ನಮ್ಮ ರಾಮದುರ್ಗ

ನಮ್ಮ ರಾಮದುರ್ಗ ನಮ್ಮ ರಾಮದುರ್ಗ ತಾಲೂಕಿನ ಸುದ್ದಿ, ಸ್ಥಳೀಯ ಜಾಹೀರಾತಿಗಾಗಿ ಸಂಪರ್ಕಿಸಿ

Follow this page for our Ramdurga Taluk News, Contact for local advertisement

ನಮ್ಮ ರಾಮದುರ್ಗವು ಬೆಳಗಾವಿ ಜಿಲ್ಲೆಯ ಸುಪ್ರಸಿದ್ಧ ತಾಲೂಕುಗಳಲ್ಲಿ ಒಂದು, ಈ ಪಟ್ಟಣಕ್ಕೆ ಬೆಲ್ಲದ ನಾಡು, ಕೊಳ್ಳಗಳ ನಾಡು, ಪುರಾಣಕ್ಷೇತ್ರ ಎಂತೆಲ್ಲಾ ಜನರು ಕರೆಯುತ್ತಾರೆ.

ಪ್ರಭು ಶ್ರೀರಾಮಚಂದ್ರನು ಲಕ್ಷ್ಮಣನ ಸಹಿತ ಶ್ರೀಕ್ಷೇತ್ರ ಶಬರಿಕೊಳ್ಳಕ್ಕೆ ಬಂದು, ಶಬರಿ ದೇವಿಗೆ ದರ್ಶನ ಕೊಟ್ಟಿದ್ದು ವಾಲ್ಮೀಕಿ ರಾಮಾಯಣದಲ್ಲಿದೆ.

ಅದಾದ ತರವಾಯ ಎಷ್ಟೋ ರಾಜರು, ಸುಲ್ತಾನರು, ಶರಣರು ರಾಮದುರ್ಗಕ್ಕೆ ಬಂದು ಹೋಗಿದ್ದಾರೆ. ಕವಿಗಳು, ಕಲಾವಿದರು, ಗಣ್ಯರು ಎಲ್ಲರೂ ರಾಮದುರ್ಗದ ಹೆಸರನ್ನು ಆಕಾಶದೆತ್ತರಕ್ಕೆ ಸಾರುವಲ್ಲಿ ಶ್ರಮ ಮೀರಿ ಸಾಧನೆಗೈದಿದ್ದಾರೆ. ಸುಪ್ರಸಿದ್ಧ ದೇವಸ್ಥಾನಗಳು, ಕೊಳ್ಳಗಳು, ಬೆಟ್ಟಗುಡ್ಡಗಳು, ಇತಿಹಾಸ ಕ್ಷೇತ್ರಗಳು, ಕೋಟೆ ಕೊತ್ತಲಗಳು, ವಾಡೆಗಳು ಮುಂತಾದವು ರಾಮದುರ್ಗದಲ್ಲಿ ಕಾಣಬಹುದು.

ಇಂದು ಆಗಸ್ಟ್ ೧೫ (15) — ಭಾರತದ ಅತ್ಯಂತ ಪವಿತ್ರ ಹಾಗೂ ಹೆಮ್ಮೆಯ  #ರಾಷ್ಟ್ರೀಯ_ಹಬ್ಬವಾದ ೮೦ನೇ  #ಸ್ವಾತಂತ್ರ್ಯ_ದಿನಾಚರಣೆ ಶುಭಾಶಯಗಳು ​🔸​ಇತಿಹ...
15/08/2026

ಇಂದು ಆಗಸ್ಟ್ ೧೫ (15) — ಭಾರತದ ಅತ್ಯಂತ ಪವಿತ್ರ ಹಾಗೂ ಹೆಮ್ಮೆಯ #ರಾಷ್ಟ್ರೀಯ_ಹಬ್ಬವಾದ ೮೦ನೇ #ಸ್ವಾತಂತ್ರ್ಯ_ದಿನಾಚರಣೆ ಶುಭಾಶಯಗಳು

🔸​ಇತಿಹಾಸ: ೧೯೪೭ರ ಆಗಸ್ಟ್ ೧೫ ರಂದು ಭಾರತವು ಬ್ರಿಟಿಷರ ಆಡಳಿತದಿಂದ ಮುಕ್ತಿ ಪಡೆದು ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು.

