Shivaraj Uppar, ಶಿವರಾಜ್ ಉಪ್ಪಾರ್

Shivaraj Uppar, ಶಿವರಾಜ್ ಉಪ್ಪಾರ್ Contact information, map and directions, contact form, opening hours, services, ratings, photos, videos and announcements from Shivaraj Uppar, ಶಿವರಾಜ್ ಉಪ್ಪಾರ್, Social service, Bangalore.

ಇಂದು ನಮ್ಮ ಪ್ರೀತಿಯ ಮಾಜಿ ಸಂಸದರು ಆದ್ ಶ್ರೀ ಡಿ ಕೆ ಸುರೇಶ ಅವರಿಗೇ ಜೊತೆಗೆ ಸಮಾಲೋಚನೆ ನಡೆಸಲಾಯಿತು,ನಮ್ಮ ಆರ್ ಆರ್ ನಗರದ ಗ್ಯಾರಂಟಿ ಯೋಜನೇಗಳ ...
24/01/2026

ಇಂದು ನಮ್ಮ ಪ್ರೀತಿಯ ಮಾಜಿ ಸಂಸದರು ಆದ್ ಶ್ರೀ ಡಿ ಕೆ ಸುರೇಶ ಅವರಿಗೇ ಜೊತೆಗೆ ಸಮಾಲೋಚನೆ ನಡೆಸಲಾಯಿತು,ನಮ್ಮ ಆರ್ ಆರ್ ನಗರದ ಗ್ಯಾರಂಟಿ ಯೋಜನೇಗಳ ಅಧ್ಯಕ್ಷರು ಅದ ಶ್ರೀ ರಾಂಪುರ ನಾಗೇಶ್ ಅವರ ನೇತೃತ್ವದಲ್ಲಿ ಸೇರಿದ ಸಂಧರ್ಭ

ಮಕರ ಸಂಕ್ರಾಂತಿ :ಮಕರ ಸಂಕ್ರಾಂತಿಯು ಹಿಂದೂ ಧರ್ಮದ ಅತ್ಯಂತ ಪ್ರಮುಖ ಮತ್ತು ಪ್ರಾಚೀನ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವು ಖಗೋಳ ಘಟನೆಗಳು, ಪೌರಾಣ...
14/01/2026

ಮಕರ ಸಂಕ್ರಾಂತಿ :
ಮಕರ ಸಂಕ್ರಾಂತಿಯು ಹಿಂದೂ ಧರ್ಮದ ಅತ್ಯಂತ ಪ್ರಮುಖ ಮತ್ತು ಪ್ರಾಚೀನ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವು ಖಗೋಳ ಘಟನೆಗಳು, ಪೌರಾಣಿಕ ಕಥೆಗಳು ಮತ್ತು ಕೃಷಿ ಸಂಸ್ಕೃತಿಯ ಸುಂದರ ಸಂಗಮವಾಗಿದೆ.

ಮಕರ ಸಂಕ್ರಾಂತಿ: ಇತಿಹಾಸ ಮತ್ತು ಮಹತ್ವ

ಖಗೋಳಶಾಸ್ತ್ರೀಯ ಮತ್ತು ಭೌಗೋಳಿಕ ಮಹತ್ವ

'ಮಕರ' ಎಂದರೆ ಮಕರ ರಾಶಿ ಮತ್ತು 'ಸಂಕ್ರಾಂತಿ' ಎಂದರೆ ಸಂಕ್ರಮಣ ಅಥವಾ ಪ್ರವೇಶ ಎಂದರ್ಥ.

ಉತ್ತರಾಯಣ: ಈ ದಿನ ಸೂರ್ಯನು ಧನು ರಾಶಿಯಿಂದ ಹೊರಬಂದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಇಲ್ಲಿಂದ ಸೂರ್ಯನ ಉತ್ತರ ದಿಕ್ಕಿನ ಪ್ರಯಾಣ ಪ್ರಾರಂಭವಾಗುತ್ತದೆ, ಇದನ್ನು 'ಉತ್ತರಾಯಣ' ಎಂದು ಕರೆಯಲಾಗುತ್ತದೆ.

ಹಗಲು ದೊಡ್ಡದಾಗುವುದು: ಮಕರ ಸಂಕ್ರಾಂತಿಯ ನಂತರ ಹಗಲುಗಳು ಕ್ರಮೇಣ ದೊಡ್ಡದಾಗುತ್ತಾ ಹೋಗುತ್ತವೆ ಮತ್ತು ಚಳಿಯ ಪ್ರಭಾವ ಕಡಿಮೆಯಾಗಿ ವಾತಾವರಣದಲ್ಲಿ ಬೆಚ್ಚಗಿನ ಅನುಭವವಾಗತೊಡಗುತ್ತದೆ.

ಪೌರಾಣಿಕ ಇತಿಹಾಸ ಮತ್ತು ಕಥೆಗಳು -
ಭೀಷ್ಮ ಪಿತಾಮಹರ ದೇಹತ್ಯಾಗ:
ಮಹಾಭಾರತದ ಕಥೆಯ ಪ್ರಕಾರ, ಭೀಷ್ಮ ಪಿತಾಮಹರಿಗೆ 'ಇಚ್ಛಾ ಮರಣ'ದ ವರವಿತ್ತು. ಅವರು ತಮ್ಮ ದೇಹವನ್ನು ತ್ಯಜಿಸಲು ಉತ್ತರಾಯಣದ (ಮಕರ ಸಂಕ್ರಾಂತಿ) ಪುಣ್ಯಕಾಲದವರೆಗೆ ಕಾದಿದ್ದರು. ಏಕೆಂದರೆ ಉತ್ತರಾಯಣದಲ್ಲಿ ಮರಣ ಹೊಂದಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.
ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು!
ಈ ಶುಭ ದಿನದಂದು ಸೂರ್ಯನ ಕಿರಣಗಳು ನಿಮ್ಮ ಜೀವನವನ್ನು ಬೆಳಗಿಸಲಿ, ಶಾಂತಿ, ಸಂಭ್ರಮ, ಆರೋಗ್ಯ ಮತ್ತು ಆನಂದವನ್ನು ಕರುಣಿಸಲಿ.

ಎಳ್ಳು ಬೆಲ್ಲ ತಿಂದು, ಒಳ್ಳೆ ಮಾತಾಡಿ!

Warm Wishes for a Happy Makara Sankranti! 🌞🌾

May this auspicious day bring the radiant blessings of the sun, filling your life with peace, prosperity, joy, and vibrant health.*ಮಕರ ಸಂಕ್ರಾಂತಿ ಕುರಿತು ಭಕ್ತಿಗೀತೆ ರಚನೆ*

*ಶೀರ್ಷಿಕೆ: ಪುಣ್ಯಕಾಲ*

ಮಕರ ಸಂಕ್ರಾಂತಿಯ ಪುಣ್ಯಕಾಲ
ಸಕಲರ ಪಾಪಗಳ ತೊಳೆವ ಕಾಲ//

ರವಿಯು ಪಥವ ಬದಲಿಸುವ ದಿನ
ಸವಿಯಾದ ಪಾಕವ ಮೆಲ್ಲುವ ದಿನ//

ಎಳ್ಳು ಬೆಲ್ಲ ಕಬ್ಬುಗಳ ಸವಿಯುತಲಿ
ಒಳ್ಳೊಳ್ಳೆ ಮಾತುಗಳ ಆಡುತಲಿ//

ಪುಣ್ಯ ಪವಿತ್ರ ಸ್ನಾನವ ಮಾಡುತ
ಧನ್ಯರಾಗಿ ದೇವರನು ಪ್ರಾರ್ಥಿಸುತ//

ದನಗಳ ಓಡಿಸುವ ಹಿಗ್ಗಿನ ಹಬ್ಬ
ರೈತರು ಸಿಹಿ ಉಂಡು ನಲಿವ ಹಬ್ಬ//

ಅಯ್ಯಪ್ಪಸ್ವಾಮಿಯ ದರ್ಶಿಸುವ ಸುದಿನ
ಮಕರ ಜ್ಯೋತಿಯನು ಕಾಣುವ ಸುದಿನ//

ಸುಗ್ಗಿ ಹಬ್ಬವು ಸುಖ ಸಮೃದ್ಧಿ ತರುತ
ಹಿಗ್ಗಿನಿಂದ ರೈತರು ಕುಣಿಕುಣಿದಾಡುತ//

ಭಕ್ತಿಯಿಂದ ದೇವರನು ಭಜಿಸೋಣ
ಶಿವಪ್ರಿಯೆಯ ಹರಸೆಂದು ಕೇಳೋಣ//

*ದಿನಾಂಕ: 11/01/2026*ಮಕರ ಸಂಕ್ರಾಂತಿ ಬುಧವಾರ, ಜನವರಿ 14, /15 ಆಚರಣೆ ಬಗ್ಗೆ ಮಾಹಿತಿ
ಮಕರ ಸಂಕ್ರಾಂತಿ ಪುಣ್ಯ ಕಾಲ - 03:13 PM ನಿಂದ 05:45 PM

