Ursu Association

Ursu Association Ursu Association is a community Organisation based in Bengaluru and working towards the upliftment of Ursu Community.

ನಾಡಿನ ಸಮಸ್ತ ಜನತೆಗೆ ಮಹಾನವಮಿ ಹಾಗೂ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು.
01/10/2025

ನಾಡಿನ ಸಮಸ್ತ ಜನತೆಗೆ ಮಹಾನವಮಿ ಹಾಗೂ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು.

ನಾಡಿನ ಸಮಸ್ತ ಜನತೆಗೆ ದುರ್ಗಾಷ್ಟಮಿ ಹಬ್ಬದ ಹಾರ್ದಿಕ ಶುಭಾಶಯಗಳು. ದುರ್ಗಾ ಮಾತೆಯು ಶಾಶ್ವತ ಶಕ್ತಿಯ ಮತ್ತು ದುಷ್ಟ ಶಕ್ತಿಗಳ ಮೇಲೆ ಸತ್ಯದ ವಿಜಯದ...
30/09/2025

ನಾಡಿನ ಸಮಸ್ತ ಜನತೆಗೆ ದುರ್ಗಾಷ್ಟಮಿ ಹಬ್ಬದ ಹಾರ್ದಿಕ ಶುಭಾಶಯಗಳು. ದುರ್ಗಾ ಮಾತೆಯು ಶಾಶ್ವತ ಶಕ್ತಿಯ ಮತ್ತು ದುಷ್ಟ ಶಕ್ತಿಗಳ ಮೇಲೆ ಸತ್ಯದ ವಿಜಯದ ಸಂಕೇತವಾಗಿದ್ದಾಳೆ. ಈ ಪವಿತ್ರ ದಿನದಂದು, ನಾವು ತಾಯಿ ದುರ್ಗೆಯ ದಿವ್ಯ ಆಯುಧಗಳನ್ನು ಪೂಜಿಸಿ, ಆಕೆಯ ಪ್ರತಿರೂಪವಾಗಿ ಕನ್ಯಾ ಪೂಜೆ ನೆರವೇರಿಸಿ ಆಶೀರ್ವಾದ ಪಡೆಯೋಣ. ಮಹಿಷಾಸುರ ಹಾಗೂ ಚಂಡ-ಮುಂಡರ ಸಂಹಾರ ಮಾಡಿದ ಪರಾಶಕ್ತಿ, ತಾಯಿ ದುರ್ಗೆಯ ಕೃಪೆಯು ನಿಮ್ಮೆಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಮಂಗಳವನ್ನು ತರಲಿ ಎಂದು ಹಾರೈಸುತ್ತೇನೆ.

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮ: ||ಶಿಕ್ಷಣದ ಮೌಲ್ಯವನ್ನು ಉತ್ತೇಜಿಸಲು ತನ್ನ ಇಡೀ ಜೀವ...
05/09/2025

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮ: ||

ಶಿಕ್ಷಣದ ಮೌಲ್ಯವನ್ನು ಉತ್ತೇಜಿಸಲು ತನ್ನ ಇಡೀ ಜೀವನವನ್ನು ಮುಡಿಪಾಗಿಟ್ಟ ಶ್ರೇಷ್ಠ ಆದರ್ಶ ಶಿಕ್ಷಕರು, ಶಿಕ್ಷಣ ತಜ್ಞರು, ಮಾಜಿ ರಾಷ್ಟ್ರಪತಿಗಳು ಹಾಗೂ ಭಾರತರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಗೌರವ ಸ್ಮರಣೆಯೊಂದಿಗೆ, ನಮ್ಮ ಬದುಕಿಗೆ ದಾರಿ ತೋರುವ ಎಲ್ಲಾ ಶಿಕ್ಷಕರಿಗೂ ಅಭಿನಂದನೆಗಳು.
ಮೈಸೂರು ಒಡೆಯರ್ ಮಹಾರಾಜರುಗಳು, ವಿಶೇಷವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್, ಕರ್ನಾಟಕದ ಶಿಕ್ಷಣ ಮತ್ತು ಸಮಾಜದ ಅಭಿವೃದ್ಧಿಗೆ ಅಸಾಧಾರಣ ಕೊಡುಗೆ ನೀಡಿದ್ದಾರೆ. ಅವರ ಆಡಳಿತಕಾಲವನ್ನು ಕನ್ನಡನಾಡಿನ "ಸುವರ್ಣಯುಗ" ಎಂದು ಕರೆಯಲಾಗುತ್ತದೆ.

