Karnataka Rashtra Samithi Party Pandavapura

Karnataka Rashtra Samithi Party Pandavapura ಸ್ವಚ್ಛ, ಪ್ರಾಮಾಣಿಕ, ಭ್ರಷ್ಟಾಚಾರಮುಕ್ತ ರಾಜಕಾರಣಕ್ಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸೇರಿ

18/12/2025

ಆತ್ಮೀಯ ಸ್ನೇಹಿತರಾದ ಕೆ ಆರ್ ಎಸ್ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷರಾದ ರಘು ಜಾಣಗೆರೆ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು 🎂🎊🎈🎁💐

18-12-2025

ಹೂ ಮಾಲೆ ಹಾಕಿ ಸ್ವಾಗತಿಸುವ ಅಭಿಯಾನ.ಬಹುತೇಕ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳು ಸರಿಯಾದ ಸಮಯಕ್ಕೆ (ಸರ್ಕಾರಿ ಕಚೇರಿ ...
20/08/2025

ಹೂ ಮಾಲೆ ಹಾಕಿ ಸ್ವಾಗತಿಸುವ ಅಭಿಯಾನ.

ಬಹುತೇಕ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳು ಸರಿಯಾದ ಸಮಯಕ್ಕೆ (ಸರ್ಕಾರಿ ಕಚೇರಿ ಸಮಯ ಬೆಳಿಗ್ಗೆ 10 ಗಂಟೆ) ಕಚೇರಿಗೆ ಬಾರದೆ ತಮಗಿಷ್ಟದ ಸಮಯದಲ್ಲಿ ಕಚೇರಿಗಳಿಗೆ ಬಂದು ಹೋಗುತ್ತಿರುವುದರಿಂದ ಸರ್ಕಾರಿ ಕಚೇರಿಗಳಿಗೆ ಕೆಲಸ ಮಾಡಿಸಿಕೊಳ್ಳಲು ಬರುವ ಸಾರ್ವಜನಿಕರು ಅನಿರ್ಧಿಷ್ಠಾವಧಿ ಕಾಲ ಕಾಯಬೇಕಾದ ಸಂದರ್ಭ ನಿರ್ಮಾಣವಾಗಿದೆ.

ಈ ಹಿನ್ನೆಲೆಯಲ್ಲಿ KRS ಪಕ್ಷವು ನಾಳೆಯಿಂದ ದಿನಾಂಕ 21-08-25 ರಿಂದ ಸರ್ಕಾರಿ ಇಲಾಖೆಯ ಕೆಲಸಗಳಲ್ಲಿ ಪಾರದರ್ಶಕತೆ ಮತ್ತು ಆಡಳಿತ ಸುಧಾರಣೆಯ ಹಿತದೃಷ್ಟಿಯಿಂದ ಸರ್ಕಾರಿ ಕಚೇರಿಗೆ ತಡವಾಗಿ (ಬೆಳಿಗ್ಗೆ 10 ಗಂಟೆಯ ನಂತರ) ಬರುವ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳನ್ನು ಪುಷ್ಪಮಾಲೆ ಹಾಕಿ ಸ್ವಾಗತಿಸಿ ನಂತರ ರೆಡ್ ಹ್ಯಾಂಡಾಗಿ ಸಿಕ್ಕಿಬೀಳುವ ಅಂತಹ ಅಧಿಕಾರಿ/ನೌಕರರ ವಿರುದ್ಧ ಸಂಬಂಧಪಟ್ಟ ಮೇಲಾಧಿಕಾರಿ ಮತ್ತು ಲೋಕಾಯುಕ್ತಕ್ಕೆ ದೂರು ನೀಡುವ ವಿನೂತನ ಅಭಿಯಾನವನ್ನು ರಾಜ್ಯಾದ್ಯಂತ ನಡೆಸಲು ನಿರ್ಧರಿಸಲಾಗಿದ್ದು ಈ ಅಭಿಯಾನಕ್ಕೆ ನಾಳೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಗುತ್ತಿದೆ.

ಕಳ್ಳ ಅಧಿಕಾರಿಗಳು ಹೆಚ್ಚೆತ್ತಿಕೊಳ್ಳುವ ಸಂಭವಿರುವುದರಿಂದ ಬೆಂಗಳೂರಿನ ಯಾವ ಕಚೇರಿಯ ಬಳಿ ನಾಳೆ ಈ ಅಭಿಯಾನವನ್ನು ಆರಂಭಿಸುತ್ತೇವೆ ಎನ್ನುವ ವಿಚಾರವನ್ನು ಬಹಿರಂಗಪಡಿಸದೆ ಪಕ್ಷದ ಸ್ಥಳೀಯ ಪದಾಧಿಕಾರಿಗಳ ಮೂಲಕ ಬೆಂಗಳೂರಿನ ಎಲ್ಲಾ ಸೈನಿಕರಿಗೂ ಕರೆ ಮಾಡಿ ತಿಳಿಸಲಾಗುವುದು.