ಅವಧಿ - 02 ಗಂಟೆಗಳು 32 ನಿಮಿಷಗಳು

ಮಕರ ಸಂಕ್ರಾಂತಿ ಮಹಾ ಪುಣ್ಯ ಕಾಲ - 03:13 PM ನಿಂದ 04:58 PM

ಅವಧಿ - 01 ಗಂಟೆ 45 ನಿಮಿಷಗಳು

ಮಕರ ಸಂಕ್ರಾಂತಿ ಕ್ಷಣ - 03:13 PM

ಸಂಜೆ ಮಕರ ಸಂಕ್ರಾಂತಿ ಪ್ರಾರಂಭ ಆಗುವುದರಿಂದ ಹದಿನಾಲ್ಕು ನೇ ತಾರೀಖು ಸಂಜೆ ಮಾಡುವಂತಿಲ್ಲ
ಹದಿನೈದು ಮುಂಜಾನೆ ಎದ್ದು ಸಂಕ್ರಾಂತಿ ಹಬ್ಬ ಆಚರಣೆ ಮಾಡುವುದು ಸೂಕ್ತ

ವೈಜ್ಞಾನಿಕ & ಧಾರ್ಮಿಕ ಮಹತ್ವ:
ಈ ದಿನದಿಂದ ಉತ್ತರಾಯಣ ಸಂಜೆ ಆರಂಭವಾಗುತ್ತದೆ.
ಹದಿನಾಲ್ಕನೇ ತಾರೀಖಿನಂದು ಮುಂಜಾನೆ ಸ್ನಾನ ಮಾಡಿದರೆ ಅದು ಧನುರ್ಮಾಸದ ಸ್ನಾನ ಆಗಿರುತ್ತದೆ

ಮಕರ ಸಂಕ್ರಾಂತಿ ಹಬ್ಬವನ್ನು ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನ ಆಚರಿಸಲಾಗುತ್ತದೆ.

ಸೂರ್ಯನ ಮಕರ ಪ್ರವೇಶ ಮದ್ಯಾಹ್ನದ ನಂತರ, ಸಂಜೆ ಅಥವಾ ರಾತ್ರಿ ಆಗಿದ್ದರೆ, ಶಾಸ್ತ್ರಾನುಸಾರವಾಗಿ ಮುಂದಿನ ದಿನ (ಜನವರಿ 15) ಹಬ್ಬವನ್ನು ಆಚರಿಸಬೇಕು

ಹದಿನೈದು ಮುಂಜಾನೆ
ಸೂರ್ಯನ ಕಿರಣಗಳು ಭೂಮಿಯ ಮೇಲೆ ಹೆಚ್ಚು ಅನುಕೂಲಕರವಾಗುತ್ತವೆ.
ಕೃಷಿ, ಆರೋಗ್ಯ, ಶಕ್ತಿ ಮತ್ತು ಸಮೃದ್ಧಿಗೆ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು!
ಈ ಶುಭ ದಿನದಂದು ಸೂರ್ಯನ ಕಿರಣಗಳು ನಿಮ್ಮ ಜೀವನವನ್ನು ಬೆಳಗಿಸಲಿ, ಶಾಂತಿ, ಸಂಭ್ರಮ, ಆರೋಗ್ಯ ಮತ್ತು ಆನಂದವನ್ನು ಕರುಣಿಸಲಿ.

ಎಳ್ಳು ಬೆಲ್ಲ ತಿಂದು, ಒಳ್ಳೆ ಮಾತಾಡಿ!

Warm Wishes for a Happy Makara Sankranti! 🌞🌾

May this auspicious day bring the radiant blessings of the sun, filling your life with peace, prosperity, joy, and vibrant health.*ಮಕರ ಸಂಕ್ರಾಂತಿ ಕುರಿತು ಭಕ್ತಿಗೀತೆ ರಚನೆ*

*ಶೀರ್ಷಿಕೆ: ಪುಣ್ಯಕಾಲ*

ಮಕರ ಸಂಕ್ರಾಂತಿಯ ಪುಣ್ಯಕಾಲ
ಸಕಲರ ಪಾಪಗಳ ತೊಳೆವ ಕಾಲ//

ರವಿಯು ಪಥವ ಬದಲಿಸುವ ದಿನ
ಸವಿಯಾದ ಪಾಕವ ಮೆಲ್ಲುವ ದಿನ//

ಎಳ್ಳು ಬೆಲ್ಲ ಕಬ್ಬುಗಳ ಸವಿಯುತಲಿ
ಒಳ್ಳೊಳ್ಳೆ ಮಾತುಗಳ ಆಡುತಲಿ//

ಪುಣ್ಯ ಪವಿತ್ರ ಸ್ನಾನವ ಮಾಡುತ
ಧನ್ಯರಾಗಿ ದೇವರನು ಪ್ರಾರ್ಥಿಸುತ//

ದನಗಳ ಓಡಿಸುವ ಹಿಗ್ಗಿನ ಹಬ್ಬ
ರೈತರು ಸಿಹಿ ಉಂಡು ನಲಿವ ಹಬ್ಬ//

ಅಯ್ಯಪ್ಪಸ್ವಾಮಿಯ ದರ್ಶಿಸುವ ಸುದಿನ
ಮಕರ ಜ್ಯೋತಿಯನು ಕಾಣುವ ಸುದಿನ//

ಸುಗ್ಗಿ ಹಬ್ಬವು ಸುಖ ಸಮೃದ್ಧಿ ತರುತ
ಹಿಗ್ಗಿನಿಂದ ರೈತರು ಕುಣಿಕುಣಿದಾಡುತ//

ಭಕ್ತಿಯಿಂದ ದೇವರನು ಭಜಿಸೋಣ
ಶಿವಪ್ರಿಯೆಯ ಹರಸೆಂದು ಕೇಳೋಣ//

*ಸರೋಜಿನಿ. ಅ. ಹಿರೇಮಠ*

*ದಿನಾಂಕ: 11/01/2026*ಮಕರ ಸಂಕ್ರಾಂತಿ ಬುಧವಾರ, ಜನವರಿ 14, /15 ಆಚರಣೆ ಬಗ್ಗೆ ಮಾಹಿತಿ
ಮಕರ ಸಂಕ್ರಾಂತಿ ಪುಣ್ಯ ಕಾಲ - 03:13 PM ನಿಂದ 05:45 PM

ಅವಧಿ - 02 ಗಂಟೆಗಳು 32 ನಿಮಿಷಗಳು

ಮಕರ ಸಂಕ್ರಾಂತಿ ಮಹಾ ಪುಣ್ಯ ಕಾಲ - 03:13 PM ನಿಂದ 04:58 PM

ಅವಧಿ - 01 ಗಂಟೆ 45 ನಿಮಿಷಗಳು

ಮಕರ ಸಂಕ್ರಾಂತಿ ಕ್ಷಣ - 03:13 PM

ಸಂಜೆ ಮಕರ ಸಂಕ್ರಾಂತಿ ಪ್ರಾರಂಭ ಆಗುವುದರಿಂದ ಹದಿನಾಲ್ಕು ನೇ ತಾರೀಖು ಸಂಜೆ ಮಾಡುವಂತಿಲ್ಲ
ಹದಿನೈದು ಮುಂಜಾನೆ ಎದ್ದು ಸಂಕ್ರಾಂತಿ ಹಬ್ಬ ಆಚರಣೆ ಮಾಡುವುದು ಸೂಕ್ತ

ವೈಜ್ಞಾನಿಕ & ಧಾರ್ಮಿಕ ಮಹತ್ವ:
ಈ ದಿನದಿಂದ ಉತ್ತರಾಯಣ ಸಂಜೆ ಆರಂಭವಾಗುತ್ತದೆ.
ಹದಿನಾಲ್ಕನೇ ತಾರೀಖಿನಂದು ಮುಂಜಾನೆ ಸ್ನಾನ ಮಾಡಿದರೆ ಅದು ಧನುರ್ಮಾಸದ ಸ್ನಾನ ಆಗಿರುತ್ತದೆ

ಮಕರ ಸಂಕ್ರಾಂತಿ ಹಬ್ಬವನ್ನು ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನ ಆಚರಿಸಲಾಗುತ್ತದೆ.

