ರಾದೇ ಪುಸ್ತಕ ಸಂಗ್ರಹ ಮಂದಿರ

ರಾದೇ ಪುಸ್ತಕ ಸಂಗ್ರಹ ಮಂದಿರ Contact information, map and directions, contact form, opening hours, services, ratings, photos, videos and announcements from ರಾದೇ ಪುಸ್ತಕ ಸಂಗ್ರಹ ಮಂದಿರ, Chamarajanagar.

ತರಾಸು ಕನ್ನಡದ ಮಹಾನ್ ಕಾದಂಬರಿಕಾರರು, ತಮ್ಮ ಸಾಹಿತ್ಯ ಅನುಭವದಿಂದ ಹಲವಾರು ಸಾಮಾಜಿಕ, ಚಾರಿತ್ರಿಕ, ಮನೋ ವೈಜ್ಞಾನಿಕ ಕಾದಂಬರಿಗಳಿಂದ ಕನ್ನಡ ಕಾದಂ...
28/01/2026

ತರಾಸು ಕನ್ನಡದ ಮಹಾನ್ ಕಾದಂಬರಿಕಾರರು, ತಮ್ಮ ಸಾಹಿತ್ಯ ಅನುಭವದಿಂದ ಹಲವಾರು ಸಾಮಾಜಿಕ, ಚಾರಿತ್ರಿಕ, ಮನೋ ವೈಜ್ಞಾನಿಕ ಕಾದಂಬರಿಗಳಿಂದ ಕನ್ನಡ ಕಾದಂಬರಿ ಕ್ಷೇತ್ರವನ್ನು ಶ್ರೀಮಂತಗೊಳಿಸಿರಿವುದರಲ್ಲಿ ಇವರು ಪ್ರಮುಖರು,
ಇವರ ನಾಗರಹಾವು, ಎರಡು ಹೆಣ್ಣು ಒಂದು ಗಂಡು, ಮತ್ತು ಸರ್ಪಮತ್ಸರ ಈ ಮೂರು ಕೃತಿಗಳನ್ನು ಸಿ ಕೆ ಕೃಷ್ಣಮೂರ್ತಿಯವರು ಕಾವ್ಯಾಲಯ ಪ್ರಕಾಶನ ಮೈಸೂರು ಮುಖಾಂತರ ಒಂದೇ ಪುಸ್ತಕದಲ್ಲಿ ನೀಡಿದ್ದರೆ. ಆ ಕೃತಿಯೇ #ನಾಗರಹಾವು #ರಾದೇಪುಸ್ತಕಸಂಗ್ರಮಂದಿರ #ರಾದೇಪ್ರತಿಷ್ಟನ #ಸಾಹಿತ್ಯ

ಮೈಸೂರಿನ ಮಾಜಿ ಬಸ್ ಕಂಡಕ್ಟರ್, ಪುಸ್ತಕ ಪ್ರೇಮಿ ಅಂಕೇಗೌಡ ಅವರಿಗೆ 'ಪದ್ಮಶ್ರೀ' ಪ್ರಶಸ್ತಿ ಸಂದಿದೆ.ಈ ಹಿಂದೆ ಬಸ್ ಕಂಡಕ್ಟರ್ ಆಗಿದ್ದ ಅಂಕೇಗೌಡ ಅ...
25/01/2026

ಮೈಸೂರಿನ ಮಾಜಿ ಬಸ್ ಕಂಡಕ್ಟರ್, ಪುಸ್ತಕ ಪ್ರೇಮಿ ಅಂಕೇಗೌಡ ಅವರಿಗೆ 'ಪದ್ಮಶ್ರೀ' ಪ್ರಶಸ್ತಿ ಸಂದಿದೆ.

ಈ ಹಿಂದೆ ಬಸ್ ಕಂಡಕ್ಟರ್ ಆಗಿದ್ದ ಅಂಕೇಗೌಡ ಅವರು, ಪುಸ್ತಕಗಳೇ ತಮ್ಮ ಪ್ರಪಂಚ ಎಂದುಕೊಂಡು 20 ಭಾಷೆಗಳಲ್ಲಿ ಎರಡು ದಶಲಕ್ಷಕ್ಕೂ ಹೆಚ್ಚು ಪುಸ್ತಕಗಳು ಇರುವ ವಿಶ್ವದ ಅತಿದೊಡ್ಡ ಉಚಿತ-ಪ್ರವೇಶದ ಗ್ರಂಥಾಲಯವಾದ ‘ಪುಸ್ತಕ ಮನೆ’ ಅನ್ನು ಸ್ಥಾಪಿಸಿದ್ದಾರೆ.

