Dr. Nagalakshmi ಡಾ. ನಾಗಲಕ್ಷ್ಮಿ

Dr. Nagalakshmi ಡಾ. ನಾಗಲಕ್ಷ್ಮಿ Chairperson Karnataka State Commission for Women|Paediatric Dentist|Professor|
(1)

ತಾಯಿ ಆರೋಗ್ಯವಾಗಿದ್ದರೆ ಮಗು ಆರೋಗ್ಯವಾಗಿ ಬೆಳೆಯುತ್ತದೆ; ಮಗು ಆರೋಗ್ಯವಾಗಿದ್ದರೆ ನಾಳಿನ ಸಮಾಜ ಸದೃಢವಾಗುತ್ತದೆ. ಪ್ರತಿಯೊಂದು ತಾಯಿ ಮತ್ತು ಮಗು...
19/09/2026

ತಾಯಿ ಆರೋಗ್ಯವಾಗಿದ್ದರೆ ಮಗು ಆರೋಗ್ಯವಾಗಿ ಬೆಳೆಯುತ್ತದೆ; ಮಗು ಆರೋಗ್ಯವಾಗಿದ್ದರೆ ನಾಳಿನ ಸಮಾಜ ಸದೃಢವಾಗುತ್ತದೆ. ಪ್ರತಿಯೊಂದು ತಾಯಿ ಮತ್ತು ಮಗುವಿಗೂ ಸಮತೋಲಿತ ಹಾಗೂ ಪೌಷ್ಟಿಕ ಆಹಾರ ದೊರೆಯುವಂತೆ ಕಾಳಜಿ ವಹಿಸೋಣ.

ಪೌಷ್ಟಿಕ ಆಹಾರಕ್ಕೆ ಆದ್ಯತೆ ನೀಡೋಣ, ಆರೋಗ್ಯವಂತ ಪೀಳಿಗೆಯನ್ನು ಬೆಳೆಸೋಣ.





ಕನ್ನಡ ಚಿತ್ರರಂಗದ ಹಿರಿಯ ನಟ, ಕಲಾವಿದ ಅನಂತ್ ನಾಗ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದು ಕನ್ನಡಿಗರೆಲ್ಲರಿಗೂ ಹೆ...
18/09/2026

ಕನ್ನಡ ಚಿತ್ರರಂಗದ ಹಿರಿಯ ನಟ, ಕಲಾವಿದ ಅನಂತ್ ನಾಗ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಕ್ಷಣ. ತಮ್ಮ ವಿಶಿಷ್ಟ ಅಭಿನಯ, ಸರಳತೆ ಹಾಗೂ ಅಪೂರ್ವ ಕಲಾ ಪ್ರತಿಭೆಯ ಮೂಲಕ ಭಾರತೀಯ ಚಿತ್ರರಂಗಕ್ಕೆ ನೀಡಿದ ಅನಂತ್ ನಾಗ್ ಅವರ ಕೊಡುಗೆ ಅನನ್ಯ.

ಈ ಗೌರವಕ್ಕೆ ಪಾತ್ರರಾದ ಅನಂತ್ ನಾಗ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಕಲಾ ಪಯಣಕ್ಕೆ ಮತ್ತಷ್ಟು ಗೌರವ, ಯಶಸ್ಸು ಮತ್ತು ಕೀರ್ತಿ ದೊರೆಯಲಿ ಎಂದು ಹಾರೈಸುತ್ತೇನೆ.





ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಭಾಗವಹಿಸಿದ ಕ್ಷಣ...
18/09/2026

ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ
ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಭಾಗವಹಿಸಿದ ಕ್ಷಣ...

ಪ್ರಜಾಪ್ರಭುತ್ವ ಬಲಗೊಳ್ಳುವುದು ಪ್ರತಿ ಮಹಿಳೆಯೂ ಸಮಾನ ಅವಕಾಶ ಮತ್ತು ಧ್ವನಿ ಪಡೆದಾಗ ಮಾತ್ರ. ಇಂತಹ ಸಮಾನ ಸಮಾಜ ನಿರ್ಮಾಣಕ್ಕಾಗಿ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ.





ಮಹಿಳೆಯರು ಮನೆಯಲ್ಲಿ, ಹೊಲದಲ್ಲಿ, ಕಚೇರಿಯಲ್ಲಿ, ಕಾರ್ಖಾನೆಯಲ್ಲಿ ಎಲ್ಲೆಡೆ ಪುರುಷರಷ್ಟೇ ಶ್ರಮ ಹಾಕುತ್ತಾರೆ. ಆದರೂ ಅದೇ ಕೆಲಸಕ್ಕೆ ಅವರಿಗೆ ಕಡಿಮ...
18/09/2026

ಮಹಿಳೆಯರು ಮನೆಯಲ್ಲಿ, ಹೊಲದಲ್ಲಿ, ಕಚೇರಿಯಲ್ಲಿ, ಕಾರ್ಖಾನೆಯಲ್ಲಿ ಎಲ್ಲೆಡೆ ಪುರುಷರಷ್ಟೇ ಶ್ರಮ ಹಾಕುತ್ತಾರೆ. ಆದರೂ ಅದೇ ಕೆಲಸಕ್ಕೆ ಅವರಿಗೆ ಕಡಿಮೆ ವೇತನ ಸಿಗುವುದು ಇಂದಿಗೂ ಸಾಮಾನ್ಯ. ಇದು ಕೇವಲ ಆರ್ಥಿಕ ಅನ್ಯಾಯವಲ್ಲ, ಇದು ಮಹಿಳೆಯ ಶ್ರಮ ಮತ್ತು ಸ್ವಾಭಿಮಾನಕ್ಕೆ ಆಗುವ ಅವಮಾನ.