ಸೂರ್ಯನ ಮಕರ ಪ್ರವೇಶ ಮದ್ಯಾಹ್ನದ ನಂತರ, ಸಂಜೆ ಅಥವಾ ರಾತ್ರಿ ಆಗಿದ್ದರೆ, ಶಾಸ್ತ್ರಾನುಸಾರವಾಗಿ ಮುಂದಿನ ದಿನ (ಜನವರಿ 15) ಹಬ್ಬವನ್ನು ಆಚರಿಸಬೇಕು

ಹದಿನೈದು ಮುಂಜಾನೆ
ಸೂರ್ಯನ ಕಿರಣಗಳು ಭೂಮಿಯ ಮೇಲೆ ಹೆಚ್ಚು ಅನುಕೂಲಕರವಾಗುತ್ತವೆ.
ಕೃಷಿ, ಆರೋಗ್ಯ, ಶಕ್ತಿ ಮತ್ತು ಸಮೃದ್ಧಿಗೆ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

🌺.. ನೂರು ಅಶ್ವಮೇಧ ಯಾಗವನ್ನು ಮಾಡಿದರೆ ಅಂತಹ ವ್ಯಕ್ತಿಗೆ ಸ್ವರ್ಗಲೋಕದ ಇಂದ್ರ ಪದವಿ ಪ್ರಾಪ್ತಿಯಾಗುತ್ತಿತ್ತು ಹಾಗಾಗಿ..ಒಮ್ಮೆ ಸಗರ ರಾಜನಿಗೆ ನೂ...
12/12/2024

🌺.. ನೂರು ಅಶ್ವಮೇಧ ಯಾಗವನ್ನು ಮಾಡಿದರೆ ಅಂತಹ ವ್ಯಕ್ತಿಗೆ ಸ್ವರ್ಗಲೋಕದ ಇಂದ್ರ ಪದವಿ ಪ್ರಾಪ್ತಿಯಾಗುತ್ತಿತ್ತು ಹಾಗಾಗಿ..ಒಮ್ಮೆ ಸಗರ ರಾಜನಿಗೆ ನೂರು ಅಶ್ವಮೇಧ ಯಾಗವನ್ನು ಮಾಡಬೇಕೆಂಬ ಆಸೆಯಾಯಿತು..
ಸಗರ ರಾಜನ ಈ ಅಶ್ವಮೇಧ ಯಾಗದ ಸಂಪೂರ್ಣ ಜವಾಬ್ದಾರಿಯನ್ನು ಸಗರನ ಮೊಮ್ಮಗ ಅಂಶುಮಾನನು ತೆಗೆದುಕೊಂಡ..

🌺..ಸಗರ ರಾಜ ನೂರು ಅಶ್ವಮೇಧ ಯಾಗ ಮಾಡುವ
ಈ ವಿಚಾರ ಇಂದ್ರದೇವನಿಗೆ ಗೊತ್ತಾಗುತ್ತದೆ ತನ್ನ ಪದವಿಗೆ ಕುತ್ತು ಬರುತ್ತದೆ ಎಂಬ ಕಾರಣಕ್ಕೆ ಸಗರ ರಾಜನ ಅಶ್ವಮೇಧ ಯಾಗದ ಕುದುರೆಗಳನ್ನು ಇಂದ್ರನು ಅಪಹರಣ ಮಾಡುತ್ತಾನೆ

🌺.. ಕಾಣೆಯಾದ ಕುದುರೆಗಳನ್ನು ಹುಡುಕಿಕೊಂಡು ಬನ್ನಿ ಎಂದು ಸಗರ ರಾಜನು ತನ್ನ ಅರವತ್ತು ಸಾವಿರ ಮಕ್ಕಳಿಗೆ ಆಜ್ಞೆ ಮಾಡುತ್ತಾನೆ.. ಈ ಅರವತ್ತು ಸಾವಿರ ರಾಜಕುಮಾರರು ಕುದುರೆಯನ್ನು ಹುಡುಕಿಕೊಂಡು ಪಾತಾಳ ಲೋಕಕ್ಕೆ ಹೋಗುತ್ತಾರೆ.. ಪಾತಾಳದಲ್ಲಿ ಕಪಿಲಾ ಮಹರ್ಷಿಗಳು ತಪಸ್ಸು ಮಾಡುತ್ತ ಇರುತ್ತಾರೆ.. ಇವರೇ ಕುದುರೆಯನ್ನು ಕದ್ದಿರಬಹುದು ಎಂದು ಅವರೆಲ್ಲರೂ ಕಳ್ಳ ಕಳ್ಳ ಎಂದು ಕಪಿಲಾ ಮಹರ್ಷಿಗಳಿಗೆ ಅವಮಾನ ಮಾಡುತ್ತಾರೆ..
ಆಗ ಕಪಿಲಾ ಮಹರ್ಷಿಗಳು ತಮ್ಮ ಕಣ್ಣು ತೆರೆದು ಬೆಂಕಿ ಜ್ವಾಲೆಯಿಂದ ಆ ಅರವತ್ತು ಸಾವಿರ ರಾಜಕುಮಾರನ್ನು ಸುಟ್ಟು ಬೂದಿ ಮಾಡುತ್ತಾರೆ..

🌺..ಕುದುರೆಯನ್ನು ಹುಡುಕಲು ಹೋದ ತನ್ನ ಬಂಧುಗಳು ಇನ್ನು ಬಂದಿಲ್ಲವಲ್ಲ ಎಂದು ಸಗರ ರಾಜನ ಮೊಮ್ಮಗ
ಅಂಶುಮಾನನು ಅವರನ್ನೆಲ್ಲ ಹುಡುಕಲು ಹೋದ..
ಆಗ ಅಂಶುಮಾನನಿಗೆ ದಾರಿಯಲ್ಲಿ ಕಪಿಲಾ ಮಹರ್ಷಿಗಳು ಸಿಗುತ್ತಾರೆ.. ಕಪಿಲಾ ಮಹರ್ಷಿಗಳು ನಡೆದ ಘಟನೆಯನ್ನು ಪೂರ್ತಿ ಅಂಶುಮಾನನಿಗೆ ವಿವರಿಸುತ್ತಾರೆ..

🌺.. ನಿನ್ನ ಬಂಧುಗಳು ಪೂರ್ತಿ ಸುಟ್ಟು ಬೂದಿಯಾಗಿದ್ದಾರೆ
ಇವರ ಆತ್ಮಕ್ಕೆ ಸದ್ಗತಿ ಸಿಗಬೇಕೆಂದರೆ " ದೇವಲೋಕದ ಗಂಗೆಯೂ ಇವರ ಬೂದಿಯ ಮೇಲೆ ಹರಿಯಬೇಕು ಆಗ ಮಾತ್ರ ಇವರಿಗೆಲ್ಲ ಸದ್ಗತಿ ಪ್ರಾಪ್ತಿಯಾಗುತ್ತದೆ ಎಂದು ಕಪಿಲಾ ಮಹರ್ಷಿಗಳು ಹೇಳಿದರು..

🌺.. ಈಗ ದೇವಲೋಕದ ಗಂಗೆಯನ್ನು ಭೂಮಿಗೆ ಹೇಗೆ ಕರೆಸುವುದು ಎಂದು ಅಂಶುಮಾನ್ ಚಿಂತೆ ಮಾಡುತ್ತಾನೆ
ಏನು ಮಾಡಬೇಕೆಂದು ಅಂಶುಮಾನನಿಗೆ ಗೊತ್ತಾಗುವಾದಿಲ್ಲ ಅಂಶುಮಾನನ ಮಗ ದಿಲೀಪನಿಗೂ ಕೂಡ ಗಂಗೆಯನು ಭೂಮಿಗೆ ಹೇಗೆ ಕರೆಸುವುದು ಎಂಬ ಚಿಂತೆಯಲ್ಲಿ ಕೊರಗಿ ಕೊರಗಿ ಪ್ರಾಣ ಬಿಟ್ಟ..

🌺.. ದಿಲೀಪ ಮಹಾರಾಜನಿಗೆ ಒಂದೆ ಒಂದು ಮಗು ಕೂಡ ಇರಲಿಲ್ಲ ಗಂಗೆಯನ್ನು ಭೂಮಿಗೆ ಹೇಗೆ ಕರೆಸುವುದು ಎಂಬ ಚಿಂತೆಯಲ್ಲಿಯೇ ದಿಲೀಪನು ಸತ್ತು ಹೋದ..
ಈಗ ಸೂರ್ಯವಂಶ ಮುಂದಿನ ವಾರಸುದಾರರೇ ಇರಲಿಲ್ಲ
ಇವರ ವಂಶೊದ್ದಾರಕನಿಂದಲೇ ಇವರ ಬಂದುಗಳಿಗೆ ಸದ್ಗತಿ ದೊರೆಯುತ್ತದೆ ಎಂದು ಕಪಿಲಾ ಮಹರ್ಷಿ ಹೇಳಿದ್ದರು
ಹಾಗೆಇದೆ ಸೂರ್ಯವಂಶದಲ್ಲಿ ಭಗವಾನ್ ಶ್ರೀ ರಾಮನು ಹುಟ್ಟ ಬೇಕಿತ್ತು ಆದರೆ ಈಗ ದಿಲೀಪ ರಾಜ ಕೂಡ ಸತ್ತು ಹೋದ ಈಗ ಈ ವಂಶಕ್ಕೆ ಮಗು ಹೇಗೆ ಬರುತ್ತದೆ ಈ ವಂಶ ಅಳಿದು ಹೋಗುತ್ತದೆ ಎಂಬ ಚಿಂತೆ ದೇವತೆಗಳಿಗೆ ಶುರುಆಗುತ್ತದೆ.