ಮಂಡ್ಯದ ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯಲ್ಲಿರುವ 'ಪುಸ್ತಕದ ಮನೆ'ಯನ್ನು ಸಾರ್ವಜನಿಕರಿಗಾಗಿ ತೆರೆದಿಟ್ಟಿರುವ ಎಂ. ಅಂಕೇ ಗೌಡರು, ಪುಸ್ತಕ ಅಲ್ಲದೇ ನಾಣ್ಯ, ಅಂಚೆ ಚೀಟಿ ಮತ್ತು ಲಗ್ನಪತ್ರಿಕೆಗಳ ಅಪರೂಪದ ಸಂಗ್ರಹವನ್ನು ಹೊಂದಿದ್ದಾರೆ.

13/01/2026
ಕಾಡಂಚಿನ ಮಂಗಲ ಗ್ರಾಮದ ಮಕ್ಕಳೊಂದಿಗೆ ಹರಟೆ ಹೊಡೆದು, ಗ್ರಂಥಾಲಯಕ್ಕೆ  #ರಾದೇ_ಪುಸ್ತಕ_ಸಂಗ್ರಹ_ಮಂದಿರ ದಿಂದ ಪುಸ್ತಕವನ್ನು ವಿತರಿಸಲಾಯಿತು.
24/12/2025

ಕಾಡಂಚಿನ ಮಂಗಲ ಗ್ರಾಮದ ಮಕ್ಕಳೊಂದಿಗೆ ಹರಟೆ ಹೊಡೆದು, ಗ್ರಂಥಾಲಯಕ್ಕೆ #ರಾದೇ_ಪುಸ್ತಕ_ಸಂಗ್ರಹ_ಮಂದಿರ ದಿಂದ ಪುಸ್ತಕವನ್ನು ವಿತರಿಸಲಾಯಿತು.

ಗಣಿತಜ್ಞ ಶ್ರೀನಿವಾಸ ರಾಮಾನುಜನ್ ರವರ ಹುಟ್ಟು ಹಬ್ಬದ ಪ್ರಯುಕ್ತ ಗುಂಡ್ಲುಪೇಟೆ ತಾಲೂಕಿನ ಪಡಗೂರು ಶ್ರೀ ಮದ್ದಾನೇಶ್ವರ ವಿದ್ಯಾ ಸಂಸ್ಥೆಗೆ ನಮ್ಮ ರ...
23/12/2025

ಗಣಿತಜ್ಞ ಶ್ರೀನಿವಾಸ ರಾಮಾನುಜನ್ ರವರ ಹುಟ್ಟು ಹಬ್ಬದ ಪ್ರಯುಕ್ತ ಗುಂಡ್ಲುಪೇಟೆ ತಾಲೂಕಿನ ಪಡಗೂರು ಶ್ರೀ ಮದ್ದಾನೇಶ್ವರ ವಿದ್ಯಾ ಸಂಸ್ಥೆಗೆ ನಮ್ಮ ರಾದೇ ಪುಸ್ತಕ ಸಂಗ್ರಹ ಮಂದಿರದಿಂದ ಪುಸ್ತಕವನ್ನು ವಿತರಿಸಲಾಯಿತು.
#ರಾದೇ_ಪುಸ್ತಕ_ಸಂಗ್ರಹ_ಮಂದಿರ #ರಾದೇ_ಪ್ರತಿಷ್ಠಾನ #ಪುಸ್ತಕಸಂತೆ

ರಾದೇ ಪುಸ್ತಕ ಸಂಗ್ರಹ ಮಂದಿರ ದಲ್ಲಿ  #ಜಿ_ಪಿ_ರಾಜರತ್ನಂ ರವರ 116 ನೇ ಜಯಂತಿಯನ್ನು ಆಚರಿಸಲಾಯಿತು. #ರಾದೇ_ಪ್ರತಿಷ್ಠಾನ  #ಪುಸ್ತಕಸಂತೆ        ...
07/12/2025

ರಾದೇ ಪುಸ್ತಕ ಸಂಗ್ರಹ ಮಂದಿರ ದಲ್ಲಿ #ಜಿ_ಪಿ_ರಾಜರತ್ನಂ ರವರ 116 ನೇ ಜಯಂತಿಯನ್ನು ಆಚರಿಸಲಾಯಿತು.
#ರಾದೇ_ಪ್ರತಿಷ್ಠಾನ #ಪುಸ್ತಕಸಂತೆ #ರಾದೇ_ಪುಸ್ತಕ_ಸಂಗ್ರಹ_ಮಂದಿರ