ಸಮಾನ ಕೆಲಸಕ್ಕೆ ಸಮಾನ ವೇತನ - ಇದು ಕೇವಲ ಬೇಡಿಕೆಯಲ್ಲ, ಇದು ಹಕ್ಕು. ಪ್ರತಿ ಮಹಿಳೆಯ ಶ್ರಮಕ್ಕೂ ಗೌರವ ಸಿಗಬೇಕು, ಪ್ರತಿ ಕೈಗೂ ಸಮಾನ ಪ್ರತಿಫಲ ಸಿಗಬೇಕು.

ಇಂದು ನಾವು ಪ್ರತಿಜ್ಞೆ ಮಾಡೋಣ - ಮಹಿಳೆಯರ ಕೊಡುಗೆಯನ್ನು ಗುರುತಿಸೋಣ, ಅವರ ಶ್ರಮಕ್ಕೆ ತಕ್ಕ ಮೌಲ್ಯ ನೀಡೋಣ, ಸಮಾನತೆಯ ಸಮಾಜ ನಿರ್ಮಿಸೋಣ.

ಈ ದಿನ ನಮಗೆಲ್ಲರಿಗೂ ಲಿಂಗ ಸಮಾನತೆಯ ಕಡೆಗೆ ಒಂದು ಹೆಜ್ಜೆ ಮುಂದಿಡುವ ಸ್ಫೂರ್ತಿ ನೀಡಲಿ.

ಎಲ್ಲರಿಗೂ ಅಂತಾರಾಷ್ಟ್ರೀಯ ಸಮಾನ ವೇತನ ದಿನದ ಶುಭಾಶಯಗಳು!





ಮಧುಮಿತಾರವರ ಮೇಲೆ ನಡೆದ ಆಸಿಡ್ ದಾಳಿಯನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗವು ತೀವ್ರವಾಗಿ ಖಂಡಿಸಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಆರೋಪ...
17/09/2026

ಮಧುಮಿತಾರವರ ಮೇಲೆ ನಡೆದ ಆಸಿಡ್ ದಾಳಿಯನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗವು ತೀವ್ರವಾಗಿ ಖಂಡಿಸಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಹಾಗೂ ಮಧುಮಿತಾರವರಿಗೆ ಅಗತ್ಯ ರಕ್ಷಣೆ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.





ಶಿವಮೊಗ್ಗ ಜಿಲ್ಲಾ ಪ್ರವಾಸದ ವೇಳೆ ಮೆಗ್ಗಾನ್ ಆಸ್ಪತ್ರೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಮಹಿಳಾ ಪೊಲೀಸ್ ಠಾಣೆಗೆ ಭೇಟಿ ನೀಡಿ, ಅಲ್ಲಿನ ವ್...
17/09/2026

ಶಿವಮೊಗ್ಗ ಜಿಲ್ಲಾ ಪ್ರವಾಸದ ವೇಳೆ ಮೆಗ್ಗಾನ್ ಆಸ್ಪತ್ರೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಮಹಿಳಾ ಪೊಲೀಸ್ ಠಾಣೆಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದೆ. ಜೊತೆಗೆ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.

ಈ ಕುರಿತು ಪ್ರಕಟವಾದ ಪತ್ರಿಕಾ ವರದಿಗಳು.





17/09/2026

ನಿಮ್ಮೆಲ್ಲರಲ್ಲೂ ಒಂದು ಮನವಿ.

ನನ್ನನ್ನು ಭೇಟಿ ಮಾಡಲು ಬರುವವರು ನನ್ನ ಜೊತೆ ಫೋಟೋ ತೆಗೆಸಿಕೊಳ್ಳುವುದು, ವಿಡಿಯೋ ಮಾಡಿಕೊಳ್ಳುವುದು ಸಾಮಾನ್ಯ. ಆದರೆ ಇಂತಹ ಫೋಟೋ, ವಿಡಿಯೋಗಳನ್ನು ಬಳಸಿಕೊಂಡು ನನ್ನ ಹೆಸರಿನಲ್ಲಿ ಹಣ ಕೊಡಿ, ಉದ್ಯೋಗ ಕೊಡಿಸುತ್ತೇನೆ, ಮನೆ ಕೊಡಿಸುತ್ತೇನೆ ಎಂದು ಜನರಿಗೆ ಆಮಿಷ ಒಡ್ಡಿ ಮೋಸ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಹಾಗಾಗಿ, ನನ್ನ ಹೆಸರನ್ನು ಹೇಳಿಕೊಂಡು ಯಾರಾದರೂ ಇಂತಹ ಭರವಸೆ ನೀಡಿದರೆ ದಯವಿಟ್ಟು ನಂಬಬೇಡಿ.

