Chittapur Assembly constituency Congress

Chittapur Assembly constituency Congress A well wishers of Priyanka Kharge

ಶಕುನವೆಂದೆಂಬೆ, ಅವಶಕುನವೆಂದೆಂಬೆ.ನಿಮ್ಮವರು ಅಳಲಿಕೆ ಅಂದೇಕೆ ಬಂದೆ?ನಿಮ್ಮವರು ಅಳಲಿಕೆ ಇಂದೇಕೆ ಹೋದೆ?ನೀ ಹೋಹಾಗಳಕ್ಕೆ! ಬಾಹಾಗಳಕ್ಕೆ!ಅಕ್ಕೆ ಬಾರ...
20/04/2026

ಶಕುನವೆಂದೆಂಬೆ, ಅವಶಕುನವೆಂದೆಂಬೆ.
ನಿಮ್ಮವರು ಅಳಲಿಕೆ ಅಂದೇಕೆ ಬಂದೆ?
ನಿಮ್ಮವರು ಅಳಲಿಕೆ ಇಂದೇಕೆ ಹೋದೆ?
ನೀ ಹೋಹಾಗಳಕ್ಕೆ! ಬಾಹಾಗಳಕ್ಕೆ!
ಅಕ್ಕೆ ಬಾರದ ಮುನ್ನ ಪೂಜಿಸು ಕೂಡಲಸಂಗಮದೇವನ.

ಸಾಮಾಜಿಕ ಅಸಮಾನತೆಯನ್ನು ತೊಲಗಿಸಲು, ಧರ್ಮ ಕರ್ಮಗಳ ಮರ್ಮವನ್ನು ತಿಳಿಸಲು, ಜಾತಿ ತಾರತಮ್ಯಕ್ಕೆ ಪ್ರತಿರೋಧ ಒಡ್ಡಲು, ಶ್ರೇಣೀಕರಣ ವ್ಯವಸ್ಥೆಯಡಿ ನಡೆಯುವ ಶೋಷಣೆ ಹಾಗೂ ವಂಚನೆಯ ವಿರುದ್ಧ ಸಿಡಿದೇಳುವ ದನಿಯಾಗಲು ಜಗತ್ತಿಗೆ ದೊರೆತ ಪ್ರಖರ ಧ್ವನಿ ಎಂದರೆ ಕ್ರಾಂತಿಯೋಗಿ ಜಗದ್ಗುರು ಬಸವಣ್ಣ.

ಬಸವಣ್ಣನವರು ಜಾತಿ ತಾರತಮ್ಯ, ಮೇಲು-ಕೀಳು, ಅಸ್ಪೃಶ್ಯತೆಯಂತಹ ಕ್ರೂರ ಆಚರಣೆಗಳಿಂದ ನಲುಗಿದ್ದ ಸಮಾಜದಲ್ಲಿ ಹೊಸ ಕ್ರಾಂತಿಯನ್ನು ಹುಟ್ಟುಹಾಕಿದ ಶರಣರಲ್ಲಿ ಅಗ್ರಗಣ್ಯರು. ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಅರಿವಿನ ಬೆಳಕು ಮೂಡಿಸಿದವರು. ಸಮಾನತೆಯ ಬೀಜ ಬಿತ್ತಿದ, ಶೋಷಣೆ-ಮೂಢನಂಬಿಕೆಗಳ ವಿರುದ್ಧ ಹೋರಾಡಿದ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಜಗಜ್ಯೋತಿ ಬಸವಣ್ಣನವರು ತೋರಿಸಿದ ಹಾದಿಯಲ್ಲಿ ನಾವೆಲ್ಲಾ ಮುನ್ನಡೆಯೋಣ.

ಸರ್ವರಿಗೂ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು.