🔸 ​ಸಂಪ್ರದಾಯ: ನವದೆಹಲಿಯ ಕೆಂಪು ಕೋಟೆಯ ಮೇಲೆ ದೇಶದ ಪ್ರಧಾನಮಂತ್ರಿಯವರು ತ್ರಿವರ್ಣ ಧ್ವಜಾರೋಹಣ ನೆರವೇರಿಸಿ, ರಾಷ್ಟ್ರವನ್ನುದ್ದೇಶಿಸಿ ಸಂದೇಶ ನೀಡುತ್ತಾರೆ.

🔸 ​ವಿಶೇಷತೆ: ಈ ಬಾರಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕ್ರಾಂತಿಕಾರಿ ಕಹಳೆ ನೀಡಿದ ರಾಷ್ಟ್ರೀಯ ಗೀತೆ 'ವಂದೇ ಮಾತರಂ' ಗೀತೆಗೆ ೧೫೦ ವರ್ಷಗಳು ತುಂಬಿದ ಸಂಭ್ರಮವೂ ಸೇರಿದೆ.

​ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ ಲಕ್ಷಾಂತರ ಮಹನೀಯರ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸುವ ಅತ್ಯಂತ ಗಂಭೀರ ಹಾಗೂ ಸಂಭ್ರಮದ ದಿನ ಇದಾಗಿದೆ.


#ಸ್ವಾತಂತ್ರ್ಯ
#ಭಾರತ್ #ಇಂಡಿಯಾ #ತ್ಯಾಗಬಲಿಧಾನ
#ಹೋರಾಟ #ಕೆಂಪುಕೋಟೆ

#ಬೆಳಗಾವಿ #ಕರ್ನಾಟಕ #ಭಾರತ

🏥 ನಮ್ಮ ರಾಮದುರ್ಗ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ವೈದ್ಯರ ಅಪರೂಪದ ಸಾಧನೆ! 👏​ #ತಾಲೂಕುಸರ್ಕಾರಿಆಸ್ಪತ್ರೆಯ ವೈದ್ಯರ ತಂಡವು ರೋಗಿಯೊಬ್...
14/08/2026

🏥 ನಮ್ಮ ರಾಮದುರ್ಗ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ವೈದ್ಯರ ಅಪರೂಪದ ಸಾಧನೆ! 👏

​ #ತಾಲೂಕುಸರ್ಕಾರಿಆಸ್ಪತ್ರೆಯ ವೈದ್ಯರ ತಂಡವು ರೋಗಿಯೊಬ್ಬರ ಹೊಟ್ಟೆಯಿಂದ ಬರೋಬ್ಬರಿ 5.8 ಕೆ.ಜಿ. ತೂಕದ ಬೃಹತ್ ಗಡ್ಡೆಯನ್ನು ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದು ಜೀವ ಉಳಿಸುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ

​"ಸರ್ಕಾರಿ ಆಸ್ಪತ್ರೆ ಎಂದರೆ ಗುಣಮಟ್ಟ ಕಡಿಮೆ" ಎಂಬ ತಪ್ಪು ಕಲ್ಪನೆಯನ್ನು ಮುರಿದು, ಅಸಾಧ್ಯವಾದುದನ್ನು ಸಾಧ್ಯವಾಗಿಸಿ ತೋರಿಸಿದ ನಮ್ಮ ಹೆಮ್ಮೆಯ ವೈದ್ಯರ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು! 💐✨
​ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ:
​ಡಾ. ಜಗನ್ನಾಥ ದೇಸಾಯಿ
​ಡಾ. ಶ್ರೀದೇವಿ ಗಾಣಿಗೇರೆ
​ಡಾ. ರವೀಂದ್ರ ಪಾಟೀಲ
​ಡಾ. ಬಿರಾದಾರ ಪಾಟೀಲ
ಡಾ. ​ಐ.ಪಿ. ದೊಡ್ಡಮನಿ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗ.