ಕರ್ನಾಟಕ ಶಿಕ್ಷಣಕ್ಕೆ ನಮ್ಮ ಮೈಸೂರು ಸಂಸ್ಥಾನದ ಶಿಕ್ಷಣ ಕ್ಷೇತ್ರದ ಪ್ರಮುಖ ಕೊಡುಗೆಗಳು:

ಪ್ರಾಥಮಿಕ ಶಿಕ್ಷಣ ಕಡ್ಡಾಯ:

• ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಿ, ಸಾಮಾನ್ಯ ಜನರಿಗೆ ಶಿಕ್ಷಣದ ಹಕ್ಕನ್ನು ಖಚಿತಪಡಿಸಿದರು.

• ದಲಿತರು ಮತ್ತು ಹಿಂದುಳಿದ ಸಮುದಾಯಗಳ ಮಕ್ಕಳಿಗೂ ಸರ್ಕಾರಿ ಶಾಲೆಗಳಲ್ಲಿ ಪ್ರವೇಶದ ವ್ಯವಸ್ಥೆ ಮಾಡಿದರು.

ಮೈಸೂರು ವಿಶ್ವವಿದ್ಯಾಲಯ (1916):

• ಇದು ಭಾರತದ ಮೊದಲ ಪ್ರಾದೇಶಿಕ ವಿಶ್ವವಿದ್ಯಾಲಯ, ವಿಜ್ಞಾನ, ಕಲೆ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣಕ್ಕೆ ದಾರಿ ಮಾಡಿಕೊಟ್ಟಿತು.

• ಮೈಸೂರು ವಿಶ್ವವಿದ್ಯಾಲಯವು ಅನೇಕ ವಿದ್ವಾಂಸರು, ಸಾಹಿತ್ಯಕಾರರು ಮತ್ತು ವಿಜ್ಞಾನಿಗಳನ್ನು ದೇಶಕ್ಕೆ ನೀಡಿದೆ.

ಭಾರತೀಯ ವಿಜ್ಞಾನ ಸಂಸ್ಥೆ (IISc):

• ಜಗತ್ತಿನಲ್ಲಿ ಪ್ರಸಿದ್ಧವಾಗಿರುವ IISc ಬೆಂಗಳೂರು ಸ್ಥಾಪನೆಗೆ ಒಡೆಯರ್ ರ ಬೆಂಬಲ ಅತ್ಯಂತ ಮಹತ್ವದ್ದು.

• ತಾಂತ್ರಿಕ ಶಿಕ್ಷಣ ಮತ್ತು ವೈಜ್ಞಾನಿಕ ಸಂಶೋಧನೆಗೆ ಅವರು ನೀಡಿದ ಪ್ರೋತ್ಸಾಹ ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸಿತು.

ಮಹಿಳಾ ಶಿಕ್ಷಣ ಮತ್ತು ಸಬಲೀಕರಣ:

• ಮಹಾರಾಣಿ ಮಹಿಳಾ ಕಾಲೇಜು ಸ್ಥಾಪಿಸಿ, ಮಹಿಳೆಯರು ಉನ್ನತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿದರು.

• ಎಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ಬಾಲ್ಯ ವಿವಾಹವನ್ನು ನಿಷೇಧಿಸಿದರು.

• ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ ಭಾರತದ ಮೊದಲ ಆಡಳಿತಗಾರರಲ್ಲಿ ಒಡೆಯರ್ ಪ್ರಮುಖರು.

ತಾಂತ್ರಿಕ ಶಿಕ್ಷಣ:

• ತಾಂತ್ರಿಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ, ಮುಂದಿನ ದಿನಗಳಲ್ಲಿ IIT, IISC, ಇಂಜಿನಿಯರಿಂಗ್ ಕಾಲೇಜುಗಳು ಸ್ಥಾಪನೆಯ ಭಿತ್ತಿಕೆ ಹಾಕಿದರು.

