21/05/2026
ವಿಜಯಪುರದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ನಡೆದ ಮಾಜಿ ಶಾಸಕರಾದ ಲಿಂ. ಶ್ರೀ ಆರ್.ಆರ್. ಕಲ್ಲೂರ ಹಾಗೂ ಲಿಂ. ಶ್ರೀಮತಿ ಮೀನಾಕ್ಷಿ ಆರ್. ಕಲ್ಲೂರ ಅವರ ಐದನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರವ ನಮನ ಸಲ್ಲಿಸಿದೆ. ಇದೇ ಸಂದರ್ಭದಲ್ಲಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮೂರ್ತಿ ಅನಾವರಣ ಕಾರ್ಯಕ್ರಮವನ್ನೂ ನೆರವೇರಿಸಲಾಯಿತು.
ಸರಳ ಸಜ್ಜನಿಕೆಯ ಸಾಕಾರ ಮೂರ್ತಿಗಳಾಗಿದ್ದ ಕಲ್ಲೂರ ದಂಪತಿಗಳ ಸಮಾಜಮುಖಿ ಸೇವೆ, ಸದಾ ಬಡವರ ಏಳಿಗೆಗಾಗಿ ತುಡಿಯುತ್ತಿದ್ದ ಅವರ ಜನಪರ ಚಿಂತನೆ ಮತ್ತು ರಾಜಕೀಯ ಕ್ಷೇತ್ರಕ್ಕೆ ಅವರು ನೀಡಿದ ಅಪ್ರತಿಮ ಕೊಡುಗೆಗಳನ್ನು ಈ ಸಂದರ್ಭದಲ್ಲಿ ಗೌರವದಿಂದ ಸ್ಮರಿಸಲಾಯಿತು. ಅವರು ಹಾಕಿಕೊಟ್ಟ ಆದರ್ಶದ ಹಾದಿ, ಸಾರ್ವಜನಿಕ ಸೇವೆಯಲ್ಲಿ ನಮಗೆ ಸದಾ ದಾರಿದೀಪ ಮತ್ತು ಪ್ರೇರಣೆಯಾಗಿದೆ.
ಈ ಸಂದರ್ಭದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು, ಸಂಸದರು. ಶಾಸಕರುಗಳು, ಮಾಜಿ ಶಾಸಕರುಗಳು, ಸೇರಿದಂತೆ ವಿವಿಧ ಮಠದ ಶ್ರೀಗಳು, ಅನೇಕ ಗಣ್ಯರು, ಮುಖಂಡರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
🚩