ನಮ್ಮ ರಾಮದುರ್ಗ  ತಾಲೂಕಿನ ಸಾರ್ವಜನಿಕರಿಗೆ ಪ್ರಮುಖ ಸುದ್ದಿ! 📢ರ್ಷಗಳ ಕಾಲ ನಮ್ಮ ರಾಮದುರ್ಗ ನಗರದ ಹಳೆ ಕೋರ್ಟ್ ಆವರಣದಲ್ಲಿ ನಡೆಸಲಾಗುತ್ತಿದ್ದ ಎ...
14/08/2026

ನಮ್ಮ ರಾಮದುರ್ಗ ತಾಲೂಕಿನ ಸಾರ್ವಜನಿಕರಿಗೆ ಪ್ರಮುಖ ಸುದ್ದಿ! 📢ರ್ಷಗಳ ಕಾಲ ನಮ್ಮ ರಾಮದುರ್ಗ ನಗರದ ಹಳೆ ಕೋರ್ಟ್ ಆವರಣದಲ್ಲಿ ನಡೆಸಲಾಗುತ್ತಿದ್ದ ಎಲ್ಲಾ ರಾಷ್ಟ್ರೀಯ ಹಬ್ಬಗಳು ಮತ್ತು ತಾಲೂಕು ಮಟ್ಟದ ಕಾರ್ಯಕ್ರಮಗಳು ಇನ್ನು ಮುಂದೆ "ಪೊಲೀಸ್ ಗ್ರೌಂಡ್" ನಲ್ಲಿ ನೆರವೇರಲಿವೆ.
ಸಾರ್ವಜನಿಕರ ಉಪಸ್ಥಿತಿ, ಸಾರಿಗೆ ಸೌಕರ್ಯ ಹಾಗೂ ಹೆಚ್ಚಿನ ಜನಸ್ತೋಮಕ್ಕೆ ಅನುಕೂಲವಾಗುವಂತೆ ರಾಮದುರ್ಗ ತಾಲೂಕಿನ ತಹಸಿಲ್ದಾರರಾದ ಶ್ರೀ ಪ್ರಕಾಶ ಗಾಯಕವಾಡ ಅವರು ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ.
ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಈ ಬದಲಾವಣೆಯನ್ನು ಗಮನಿಸಿ, ಮುಂದಿನ ಎಲ್ಲಾ ತಾಲೂಕು ಮಟ್ಟದ ಕಾರ್ಯಕ್ರಮಗಳಿಗೆ ಸಹಕರಿಸಬೇಕಾಗಿ ವಿನಂತಿ. 🙏
📌 ಹೊಸ ಸ್ಥಳ: ಪೊಲೀಸ್ ಗ್ರೌಂಡ್, ಬಸವೇಶ್ವರ ಶಾಲೆ ಹತ್ತಿರ ರಾಮದುರ್ಗ.


ನಮ್ಮ ರಾಮದುರ್ಗ

03/08/2026

ನಿನ್ನೆ ಪೋಲಿಸ್ ಪರೀಕ್ಷೆ ಮುಗಿಸಿ, ಅಭ್ಯರ್ಥಿಗಳು ಬೆಳಗಾವಿ, ಧಾರವಾಡಕ್ಕೆ ವಾಪಸ್ ಬರುವಾಗ ರೈಲುಗಳ ಪರಿಸ್ಥಿತಿ ಇದು. ಈ ತರಾ ಪರೀಕ್ಷೆಗಳು ಬಂದಾಗ, ಮತ್ತೊಂದೆರೆಡು ಜನರಲ್ ಡಬ್ಬಿಗಳನ್ನು ಅಳವಡಿಸಲು ಸಾಧ್ಯವಿದ್ದರೆ, ರೇಲ್ವೆ ಇಲಾಖೆ ಸಹಾಯ ಮಾಡಬೇಕಾಗಿ ವಿನಂತಿ.🙏🥺