ಶಿಕ್ಷಣದ ಜೊತೆಗೆ, ಉದ್ಯೋಗ ಸೃಷ್ಟಿ ಮತ್ತು ಕೈಗಾರಿಕಾ ಅಭಿವೃದ್ಧಿಯಲ್ಲಿಯೂ ಮೈಸೂರು ಒಡೆಯರ್ ರು ಮುಂಚೂಣಿಯಲ್ಲಿದ್ದರು:

• ಮೈಸೂರು ಸ್ಯಾಂಡಲ್ ಸೋಪ್ – ದೇಶ-ವಿದೇಶಗಳಲ್ಲಿ ಪ್ರಸಿದ್ಧವಾಗಿರುವ ಉದ್ಯಮ.

• ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಸ್ಥಾವರ (VISL) – ಕೈಗಾರಿಕಾ ಕ್ರಾಂತಿಗೆ ಮುನ್ನುಡಿ ಬರೆದಿತು.

• BHEL (ಭಾರತ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್) ಸ್ಥಾಪನೆಗೆ ಅಡಿಪಾಯ ಹಾಕಿದರು.

ಆ ಕಾಲಘಟ್ಟದಲ್ಲಿ ಶಿಕ್ಷಣ, ಮಹಿಳಾ ಹಕ್ಕುಗಳು, ತಾಂತ್ರಿಕ ಪ್ರಗತಿ ಹಾಗೂ ಕೈಗಾರಿಕಾ ವಿಕಾಸವನ್ನು ಒಟ್ಟಾಗಿ ಪ್ರೋತ್ಸಾಹಿಸಿದ ಒಡೆಯರ್ ಮಹಾರಾಜರ ಕಾರ್ಯವೈಖರಿಗಳು ಅಪಾರವಾಗಿದ್ದವು.

ಇವುಗಳು ನಮ್ಮ ಅರಸು ಸಮುದಾಯಕ್ಕೆ ಮತ್ತು ಕನ್ನಡನಾಡಿನ ಇಡೀ ಜನತೆಗೆ ಹೆಮ್ಮೆಯ ಸಂಗತಿ.
ಮೈಸೂರು ಸಂಸ್ಥಾನ – ಕರ್ನಾಟಕ ಶಿಕ್ಷಣ ಮತ್ತು ಪ್ರಗತಿಯ ಮೂಲಸ್ತಂಭ!

ಅರಸು ಅಸೋಸಿಯೇಷನ್ – ಸುವರ್ಣ ಮಹೋತ್ಸವ: 50 ವರ್ಷಗಳ ಸೇವಾ ಪಯಣಅರಸು ಅಸೋಸಿಯೇಷನ್, ತನ್ನ 50 ವರ್ಷಗಳ ಸಾರ್ಥಕ ಸೇವೆಯನ್ನು ಹೆಮ್ಮೆಯಿಂದ ಆಚರಿಸಿದೆ...
01/09/2025

ಅರಸು ಅಸೋಸಿಯೇಷನ್ – ಸುವರ್ಣ ಮಹೋತ್ಸವ: 50 ವರ್ಷಗಳ ಸೇವಾ ಪಯಣ

ಅರಸು ಅಸೋಸಿಯೇಷನ್, ತನ್ನ 50 ವರ್ಷಗಳ ಸಾರ್ಥಕ ಸೇವೆಯನ್ನು ಹೆಮ್ಮೆಯಿಂದ ಆಚರಿಸಿದೆ. ಕಳೆದ ಅರ್ಧ ಶತಮಾನದಿಂದ, ನಮ್ಮ ಸಂಸ್ಥೆಯು ಐಕ್ಯತೆ, ಸೇವೆ ಮತ್ತು ಸಂಸ್ಕೃತಿಯಂತಹ ಮೂಲಭೂತ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ಸಮಾಜ ಸೇವೆಯ ಹಾದಿಯಲ್ಲಿ ನಿರಂತರವಾಗಿ ಮುನ್ನಡೆಯುತ್ತಿದೆ.

ಈ ದೀರ್ಘ ಪಯಣದಲ್ಲಿ ಅನೇಕ ಸವಾಲುಗಳನ್ನು ಎದುರಿಸಿಯೂ, ನಮ್ಮ ಸಂಘಟನೆಯು ಸಮಾಜ ಸೇವೆಯ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನೆರವು ನೀಡಿರುವುದು, ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದು, ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವುದು ಹಾಗೂ ಎಲ್ಲರ ನಡುವೆ ಏಕತೆಯ ಸಂದೇಶವನ್ನು ಹರಡಿರುವುದು - ಈ ಎಲ್ಲಾ ಕಾರ್ಯಗಳಿಂದಾಗಿ ನಮ್ಮ ಸಂಸ್ಥೆಯು ಸಾವಿರಾರು ಜನರ ಬದುಕಿನಲ್ಲಿ ಬೆಳಕಾಗಿದೆ.