ಶತಮಾನಗಳಿಂದಲೂ ಸಾಮಾಜಿಕ ಶ್ರೇಣಿ ವ್ಯವಸ್ಥೆಯಡಿ ಅಸಮಾನತೆ, ಅಸ್ಪೃಶ್ಯತೆ, ಶೋಷಣೆ, ಜಾತಿ ತಾರತಮ್ಯದಂತಹ ಅಮಾನವೀಯ ಆಚರಣೆಗಳ ಕಪಿಮುಷ್ಠಿಯಲ್ಲಿ ನಲುಗ...
14/04/2026

ಶತಮಾನಗಳಿಂದಲೂ ಸಾಮಾಜಿಕ ಶ್ರೇಣಿ ವ್ಯವಸ್ಥೆಯಡಿ ಅಸಮಾನತೆ, ಅಸ್ಪೃಶ್ಯತೆ, ಶೋಷಣೆ, ಜಾತಿ ತಾರತಮ್ಯದಂತಹ ಅಮಾನವೀಯ ಆಚರಣೆಗಳ ಕಪಿಮುಷ್ಠಿಯಲ್ಲಿ ನಲುಗಿದ್ದ ಭಾರತಕ್ಕೆ ಹೊಸ ದಿಕ್ಕು ತೋರಿದವರು ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಅವರು.

ದೀನ ದಲಿತರು, ವಂಚಿತರು ಸದಾ ಅವಮಾನದ ಬೇಗೆಯಲ್ಲಿಯೇ ಬೇಯುವ ಸನ್ನಿವೇಶವಿತ್ತು. ಅದನ್ನು ಬಾಬಾ ಸಾಹೇಬರು ಕೂಡ ಸ್ವತಃ ಅನುಭವಿಸಿದ್ದರು. ದೇಶದ ಆಧಾರಸ್ತಂಭ ಈ ಶ್ರಮಿಕ ವರ್ಗವಾಗಿದ್ದರೂ, ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಅವರು ನಿಕೃಷ್ಟರಾಗಿದ್ದರು. ಶೋಷಿತರಿಗೆ ದನಿಯಾಗಲು, ಅವರಿಗೆ ಸಾಮಾಜಿಕ ನ್ಯಾಯ, ಅವಕಾಶಗಳನ್ನು ಒದಗಿಸಲು ಅಂಬೇಡ್ಕರ್ ಅವರು ನೀಡಿದ ಅಸ್ತ್ರವೆಂದರೆ ಸಂವಿಧಾನ. ಅತ್ಯಂತ ಸಂಕೀರ್ಣ ಸಾಮಾಜಿಕ ವ್ಯವಸ್ಥೆಯಲ್ಲಿಯೂ ಭಾರತ ಇಂದು ಅಭಿವೃದ್ಧಿಪಥದಲ್ಲಿ ಸಾಗುತ್ತಿದೆ, ಸಂವಿಧಾನದಿಂದಾಗಿ ದೀನ ದಲಿತರಿಗೂ ಅವಕಾಶಗಳು ಸಿಗುತ್ತಿವೆ ಎನ್ನುವುದಕ್ಕೆ ಮೂಲ ಕಾರಣಕರ್ತರು ಡಾ. ಬಿ.ಆರ್. ಅಂಬೇಡ್ಕರ್ ಅವರು. ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆ ವಿರುದ್ಧ ಅವರು ನಡೆಸಿದ ಅಹಿಂಸಾತ್ಮಕ ಕ್ರಾಂತಿಯ ಫಲವಾಗಿ ಇಂದು ದುರ್ಬಲರು, ಅಸ್ಪೃಶ್ಯರು ದನಿ ಎತ್ತುವ ಶಕ್ತಿ ಪಡೆದಿದ್ದಾರೆ.

ಎಲ್ಲರನ್ನೂ ಒಳಗೊಳ್ಳುವ, ಸಾಮಾಜಿಕ ನ್ಯಾಯ ಒದಗಿಸುವ ಕನಸು ಕಂಡಿದ್ದು ಮಾತ್ರವಲ್ಲದೆ, ಅದನ್ನು ಕಾರ್ಯರೂಪಕ್ಕೆ ತರುವಲ್ಲಿಯೂ ಅಂಬೇಡ್ಕರ್ ಅವರು ಪಟ್ಟ ಶ್ರಮ ಅಸಾಧಾರಣ. ಸಾಮಾಜಿಕ ಪರಿವರ್ತನೆಗಾಗಿ ಅವರು ನಡೆಸಿದ ಹೋರಾಟ, ಅವರು ಅನುಸರಿಸಿದ ತತ್ವ ಸಿದ್ಧಾಂತ ಹಾಗೂ ಸಂದೇಶಗಳನ್ನು ನಮ್ಮ ಜೀವನದಲ್ಲಿಯೂ ಪಾಲಿಸಿದಾಗ ಮಾತ್ರವೇ ಬಾಬಾ ಸಾಹೇಬರ ಆಶಯಗಳನ್ನು ಈಡೇರಿಸಲು ಸಾಧ್ಯ.