VC : Belagavi - ಬೆಳಗಾವಿ

ಕಾರಣಾಂತರಗಳಿಂದ ಡಿಲೀಟ್ ಆಗಿದ್ದ ನಮ್ಮ ರಾಮದುರ್ಗ ಪುಟದ WhatsApp ಚಾನೆಲ್ ಮತ್ತೆ ಶುರು ಆಗಿದೆ ಸ್ಥಳೀಯ ಜಾಹೀರಾತಿಗಾಗಿ. ಹಾಗು ತಾಲೂಕಿನ ಪ್ರತಿಯ...
30/07/2026

ಕಾರಣಾಂತರಗಳಿಂದ ಡಿಲೀಟ್ ಆಗಿದ್ದ ನಮ್ಮ ರಾಮದುರ್ಗ ಪುಟದ WhatsApp ಚಾನೆಲ್ ಮತ್ತೆ ಶುರು ಆಗಿದೆ

ಸ್ಥಳೀಯ ಜಾಹೀರಾತಿಗಾಗಿ. ಹಾಗು ತಾಲೂಕಿನ ಪ್ರತಿಯೊಂದು ಸುದ್ದಿ ಸಮಾಚಾರಗಳಿಗೆ ಹಾಗು ಯುವಜನತೆಗೆ ಉದ್ಯೋಗ ಮಾಹಿತಿಗಾಗಿ ಚಾನೆಲ್ join ಆಗಿ ಹಾಗೂ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ 🙏🙏

Follow ನಮ್ಮ ರಾಮದುರ್ಗ's WhatsApp channel. ನವರಾಮದುರ್ಗ ನಿರ್ಮಾಣ ನಮ್ಮ ಗುರಿ

ಸ್ಥಳೀಯ ಜಾಹೀರಾತಿಗಾಗಿ & ತಾಲೂಕಿನ ಪ್ರತಿಯೊಂದು ಸುದ್ದಿ ಸಮಾಚಾರಗಳಿಗೆ ಯುವ ಜನತೆಗೆ ಉದೋಗ್ಯ ಮಾಹಿತಿಗಾಗಿ
ಮೀಸಲು ನಮ್ಮ ರಾಮದುರ್ಗ ಪುಟ. Join 2 followers for the latest updates.

ಅವ್ಯವಸ್ಥೆಗಳ ಆಗರಗಳ ತಾಣ ನಮ್ಮ ಪುರಸಭೆ ಸರಿಯಾದ ಆಡಳಿತ ಯಂತ್ರ ಇಲ್ಲದೆ ಪರದಾಡುತ್ತಿರುವ ಜನ ಸಾಮಾನ್ಯರು ಇದು ನಮ್ಮ ರಾಮದುರ್ಗ  #ಪುರಸಭೆಯ ಕಥೆ  ...
30/07/2026

ಅವ್ಯವಸ್ಥೆಗಳ ಆಗರಗಳ ತಾಣ ನಮ್ಮ ಪುರಸಭೆ
ಸರಿಯಾದ ಆಡಳಿತ ಯಂತ್ರ ಇಲ್ಲದೆ ಪರದಾಡುತ್ತಿರುವ ಜನ ಸಾಮಾನ್ಯರು ಇದು ನಮ್ಮ ರಾಮದುರ್ಗ #ಪುರಸಭೆಯ ಕಥೆ

▶️ #ಸಾಫ್ಟ್‌ವೇರ್_ಮತ್ತು_ಆಡಳಿತಯಂತ್ರದ_ವಿಳಂಬ: ಹೆಸರಿಗಷ್ಟೇ
ಪುರಸಭೆಯಾಗಿದ್ದು, ಇ-ಆಸ್ತಿ, ಖಾತಾ ಬದಲಾವಣೆ, ಕಟ್ಟಡ ನಕ್ಷೆ ಮಂಜೂರಾತಿಯಂತಹ ತುರ್ತು ಸೇವೆಗಳಿಗೆ ಸಾರ್ವಜನಿಕರು ಇಂದಿಗೂ ಅಲೆದಾಡುವಂತಾಗಿದೆ.

