಲ್ಲು. ಈ ಮಹತ್ವಪೂರ್ಣ ಐತಿಹಾಸಿಕ ಕಾಯ್ದೆ ಜಾರಿಯಾಗುವ ಅಂತಿಮ ಹಂತದಲ್ಲಿದ್ದು, ಈ ಸಂಭ್ರಮದ ಅಂಗವಾಗಿ ಇಂದು ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಆಯೋಜಿಸಲಾಗಿದ್ದ “Town Hall of Women” ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಕು. Shobha Karandlaje , ಬಿಜೆಪಿ ರಾಜ್ಯ ಅಧ್ಯಕ್ಷರಾದ ಬಿ ವೈ ವಿಜಯೇಂದ್ರ ಯಡಿಯೂರಪ್ಪ, ಪದ್ಮಶ್ರೀ ಡಾ. ವಿಜಯಲಕ್ಷ್ಮಿ ದೇಶಮಾನೆ, ಪದ್ಮಶ್ರೀ ಡಾ. ಸುಶೀಲಮ್ಮ, ಪಕ್ಷದ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷರಾದ ಕು. ಮಂಜುಳಾ, ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಮಾಳವಿಕಾ ಅವಿನಾಶ್, ಸೇರಿದಂತೆ ವಿವಿಧ ಕ್ಷೇತ್ರಗಳ ಮಹಿಳಾ ಸಾಧಕಿಯರು, ಪ್ರಮುಖರು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ನಾಗರಿಕ ಬಂಧುಗಳು ಪಾಲ್ಗೊಂಡಿದ್ದರು.

ಡಾ. ಬಿ. ಆರ್.‌ ಅಂಬೇಡ್ಕರ್‌ ಅವರ ಸಾಮಾಜಿಕ, ಆರ್ಥಿಕ ಮತ್ತು ಕಾನೂನಿಗೆ ಸಂಬಂಧಿಸಿದ ದೃಷ್ಟಿಕೋನವು ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣ ಮತ್ತು ರಾಷ್...
15/04/2026

ಡಾ. ಬಿ. ಆರ್.‌ ಅಂಬೇಡ್ಕರ್‌ ಅವರ ಸಾಮಾಜಿಕ, ಆರ್ಥಿಕ ಮತ್ತು ಕಾನೂನಿಗೆ ಸಂಬಂಧಿಸಿದ ದೃಷ್ಟಿಕೋನವು ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣ ಮತ್ತು ರಾಷ್ಟ್ರದ ಉತ್ತಮ ಆಡಳಿತದ ದಿಕ್ಕಿನೆಡೆಗೆ ನಮಗೆ ಯಾವಾಗಲೂ ಮಾರ್ಗದರ್ಶನ ನೀಡುತ್ತದೆ.

ಭಾರತ ರತ್ನ ಬಾಬಾಸಾಹೇಬ್‌ ಡಾ. ಬಿ. ಆ‌ರ್.‌ ಅಂಬೇಡ್ಕರ್‌ ಅವರ ಜಯಂತಿಯಂದು ಶತ ಶತ ಪ್ರಣಾಮಗಳು.

ಮಹಿಳೆಯರಿಗೆ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮೀಸಲಾತಿ ನೀಡಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ಬರಬೇಕಾಯಿತು. ದಶಕಗಳ ಕಾಲ ಧೂಳು ಹಿಡಿಯುತ್ತಿದ...
14/04/2026

ಮಹಿಳೆಯರಿಗೆ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮೀಸಲಾತಿ ನೀಡಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ಬರಬೇಕಾಯಿತು.

ದಶಕಗಳ ಕಾಲ ಧೂಳು ಹಿಡಿಯುತ್ತಿದ್ದ ಮಹಿಳಾ ಮೀಸಲಾತಿ ವಿಧೇಯಕಕ್ಕೆ "ನಾರಿ ಶಕ್ತಿ ವಂದನ್‌ ಅಧಿನಿಯಮ" ಮೂಲಕ ಜೀವ ತುಂಬಿದ್ದು ಪ್ರಧಾನಿ ಮೋದಿ ಸರ್ಕಾರದ ಬದ್ಧತೆಗೆ ಸಾಕ್ಷಿ.

ನಾರಿ ಶಕ್ತಿ: ಸಂಕಲ್ಪದಿಂದ ಸಾಧನೆಯವರೆಗೆ... 🇮🇳✨ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿದಂತೆ, ನೀತಿಗಳು ಮತ್ತು ನಿರ್ಧಾರ ತೆಗೆದುಕೊಳ್ಳು...
14/04/2026

ನಾರಿ ಶಕ್ತಿ: ಸಂಕಲ್ಪದಿಂದ ಸಾಧನೆಯವರೆಗೆ... 🇮🇳✨

ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿದಂತೆ, ನೀತಿಗಳು ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅವರ ಕೊಡುಗೆ ಇನ್ನಷ್ಟು ಬಲವಾಗುತ್ತದೆ. ಇದರಿಂದ ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ಮತ್ತು ಸ್ಥಿರತೆ ದೊರೆಯಲಿದೆ.

ಸಮಾಜ ಸುಧಾರಕ, ಶಿಕ್ಷಣ ತಜ್ಞ, ಸಾಮಾಜಿಕ ಕ್ರಾಂತಿಕಾರಿ ಮಹಾತ್ಮ ಜ್ಯೋತಿರಾವ್ ಫುಲೆ ಅವರ ಜನ್ಮದಿನದ ಸ್ಮರಣೆಗಳು.
11/04/2026

ಸಮಾಜ ಸುಧಾರಕ, ಶಿಕ್ಷಣ ತಜ್ಞ, ಸಾಮಾಜಿಕ ಕ್ರಾಂತಿಕಾರಿ ಮಹಾತ್ಮ ಜ್ಯೋತಿರಾವ್ ಫುಲೆ ಅವರ ಜನ್ಮದಿನದ ಸ್ಮರಣೆಗಳು.

Address

Prabhu Street
Vijaya Nagar
577101

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+918262295249

Website

Alerts

Be the first to know and let us send you an email when BJP Chikamagaluru Mahila Morcha posts news and promotions. Your email address will not be used for any other purpose, and you can unsubscribe at any time.

Contact The Organization

Send a message to BJP Chikamagaluru Mahila Morcha:

Share