ಸರ್ಕಾರಿ ಕಚೇರಿಗಳಿಗೆ ಅಲೆದಲೆದು ಅಧಿಕಾರಿಗಳು, ನೌಕರರು ಸಿಗದೆ ಬೇಸತ್ತಿರುವ ಸತ್ಪ್ರಜೆಗಳಿಗೆ ನಾಳಿನ ಈ ಅಭಿಯಾನಕ್ಕೆ ವಿಶೇಷ ಸ್ವಾಗತ. ಉಳಿದಂತೆ ಎಲ್ಲರಿಗೂ ಸ್ವಾಗತ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಮನವಿ 🙏

ರಘು ಜಾಣಗೆರೆ
ಕಾರ್ಯಾಧ್ಯಕ್ಷ, ಕರಾಸ ಪಕ್ಷ.

ಮಹೇಂದ್ರ ಕುಮಾರ್
2023ರ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪರಾಜಿತ MLA ಅಭ್ಯರ್ಥಿ
ಮಾಜಿ ಕಾರ್ಯಾಧ್ಯಕ್ಷರು ಮಂಡ್ಯ ಜಿಲ್ಲೆ
ಕೆ ಆರ್ ಎಸ್ ಪಕ್ಷ.

* #ಭೀಮೋತ್ಸವ**ಭಾರತದ  #ಸಂವಿಧಾನಶಿಲ್ಪಿ, ಭಾರತರತ್ನ ಡಾ. ಭೀಮರಾವ್ ಅಂಬೇಡ್ಕರ್'ರವರ ಜಯಂತಿಯನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಇದೇ ಏಪ್ರಿ...
12/04/2025

* #ಭೀಮೋತ್ಸವ*

*ಭಾರತದ #ಸಂವಿಧಾನಶಿಲ್ಪಿ, ಭಾರತರತ್ನ ಡಾ. ಭೀಮರಾವ್ ಅಂಬೇಡ್ಕರ್'ರವರ ಜಯಂತಿಯನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಇದೇ ಏಪ್ರಿಲ್ 14ರಂದು ಬಳ್ಳಾರಿ ನಗರದಲ್ಲಿ ಆಚರಿಸುತ್ತಿದೆ. ಅಂದು ಬಳ್ಳಾರಿ ನಗರದಲ್ಲಿ ರ್‍ಯಾಲಿ ಮತ್ತು ಸಾರ್ವಜನಿಕ ಸಭಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧೆಡೆಗಳಿಂದ ಅಂದು KRS ಪಕ್ಷದ ಸೈನಿಕರು ಬಳ್ಳಾರಿಗೆ ಆಗಮಿಸುತ್ತಿದ್ದಾರೆ. KRS ಪಕ್ಷದ ಎಲ್ಲಾ ಬೆಂಬಲಿಗರಿಗೆ, ಹಿತೈಷಿಗಳಿಗೆ, ನಾಡಜನರಿಗೆ ಹಾಗೂ ಪಾಂಡವಪುರ ತಾಲ್ಲೂಕಿನ ಎಲ್ಲಾ ಸಮಸ್ತ ಜನರಿಗೂ ನಾನು ಈ ಮೂಲಕ ಈ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದೇನೆ.*

*ಸಂವಿಧಾನವನ್ನು ದೇಶಕ್ಕೆ ಸಮರ್ಪಿಸುತ್ತ ಬಾಬಾಸಾಹೇಬರು ಈ ಎಚ್ಚರಿಕೆಯ ಮಾತನ್ನು ಅಂದೇ ಹೇಳಿದ್ದರು: “However good a Constitution may be, if those who are implementing it are not good, it will prove to be bad. However bad a Constitution may be, if those implementing it are good, it will prove to be good.”*

