07/04/2026
ಮಾನ್ಯ ಪೊಲೀಸ್ ಆಯುಕ್ತರಾದ ಡಾ|| ಶರಣಪ್ಪ ಎಸ್ ಡಿ., ಐಪಿಎಸ್ ರವರ ನೇತೃತ್ವದಲ್ಲಿ “ಆಸರೆ ಮತ್ತು ಸನ್ಮಿತ್ರ” ಸಭೆಯನ್ನು ಆಯೋಜಿಸಲಾಯಿತು. “ಆಸರೆ” ಕಾರ್ಯಕ್ರಮದಡಿ ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯುವ ಬಗ್ಗೆ ಮಾರ್ಗದರ್ಶನ ನೀಡಲಾಯಿತು ಹಾಗೂ ತುರ್ತು ಆರೋಗ್ಯ ಸಮಸ್ಯೆಗಳ ಸಂದರ್ಭದಲ್ಲಿ ತಜ್ಞ ವೈದ್ಯರಿಂದ ಸಮಾಲೋಚನೆ ಪಡೆಯುವ ವ್ಯವಸ್ಥೆ ಕುರಿತು ವಿವರಿಸಲಾಯಿತು. ಸಭೆಯಲ್ಲಿ ತಜ್ಞ ಮಾನಸಿಕ ವೈದ್ಯರಾದ ಡಾ. ರಾಹುಲ್ ಮಂದಕನಳ್ಳಿ ಹಾಗೂ ಡಾ. ಪ್ರಭು ಕಿರಣ್ ಗೋಗಿ ರವರು ಡ್ರಗ್ಸ್ ವ್ಯಸನವು ವ್ಯಕ್ತಿಯ ಜೀವನ, ಕುಟುಂಬ ಹಾಗೂ ಸಮಾಜದ ಮೇಲೆ ಉಂಟುಮಾಡುವ ಗಂಭೀರ ಪರಿಣಾಮಗಳ ಬಗ್ಗೆ ವಿವರವಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಶಿವನಗೌಡ ಪಾಟೀಲ್, ACP ಉತ್ತರ ಉಪವಿಭಾಗ, ಶ್ರೀ ದಿಲೀಪ ಸಾಗರ, PI ರೋಜಾ ಪೊಲೀಸ್ ಠಾಣೆ, ಶ್ರೀಮತಿ ಅಕ್ಕಮಹಾದೇವಿ, PI ನಗರ ಮಹಿಳಾ ಠಾಣೆ, ಶ್ರೀ ಖಾಜಾಹುಸೇನ್, PI ಎಂ.ಬಿ. ನಗರ ಪೊಲೀಸ್ ಠಾಣೆ, ಶ್ರೀ ಸುಶೀಲ, PI ಚೌಕ್ ಪೊಲೀಸ್ ಠಾಣೆ ಹಾಗೂ ಧರ್ಮಸ್ಥಳದ ಪ್ರತಿನಿಧಿ ಶ್ರೀ ರಾಜೇಶ್ ಕೆ ಉಪಸ್ಥಿತರಿದ್ದರು. Karnataka State Police Karnataka State Police Karnataka State Police