▶️ #ರಸ್ತೆ_ಒಳಚರಂಡಿ_ಅವ್ಯವಸ್ಥೆ: ಮುಖ್ಯ ರಸ್ತೆಗಳಿಂದ ಹಿಡಿದು ವಾರ್ಡ್‌ಗಳ ಒಳಗಿನ ರಸ್ತೆಗಳವರೆಗೆ ಗುಂಡಿ ಬಿದ್ದಿದ್ದು, ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೆ ಮಳೆಗಾಲದಲ್ಲಿ ಸಾರ್ವಜನಿಕರ ಪರದಾಟ ಹೇಳತೀರದಾಗಿದೆ.

▶️ #ತ್ಯಾಜ್ಯ_ನಿರ್ವಹಣೆ_ಕೊರತೆ: ಕಸ ವಿಲೇವಾರಿ ಸರಿಯಾದ ಸಮಯಕ್ಕೆ ನಡೆಯದೆ ಹಲವು ಬಡಾವಣೆಗಳಲ್ಲಿ ದುರ್ನಾಥ ಬೀರುತ್ತಿರುವುದು ನೈರ್ಮಲ್ಯಕ್ಕೆ ದೊಡ್ಡ ಸವಾಲಾಗಿದೆ.

▶️ #ಸಿಬ್ಬಂದಿಕೊರತೆ_ಹಾಗೂ_ಉತ್ತರದಾಯಿತ್ವ: ಹೆಸರಿಗೆ ತಕ್ಕಂತೆ ಅಗತ್ಯ ಸಿಬ್ಬಂದಿಗಳ ನೇಮಕಾತಿ ಆಗದಿರುವುದು ಮತ್ತು ಇದ್ದ ಸಿಬ್ಬಂದಿ ಸಾರ್ವಜನಿಕರ ಕುಂದುಕೊರತೆಗಳಿಗೆ ಸರಿಯಾಗಿ ಸ್ಪಂದಿಸದಿರುವುದು.

▶️ #ಮೂಲಸೌಕರ್ಯ : ಪುರಸಭೆಯಲ್ಲಿ ಜನಗಳಿಗೆ ಕೊಡಲು ಸರಿಯಾದ ವ್ಯವಸ್ಥೆ ಇಲ್ಲ ಕುಡಿಯಲು ನೀರು ಇಲ್ಲ

▶️ #ಮರೀಚಿಕೆ : ಮುಖ್ಯವಾಗಿ ಪುರಸಭೆ ಕಚೇರಿ ಜನರಿಗೆ ಕಾಣುವದಿಲ್ಲ
ಕಚೇರಿ ಮುಂದೆ ಬೀದಿ ಬದಿ ವ್ಯಾಪಾರಿಗಳು ಕೂಡುತ್ತಾರೆ ಇದರಿಂದ ಸಾರ್ವಜನಿಕರಿಗೆ ಪುರಸಭೆ ಒಳಗೆ ಹೋಗಲು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ


#ನಮ್ಮರಾಮದುರ್ಗ #ನಮ್ಮಹೆಮ್ಮೆ
#ನವರಾಮದುರ್ಗ_ನಿರ್ಮಾಣ_ನಮ್ಮಗುರಿ

#ರಾಮದುರ್ಗ

🚨 ನಮ್ಮ ರಾಮದುರ್ಗ ನಗರದಲ್ಲಿ ಹೆಚ್ಚಾಗಿದೆ ಅಪ್ರಾಪ್ತ ವಯಸ್ಸಿನ ಯುವಕ/ಯುವತಿಯರ ವಾಹನ ಚಾಲನೆ  ಇದರ ಬಗ್ಗೆ ಕಣ್ಣು ಮುಚ್ಚಿ ಕುಳಿತ ಪೊಲೀಸ್ ಇಲಾಖೆ ...
29/06/2026