ಈಗ, ನಮ್ಮ ಈ ಶ್ರೇಷ್ಠ ಪಯಣದ ಒಂದು ಮೈಲಿಗಲ್ಲಾದ ಸುವರ್ಣ ಮಹೋತ್ಸವವನ್ನು ನಾವು ಹೆಮ್ಮೆಯಿಂದ ಆಚರಿಸಿದ್ದೇವೆ. ಈ ಐತಿಹಾಸಿಕ ಸಂದರ್ಭದಲ್ಲಿ ನಮ್ಮೊಂದಿಗೆ ಸೇರಿ, ತಮ್ಮ ಅಮೂಲ್ಯವಾದ ಪ್ರೋತ್ಸಾಹ, ಪ್ರೀತಿ ಮತ್ತು ಸಹಕಾರವನ್ನು ನೀಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಪ್ರತಿಯೊಬ್ಬ ಸದಸ್ಯರು, ಹಿತೈಷಿಗಳು, ಅತಿಥಿಗಳು ಹಾಗೂ ಅಭಿಮಾನಿಗಳಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.

ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವಾ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಹಸಿರು ಭವಿಷ್ಯ, ಸಾಂಸ್ಕೃತಿಕ ಬಾಂಧವ್ಯ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ನಮ್ಮ ಪ್ರಯತ್ನಗಳು ನಿರಂತರವಾಗಲಿ ಎಂಬುದು ನಮ್ಮ ಸಂಕಲ್ಪ.

ಇಂತಿ,
ಅರಸು ಅಸೋಸಿಯೇಷನ್ (ರಿ.), ಬೆಂಗಳೂರು

28/08/2025

ಅರಸು ಅಸೋಸಿಯೇಷನ್‌ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಗ್ಲೊಳ್ಳುತ್ತಿರುವ ಶ್ರೀಮತಿ ಶಮಿತಾ ಮಲ್ನಾಡ್ ಹಾಗೂ ತಂಡಕ್ಕೆ ಹೃತ್ಪೂರ್ವಕ ಸ್ವಾಗತ

ಐಕ್ಯತೆ, ಸಂಸ್ಕೃತಿ ಮತ್ತು ಸೇವೆಯ 50 ವರ್ಷದ ಹೆಮ್ಮೆಯ ಸಂಭ್ರಮ - ನಮ್ಮ ಅರಸು ಅಸೋಸಿಯೇಷನ್ ನ ಸುವರ್ಣ ಮಹೋತ್ಸವ. ಬನ್ನಿ, ಭಾಗವಹಿಸಿ...
ಇದೇ ಭಾನುವಾರ, 31 ಆಗಸ್ಟ್, 2025 ರಂದು ತ್ರಿಪುರವಾಸಿಸಿ (ಗೇಟ್ - 2) ಅರಮನೆ ಮೈದಾನದಲ್ಲಿ, ಬೆಳಗ್ಗೆ 9:30 ರಿಂದ ಸಾಯಂಕಾಲ 5:30 ರ ವರೆಗೆ

28/08/2025

ಅರಸು ಅಸೋಸಿಯೇಷನ್ (ರಿ.), ಬೆಂಗಳೂರು
ಅರಸು ಅಸೋಸಿಯೇಷನ್ (ರಿ.), ಬೆಂಗಳೂರಿನ ಸುವರ್ಣ ಮಹೋತ್ಸವ ಕಾರ್ಯಕ್ರಮದ ಕುರಿತು ಖ್ಯಾತ ಇತಿಹಾಸಕಾರ, ಮೈಸೂರು ಸಂಸ್ಥಾನದ ಕುರಿತು ವಿಶೇಷ ಕಾಳಜಿ - ಗೌರವ ಹೊಂದಿರುವ ಶ್ರೀ ಧರ್ಮೇಶ್ ಅವರ ಮಾತುಗಳು.