ದಮನಿತ ಶಕ್ತಿಗಳ ಹಿಡಿತವನ್ನು ಸಡಿಲಿಸಿ, ಸಂವಿಧಾನದ ಮೂಲಕ ನಮಗೆ ಹಕ್ಕುಗಳನ್ನು ನೀಡಿದ ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳು.

ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು
02/04/2026

ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು

ನಾಡಿನ ಸಮಸ್ತ ಜನತೆಗೆ ಶ್ರೀ ರಾಮನವಮಿ ಹಬ್ಬದ ಶುಭಾಶಯಗಳು.
27/03/2026

ನಾಡಿನ ಸಮಸ್ತ ಜನತೆಗೆ ಶ್ರೀ ರಾಮನವಮಿ ಹಬ್ಬದ ಶುಭಾಶಯಗಳು.

ನಾಡಿನ ಸಮಸ್ತ ಮುಸಲ್ಮಾನ ಬಾಂಧವರಿಗೆ ಶಾಂತಿ, ಪ್ರೀತಿ, ಭ್ರಾತೃತ್ವದ ಸಂದೇಶಗಳನ್ನು ಸಾರುವ ಈದ್ ಉಲ್-ಫಿತರ್ ಹಬ್ಬದ ಶುಭಾಶಯಗಳು.ಈ ಹಬ್ಬವು ಸರ್ವರಿ...
21/03/2026

ನಾಡಿನ ಸಮಸ್ತ ಮುಸಲ್ಮಾನ ಬಾಂಧವರಿಗೆ ಶಾಂತಿ, ಪ್ರೀತಿ, ಭ್ರಾತೃತ್ವದ ಸಂದೇಶಗಳನ್ನು ಸಾರುವ ಈದ್ ಉಲ್-ಫಿತರ್ ಹಬ್ಬದ ಶುಭಾಶಯಗಳು.

ಈ ಹಬ್ಬವು ಸರ್ವರಿಗೂ ಸುಖ, ಸಮೃದ್ಧಿ, ಉತ್ತಮ ಆರೋಗ್ಯ ನೀಡಲಿ ಎಂದು ಆಶಿಸುತ್ತೇನೆ.

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.ಈ ಯುಗಾದಿ ಹಬ್ಬವು ನಿಮ್ಮ ಬಾಳಿನಲ್ಲಿ ಹೊಸ ಚೇತನವನ್ನು ಹೊತ್ತು ತರಲಿ. ಹೊಸ ಭರವಸೆಗಳ...
19/03/2026

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ಈ ಯುಗಾದಿ ಹಬ್ಬವು ನಿಮ್ಮ ಬಾಳಿನಲ್ಲಿ ಹೊಸ ಚೇತನವನ್ನು ಹೊತ್ತು ತರಲಿ. ಹೊಸ ಭರವಸೆಗಳು, ಕನಸುಗಳು ಮತ್ತು ಆಕಾಂಕ್ಷೆಗಳಿಂದ ತುಂಬಿದ ವರ್ಷ ನಿಮ್ಮದಾಗಲಿ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ದೈಹಿಕವಾಗಿ ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಆದರ್ಶಗಳು, ಅವರ ಯೋಚನೆಗಳು, ಯೋಜನೆಗಳು ಎಂದೆಂದಿಗೂ ನ...
17/03/2026

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ದೈಹಿಕವಾಗಿ ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಆದರ್ಶಗಳು, ಅವರ ಯೋಚನೆಗಳು, ಯೋಜನೆಗಳು ಎಂದೆಂದಿಗೂ ನಮ್ಮೊಂದಿಗಿರುತ್ತದೆ.