*ಇಂದು ದೇಶದ ಸಂವಿಧಾನವು ನೀಚರ, ಕಡುಭ್ರಷ್ಟರ, ಜನದ್ರೋಹಿಗಳ, ಪುಡಿ ಪಾಳೆಯಗಾರರ, ಫ್ಯಾಶಿಸ್ಟ್'ಗಳ ಕೈಯಲ್ಲಿ ಸಿಲುಕಿ ನಲುಗುತ್ತಿದೆ. ಬಡವರಿಗೆ, ಅಸಹಾಯಕರಿಗೆ, ದುರ್ಬಲರಿಗೆ, ಪ್ರಾಮಾಣಿಕರಿಗೆ ಹಕ್ಕು ಮತ್ತು ಘನತೆಯ ಬದುಕನ್ನು ನಿರಾಕರಿಸುತ್ತಿರುವ ಭ್ರಷ್ಟಾಚಾರವು ಇಂದು ಸಾಮಾಜಿಕ ನ್ಯಾಯದ ಅತಿದೊಡ್ಡ ಶತ್ರುವಾಗಿದೆ.*

*ಬಂಧುಗಳೇ, ಬನ್ನಿ, ಈ ಎಲ್ಲದರ ಹಿನ್ನೆಲೆಯಲ್ಲಿ, "Eternal vigilance is the price of liberty" ಎನ್ನುವ ಎಚ್ಚರಿಕೆಯಲ್ಲಿ, ನಾವು #ಅಂಬೇಡ್ಕರ್‌ಜಯಂತಿ'ಯನ್ನು ಆಚರಿಸೋಣ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಕರ್ತವ್ಯ ನಿಭಾಯಿಸೋಣ.*

*ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.*

*ಮಹೇಂದ್ರ ಕುಮಾರ್*
*ಅಧ್ಯಕ್ಷರು, ಪಾಂಡವಪುರ ತಾಲ್ಲೂಕು,*
*ಕೆ ಆರ್ ಎಸ್ ಪಕ್ಷ.*

12-04-2025.

12/04/2025

ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದಡೆಂತಯ್ಯಾ? ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆ ತೆರೆಗಳಿಗಂಜಿದಡೆಂತಯ್ಯಾ? ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದಡೆಂತಯ್ಯಾ? ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ, ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು. |

ರವಿ ಕೃಷ್ಣಾರೆಡ್ಡಿ ಅವರ ವಿರುದ್ಧ ಆರೋಪ ಮಾಡುವವರಿಗೆ ಅವರ ಏರುಧ್ವನಿ, ಜೋರು ಬಾಯಿಯೊಂದೇ ಅಸ್ತ್ರ.ಅವರ ಸಂಗಡದಲ್ಲಿರಲು ಬೇಕಾದ ಪ್ರಾಮಾಣಿಕತೆ, ಸರಳ...
19/03/2025

ರವಿ ಕೃಷ್ಣಾರೆಡ್ಡಿ ಅವರ ವಿರುದ್ಧ ಆರೋಪ ಮಾಡುವವರಿಗೆ ಅವರ ಏರುಧ್ವನಿ, ಜೋರು ಬಾಯಿಯೊಂದೇ ಅಸ್ತ್ರ.

ಅವರ ಸಂಗಡದಲ್ಲಿರಲು ಬೇಕಾದ ಪ್ರಾಮಾಣಿಕತೆ, ಸರಳತೆ ಮತ್ತು ಸಹಜ ವ್ಯಕ್ತಿತ್ವವಿಲ್ಲದೆ ದೂರಾದ ಜನ ಮತ್ತು ರವಿ ಕೃಷ್ಣಾರೆಡ್ಡಿಯವರ ಹಾಗೆ ನ್ಯಾಯ-ನೀತಿ, ಪ್ರಾಮಾಣಿಕತೆ ಅಂತ ಹೋದ್ರೆ ಹೊಟ್ಟೆ ಪಾಡಿಗೆ ಕಷ್ಟವಾಗುತ್ತದೆಂದು ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡು ಹೇಳೋದೊಂದು ಮಾಡೋದೊಂದು ಎಂಬ ರೀತಿಯಲ್ಲಿ ಹೊಟ್ಟೆ ಹೊರೆಯುತ್ತಿರುವ ಜನ ಸದಾ ರವಿ ಕೃಷ್ಣಾರೆಡ್ಡಿ ಯವರ ಬಾಯಿ ವಿಚಾರವನ್ನು ಮುಂದಿಟ್ಟುಕೊಂಡು ಆರೋಪಿಸುತ್ತಾರೆ.