ಇದೇ ಭಾನುವಾರ, ೩೧ ಆಗಸ್ಟ್ ೨೦೨೫ ರಂದು ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿರುವ ಅರಸು ಅಸೋಸಿಯೇಷನ್ (ರಿ.), ಬೆಂಗಳೂರಿನ ೫೦ ನೇ ವರ್ಷದ ಕಾರ್ಯಕ್ರಮದಲ್ಲಿ ತಾವೆಲ್ಲರೂ ಪಾಲ್ಗೊಂಡು, ಯಶಸ್ವಿಗೊಳಿಸಬೇಕಾಗಿ ಮನವಿ.

ಇಂತಿ
ಅರಸು ಅಸೋಸಿಯೇಷನ್ (ರಿ.), ಬೆಂಗಳೂರಿನ

ಅರಸು ಅಸೋಸಿಯೇಷನ್ ತನ್ನ ಸುವರ್ಣ ಮಹೋತ್ಸವದ ಸಂಭ್ರಮವನ್ನು ಆಚರಿಸುತ್ತಿರುವ ಈ ವಿಶೇಷ ಸಂದರ್ಭದಲ್ಲಿ,ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ...
22/08/2025

ಅರಸು ಅಸೋಸಿಯೇಷನ್ ತನ್ನ ಸುವರ್ಣ ಮಹೋತ್ಸವದ ಸಂಭ್ರಮವನ್ನು ಆಚರಿಸುತ್ತಿರುವ ಈ ವಿಶೇಷ ಸಂದರ್ಭದಲ್ಲಿ,
ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಾನ್ಯ ಸಚಿವರಾದ ಶ್ರೀ ಶಿವರಾಜ್ ಎಸ್. ತಂಗಡಗಿ ಅವರನ್ನು ನಮ್ಮ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆತ್ಮೀಯವಾಗಿ ಆಹ್ವಾನಿಸುತ್ತಿದ್ದು, ಹೃತ್ಪೂರ್ವಕ ಸ್ವಾಗತ ಸಲ್ಲಿಸುತ್ತೇವೆ.

50 ವರ್ಷಗಳ ಸಂಭ್ರಮ, 50 ವರ್ಷಗಳ ಹೆಮ್ಮೆಯ ನಡಿಗೆ - ಸುವರ್ಣ ಮಹೋತ್ಸವದ ಕರೆಯೋಲೆ!ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಸಾಗಿಬಂದ ನಮ್ಮ ಅರಸು ...
22/08/2025

50 ವರ್ಷಗಳ ಸಂಭ್ರಮ, 50 ವರ್ಷಗಳ ಹೆಮ್ಮೆಯ ನಡಿಗೆ - ಸುವರ್ಣ ಮಹೋತ್ಸವದ ಕರೆಯೋಲೆ!

ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಸಾಗಿಬಂದ ನಮ್ಮ ಅರಸು ಅಸೋಸಿಯೇಷನ್ ಇಂದು ಅರ್ಧ ಶತಮಾನದ ಸಾಧನೆ ಮಾಡಿದೆ. ಇದು ಬರೀ ಸಂಖ್ಯೆಯಲ್ಲ, ಇದು ನಮ್ಮ ಬಾಂಧವ್ಯ, ನಂಬಿಕೆ ಮತ್ತು ಸತತ ಪ್ರಯತ್ನದ ಫಲ.

ನಮ್ಮ ಈ ಐತಿಹಾಸಿಕ ಕ್ಷಣವನ್ನು ಆಚರಿಸಲು ಆಗಸ್ಟ್ 31, 2025, ಭಾನುವಾರ ಬೆಳಿಗ್ಗೆ 9:30 ಗಂಟೆಗೆ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಎಲ್ಲರೂ ಸೇರುತ್ತಿದ್ದೇವೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಸನ್ಮಾನ್ಯ ಶ್ರೀ ಪಿ.ಸಿ. ಮೋಹನ್ ಅವರು ನಮ್ಮ ಸುವರ್ಣ ಮಹೋತ್ಸವದ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದು, ನಮ್ಮೊಂದಿಗೆ ಉಪಸ್ಥಿತರಿರುವುದು ನಮಗೆ ಹೆಮ್ಮೆಯ ಸಂಗತಿ.

ಬನ್ನಿ, ನಮ್ಮ ಸಂಸ್ಕೃತಿಯ ಈ ಮಹತ್ವದ ಹಬ್ಬವನ್ನು ಒಟ್ಟಾಗಿ ಆಚರಿಸೋಣ. ಈ ಸುವರ್ಣ ಯಾತ್ರೆಯಲ್ಲಿ ನೀವೂ ನಮ್ಮೊಂದಿಗೆ ಸೇರಿ!