🌺.. ದೇವತೆಗಳು ಇದೆ ವಿಚಾರದ ಕುರಿತು ವಿಷ್ಣು ದೇವನ ಬಳಿ ಹೇಳಿದರು ಇದಕ್ಕೆ ನೀವೇ ಒಂದು ಪರಿಹಾರ ಕೊಡಬೇಕು ಎಂದು ಕೇಳಿ ಕೊಳ್ಳುತ್ತಾರೆ..

🌺.. ಆಗ ವಿಷ್ಣುದೇವನು ಸತ್ತು ಹೋದಂತ ದಿಲೀಪ ರಾಜನ ಇಬ್ಬರು ವಿಧವಾ ಪತ್ನಿಯರಿಗೆ ಕಾಣಿಸಿಕೊಳ್ಳುತ್ತಾರೆ
ದಿಲೀಪ ರಾಜ ಮರಣ ಹೊಂದಿದ ಕಾರಣ ಈ ವಂಶ ಇಲ್ಲಿಗೆ ನಿಂತು ಹೋಗಿದೆ.. ವಂಶ ಮುಂದೆ ಉಳಿಯಲು ನೀವು ಮಗು ಮಾಡಿಕೊಳ್ಳಬೇಕು ಎಂದು ವಿಷ್ಣು ಹೇಳುತ್ತಾರೆ..
ನಮ್ಮ ಪತಿ ದಿಲೀಪ ರಾಜನು ಸತ್ತು ಹೋಗಿದ್ದಾರೆ ಈಗ ನಮಗೆ ಮಗು ಜನಿಸಲು ಹೇಗೆ ಸಾಧ್ಯ ಎಂದು ಇಬ್ಬರು ವಿಧವಾ ರಾಣಿಯರು ಕೇಳುತ್ತಾರೆ..

🌺..ಯಾವುದೇ ಪುರುಷನಿಲ್ಲದೆ ಕೇವಲ ನಿಮ್ಮಿಬ್ಬರ ಮಿಲನದಿಂದ ಒಂದು ಮಗು ಜನಿಸುವಂತೆ ನಾನು ನಿಮಗೆ ವರ ಕೊಡುತ್ತೇನೆ ಎಂದು.. ವಿಷ್ಣು ದೇವ ವರ ಕೊಡುತ್ತಾರೆ
ಹೀಗೆ ದಿಲೀಪ ರಾಜನ ಇಬ್ಬರು ವಿಧವಾ ರಾಣಿಯರು ಮಿಲನ ಮಾಡಿಕೊಳ್ಳುತ್ತಾರೆ.. ಈ ಇಬ್ಬರಲ್ಲಿ ಒಬ್ಬಳು ರಾಣಿ ಗರ್ಭಿಣಿಯಾಗುತ್ತಾಳೆ ನಂತರ ಒಂದು ಗಂಡು ಮಗುವಿಗೆ ಜನ್ಮ ನೀಡುತ್ತಾರೆ..

🌺.. ಹೀಗೆ ಇಬ್ಬರು ಸ್ತ್ರೀ ಯರ ಮಿಲನದಿಂದ ಹುಟ್ಟಿದಂತ ಮಗುವೆ ಈ ( ಭಗೀರಥ )

🌺.. ಭಗೀರಥನು ಇಬ್ಬರು ಸ್ತ್ರೀ ಯರಿಗೆ ಹುಟ್ಟಿದ ಕಾರಣ
ಅವನ ದೇಹದಲ್ಲಿ ( ಮೂಳೆ ಮತ್ತು ಸ್ನಾಯುಗಳು ಇರಲಿಲ್ಲ )

🌺.. ಒಂದು ಜೀವಿಯ ದೇಹ ಅನ್ನೋದು ಸಂಪೂರ್ಣ ರಚನೆ ಆಗಬೇಕು ಅಂದ್ರೆ ತಂದೆ ತಾಯಿ ತುಂಬಾ ಮುಖ್ಯ
ಗಂಡು ಮತ್ತು ಹೆಣ್ಣಿನ ಮಿಲನದಿಂದಲೇ ಇನ್ನೊಂದು ಮಗುವಿನ ದೇಹ ಅನ್ನೋದು ಸಂಪೂರ್ಣ ರಚನೆ ಆಗೋದು

ಈ ಹಿಂದಿನ ಪೋಸ್ಟ್ ಅಲ್ಲಿ ಹೇಳಿದ ಹಾಗೆ
( ಒಂದು ಮಗುವಿಗೆ " ರಕ್ತ ಮತ್ತು ಮಾಂಸ ಅನ್ನೋದು ತಾಯಿಯಿಂದ ಸಿಗುತ್ತದೆ..ಇದು ಸ್ತ್ರೀ ತತ್ವ..
( ಮೂಳೆ ಮತ್ತು ಸ್ನಾಯು ಅನ್ನೋದು ತಂದೆಯಿಂದ ಸಿಗುತ್ತದೆ ಇದು ಪುರುಷ ತತ್ವ..

ಒಂದು ಜೀವಿಯ ದೇಹದಲ್ಲಿ ಸ್ತ್ರೀ ತತ್ವ ಪುರುಷ ತತ್ವ ಅನ್ನೋದು ಇದ್ದಾಗ ಮಾತ್ರ
ಒಂದು ಜೀವಿಯ ದೇಹದಲ್ಲಿ ರಕ್ತ ಮಾಂಸ ಮೂಳೆ ಎಲ್ಲ ಇರುತ್ತೆ..

🌺.. ಆದರೆ ಇಲ್ಲಿ ಭಗೀರಥನ ದೇಹದಲ್ಲಿ ಕೇವಲ ಸ್ತ್ರೀ ತತ್ವ ಮಾತ್ರ ಇತ್ತು ಪುರುಷ ತತ್ವ ಇರಲಿಲ್ಲ ಹಾಗಾಗಿ ಇವನ ದೇಹದಲ್ಲಿ ಮೂಳೆ ಮತ್ತು ಸ್ನಾಯು ಇರಲಿಲ್ಲ ಏಕೆಂದರೆ.. ಇವನು ಗಂಡು ಮತ್ತು ಹೆಣ್ಣಿನ ಮಿಲನದಿಂದ ಜನಿಸಿಲ್ಲ.. ಅದರ ಬದಲು ಇಬ್ಬರು ಸ್ತ್ರೀ ಯರ ಮಿಲನದಿಂದ ಜನಿಸಿದ ಕಾರಣ ಮೂಳೆ ಸ್ನಾಯುಗಳು ಇರಲಿಲ್ಲ ಕೇವಲ ಇವನ ದೇಹದಲ್ಲಿ ಸ್ತ್ರೀ ತತ್ವವಾದ ರಕ್ತ ಮತ್ತು ಮಾಂಸ ಮಾತ್ರ ಇತ್ತು ಹಾಗಾಗಿ ಇವನು ಬಿದ್ದಲ್ಲೇ ಬಿದ್ದುಕೊಂಡು ಇರುತಿದ್ದ ಮೇಲೆ ಏಳಲು ಕೂಡ ಸರಿಯಾಗಿ ಆಗುತ್ತಿರಲಿಲ್ಲ ಒಂದು ಮಾಂಸದ ಮುದ್ದೆ ರೀತಿ ಇದ್ದ..

🌺.. ಕಾಲನಂತರದಲ್ಲಿ ಭಗೀರಥನು.. ಅಷ್ಟಾವಕ್ರ ಎಂಬ ಮಹಾ ಗುರುವನ್ನು ಭೇಟಿ ಮಾಡುತ್ತಾನೆ.. ಗುರು ಅಷ್ಟಾವಕ್ರರ ಆಶೀರ್ವಾದದಿಂದ.. ಭಗೀರಥನ ದೇಹಕ್ಕೆ ಪುರುಷ ತತ್ವವು ಪ್ರಾಪ್ತಿಯಾಗುತ್ತದೆ.. ಇದರಿಂದ ಅವನ ದೇಹಕ್ಕೆ ಮೂಳೆ ಮತ್ತು ಸ್ನಾಯುಗಳು ಲಭಿಸುತ್ತವೆ..
ಭಗೀರಥನ ದೇಹ ಸ್ತ್ರೀ ತತ್ವ ಹಾಗೂ ಪುರುಷ ತತ್ವದಿಂದ balance / ಸಮತೋಲನವಾಗುತ್ತದೆ..ಭಗೀರಥನ ದೇಹ ಅನ್ನೋದು ರಕ್ತ ಮಾಂಸದ ಜೊತೆಗೆ ಮೂಳೆ ಸ್ನಾಯು ಕೂಡ ಸೇರಿಕೊಂಡು ದೇಹ ಪರಿಪೂರ್ಣವಾಗುತ್ತದೆ..

🌺.. ಒಂದು ಜೀವಿಯ ದೇಹಕ್ಕೆ..
( ಸ್ತ್ರೀ ತತ್ವ ಮತ್ತು ಪುರುಷ ತತ್ವ ) ಅನ್ನೋದು ಎಷ್ಟು ಮುಖ್ಯ ಆಗುತ್ತದೆ ಎಂದು ನಮಗೆ ಈ ಕಥೆಯಲ್ಲಿ ತಿಳಿಯುತ್ತದೆ..