ಅಷ್ಟೇ ಅಲ್ಲ, ನನ್ನ ಧ್ವನಿಯನ್ನು ಬಳಸಿಕೊಂಡು ಬೇರೆ ವಿಷಯಗಳ ಕುರಿತು ವಿಡಿಯೋಗಳನ್ನು ಸೃಷ್ಟಿಸಿ, ಸರ್ಕಾರದ ಯೋಜನೆಗಳ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತಿರುವುದೂ ಕಂಡುಬರುತ್ತಿದೆ. ಇಂತಹ ವಿಡಿಯೋಗಳನ್ನು ನಂಬುವ ಮೊದಲು ಮಾಹಿತಿಯನ್ನು ಪರಿಶೀಲಿಸಿ.

ನನ್ನನ್ನು ಭೇಟಿ ಮಾಡಲು ಯಾರ ಸಹಾಯವೂ ನಿಮಗೆ ಬೇಕಾಗಿಲ್ಲ. ನಾನು ನನ್ನ ಕಚೇರಿಯಲ್ಲಿ ಲಭ್ಯವಿರುತ್ತೇನೆ.

ಯಾವುದೇ ಆಮಿಷಕ್ಕೆ ಬಲಿಯಾಗಬೇಡಿ, ಯಾರದೋ ಮಾತು ನಂಬಿ ಮೋಸ ಹೋಗಬೇಡಿ. ಜಾಗರೂಕರಾಗಿರಿ.





16/09/2026

ನಮ್ಮ clinic @ಗೋವಿಂದರಾಜನಗರ

16/09/2026

ಕಾವೇರಿ ಪುರ ಸರ್ಕಾರಿ ಶಾಲೆ ಗೋವಿಂದರಾಜನಗರ

ಶಿವಮೊಗ್ಗ ಜಿಲ್ಲಾ ಪ್ರವಾಸದ ವೇಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಕುಡಿಯುವ ನೀರು, ಮಹಿಳಾ ಶೌಚಾಲಯ, ಹಾಲುಣಿಸುವ ಕೇಂದ್ರ, ಸ್ವ...
16/09/2026

ಶಿವಮೊಗ್ಗ ಜಿಲ್ಲಾ ಪ್ರವಾಸದ ವೇಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಕುಡಿಯುವ ನೀರು, ಮಹಿಳಾ ಶೌಚಾಲಯ, ಹಾಲುಣಿಸುವ ಕೇಂದ್ರ, ಸ್ವಚ್ಛತೆ ಹಾಗೂ ಸಿಸಿಟಿವಿ ಮತ್ತು ಬ್ಯಾಕಪ್ ಸುರಕ್ಷತಾ ವ್ಯವಸ್ಥೆಗಳನ್ನು ಪರಿಶೀಲಿಸಿದೆ.

ಡಿ-ಗ್ರೂಪ್ ನೌಕರರಿಗೆ ಸುರಕ್ಷತಾ ಸಾಮಗ್ರಿ ನೀಡದಿರುವುದು, ಸಮಯಕ್ಕೆ ಸರಿಯಾಗಿ ವೇತನ ಪಾವತಿಸದಿರುವುದು, ATM ಕಾರ್ಡ್ ಪಡೆದು ಕಡಿಮೆ ವೇತನ ನೀಡುತ್ತಿರುವುದು ಹಾಗೂ ಕೆಲಸ ನೀಡಲು ₹12,000 ಹಣದ ಬೇಡಿಕೆ/ವಸೂಲಿ ನಡೆಯುತ್ತಿದೆ ಎಂಬ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ಸಮಗ್ರ ಪರಿಶೀಲನೆ ನಡೆಸುವಂತೆ ಸೂಚಿಸಿದೆ.

ಮಹಿಳಾ ಸಹಾಯವಾಣಿ ಸಂಖ್ಯೆಗಳು ಪ್ರಮುಖ ಸ್ಥಳಗಳಲ್ಲಿ ಸ್ಪಷ್ಟವಾಗಿ ಕಾಣುವಂತೆ ಅಳವಡಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದೆ.

ಈ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಗುತ್ತಿಗೆ ಷರತ್ತುಗಳ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟ ಗುತ್ತಿಗೆ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೈಗೊಂಡ ಕ್ರಮಗಳ ವರದಿಯನ್ನು 15 ದಿನಗಳೊಳಗಾಗಿ ಸಲ್ಲಿಸುವಂತೆ ನಿರ್ದೇಶಿಸಿದ್ದೇನೆ.





Address

Dharwad
Bangalore
580001

Alerts

Be the first to know and let us send you an email when Dr. Nagalakshmi ಡಾ. ನಾಗಲಕ್ಷ್ಮಿ posts news and promotions. Your email address will not be used for any other purpose, and you can unsubscribe at any time.

Shortcuts

Share