ಬೇರಂಬಾಡಿಯ ಡಿಜಿಟಲ್ ಗ್ರಂಥಾಲಯ ಹಾಗೂ ಅರಿವು ಕೇಂದ್ರಕ್ಕೆ  #ಕೊರಟಿ_ಶ್ರೀನಿವಾಸರಾಯರ ಶತಮಾನೋತ್ಸವದ ಪ್ರಯುಕ್ತ ಭೇಟಿ ನೀಡಿ  #ರಾದೇ_ಪ್ರತಿಷ್ಠಾನ ...
21/11/2025

ಬೇರಂಬಾಡಿಯ ಡಿಜಿಟಲ್ ಗ್ರಂಥಾಲಯ ಹಾಗೂ ಅರಿವು ಕೇಂದ್ರಕ್ಕೆ #ಕೊರಟಿ_ಶ್ರೀನಿವಾಸರಾಯರ ಶತಮಾನೋತ್ಸವದ ಪ್ರಯುಕ್ತ ಭೇಟಿ ನೀಡಿ #ರಾದೇ_ಪ್ರತಿಷ್ಠಾನ ವತಿಯಿಂದ ಗ್ರಂಥಾಲಯ ಸಹಾಯಕ ಬೆಳ್ಳನಾಯಕರವರಿಗೆ ಪುಸ್ತಕಗಳನ್ನು ವಿತರಿಸಲಾಯಿತು.
@ಶೈಲಕುಮಾರ್ ಎಂ Dr Rajesh Nayak G R #ಪುಸ್ತಕಸಂತೆ

15/11/2025

ಪುಸ್ತಕ ಪ್ರೇಮಿ ಡಾ ಬೆಟ್ಟಸ್ವಾಮಿಯವರು ರಾದೇ ಪುಸ್ತಕ ಸಂಗ್ರಹ ಮಂದಿರ ಕ್ಕೆ ಭೇಟಿ ನೀಡಿ ತಮ್ಮ ಮನದ ಮಾತನ್ನು ಹಂಚಿಕೊಂಡರು

ಪುಸ್ತಕ ಸಂತೆಯ ಬಹುಮುಖ್ಯ ಆಕರ್ಷಣೆಓ ಲೇ (ಓದುಗ - ಲೇಖಕ)ಈಗ ನೀವು ಈ ವಿಭಾಗಕ್ಕೆ ನೋಂದಾಯಿಸಿಕೊಳ್ಳಬಹುದು.ನೋಂದಾಯಿಸಲು ಕೆಳಗೆ ಕೊಟ್ಟಿರುವ ಕೊಂಡಿಯ...
22/10/2025

ಪುಸ್ತಕ ಸಂತೆಯ ಬಹುಮುಖ್ಯ ಆಕರ್ಷಣೆ
ಓ ಲೇ (ಓದುಗ - ಲೇಖಕ)
ಈಗ ನೀವು ಈ ವಿಭಾಗಕ್ಕೆ ನೋಂದಾಯಿಸಿಕೊಳ್ಳಬಹುದು.
ನೋಂದಾಯಿಸಲು ಕೆಳಗೆ ಕೊಟ್ಟಿರುವ ಕೊಂಡಿಯನ್ನು ಒತ್ತಿ.
https://veeralokabooks.com/ole-register

#ವೀರಲೋಕ #ಲೇಖಕ #ಪುಸ್ತಕಸಂತೆ #ಹೊಸಪುಸ್ತಕ #ಕನ್ನಡ #ಪುಸ್ತಕಸಂತೆ3

ಶಿಲ್ಪಗಳಲ್ಲಿ ರಾಮಾಯಣ…ʼಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿʼ ಅಂತ ದೊಡ್ಡರಂಗೇಗೌಡರು ಬರೆದಿದ್ದನ್ನು ಯಾವ ಕನ್ನಡಿಗನೂ ಮರೆಯಲಾರ. ಇದೀಗ ʼಕಾಣಿ...
17/10/2025

