08/05/2026
""""ಬನ್ನಿ ಒಂದಾಗಿ, ನಮ್ಮ ನಾಯಕನ ಹಬ್ಬ ಆಚರಿಸೋಣ"""" 🚩
ಕರ್ನಾಟಕದ ಹೆಮ್ಮೆಯ ರೈತ ನಾಯಕ, ಮಾಜಿ ಮುಖ್ಯಮಂತ್ರಿ ಸನ್ಮಾನ ಶ್ರೀ ಬಿ. ಎಸ್. ಯಡಿಯೂರಪ್ಪನವರು ರಾಜಕೀಯ ಜೀವನದಲ್ಲಿ 50 ವರ್ಷಗಳನ್ನು ಪೂರೈಸಿದ ಸಾರ್ಥಕ ಕ್ಷಣವಿದು. ಶಿಕಾರಿಪುರದ ಪುರಸಭೆ ಸದಸ್ಯತ್ವದಿಂದ ರಾಜ್ಯದ ಮುಖ್ಯಮಂತ್ರಿಯವರೆಗೆ ಅವರ ಪಯಣ ನಮಗೆಲ್ಲರಿಗೂ ಸ್ಪೂರ್ತಿ.....
ಭಾಗ್ಯಲಕ್ಷ್ಮಿ ಯೋಜನೆ, ಸಂಧ್ಯಾ ಸುರಕ್ಷಾ, ಮತ್ತು ರೈತರಿಗಾಗಿ ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡಿದವರು ಯಾರಾದರು ಇದ್ದರೆ ನಮ್ಮ BSY..
ಭಾಗ್ಯಲಕ್ಷ್ಮಿ ಯೋಜನೆಯಿಂದ ಹೆಣ್ಣುಮಕ್ಕಳ ಬಾಳಿಗೆ ಬೆಳಕಾದವರು, ಸೈಕಲ್ ವಿತರಣೆಯ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾದವರು. ಕರ್ನಾಟಕದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಬಿಎಸ್ವೈ ಅವರ 50ನೇ ವರ್ಷದ ರಾಜಕೀಯ ಪಯಣ ನಮಗೆಲ್ಲರಿಗೂ ಹೆಮ್ಮೆ....
ಮಾಜಿ ಮುಖ್ಯಮಂತ್ರಿಗಳು ಹಾಗೂ ಜನಪ್ರಿಯ ನಾಯಕರಾದ ಸನ್ಮಾನ್ಯ ಶ್ರೀ BS Yediyurappa ಅವರ ಸಾರ್ವಜನಿಕ ಜೀವನದ 50 ವರ್ಷಗಳ ಸಾರ್ಥಕ ಪಯಣದ ನೆನಪಿಗಾಗಿ ಮೇ 9 ರಂದು ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿರುವ “ಬಿಎಸ್ವೈ ಅಭಿಮಾನೋತ್ಸವ” ಬೃಹತ್ ಸಮಾವೇಶ ಕಾಯ೯ಕ್ರಮಕ್ಕೆ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಚಿತ್ರದುರ್ಗಕ್ಕೆ ಎಲ್ಲರಿಗೂ ಹಾದಿ೯ಕ ಸುಸ್ವಾಗತ......
📍 ಸ್ಥಳ: ಪರಮ ಪೂಜ್ಯ ಶ್ರೀ ಮಾದಾರ ಚೆನ್ನಯ್ಯ ಗುರುಪೀಠ ಮೈದಾನ
🕘 ಸಮಯ: ಬೆಳಿಗ್ಗೆ 10:30 ಘಂಟೆಗೆ...
ನಿಮ್ಮ ಉಪಸ್ಥಿತಿ ನಮಗೆಲ್ಲರಿಗೂ ಪ್ರೇರಣೆ. ಎಲ್ಲರಿಗೂ ಆದರದ ಆಹ್ವಾನ🙏"""""
Vijayendra Yediyurappa
BS Yediyurappa
🚩