ತಮ್ಮ ವಿಶೇಷ ವ್ಯಕ್ತಿತ್ವದಿಂದ ಯುವಶಕ್ತಿಗೆ ಪ್ರೇರಣೆಯಾಗಿ, ಸಾವಿರಾರು ಜನರಿಗೆ ಬದುಕು ನೀಡಿ, ಲಕ್ಷಾಂತರ ಅಭಿಮಾನಿಗಳ ಬಳಗವನ್ನು ಹೊಂದಿ, ಆಕಾಶದಲ್ಲಿ ಮಿಂಚುತ್ತಿರುವ, ಕರ್ನಾಟಕದ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಅವರನ್ನು ಮನದುಂಬಿ ಸ್ಮರಿಸುತ್ತೇನೆ.

ನಾಡಿನ ಸಮಸ್ತ ಜನತೆಗೆ ಭಾವೈಕ್ಯ, ಸೌಹಾರ್ದತೆ, ಸಹೋದರತ್ವ ಮತ್ತು ಪರಸ್ಪರ ಪ್ರೀತಿಯ ಸಂಕೇತವಾದ ರಂಜಾನ್ ಮಾಸಾಚರಣೆಯ ಶುಭಾಶಯಗಳು. ಈ ಪವಿತ್ರ ಮಾಸದ ...
19/02/2026

ನಾಡಿನ ಸಮಸ್ತ ಜನತೆಗೆ ಭಾವೈಕ್ಯ, ಸೌಹಾರ್ದತೆ, ಸಹೋದರತ್ವ ಮತ್ತು ಪರಸ್ಪರ ಪ್ರೀತಿಯ ಸಂಕೇತವಾದ ರಂಜಾನ್ ಮಾಸಾಚರಣೆಯ ಶುಭಾಶಯಗಳು.

ಈ ಪವಿತ್ರ ಮಾಸದ ಆಚರಣೆಯು ಕರುಣೆ, ಸಹಾನುಭೂತಿ, ಸಹಬಾಳ್ವೆಯ ಸಂದೇಶವನ್ನು ಹರಡಲಿ ಎಂದು ಆಶಿಸುತ್ತೇನೆ.

ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳುಈ ಹಬ್ಬವು ಎಲ್ಲರಿಗೂ ಒಳಿತು ಮಾಡಲಿ, ಎಲ್ಲರ ಮನಸ್ಸಿನಲ್ಲಿ ಸುಖ ಶಾಂತಿ ನೆಮ್ಮದ...
15/02/2026

ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು

ಈ ಹಬ್ಬವು ಎಲ್ಲರಿಗೂ ಒಳಿತು ಮಾಡಲಿ, ಎಲ್ಲರ ಮನಸ್ಸಿನಲ್ಲಿ ಸುಖ ಶಾಂತಿ ನೆಮ್ಮದಿ ನೆಲಸಲಿ ಎಂದು ಆಶಿಸುತ್ತೇನೆ.

18ನೇ ಶತಮಾನದಲ್ಲಿ ಬಂಜಾರ ಸಮುದಾಯವನ್ನು ಸಂಘಟಿಸಿ, ಅದಕ್ಕೆ ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸ್ವರೂಪ ನೀಡುವ ಮೂಲಕ ಸಮುದಾಯದ ಸರ್...
15/02/2026

18ನೇ ಶತಮಾನದಲ್ಲಿ ಬಂಜಾರ ಸಮುದಾಯವನ್ನು ಸಂಘಟಿಸಿ, ಅದಕ್ಕೆ ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸ್ವರೂಪ ನೀಡುವ ಮೂಲಕ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಸಂತ ಸೇವಾಲಾಲರ ತತ್ವಾದರ್ಶಗಳು ಇಂದಿಗೂ ನಮ್ಮೆಲ್ಲರಿಗೆ ಮಾದರಿಯಾಗಿವೆ.

ಬಂಜಾರ ಸಮುದಾಯದವರ ಏಳಿಗೆಗಾಗಿ ತಮ್ಮ ಇಡೀ ಜೀವನವನ್ನೇ ಮೀಸಲಿಟ್ಟಿದ್ದ ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತೋತ್ಸವದಂದು ಅವರನ್ನು ಮನದುಂಬಿ ಸ್ಮರಿಸುತ್ತೇನೆ.