ಶಿಲ್ಪಗಳಲ್ಲಿ ರಾಮಾಯಣ…

ʼಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿʼ ಅಂತ ದೊಡ್ಡರಂಗೇಗೌಡರು ಬರೆದಿದ್ದನ್ನು ಯಾವ ಕನ್ನಡಿಗನೂ ಮರೆಯಲಾರ. ಇದೀಗ ʼಕಾಣಿಸದೆ ಶಿಲ್ಪ ಶಿಲ್ಪಗಳಲೂ ರಾಮ, ಸೀತೆʼ ಅನ್ನೋ ಕಾಲ. ಹೌದು... ಶಿಲ್ಪಗಳಲಿ ರಾಮಾಯಣ ಎನ್ನುವ ಕೃತಿ ವೀರಲೋಕದ ಪುಸ್ತಕ ಸಂತೆಯಲ್ಲಿ ಬಿಡುಗಡೆಗೊಳ್ಳುತ್ತಿದೆ. ವರ್ಷಕ್ಕೆ ಹತ್ತು ಹನ್ನೆರಡು ಪುಸ್ತಕ ಬರೆಯುವ ಸಾಮಾರ್ಥ್ಯವಿರುವ ಲೇಖಕರು ನಮ್ಮ ನಡುವೆ ಇದ್ದಾರೆ. ಆದರೆ ಈ ಕೃತಿಗಾಗಿ ಪುಂಡಲೀಕ ಕಲ್ಲಿಗನೂರು ಅವರು ವ್ಯಯಿಸಿರುವುದು ಬರೋಬ್ಬರಿ ಐದು ವರ್ಷ. ಊರೂರು ಅಲೆದಿದ್ದಾರೆ, ಪ್ರತಿ ಶಿಲ್ಪವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದಾರೆ. ಅಲ್ಲಿ ಕಂಡ ಶಿಲ್ಪಗಳಲ್ಲಿ ರಾಮಾಯಣ, ಮಹಾಭಾರತದ ಕಥೆಗಳನ್ನು ಗ್ರಹಿಸಿದ್ದಾರೆ. ಅವುಗಳನ್ನು ಚಂದದ ಫೋಟೋಗಳನ್ನಾಗಿಸಿದ್ದಾರೆ. ಆ ಫೋಟೋ ಮತ್ತು ಸಂಕ್ಷಿಪ್ತ ಬರಹದೊಂದಿಗೆ ಈ ಕೃತಿ ರಚಿಸಿದ್ದಾರೆ. ಇದೊಂದು ತಪಸ್ಸಿನಂತಹ ಕೆಲಸ. ಅದನ್ನವರು ಅಷ್ಟೇ ಶ್ರದ್ಧೆಯಿಂದ ಮಾಡಿ ಮುಗಿಸಿದ್ದಾರೆ. ಪುಸ್ತಕ ಸಂತೆಯ ಕೃತಿಗಳಲ್ಲಿ ಇದಕ್ಕೆ ವಿಶೇಷ ಸ್ಥಾನವಿದೆ.

ಓದುವ ಸುಖ ನಿಮ್ಮದಾಗಲಿ.

ನವೆಂಬರ್‌ 14,15 &16
ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನ (ಶಾಲಿನಿ)

ಸಂತೆಯಲ್ಲಿ ಈ ಕೃತಿ ನಿಮಗಾಗಿ ಕಾದಿರುತ್ತದೆ.

ನಿಮ್ಮ
ವೀರಕಪುತ್ರ ಶ್ರೀನಿವಾಸ
#ರಾದೇ_ಪ್ರತಿಷ್ಠಾನ

04/10/2025

ಗುಂಡ್ಲುಪೇಟೆ ರಾಜವೀರ ಮದಕರಿ ನಾಯಕ ರಸ್ತೆಯಲ್ಲಿ ಇರುವ ರಾದೇ ಪುಸ್ತಕ ಸಂಗ್ರಹ ಮಂದಿರಕ್ಕೆ ಪೂಜ್ಯ ಗುರುಗಳಾದ ಶ್ರೀ ನಿ.ಪ್ರ.ಸ್ವ ಇಮ್ಮಡಿ ಉದ್ದಾನ ಸ್ವಾಮಿಗಳು ಭೇಟಿ ನೀಡಿ ಆಶೀರ್ವದಿಸಿದರು.

30/09/2025

#ರಾದೇ_ಪ್ರತಿಷ್ಠಾನ ಹಾಗೂ #ಕನ್ನಡ_ಸಾಹಿತ್ಯ_ಪರಿಷತ್ತು ಚಾಮರಾಜನಗರ ಜಿಲ್ಲಾ ವತಿಯಿಂದ ಗುಂಡ್ಲುಪೇಟೆ ಪಟ್ಟಣದ ಜೆ.ಎಸ್. ಎಸ್ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಜೊತೆ #ನಿಮ್ಮ_ಮೊಬೈಲ್_ನಿಮ್ಮ_ಸುರಕ್ಷತೆ ವಿಷಯ ಕುರಿತು ಸಂವಾದ ಕಾರ್ಯಕ್ರಮ ನಡೆಸಿ ಕೊಡಲಾಯಿತು.

Address

Chamarajanagar
571111

Website

Alerts

Be the first to know and let us send you an email when ರಾದೇ ಪುಸ್ತಕ ಸಂಗ್ರಹ ಮಂದಿರ posts news and promotions. Your email address will not be used for any other purpose, and you can unsubscribe at any time.

Share