ಸುವರ್ಣ ಮಹೋತ್ಸವ ಸಮಾರಂಭ - ನಮ್ಮ ಸಂಸ್ಕೃತಿಯ ಉತ್ಸವಸಮುದಾಯದ ಬದುಕು ಹಸನಾಗಿಸಲು ನಿರಂತರ ಸೇವೆ ಸಲ್ಲಿಸುತ್ತಾ, ಅರ್ಧ ಶತಮಾನದ ಮೈಲಿಗಲ್ಲನ್ನು ತಲ...
22/08/2025

ಸುವರ್ಣ ಮಹೋತ್ಸವ ಸಮಾರಂಭ - ನಮ್ಮ ಸಂಸ್ಕೃತಿಯ ಉತ್ಸವ

ಸಮುದಾಯದ ಬದುಕು ಹಸನಾಗಿಸಲು ನಿರಂತರ ಸೇವೆ ಸಲ್ಲಿಸುತ್ತಾ, ಅರ್ಧ ಶತಮಾನದ ಮೈಲಿಗಲ್ಲನ್ನು ತಲುಪಿರುವ ನಮ್ಮ ಅರಸು ಅಸೋಸಿಯೇಷನ್ ನ ಈ ಸುವರ್ಣ ಸಂಭ್ರಮಕ್ಕೆ ಗೌರವ ಅತಿಥಿಯಾಗಿ ಆಗಮಿಸುತ್ತಿರುವ ಮೈಸೂರು ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಗೌರವಪೂರ್ವಕವಾಗಿ ಆಹ್ವಾನಿಸಲಾಯಿತು.

ಮಹಾರಾಜರಿಗೆ ನಮ್ಮ ಸಮಿತಿಯ ವತಿಯಿಂದ ತುಂಬು ಹೃದಯದ ಸ್ವಾಗತ. ಅವರ ಉಪಸ್ಥಿತಿಯು ನಮ್ಮ ಸಂಭ್ರಮಕ್ಕೆ ಮತ್ತಷ್ಟು ಗೌರವವನ್ನು ತರಲಿದೆ.

ದಿನಾಂಕ: 31 ಆಗಸ್ಟ್ 2025, ಭಾನುವಾರ
ಸಮಯ: ಬೆಳಿಗ್ಗೆ 9:30 ಗಂಟೆಗೆ
ಸ್ಥಳ: ತ್ರಿಪುರವಾಸಿನಿ (ಗೇಟ್–02), ಅರಮನೆ ಮೈದಾನ, ಬೆಂಗಳೂರು

ನಮ್ಮ ಸಂಸ್ಕೃತಿ, ನಮ್ಮ ಹೆಮ್ಮೆ — ಬನ್ನಿ, ಒಟ್ಟಾಗಿ ಸಂಭ್ರಮದ ಭಾಗವಾಗೋಣ!

ಅರಸು ಅಸೋಸಿಯೇಷನ್ ಸುವರ್ಣ ಮಹೋತ್ಸವ: ನಮ್ಮ ಭವ್ಯ ಪರಂಪರೆಯ 50 ವರ್ಷಗಳುಸೇವೆ, ಸಂಸ್ಕೃತಿ ಮತ್ತು ಸಮುದಾಯದ ಬಾಂಧವ್ಯವನ್ನು ಗಟ್ಟಿಗೊಳಿಸುತ್ತಾ ಸಾ...
21/08/2025

ಅರಸು ಅಸೋಸಿಯೇಷನ್ ಸುವರ್ಣ ಮಹೋತ್ಸವ: ನಮ್ಮ ಭವ್ಯ ಪರಂಪರೆಯ 50 ವರ್ಷಗಳು

ಸೇವೆ, ಸಂಸ್ಕೃತಿ ಮತ್ತು ಸಮುದಾಯದ ಬಾಂಧವ್ಯವನ್ನು ಗಟ್ಟಿಗೊಳಿಸುತ್ತಾ ಸಾಗಿದ ಅರಸು ಅಸೋಸಿಯೇಷನ್ ನ 50ನೇ ವರ್ಷಾಚರಣೆಯು ಇದೀಗ ಸುವರ್ಣ ಸಂಭ್ರಮದ ಹಂತಕ್ಕೆ ತಲುಪಿದೆ.