ಸೇವಾಲಾಲ್ ಮಹಾರಾಜರ ಬೋಧನೆಗಳು ಬಂಜಾರ ಸಮುದಾಯದ ಜೀವನಶೈಲಿ, ಚಿಂತನೆಯನ್ನು ಬದಲಾಯಿಸಿತು. ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು.

MGNREGA ಜಾರಿಗೆ ಬಂದು 20 ವರ್ಷಗಳು ಕಳೆದಿವೆ.ಕೇವಲ ಒಂದು ಕಾರ್ಯಕ್ರಮಕ್ಕೂ ಮೀರಿ ಅದು, ದೇಶಾದ್ಯಂತ ಸುಮಾರು 15.56 ಕೋಟಿ ಗ್ರಾಮೀಣ ನಾಗರಿಕರಿಗೆ ...
03/02/2026

MGNREGA ಜಾರಿಗೆ ಬಂದು 20 ವರ್ಷಗಳು ಕಳೆದಿವೆ.

ಕೇವಲ ಒಂದು ಕಾರ್ಯಕ್ರಮಕ್ಕೂ ಮೀರಿ ಅದು, ದೇಶಾದ್ಯಂತ ಸುಮಾರು 15.56 ಕೋಟಿ ಗ್ರಾಮೀಣ ನಾಗರಿಕರಿಗೆ ಜೀವನಾಡಿಯಾಗಿರುವ ಯೋಜನೆಯಾಗಿದೆ.

ಈ ಎರಡು ದಶಕಗಳಲ್ಲಿ, ಇದು 4,420 ಕೋಟಿ ಮಾನವ ದಿನಗಳನ್ನು ಸೃಷ್ಟಿಸಿದೆ ಮತ್ತು ಸುಮಾರು 10 ಕೋಟಿ ಗ್ರಾಮೀಣ ಆಸ್ತಿಗಳನ್ನು ಸೃಜಿಸಲಾಗಿದೆ. ಕರ್ನಾಟಕವೊಂದರಲ್ಲಿಯೇ ಈ ಯೋಜನೆಯು 183 ಕೋಟಿ ಮಾನವದಿನಗಳನ್ನು ಸೃಷ್ಟಿಸಿದೆ ಹಾಗೂ ಸುಮಾರು 83 ಲಕ್ಷ ಪಂಚಾಯತಿ ಆಸ್ತಿಗಳ ಸೃಜನೆಗೆ ಕಾರಣವಾಗಿದೆ.

MGNREGA ಪಂಚಾಯತಿ ಸ್ವಯಂ ಆಡಳಿತ ಮತ್ತು ಗ್ರಾಮ ಸ್ವರಾಜ್ಯದ ಉತ್ಸಾಹದ ಪ್ರಬಲ ಅಭಿವ್ಯಕ್ತಿಯಾಗಿ ನಿಂತಿದೆ. ಇದು ಜನರು ಘನತೆಯಿಂದ ಬದುಕಲು ಸಹಾಯ ಮಾಡಿದೆ. ಜೀವನೋಪಾಯವನ್ನು ಬೆಂಬಲಿಸಿದೆ. ಸಂಕಷ್ಟದ ಸಂದರ್ಭದಲ್ಲಿ ವಲಸೆಯನ್ನು ತಗ್ಗಿಸಿದೆ ಹಾಗೂ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಿದೆ.

ಆದರೂ, ಲಕ್ಷಾಂತರ ಜನರನ್ನು ತಲುಪಿದ ಮತ್ತು ಗ್ರಾಮೀಣ ಭಾರತವನ್ನು ಪರಿವರ್ತಿಸಿದ ಯೋಜನೆಯನ್ನು ಈಗ ಬಿಜೆಪಿ ಸರ್ಕಾರ ಕಿತ್ತುಹಾಕಿದೆ.

