23/05/2026
ವಿದ್ಯುತ್ ಸಂಪರ್ಕ ಕಡಿತ ಪ್ರಕರಣಕ್ಕೆ ನ್ಯಾಯ ದೊರಕಿಸಿಕೊಟ್ಟ SDPI ಸಕಲೇಶಪುರ
ಬಾಳುಪೇಟೆಯಲ್ಲಿ ಮುದಸ್ಸಿರ್ ಪಾಷಾ ಅವರ ಮನೆಯ ವಿದ್ಯುತ್ ಸಂಪರ್ಕವನ್ನು ಯಾವುದೇ ಮುನ್ಸೂಚನೆ ನೀಡದೆ ಕಡಿತಗೊಳಿಸಿದ ಘಟನೆಗೆ ಸಂಬಂಧಿಸಿ, ಮೇ 13ರಂದು ವಿಷಯವು SDPI ಸಕಲೇಶಪುರ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ವಾಜಿದ್ ಪಾಷಾ ಅವರ ಗಮನಕ್ಕೆ ಬಂದಿತ್ತು. ಬಳಿಕ ಅಧ್ಯಕ್ಷರು ವಿಷಯವನ್ನು ವಿಧಾನಸಭಾ ಕ್ಷೇತ್ರ ಸಮಿತಿಯ ಲೀಗಲ್ ಇನ್ಚಾರ್ಜ್ ಸಾದಿಕ್ ಮಂಜರಾಬಾದ್ ಅವರ ಗಮನಕ್ಕೆ ತಂದರು. ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಘಟನೆ ಕುರಿತು ಪರಿಶೀಲನೆ ನಡೆಸಲಾಯಿತು.
ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ಸಂದರ್ಭದಲ್ಲಿ ಮನೆ ಸಂಪೂರ್ಣ ಕತ್ತಲೆಯಲ್ಲಿದ್ದ ಕಾರಣ, ಮುದಸ್ಸಿರ್ ಪಾಷಾ ಅವರ ಪತ್ನಿಗೆ ಹಾವು ಕಚ್ಚಿದ ಘಟನೆ ಕೂಡ ಸಂಭವಿಸಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಜನರ ಜೀವದೊಂದಿಗೆ ಚೆಲ್ಲಾಟ ಆಡುತ್ತಿರುವ KEB ನಿರ್ಲಕ್ಷ್ಯವನ್ನು ತೋರಿಸುತ್ತದೆ.
ಸ್ಥಳೀಯ ನಿವಾಸಿಗಳ ಸಮಸ್ಯೆಯನ್ನು ಆಲಿಸಿದ ಬಳಿಕ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ನ್ಯಾಯ ಒದಗಿಸುವ ಭರವಸೆ ನೀಡಲಾಯಿತು. ನಿರಂತರ ಹೋರಾಟ ಹಾಗೂ ಒತ್ತಾಯದ ಫಲವಾಗಿ ಇಂದು ಮುದಸ್ಸಿರ್ ಪಾಷಾ ಅವರ ಮನೆಗೆ ಮರು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ದೊರಕಿಸಿಕೊಡುವ ಕಾರ್ಯವನ್ನು SDPI ನಿರಂತರವಾಗಿ ಮುಂದುವರಿಸಲಿದೆ ಎಂದು ಮುಖಂಡರು ತಿಳಿಸಿದ್ದಾರೆ.
• ವಾಜಿದ್ ಪಾಷಾ – ಅಧ್ಯಕ್ಷರು, SDPI ಸಕಲೇಶಪುರ ವಿಧಾನಸಭಾ ಕ್ಷೇತ್ರ ಸಮಿತಿ
• ಸಾದಿಕ್ ಮಂಜರಾಬಾದ್ – ವಿಧಾನಸಭಾ ಲೀಗಲ್ ಇನ್ಚಾರ್ಜ್
• ಯಾಸಿನ್ ಸಕಲೇಶಪುರ – ವಿಧಾನಸಭಾ ಮೀಡಿಯಾ ಇನ್ಚಾರ್ಜ್
• ಸಮಿಯುಲ್ಲಾ – ಚಂಪಕನಗರ ಶಾಖಾ ಕಾರ್ಯದರ್ಶಿ
ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ೇಶಪುರ