🌺.. ನಂತರ ಭಗೀರಥ ರಾಜನು ಘೋರ ತಪಸ್ಸು ಮಾಡಿ ಮಹಾ ಋಷಿಯಾಗುತ್ತಾನೆ ಹಾಗೆ ತಪಸ್ಸು ಮಾಡಿ ದೇವಲೋಕದಿಂದ ಗಂಗೆಯನ್ನು ಭೂಮಿಗೆ ಕರೆಸಿ ತನ್ನ ಪೂರ್ವಜರ ದೇಹದ ಬೂದಿಯ ಮೇಲೆ ಗಂಗೆಯನ್ನು ಹರಿಸಿ
ತನ್ನ ಪೂರ್ವಜರಿಗೆ ಸದ್ಗತಿ ಕೊಡಿಸುತ್ತಾರೆ..

✍️: Ashwini Shetty..

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೆಳಕಿನ ಹಬ್ಬ ಪ್ರತಿಯೊಬ್ಬರ ಬದುಕಿನಲ್ಲಿ ಹೊಸ ಬೆಳಕಾಗಿ ಸಂತೋಷ, ಸಮೃದ್ಧಿ, ಸಡಗರ ...
31/10/2024

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೆಳಕಿನ ಹಬ್ಬ ಪ್ರತಿಯೊಬ್ಬರ ಬದುಕಿನಲ್ಲಿ ಹೊಸ ಬೆಳಕಾಗಿ ಸಂತೋಷ, ಸಮೃದ್ಧಿ, ಸಡಗರ ತರಲಿ. ಈ ಬಾರಿಯ ದೀಪಾವಳಿ ನಿಮ್ಮ ಬಾಳಿನಲ್ಲಿ ಹೊಸ ಭರವಸೆಯನ್ನು ಮೂಡಿಸಲಿ ಎಂದು ಶುಭ ಹಾರೈಸುತ್ತೇನೆ.

ೀಪಾವಳಿ:- ಧನ ತ್ರಯೋದಶಿ- ಮತ್ತು ನರಕ ಚತುರ್ದಶಿ ಹಬ್ಬ :-

ಹಬ್ಬಗಳಿಗೆಲ್ಲ ರಾಜನಾದ ದೀಪಾವಳಿ (ದೀಪಗಳ ಸಾಲು) ಅಜ್ಞಾನದ ಕತ್ತಲೆ ಕಳೆದು ಬೆಳಕಿನ ಜ್ಞಾನವನ್ನು ಹರಡುವ ದೀಪಾವಳಿ. ಈ ಹಬ್ಬವನ್ನು ಎಲ್ಲಾ ಜಾತಿ ಜನಾಂಗದ ವರು ಆಚರಿಸುತ್ತಾರೆ. ಬದುಕಲು ಬೆಳಕು ಆಧಾರ. ಮಳೆಗಾಲ ಕಳೆದು ಚಳಿಗಾಲ ಬರುವ ಮಧ್ಯ ಭಾಗದ ಈ ಕಾಲದಲ್ಲಿ ಬೆಳಗುವ ದೀಪ ದಿಂದ ನಕಾರಾತ್ಮಕ ಶಕ್ತಿ ಯು ದೂರವಾಗಿ, ನವ ಚೈತನ್ಯವನ್ನು ತುಂಬಿ ಮನುಷ್ಯನನ್ನು ಆರೋಗ್ಯ ವಂತರ ನ್ನಾಗಿ ಮಾಡುತ್ತದೆ. ದೀಪಾವಳಿ ಹಬ್ಬದ ಸಮಯಕ್ಕೆ ಫಲ-ಪುಷ್ಪ- ಬೆಳೆಗಳು ಬಂದಿರುತ್ತದೆ. ಈ ಕಾರಣಕ್ಕಾಗಿ ನರಕ ಚತುರ್ದಶಿ ಹಿಂದಿನ ದಿನ ಧನ ತ್ರಯೋಧಶಿ ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ.

ಇದಕ್ಕೊಂದು ಪುರಾಣದ ಪುಟ್ಟ ಕಥೆ ಇದೆ. ( ಇದಲ್ಲದೆ “ಧನ್ವಂತರಿ” ಕಥೆ ಹಾಗೆ ಬೇರೆ ಬೇರೆ ಕಥೆಗಳು ಇವೆ) ನಾರಾಯಣನಿಗೆ ಭೂಲೋಕ ಪರಿಭ್ರಮಣ ಮಾಡುವುದು ಬಹಳ ಪ್ರಿಯವಾದದ್ದು. ಅವನು ಆಗಾಗ್ಗೆ ಭೂಲೋಕಕ್ಕೆ ಬರುತ್ತಿದ್ದ. ಹೀಗೊಮ್ಮೆ ಹೊರಟಾಗ ಲಕ್ಷ್ಮಿ, ತಾನು ಬರುವುದಾಗಿ ಹೇಳಿದಳು. ಲಕ್ಷ್ಮೀನಾರಾಯಣರು ಭೂಮಿ ಸಂಚಾರಕ್ಕೆ ಹೊರಟು ದಕ್ಷಿಣ ದಿಕ್ಕಿಗೆ ಬಂದರು, ಲಕ್ಷ್ಮಿಗೆ ನೀನು ಇಲ್ಲೇ ಇರು ಉತ್ತರ ದಿಕ್ಕಿನ ಕಡೆ ಮಾತ್ರ ಹೋಗಬೇಡ ನಾನು ಒಂದು ಮಹತ್ತರವಾದ ಕೆಲಸ ಮುಗಿಸಿಕೊಂಡು ಬರುತ್ತೇನೆ ಎಂದು ಶ್ರೀ ಹರಿ ಹೊರಟನು. ಚಂಚಲ ಸ್ವಭಾವದ ಲಕ್ಷ್ಮಿ ಕುತೂಹಲ ತಡೆಯಲಾರದೆ ನಡೆಯುತ್ತಾ ಮುಂದೆ ಹೋದಳು.
ಆಗನ್ನು ಮಳೆಗಾಲ ಮುಗಿದು ಎಲ್ಲೆಲ್ಲೂ ಹಸಿರು ಚಿಗುರಿತ್ತು. ಉದ್ಯಾನವನದಲ್ಲಿ ಹೂವು ಹಣ್ಣು ತುಂಬಿತ್ತು. ಅದನ್ನೆಲ್ಲ ನೋಡು ನೋಡುತ್ತಲೇ ಉತ್ತರ ದಿಕ್ಕಿಗೆ ಬಂದಳು ಅಲ್ಲಿ ರೈತನ ಹೊಲದಲ್ಲಿ ಕಬ್ಬು ಬೆಳೆದಿದ್ದು, ಹಾಗೂ ತೋಟದಲ್ಲಿ ಲವಂಗದ ಒ\ಹೂಗಳು ಅರಳಿತ್ತು . ಲಕ್ಷ್ಮಿ ಸಿಹಿಯಾದ ಕಬ್ಬನ್ನು ಕಿತ್ತು ತಿಂದಳು ಹಾಗೆ ಬಣ್ಣ ಬಣ್ಣದ ಹೂಗಳನ್ನು ಬಿಡಿಸಿಕೊಂಡು ದಂಡೆ ಮುಡಿದು ತನ್ನನ್ನು ತಾನು ಸಿಂಗರಿಸಿ ಕೊಂಡು ಸಂತೋಷ ಪಟ್ಟಳು. ಆ ಸಮಯಕ್ಕೆ ನಾರಾಯಣನು ತನ್ನ ಕಾರ್ಯವನ್ನು ಮುಗಿಸಿ ಬಂದನು, ಲಕ್ಷ್ಮಿಯನ್ನು ನೋಡಿ, ನಾರಾಯಣನಿಗೆ ಕೋಪ ಬಂತು. ನಾನು ಅಷ್ಟು ಸಾರಿ ಹೇಳಿದ್ದೆ ಉತ್ತರ ದಿಕ್ಕಿನ ಕಡೆ ಹೋಗಬೇಡ ಎಂದು ಆದರೂ ಕೇಳದೆ ಹೋಗಿದ್ದಲ್ಲದೆ, ರೈತನ ಅನುಮತಿ ಇಲ್ಲದೆ ಅವನು ಬೆಳೆದ ಕಬ್ಬನ್ನು ತಿಂದು, ತೋಟದಲ್ಲಿ ಅರಳಿದ ಹೂವಿನಿಂದ ಅಲಂಕರಿಸಿಕೊಂಡಿರುವೆ ಹೀಗೆ ಮಾಡಿದ್ದು ತಪ್ಪು. ಆದ ಕಾರಣ ರೈತನ ಮನೆಯಲ್ಲಿ ಕೆಲವು ಕಾಲ ಇದ್ದು ಅವನ ಮನೆ ಮತ್ತು ಹೊಲದ ಕೆಲಸ ಮಾಡಬೇಕು ಎಂದವನೆ ವೈಕುಂಠಕ್ಕೆ ಹೊರಟು ಬಿಟ್ಟನು.