ರವಿ ಕೃಷ್ಣಾರೆಡ್ಡಿಯವರ ಬಾಯಿಂದ ಬರುವ filterless ಮಾತುಗಳನ್ನು ಅರಗಿಸಿಕೊಳ್ಳಲಾಗದೆ ನಾಲ್ಕು ಮಂದಿ ಮಾಡುವ ಇಂತಹ ಆರೋಪ ಸುಳ್ಳೆಂಬುದಕ್ಕೆ ರವಿ ಕೃಷ್ಣಾರೆಡ್ಡಿಯವರ ಸಾಹಸಮಯ ಹೋರಾಟಗಳ ಸ್ಫೂರ್ತಿಯಿಂದ ನ್ಯಾಯ-ನೀತಿ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಸರಳ, ಸಹಜ ಮತ್ತು ಸಾರ್ಥಕ ಜೀವನ ನಡೆಸುತ್ತಿರುವ ನನ್ನಂತ ಸಾವಿರಾರು ಜನರು ರಾಜ್ಯಾದ್ಯಂತ ಸಾಕ್ಷಿಯಾಗುತ್ತಾರೆ.

ಬಾಯಲ್ಲಿ ಮಾತ್ರ ದೊಡ್ಡ ದೊಡ್ಡ ಮಾತುಗಳನ್ನಾಡಿಕೊಂಡು ಕೃತಿಯಲ್ಲಿ ಇನ್ನೇನೋ ಮಾಡಿಕೊಂಡು ನೂರು ದಿನ ವ್ಯರ್ಥವಾಗಿ ಬದುಕುವುದಕ್ಕಿಂತ ರವಿ ಕೃಷ್ಣಾರೆಡ್ಡಿಯವರ ಹಾಗೆ ನ್ಯಾಯ-ನೀತಿ, ಪ್ರಾಮಾಣಿಕತೆಗೆ ಅಂಟಿಕೊಂಡು ಅವರಂತೆ ನೀವು ಮೂರು ದಿನ ಬದುಕಿ ತೋರಿಸಿ ಸಾಕು.

ಏನೇ ಆಗಲಿ, ಒಳ್ಳೆಯದನ್ನೇ ಮಾಡಿ ; ಮಾಡುತ್ತಲಿರಿ.

ಮಹೇಂದ್ರ ಕುಮಾರ್ ಕೆ ಆರ್
ಕೆ ಆರ್ ಎಸ್ ಪಕ್ಷದ ಸಕ್ರಿಯ ಮತ್ತು ಪ್ರಾಮಾಣಿಕ ಸೇನಾನಿ,
2023ರ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪರಾಜಿತ MLA ಅಭ್ಯರ್ಥಿ.
ಕಾರ್ಯಾಧ್ಯಕ್ಷರು (ಮಾಜಿ), ಮಂಡ್ಯ ಜಿಲ್ಲೆ,
ಅಧ್ಯಕ್ಷರು (ಮಾಜಿ) ಪಾಂಡವಪುರ ತಾಲ್ಲೂಕು,
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ.

14/03/2025
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜನಚೈತನ್ಯ ಯಾತ್ರೆ FREEDOM PARK Bengaluru ಚಾಲನಾ ಸಮಾವೇಶ, ವಿದುರಾಶ್ವತ್ಥದಲ್ಲಿ  ಹುತಾತ್ಮರ ಸ್ಮರಣಾ ಕಾರ್...
20/04/2022

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜನಚೈತನ್ಯ ಯಾತ್ರೆ FREEDOM PARK Bengaluru ಚಾಲನಾ ಸಮಾವೇಶ, ವಿದುರಾಶ್ವತ್ಥದಲ್ಲಿ ಹುತಾತ್ಮರ ಸ್ಮರಣಾ ಕಾರ್ಯಕ್ರಮದ ಪತ್ರಿಕಾಗೋಷ್ಠಿ ಮಂಡ್ಯ ಜಿಲ್ಲೆ ಪ್ರೆಸ್ ಕ್ಲಬ್ ನಲ್ಲಿ ನಡೆಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಎಸ್ ಎಚ್ ಲಿಂಗೇಗೌಡ ರವರು, ಜಿಲ್ಲಾಧ್ಯಕ್ಷರಾದ ರಮೇಶ್ ಗೌಡ ರವರು, ಮಹೇಂದ್ರ ಕುಮಾರ್ ಕಾರ್ಯಾಧ್ಯಕ್ಷರು ಮಂಡ್ಯ ಜಿಲ್ಲೆ, ರವಿಕುಮಾರ್ ರವರು, ವರುಣ್ ಆರ್ ವಿಧ್ಯಾರ್ಥಿ ಘಟಕದ ಅಧ್ಯಕ್ಷ ಉಪಸ್ಥಿತರಿದ್ದರು.

Address

ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ, ಪಾಂಡವಪುರ
Pandavapura
571434

Alerts

Be the first to know and let us send you an email when Karnataka Rashtra Samithi Party Pandavapura posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karnataka Rashtra Samithi Party Pandavapura:

Share