🚨 ನಮ್ಮ ರಾಮದುರ್ಗ ನಗರದಲ್ಲಿ ಹೆಚ್ಚಾಗಿದೆ ಅಪ್ರಾಪ್ತ ವಯಸ್ಸಿನ ಯುವಕ/ಯುವತಿಯರ ವಾಹನ ಚಾಲನೆ ಇದರ ಬಗ್ಗೆ ಕಣ್ಣು ಮುಚ್ಚಿ ಕುಳಿತ ಪೊಲೀಸ್ ಇಲಾಖೆ ಅತಿಯಾದ ವೇಗದಲ್ಲಿ ಚಾಲನೆ ಇದರಿಂದ ಸಾರ್ವಜನಿಕರಿಗೆ ಕಿರಿ ಕಿರಿ ಹಾಗೂ ಅಪಘಾತ ಪ್ರಕರಣ ಆಗುತ್ತಿವೆ

#ನಿಮ್ಮ18ವರ್ಷದೊಳಗಿನ ಅಪ್ರಾಪ್ತ ಮಕ್ಕಳಿಗೆ ಬೈಕ್ ಅಥವಾ ಸ್ಕೂಟರ್ ಕೀ ಕೊಡುವ ಮುನ್ನ ಈ ಕಠಿಣ ಕಾನೂನು ನೆನಪಿರಲಿ:

​💰 ₹25,000 ಭಾರಿ ದಂಡ
​💢 ಪೋಷಕರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ
​📄 ವಾಹನದ RC ರದ್ದು
​🚫 ಮಗುವಿಗೆ 25 ವರ್ಷ ಆಗುವವರೆಗೆ ಲೈಸೆನ್ಸ್ ಸಿಗಲ್ಲ!

​ಕಾನೂನಿನ ಭಯಕ್ಕಿಂತ ನಿಮ್ಮ ಮಕ್ಕಳ ಜೀವ ಮುಖ್ಯ. ಇಂದೇ ಅಪ್ರಾಪ್ತರಿಗೆ ವಾಹನ ನೀಡುವುದನ್ನು ನಿಲ್ಲಿಸಿ.

ಈ ಮಾಹಿತಿಯನ್ನು ಶೇರ್ ಮಾಡಿ ನಮ್ಮ ರಾಮದುರ್ಗದಲ್ಲಿ ಜಾಗೃತಿ ಮೂಡಿಸಿ! 🙏

​ #ರಾಮದುರ್ಗ

25/06/2026

ನಮ್ಮ ರಾಮದುರ್ಗ ಪೋಲಿಸ್ ವತಿಯಿಂದ ಡ್ರಗ್ಸ್ ವಿರುದ್ಧ ಜಾಗೃತಿ & ವ್ಯಸನ ಮುಕ್ತ ಸಮಾಜಕ್ಕಾಗಿ ನಡೆದ ಜಾಥಾದ ಒಂದು ನೋಟ

#ಪೊಲೀಸ್_ಸುದ್ದಿ #ರಾಮದುರ್ಗ
#ಪೊಲೀಸ್

12/06/2026

#ಬೆಳಗಾವಿ ಜಿಲ್ಲೆಯಾದಂತ ಮೊಟ್ಟಮೊದಲ ಬಾರಿಗೆ ಕ್ಯಾಮೆರಾ ಅಳವಡಿಸಲಾಗುತ್ತಿದ್ದು ಇದರಿಂದ ಅಪಘಾತ ತಡೆಯಲು & ಸಂಚಾರಿ ನಿಯಮ ಉಲ್ಲಂಘನೆ ಮಾಡುವವರಿಗೆ ಸರಿಯಾದ ಕ್ರಮ ತೆಗೆದುಕೊಳ್ಳಲು ಅನುಕೂಲ ಆಗಲಿದೆ