ಲಕ್ಷ್ಮಿ ಹುಡುಗಿಯಾಗಿ ರೈತನ ಮನೆಗೆ ಹೋದಳು. ಆ ಮನೆಯ ಯಜಮಾನ ಮಾಧವ. ರೈತನಲ್ಲಿ ಲಕ್ಷ್ಮಿ ಹೇಳಿದಳು ನಾನು ದಾರಿ ತಪ್ಪಿ ಬಂದಿರುವೆ ಆಹಾರ ನೀರು ಇಲ್ಲದೆ ಒದ್ದಾಡುತ್ತಿರುವೆ. ಕೆಲವು ಕಾಲ ನಿಮ್ಮ ಮನೆಯಲ್ಲಿ ಇರಬಹುದೇ ಎಂದು ಕೇಳಿದಳು. ರೈತ ಬಹಳ ಒಳ್ಳೆಯವನು ಆಯಿತು ನನಗೂ ಮೂರು ಜನ ಹೆಣ್ಣು ಮಕ್ಕಳು ನೀನು ಒಬ್ಬಳು ಆಗುವೆ. ನಾವು ತುಂಬಾ ಬಡವರು ನಮ್ಮ ಮನೆಯಲ್ಲಿ ಏನು ಮಾಡುತ್ತೆವೊ ಅದನ್ನೇ ನಿನಗೂ ಕೊಡುವೆ ಎಂದಾಗ ಲಕ್ಷ್ಮಿ ಸಂತೋಷದಿಂದ ಒಪ್ಪಿ ಅವರ ಮನೆ ಒಳಗೆ ಕಾಲಿಟ್ಟಳು. ಮಾಧವನ ಪತ್ನಿ ಕೋಮಲ ಹಾಗೂ ಅವನ ಮೂರು ಮಕ್ಕಳು ಲಕ್ಷ್ಮಿಯನ್ನು ಆದರದಿಂದ ಬರಮಾಡಿಕೊಂಡರು. ಲಕ್ಷ್ಮಿ ಒಳಗೆ ಕಾಲಿಟ್ಟಳು ಕೇಳಬೇಕೇ? ಕಾಲಿಟ್ಟ ದಿನದಿಂದಲೇ ಒಂದರ ಮೇಲೆ ಒಂದು ಒಳ್ಳೆಯದಾಗುತ್ತಾ ಬಂತು ಬೆಳೆ ಚೆನ್ನಾಗಿ ಬಂತು, ಹಸು ಕರು ತೆಗೆದುಕೊಂಡ ಹಾಲು ಹೈನು ತುಂಬಿತು, ಚಂದದ ಮನೆ ಕಟ್ಟಿದ ಸಂಪತ್ತು ಹುಡುಕಿ ಕೊಂಡು ಬಂದಿತು. ರೈತ ಮತ್ತು ಅವನ ಪತ್ನಿ, ಲಕ್ಷ್ಮಿಯನ್ನು ತಮ್ಮ ಮಗಳಂತೆ ನೋಡಿಕೊಳ್ಳುತ್ತಿದ್ದರು. ಲಕ್ಷ್ಮಿ ರೈತನ ಹೆಂಡತಿಗೆ ಮನೆಯ ಕೆಲಸದಲ್ಲಿ ಸಹಾಯ ಮಾಡಿ, ಮಾಧವನ ಹೊಲದಲ್ಲೂ ಕೆಲಸ ಮಾಡುತ್ತಿದ್ದಳು.
ರೈತನ ಪತ್ನಿಗೆ ಲಕ್ಷ್ಮೀನಾರಾಯಣರ ಪೂಜೆಯ ಮಾಡುವಂತೆ ಹೇಳಿದಳು. ರೈತನ ಹೆಂಡತಿ ಪ್ರತಿನಿತ್ಯ ಪೂಜಿಸುತ್ತಾ ಬಂದಳು ರೈತನ ಸಂಪತ್ತು ಹೆಚ್ಚಾಗಿ ಧನ ಧಾನ್ಯಗಳಿಂದ ಮನೆ ತುಂಬಿತು.

ವಿಷ್ಣು ಕೊಟ್ಟ ಅವಧಿ ಮುಗಿಯಿತು ಸಾಕ್ಷಾತ್ ನಾರಾಯಣನೇ ಲಕ್ಷ್ಮಿಯನ್ನು ಕರೆದೊಯ್ಯಲು ಚಿನ್ನದ ರಥ ತೆಗೆದುಕೊಂಡು ಭೂಮಿಗೆ ಬಂದನು. ರೈತನಲ್ಲಿ ಲಕ್ಷ್ಮಿಯನ್ನು ಕಳಿಸಿ ಕೊಡು ಎಂದು ಕೇಳಿದರೆ, ರೈತನು ನಮ್ಮ ಮಗಳನ್ನು ಕಳಿಸುವುದಿಲ್ಲ ಎಂದನು. ಯಾರೇ ಹೇಳಿದರು ರೈತ ಒಪ್ಪಲಿಲ್ಲ. ಆಗ ಲಕ್ಷ್ಮಿಯೇ ರೈತನನ್ನು ಸಮಾಧಾನ ಪಡಿಸಿ, ನಾನು ವೈಕುಂಠ ಪತಿ ನಾರಾಯಣನ ಪತ್ನಿ, ನಿಮ್ಮ ಮನೆಗೆ ಬರಬೇಕಾದ ಸಂದರ್ಭ ಬಂದಿತು ನನ್ನನ್ನು ಇಷ್ಟು ವರ್ಷಗಳು ಮಗಳಂತೆ ಬಹಳ ಚೆನ್ನಾಗಿ ನೋಡಿಕೊಂಡಿದ್ದೀರಿ. ನಾಳೆ ಆಶ್ವೀಜ ಮಾಸದ ಕೃಷ್ಣ ಪಕ್ಷದ ‘ತ್ರಯೋದಶಿ’ ಬಂದಿದೆ. ಸಂಜೆ ಲಕ್ಷ್ಮಿ ಸ್ವರೂಪವಾದ ದವಸ -ಧಾನ್ಯ, ಒಂದು ಕಲಶ ಮತ್ತು ಹಣ ಇಟ್ಟು ಹೂವುಗಳಿಂದ ಸಿಂಗರಿಸಿ ಧೂಪ ದೀಪ ಗಳಿಂದ ಪೂಜಿಸಿರಿ. ನಿಮ್ಮ ಮನೆಯಲ್ಲಿಯೇ ನೆಲೆಸುತ್ತೇನೆ ಪ್ರತಿ ವರ್ಷವೂ ತ್ರಯೋಧಶಿ ದಿನ ಬರುವೆ ಎಂದು ಹೇಳಿ, ತನ್ನ ದಿವ್ಯ ಪ್ರಭೆಯನ್ನು ಅವನ ಮನೆಯ ಸುತ್ತಲೂ ಹರಡಿ ಅದೃಶ್ಯ ಳಾದಳು. ಅಂದಿನಿಂದ ಆಶ್ವೀಜ ಮಾಸದ ತ್ರಯೋದಶಿಯನ್ನು “ಧನ ತ್ರಯೋದಶಿ” ಎನ್ನುತ್ತಾರೆ. ಆ ದಿನ ಬೆಳೆದ ಬೆಳೆಗಳನ್ನು, ದವಸ ಧಾನ್ಯಗಳನ್ನು ಒಟ್ಟುಗೂಡಿಸಿ ಲಕ್ಷ್ಮಿ ಎಂದು ಪ್ರತಿಷ್ಠಾಪಿಸಿ ಹಾಗೂ ನಾಣ್ಯಗಳು ತುಂಬಿದ ಕಲಶ ಇಟ್ಟು ಸಂಕಲ್ಪ ಮಾಡಿ, ಗಂಧ ಅರಿಶಿನ ಕುಂಕುಮಗಳ ಹಚ್ಚಿ, ಹೂ ಮಾಲೆ ಹಾಕಿ, ಗಂಗೆಯ ಪೂಜೆ ಹಾಗೆ ಬಚ್ಚಲು ಮನೆಯಲ್ಲಿ ತೊಳೆದು ನೀರು ತುಂಬಿದ ಹಂಡೆ. ಒಲೆ, ‌ ಕೊಟ್ಟಿಗೆ, ಇವೆಲ್ಲವೂ ಲಕ್ಷ್ಮೀ ಸ್ವರೂಪವೆಂದು ಪೂಜೆ ಮಾಡುತ್ತಾರೆ.ಈ ದಿನ ಮಾಡಿದ ‘ಗಂಗೆ’ ಪೂಜೆ ನೀರನ್ನು ‘ನರಕ ಚತುರ್ದಶಿ’ ದಿನ ಅಂದರೆ ಮರುದಿನ ಹಂಡೆಗೆ ಹಾಕಿಕೊಂಡು ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ಉಲ್ಲೇಖವಿದೆ.