ಇಂದು ನಾವು ಅದರ 20 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ, ದೇಶಾದ್ಯಂತ ಲಕ್ಷಾಂತರ ಗ್ರಾಮೀಣ ಕಾರ್ಮಿಕರು ಬೀದಿಗಿಳಿದು ತಮ್ಮ ಜೀವನಾಡಿಗಾಗಿ ಮತ್ತು ತಮ್ಮ ಕೆಲಸದ ಹಕ್ಕಿಗಾಗಿ ಪ್ರತಿಭಟನೆ ಹಾಗೂ ಹೋರಾಟ ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ನಮ್ಮ ಅತ್ಯಂತ ದುರ್ಬಲ ಸಮುದಾಯಕ್ಕೆ ರಕ್ಷಣೆಯಾಗಿದ್ದ ಈ ಯೋಜನೆಯನ್ನು ಮರಳಿ ಪಡೆಯಲು ಈಗ ಅವರು ಹೆಣಗಾಡುತ್ತಿರುವುದನ್ನು ನೋಡಲು ಬಹಳ ವೇದನೆಯಾಗುತ್ತಿದೆ.

ನೆರೆ ಮತ್ತು ಬರ- ಈ ಎರಡೂ ಬಗೆಯ ಪ್ರಾಕೃತಿಕ ವಿಕೋಪಗಳು ನಮ್ಮ ಕಲಬುರಗಿ ರೈತರನ್ನು ನಿರಂತರವಾಗಿ ಕಾಡುತ್ತಿವೆ. ಈ ಬಾರಿ ಪ್ರವಾಹದಿಂದಾಗಿ ಲಕ್ಷಾಂತರ...
02/02/2026

ನೆರೆ ಮತ್ತು ಬರ- ಈ ಎರಡೂ ಬಗೆಯ ಪ್ರಾಕೃತಿಕ ವಿಕೋಪಗಳು ನಮ್ಮ ಕಲಬುರಗಿ ರೈತರನ್ನು ನಿರಂತರವಾಗಿ ಕಾಡುತ್ತಿವೆ. ಈ ಬಾರಿ ಪ್ರವಾಹದಿಂದಾಗಿ ಲಕ್ಷಾಂತರ ಹೆಕ್ಟೇರ್ ಜಮೀನಿನಲ್ಲಿ ಬೆಳೆ ಹಾನಿಯಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರವು ರೈತರಿಗೆ ಪರ್ಯಾಯ ಮಾರ್ಗಗಳನ್ನು ಒದಗಿಸಲು ನಿರಂತರವಾಗಿ ಶ್ರಮಿಸುತ್ತಲೇ ಇದೆ.

ಕಲಬುರಗಿ ಜಿಲ್ಲೆಯು ನೆರೆ ಮತ್ತು ಬರದಿಂದ ನಷ್ಟಕ್ಕೆ ಒಳಗಾದ ರೈತರಿಗೆ ಕಳೆದ ಮೂರು ವರ್ಷದಲ್ಲಿ ಅತಿ ಹೆಚ್ಚು ಬೆಳೆವಿಮೆ ಪರಿಹಾರ ನೀಡುವ ಮೂಲಕ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದಿದೆ.

➧ 2023-24 ಸಾಲಿನಲ್ಲಿ ₹747.02 ಕೋಟಿ ಬೆಳೆವಿಮೆ ಪರಿಹಾರ

➧ 2024-25 ಸಾಲಿನಲ್ಲಿ ₹1,101.70 ಕೋಟಿ ಬೆಳೆವಿಮೆ ಪರಿಹಾರ

➧ 2025-26 ಸಾಲಿನಲ್ಲಿ ₹742.26 ಕೋಟಿ ಬೆಳೆವಿಮೆ ಪರಿಹಾರ

ವಿಶೇಷವಾಗಿ, ಇತಿಹಾಸದಲ್ಲಿಯೇ ಮೊದಲ ಬಾರಿಗೆ 2025-26 ಸಾಲಿನಲ್ಲಿ ಜಿಲ್ಲೆಯ 3 ಲಕ್ಷ ರೈತರು ಬೆಳೆವಿಮೆ ಫಲಾನುಭವಿಗಳಾಗಿದ್ದಾರೆ.

#ಕಲಬುರಗಿಕಲ್ಯಾಣ

Address

Chittapur
Chittapur
585211

Telephone

+917676503763

Website

Alerts

Be the first to know and let us send you an email when Chittapur Assembly constituency Congress posts news and promotions. Your email address will not be used for any other purpose, and you can unsubscribe at any time.

Contact The Organization

Send a message to Chittapur Assembly constituency Congress:

Share