DC Belagavi
#ಬೆಳಗಾವಿ
#ಕರ್ನಾಟಕ_ಪೊಲೀಸ್ #ಪೊಲೀಸ್ #ಪೊಲೀಸ್_ವರಿಷ್ಠಾಧಿಕಾರಿ #ರಾಮದುರ್ಗ
#ಪೊಲೀಸ್_ಸುದ್ದಿ
#ಬೆಳಗಾವಿ_ಜಿಲ್ಲೆ

#ರಾಮದುರ್ಗ

ರಾಜ್ಯದ  #ಸರ್ಕಾರಿಆಸ್ಪತ್ರೆಗಳಲ್ಲಿ ಖಾಲಿಯಿರುವ    ವೈದ್ಯರ ಹುದ್ದೆಗಳಿಗೆ ವಾರದ ಒಳಗಾಗಿ  #ನೇಮಕಾತಿ_ಪ್ರಕ್ರಿಯೆ ಮುಗಿಸದಿದ್ದರೆ, ಸಂಬಂಧಪಟ್ಟ ಜ...
11/06/2026

ರಾಜ್ಯದ #ಸರ್ಕಾರಿಆಸ್ಪತ್ರೆಗಳಲ್ಲಿ ಖಾಲಿಯಿರುವ ವೈದ್ಯರ ಹುದ್ದೆಗಳಿಗೆ ವಾರದ ಒಳಗಾಗಿ #ನೇಮಕಾತಿ_ಪ್ರಕ್ರಿಯೆ ಮುಗಿಸದಿದ್ದರೆ, ಸಂಬಂಧಪಟ್ಟ ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನು ( #ಡಿಹೆಚ್‌ಒ) ತಕ್ಷಣವೇ ಅಮಾನತು ಮಾಡಲಾಗುವುದು ಎಂದು ಆರೋಗ್ಯ ಸಚಿವ UT Khader ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

#ಎಂಬಿಬಿಎಸ್ ಪದವಿ ಮುಗಿಸಿ #ಗುತ್ತಿಗೆ_ಆಧಾರದಲ್ಲಿ ಕೆಲಸ ಮಾಡಲು ಇಚ್ಛಿಸುವ ವೈದ್ಯರಿಗೆ ತಕ್ಷಣವೇ ಉದ್ಯೋಗಾವಕಾಶ ಕಲ್ಪಿಸಲಾಗುವುದು.
ಆಸಕ್ತ ವೈದ್ಯರು ತಮ್ಮ ಜಿಲ್ಲೆಯ ಡಿಹೆಚ್‌ಒ ಅವರಿಗೆ ಅರ್ಜಿ ಸಲ್ಲಿಸಬೇಕು. ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ, ಜಿಲ್ಲಾಧಿಕಾರಿಗಳ ಸಹಿ ಪಡೆದು ಕೇವಲ ಒಂದು ವಾರದಲ್ಲಿ ನೇಮಕಾತಿ ಆದೇಶ ನೀಡಬೇಕು. ಇದರಲ್ಲಿ ವಿಳಂಬ ಧೋರಣೆ ಅನುಸರಿಸಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇನ್ನುಳಿದಂತೆ, ಹೊಸದಾಗಿ ಸೇರ್ಪಡೆಯಾಗುವ ಎಂಬಿಬಿಎಸ್ ವೈದ್ಯರಿಗೆ ಆರಂಭದಲ್ಲೇ ಮಾಸಿಕ 60 ಸಾವಿರ ರೂಪಾಯಿ ವೇತನ ನಿಗದಿಪಡಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

#ಗುತ್ತಿಗೆಆಧಾರ_ಉದ್ಯೋಗ
#ಸರಕಾರಿಆಸ್ಪತ್ರೆ #ನೇಮಕಾತಿ #ಸರಕಾರಿಹುದ್ದೆ

DC Belagavi
Department of Health and Family Welfare Services Govt of Karnataka

Address

ರಾಮದುರ್ಗ
Ramdurg
591123

Alerts

Be the first to know and let us send you an email when ನಮ್ಮ ರಾಮದುರ್ಗ posts news and promotions. Your email address will not be used for any other purpose, and you can unsubscribe at any time.

Shortcuts

Share