ನರಕ ಚತುರ್ದಶಿ:

ನರಕ ಚತುರ್ದಶಿ ಹಬ್ಬದ ಪೌರಾಣಿಕ ಹಿನ್ನೆಲೆ. ಮಹಾ ವಿಷ್ಣು ವರಾಹಾವ ತಾರದಲ್ಲಿದ್ದಾಗ, ಅವನ ದೇಹದಿಂದ ಒಂದು ಬಿಂದು ಬೆವರು ಭೂಮಿಗೆ ಬೀಳುತ್ತದೆ. ಆ ಬಿಂದುವಿನಿಂದ ಭೂಮಿ ದೇವಿಯ ಗರ್ಭದಲ್ಲಿ “ನರಕಾಸುರ” ಜನಿಸುತ್ತಾನೆ. ಅವನಿಗೆ ಭೂಮಿಪುತ್ರ ಮತ್ತು ಬೌಮಾಸುರ ಅಂತ ಹೆಸರು ಬಂದಿತು. ಭೂದೇವಿಯು ಮಗನ ಮೇಲಿನ ವ್ಯಾಮೋಹದಿಂದ ವಿಷ್ಣುವನ್ನು ಕೇಳಿ ನರಕಾಸುರನಿಗೆ ವೈಷ್ಣವಾಸ್ತ್ರವನ್ನು ಕೊಡಿಸುತ್ತಾಳೆ. ಮೊದಲೇ ಬಲಶಾಲಿಯಾಗಿದ್ದ ನರಕಾಸುರ ವೈಷ್ಣವಾಸ್ತ್ರ ಸಿಕ್ಕಿದ್ದೇ ಮತ್ತಷ್ಟು ಬಲಿಷ್ಠನಾಗಿ ರಾಕ್ಷಸ ಗುಣವನ್ನು ಹೆಚ್ಚಿಸಿಕೊಂಡನು. ಭೂಮಿಯಲ್ಲಿ ಋಷಿಮುನಿಗಳಿಗೆ ತೊಂದರೆ ಕೊಡುತ್ತಿದ್ದನು. ನಂತರ ದೇವ ಲೋಕಕ್ಕೆ ಲಗ್ಗೆ ಇಟ್ಟನು. ದೇವರಾಜ ಇಂದ್ರ ಮತ್ತು ಅವನ ತಾಯಿ ಅಧಿತಿಗೆ ಕಾಟ ಕೊಡಲಾರಂಬಿಸಿದನು. ಅವನ ಕಾಟ ತಡೆಯದೆ ದೇವೇಂದ್ರನು ವಿಷ್ಣುವಿನಲ್ಲಿ ಮೊರೆ ಹೋದನು. ನರಕಾಸುರನಿಂದ ತನಗೆ ಬಂದಿರುವ ತೊಂದರೆ ಪರಿಹರಿಸಲು ಬೇಡಿದನು. ಈ ಸಮಯದಲ್ಲಿ ಭೂಮಿ ತಾಯಿಯು ಸಹ ಮಗನ ಉಪಟಳ ಸಹಿಸಲಾರದೆ, ಅವನನ್ನು ಸಂಹರಿಸುವಂತೆ ನಾರಾಯಣನಲ್ಲಿ ಬೇಡಿ ದಳು. ಆಶ್ವಿಜಮಾತ್ರ ಕೃಷ್ಣ ಪಕ್ಷದ ಚತುರ್ದಶಿಯ ಕಾಡಗತ್ತಲಿನಲ್ಲಿ ನರಕಾಸುರ ನೊಡನೆ ಕೆಲವು ದಿನಗಳು ಯುದ್ಧ ಮಾಡಿ ಅವನನ್ನು ಚತುರ್ದಶಿ ಬೆಳಗಿನ ಜಾವ ಸಂಹರಿಸಿ, ಲೋಕದಲ್ಲಿ ಶಾಂತಿ ನೆಲೆಸುವಂತೆ ಮಾಡಿದ. ಯುದ್ಧ ಮಾಡಿದ ಆಯಾಸ, ರಕ್ತ ತುಂಬಿದ ವಸ್ತ್ರ, ಕಾದಾಡಿ ಮಣ್ಣು ಬೆವರಿನಿಂದ ತುಂಬಿದ ಶರೀರ. ಯುದ್ಧ ಭೂಮಿಯಿಂದ ಬಂದ ಶ್ರೀ ಕೃಷ್ಣನಿಗೆ ರುಕ್ಮಿಣಿ ಸತ್ಯಭಾಮೆಯರು ಹರಳೆಣ್ಣೆಯನ್ನು ನೆತ್ತಿಗೆ ಒತ್ತಿ ಮೈ ಕೈಯ್ಯಗೂ ನೀವಿ ಹಂಡೆಯಲ್ಲಿದ್ದ ಬಿಸಿಬಿಸಿ ನೀರಿನಿಂದ ಅಭ್ಯಂಗ ಸ್ನಾನವನ್ನು ಮಾಡಿಸಿದರು, ನಂತರ ಹೊಸ ವಸ್ತ್ರ ಧರಿಸಿದನು.
ವಿಷ್ಣು ವರಹಾವತಾರದಲ್ಲಿದ್ದಾಗ ಭೂಮಿ ಮೇಲೆ ಬಿದ್ದ ಬೆವರಿನ ಹನಿಯಿಂದ ಹುಟ್ಟಿದ ಮಗ ನರಕಾಸುರ ಆಗಿರುತ್ತಾನೆ. ಹೀಗಾಗಿ ಭೂಮಿ ತಾಯಿಯಾದರೆ ತಂದೆ ವಿಷ್ಣು ಆಗುತ್ತಾನೆ. ಮಗನ ಸಂಬಂಧವಿದ್ದು ಸಂಹಾರ ಮಾಡಿದ್ದ ಕಾರಣ ಸ್ನಾನ ಮಾಡಿ ಬೇರೆ ಮಡಿ ವಸ್ತ್ರ ಹಾಕಿ ಕೊಳ್ಳುತ್ತಾನೆ. ಮೈ ಮನಸ್ಸು ಹಗುರವಾಯಿತು. ನಂತರ ಸಿಹಿಯಾದ ಸವಿಯಾದ ಭೋಜನವನ್ನು ಮಾಡಿದನು. ಶ್ರೀ ಕೃಷ್ಣನು ಮಾಡಿದ ಈ ಕಾರ್ಯ ಕಾರ್ತಿಕ ಮಾಸದ ಚತುರ್ದಶಿ ದಿನವನ್ನು ,( ಬೆಳಗಿನ ಜಾವ ನಾಲ್ಕು ಗಂಟೆಗೆ ಅಭ್ಯಂಗ ಸ್ನಾನ ಮಾಡಬೇಕು) ಹಬ್ಬದ ದಿನವಾಗಿ ಆಚರಣೆ ಮಾಡುತ್ತಾರೆ . ದುಷ್ಟ ರಾಕ್ಷಸನ ಸಂಹಾರ ಮಾಡಿದ ಸಂಭ್ರಮಕ್ಕಾಗಿ ಅಭ್ಯಂಗ ಸ್ನಾನ ಮಾಡಿ ಎಣ್ಣೆ ಸ್ನಾನ ಹೊಸ ಬಟ್ಟೆ ಧರಿಸುವುದು ಪಟಾಕಿ ಸಿಡಿಸುವುದು ಸಿಹಿ ಬೋಜನ ಮಾಡುವುದು ರೂಢಿಯಾಗಿ ಬಂದಿದೆ. ಅಂಧಕಾರ ಅಳಿಸಿ ಬೆಳಕಿನ ಸಾಲು ದೀಪ ಹಚ್ಚುತ್ತಾರೆ. ದೇವಸ್ಥಾನಗಳಿಗೆ ಹೋಗುತ್ತಾರೆ. ಮನೆಯಲ್ಲಿ ವಿಶೇಷವಾಗಿ ಮನೆ ದೇವರ ಪೂಜೆ ಹೊಸಿಲ ಪೂಜೆ, ಗೋಪೂಜೆ, ತುಳಸಿ ಪೂಜೆ, ಗೋವುಗಳಿಗೆ ಗೋಗ್ರಾಸ ಇಡುತ್ತಾರೆ ದೀಪಾವಳಿ ಹಬ್ಬದ ಆಚರಣೆ ನಾಲ್ಕೈದು ದಿನಗಳು ನಡೆಯುತ್ತದೆ. ಬಂಧು ಬಾಂಧ ವರೊಂದಿಗೆ ಖುಷಿಖುಷಿಯಾಗಿ ಭೋಜನ ಮಾಡುತ್ತಾರೆ.