ಈ ಸಂಭ್ರಮದ ಭಾಗವಾಗಿ, ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ಕಾರ್ಯಕ್ರಮಕ್ಕೆ ಮೆರಗು ನೀಡುತ್ತಿರುವ ಮಾಜಿ ಸಂಸದರಾದ ಶ್ರೀ ಡಿ. ಕೆ. ಸುರೇಶ್ ಅವರಿಗೆ ಆದರದ ಸ್ವಾಗತ.

ದಿನಾಂಕ: 31 ಆಗಸ್ಟ್ 2025, ಭಾನುವಾರ
ಸಮಯ: ಬೆಳಿಗ್ಗೆ 9:30 ಗಂಟೆಗೆ
ಸ್ಥಳ: ತ್ರಿಪುರವಾಸಿನಿ (ಗೇಟ್–02), ಅರಮನೆ ಮೈದಾನ, ಬೆಂಗಳೂರು

ಹೆಮ್ಮೆಯಿಂದ ಆಯೋಜಿಸಿರುವ ಈ ಸುವರ್ಣ ಮಹೋತ್ಸವ ಸಮಾರಂಭಕ್ಕೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ.

ಅರಸು ಅಸೋಸಿಯೇಷನ್‌ ನ ಸುವರ್ಣ ಮಹೋತ್ಸವ ಸಮಾರಂಭಕ್ಕೆ ನಿಮ್ಮೆಲ್ಲರಿಗೂ ಆತ್ಮೀಯ ಆಹ್ವಾನಅರಸು ಅಸೋಸಿಯೇಷನ್ ತನ್ನ ಅಭಿಮಾನ ಮತ್ತು ಸೇವೆಯ ಪಯಣದ 50 ...
20/08/2025

ಅರಸು ಅಸೋಸಿಯೇಷನ್‌ ನ ಸುವರ್ಣ ಮಹೋತ್ಸವ ಸಮಾರಂಭಕ್ಕೆ ನಿಮ್ಮೆಲ್ಲರಿಗೂ ಆತ್ಮೀಯ ಆಹ್ವಾನ

ಅರಸು ಅಸೋಸಿಯೇಷನ್ ತನ್ನ ಅಭಿಮಾನ ಮತ್ತು ಸೇವೆಯ ಪಯಣದ 50 ಅಮೂಲ್ಯ ವರ್ಷಗಳನ್ನು ಪೂರೈಸಿರುವ ಈ ವಿಶೇಷ ಸಂದರ್ಭದಲ್ಲಿ, ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವ, ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ರಿಜ್ವಾನ್ ಅರ್ಷದ್ ಅವರನ್ನು ಪ್ರೀತಿ ಮತ್ತು ಗೌರವದಿಂದ ಸ್ವಾಗತಿಸುತ್ತಿದ್ದೇವೆ.

ದಿನಾಂಕ: 31 ಆಗಸ್ಟ್ 2025, ಭಾನುವಾರ
ಸಮಯ: ಬೆಳಿಗ್ಗೆ 9:30 ಗಂಟೆಗೆ
ಸ್ಥಳ: ತ್ರಿಪುರವಾಸಿನಿ (ಗೇಟ್–02), ಅರಮನೆ ಮೈದಾನ, ಬೆಂಗಳೂರು

ಬನ್ನಿ, ನಮ್ಮ ಐಕ್ಯತೆ ಮತ್ತು ಸಂಸ್ಕೃತಿಯ ಪಯಣದ ಈ ಸುವರ್ಣ ಕ್ಷಣಕ್ಕೆ ಸಾಕ್ಷಿಯಾಗೋಣ ಮತ್ತು ಒಟ್ಟಾಗಿ ಈ ಸಂಭ್ರಮವನ್ನು ಹಂಚಿಕೊಳ್ಳೋಣ!

Address

Bangalore

Opening Hours

Monday 10am - 6pm
Tuesday 10am - 6pm
Wednesday 10am - 6pm
Thursday 10am - 6pm
Friday 10am - 6pm
Saturday 10am - 6pm
Sunday 10am - 6pm

Telephone

+918022261953

Alerts

Be the first to know and let us send you an email when Ursu Association posts news and promotions. Your email address will not be used for any other purpose, and you can unsubscribe at any time.

Share

Category