ನೀರಿನಲ್ಲಿ ಗಂಗೆ, ಎಣ್ಣೆಯಲ್ಲಿ ಲಕ್ಷ್ಮಿ ಇರುತ್ತಾರೆ. ಆದ್ದರಿಂದ ಎಣ್ಣೆ ಹಚ್ಚಿಕೊಂಡು ಅಭ್ಯಂಜನ ಮಾಡಿ ಹೊಸ ಬಟ್ಟೆ ಹಾಕಿಕೊಳ್ಳುತ್ತಾರೆ. ಇವೆಲ್ಲ ಆಯುರಾರೋಗ್ಯ ಭಾಗ್ಯ ಎಂಬ ನಂಬಿಕೆ ಇದೆ ಪಾಪಗಳ ನಿವಾರಣೆಯಾಗುತ್ತದೆ. ನರಕಾಸುರನ ಸಾಯುವ ಮುನ್ನ ತನ್ನ ನೆನಪಿಗಾಗಿ ತನ್ನ ಹೆಸರಿನಿಂದ ಈ ದಿನ ಹಬ್ಬ ಮಾಡಬೇಕು ಎಂದು ಕೃಷ್ಣನಿಂದ ವರ ಪಡೆದಿದ್ದ. ನರಕಾಸುರನ ಜೊತೆ ಎಂಟು ಹತ್ತು ದಿನಗಳ ಕಾಲ ಯುದ್ಧ ಮಾಡಿ ಸಾಕಷ್ಟು ಸಾಕಷ್ಟು ದಣಿದಿದ್ದ, ಹಾಗೂ ವರಹಾವತಾರದಲ್ಲಿ ಹನಿ ಬೆವರು ಭೂಮಿಗೆ ಬಿದ್ದು ಅದರಿಂದ ಹುಟ್ಟಿದ ನರಕಾಸುರ ಭೂಮಿ ದೇವಿ ಮತ್ತು ಮಹಾ ವಿಷ್ಣುವಿನ ಮಗನು ಆಗಿದ್ದ. ಹೀಗಾಗಿ ಶ್ರೀ ಕೃಷ್ಣನು ದೇಹ ಮನಸ್ಸು ಶುದ್ದಿ ಮಾಡಿಕೊಳ್ಳಲು ಎಣ್ಣೆ ಹಚ್ಚಿ ಕೊಂಡು ಅಭ್ಯಂಜನ ಮಾಡುತ್ತಾನೆ. ದುಷ್ಟ ಸಂಹಾರದ ಸಂಭ್ರಮಕ್ಕಾಗಿ ಎಣ್ಣೆ ಸ್ನಾನ, ಹೊಸ ಬಟ್ಟೆ, ಪಟಾಕಿ ಸಿಡಿಸುವುದು ಸಿಹಿ ಸಿಹಿ ಬೋಜನ ಮಾಡುವುದು ರೂಢಿಯಾಗಿ ಬಂದಿದೆ.

ನಮೋಸ್ತು ನಾರಾಯಣ ಮಂದಿರಾಯ
ನಮೋಸ್ತು ಹಾರಾಯಣ ಕಂದರಾಯ!
ನಮೋಸ್ತು ಮತ್ಸ್ಯಾಯ ಲಯಾಬ್ದಿಗಾಯ
ನಮೋಸ್ತು ಕೂರ್ಮಾಯ ಪಯೋಬ್ದಿಗಾಯ !

ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯಗಳು... 💐🙏🏻

Dear Good morning, I extend my warmest greetings to you and your family members on the occasion of Festival of Lights "DEEPAWALI". On this auspicious occasion let us all pledge to light up the hearts of our fellow human beings by propagating the values of mutual
Wishing you joy, prosperity, and success in all your endeavors this Diwali! Let the festival fill your heart with happiness.
Happy Diwali !!"The inner significance of Deepavali is to lead man from darkness to light. Man is perpetually plunged in darkness. Every time he is enveloped in darkness, he should light a lamp that is ever shining within him. Carry that lamp wherever you go. It will light your path wherever you may be."
"The inner significance of Deepavali is to lead man from darkness to light. Man is perpetually plunged in darkness. Every time he is enveloped in darkness, he should light a lamp that is ever shining within him. Carry that lamp wherever you go. It will light your path wherever you may be."

ಅಸಾಧ್ಯ ಎಂಬುದು ಏನು ಇಲ್ಲ ಎಂಬುದು ಮಾತಿಗೆ ಸೀಮಿತವಾಗಿತ್ತು ಅದನ್ನು ಕಾರ್ಯ ರೂಪಕ್ಕೆ ತಂದ ಕೆಂಪೇಗೌಡರ ಕುಡಿ ನಮ್ಮ ಸಾಹೇಬ, ಜನ ಬಂಡೆ ಎಂದು ಬಿರು...
15/05/2024

ಅಸಾಧ್ಯ ಎಂಬುದು ಏನು ಇಲ್ಲ ಎಂಬುದು ಮಾತಿಗೆ ಸೀಮಿತವಾಗಿತ್ತು ಅದನ್ನು ಕಾರ್ಯ ರೂಪಕ್ಕೆ ತಂದ ಕೆಂಪೇಗೌಡರ ಕುಡಿ ನಮ್ಮ ಸಾಹೇಬ, ಜನ ಬಂಡೆ ಎಂದು ಬಿರುದು ಕೊಟ್ಟಿದ್ದಾರೆ, ತನ್ನನ್ನು ನಂಬಿದವರಿಗೆ ಬಂಡೆಯಾಗಿ ನಿಂತಿರುವ ಜನಸೇವಕ, ಮಾತಲ್ಲಿ ಒರಟಾದರೂ ಪ್ರೀತಿಯಲ್ಲಿ ಯಾರೊಬ್ಬರಿಗೂ ಕಮ್ಮಿಯಿಲ್ಲ ನಮ್ಮ ನಾಯಕ ❤️❤️

ಒಂದಲ್ಲ ಒಂದು ದಿನ ಈ ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತಾ, ಸಾಹೇಬರಿಗೆ ಆರೋಗ್ಯ ಆಯಸ್ಸು ನೀಡಲಿ, ಜನಸೇವೆ ಮಾಡಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ🙏🙏

ಹುಟ್ಟುಹಬ್ಬದ ಶುಭಾಶಯಗಳು ಸಾಹೇಬರಿಗೆ..
💐🎂💐

ಶುಭ ಕೋರುವವರು!!!
ಶಿವರಾಜ್ ಉಪ್ಪಾರ !!!💛❤️

ಇಂದು ಮೈಸೂರ್ ರಸ್ತೆ ಯಲ್ಲಿರುವ ಜೆ. ಕೆ. ಗ್ರ್ಯಾಂಡ್ ಅರೇನ ದಲ್ಲಿ ನಡೆದಂತಹ ಉಪ ಮುಖ್ಯಮಂತ್ರಿಗಳು ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರ್ ರವರು ಹಾಗ...
12/02/2024

ಇಂದು ಮೈಸೂರ್ ರಸ್ತೆ ಯಲ್ಲಿರುವ ಜೆ. ಕೆ. ಗ್ರ್ಯಾಂಡ್ ಅರೇನ ದಲ್ಲಿ ನಡೆದಂತಹ ಉಪ ಮುಖ್ಯಮಂತ್ರಿಗಳು ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರ್ ರವರು ಹಾಗೂ ಸಂಸದರು ಆದ ಸನ್ಮಾನ್ಯ ಶ್ರೀ ಡಿ ಕೆ ಸುರೇಶ್ ರವರ ತಂಗಿ ಶ್ರೀಮತಿ ಡಿ ಕೆ ಮಂಜುಳ ರವರ ಪುತ್ರಿ ಲಹರಿಯ ಆರತಕ್ಷತೆ ಕಾರ್ಯಕ್ರಮ ದಲ್ಲಿ ಭಾಗವಹಿಸಿದ ಕ್ಷಣಗಳು.

18/12/2023
31/10/2023

ಸುವರ್ಣ ಕರ್ನಾಟಕ ಸಂಭ್ರಮಕ್ಕೆ ನಾಡಗೀತೆಯ ಜೊತೆಗೆ ಗಾಯನ ಮಾಡಬೇಕಾದ ಐದು ಕನ್ನಡ ಗೀತೆಗಳು

೧. ಹುಯಿಲಗೋಳ ನಾರಾಯಣರಾಯರ "ಉದಯವಾಗಲಿ‌ ನಮ್ಮ ಚೆಲುವ ಕನ್ನಡ ನಾಡು",
೨. ಕುವೆಂಪು ಅವರ "ಎಲ್ಲಾದರು ಇರು ಎಂತಾದರು ಇರು",
೩. ದ.ರಾ.ಬೇಂದ್ರೆ ಅವರ "ಒಂದೇ ಒಂದೇ ಕರ್ನಾಟಕವೊಂದೇ",
೪. ಸಿದ್ದಯ್ಯ ಪುರಾಣಿಕ ಅವರ "ಹೊತ್ತಿತ್ತೋ ಹೊತ್ತಿತ್ತು ಕನ್ನಡದ ದೀಪ"
೫. ಚನ್ನವೀರ ಕಣವಿ ಅವರ "ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ".

~ಸಿದ್ದರಾಮಯ್ಯ
ಮುಖ್ಯಮಂತ್ರಿಗಳು

Address

Bangalore

Website

Alerts

Be the first to know and let us send you an email when Shivaraj Uppar, ಶಿವರಾಜ್ ಉಪ್ಪಾರ್ posts news and promotions. Your email address will not be used for any other purpose, and you can unsubscribe at any time.

Share

Category