05/09/2025
ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮ: ||
ಶಿಕ್ಷಣದ ಮೌಲ್ಯವನ್ನು ಉತ್ತೇಜಿಸಲು ತನ್ನ ಇಡೀ ಜೀವನವನ್ನು ಮುಡಿಪಾಗಿಟ್ಟ ಶ್ರೇಷ್ಠ ಆದರ್ಶ ಶಿಕ್ಷಕರು, ಶಿಕ್ಷಣ ತಜ್ಞರು, ಮಾಜಿ ರಾಷ್ಟ್ರಪತಿಗಳು ಹಾಗೂ ಭಾರತರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಗೌರವ ಸ್ಮರಣೆಯೊಂದಿಗೆ, ನಮ್ಮ ಬದುಕಿಗೆ ದಾರಿ ತೋರುವ ಎಲ್ಲಾ ಶಿಕ್ಷಕರಿಗೂ ಅಭಿನಂದನೆಗಳು.
ಮೈಸೂರು ಒಡೆಯರ್ ಮಹಾರಾಜರುಗಳು, ವಿಶೇಷವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್, ಕರ್ನಾಟಕದ ಶಿಕ್ಷಣ ಮತ್ತು ಸಮಾಜದ ಅಭಿವೃದ್ಧಿಗೆ ಅಸಾಧಾರಣ ಕೊಡುಗೆ ನೀಡಿದ್ದಾರೆ. ಅವರ ಆಡಳಿತಕಾಲವನ್ನು ಕನ್ನಡನಾಡಿನ "ಸುವರ್ಣಯುಗ" ಎಂದು ಕರೆಯಲಾಗುತ್ತದೆ.
ಕರ್ನಾಟಕ ಶಿಕ್ಷಣಕ್ಕೆ ನಮ್ಮ ಮೈಸೂರು ಸಂಸ್ಥಾನದ ಶಿಕ್ಷಣ ಕ್ಷೇತ್ರದ ಪ್ರಮುಖ ಕೊಡುಗೆಗಳು:
ಪ್ರಾಥಮಿಕ ಶಿಕ್ಷಣ ಕಡ್ಡಾಯ:
• ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಿ, ಸಾಮಾನ್ಯ ಜನರಿಗೆ ಶಿಕ್ಷಣದ ಹಕ್ಕನ್ನು ಖಚಿತಪಡಿಸಿದರು.
• ದಲಿತರು ಮತ್ತು ಹಿಂದುಳಿದ ಸಮುದಾಯಗಳ ಮಕ್ಕಳಿಗೂ ಸರ್ಕಾರಿ ಶಾಲೆಗಳಲ್ಲಿ ಪ್ರವೇಶದ ವ್ಯವಸ್ಥೆ ಮಾಡಿದರು.
ಮೈಸೂರು ವಿಶ್ವವಿದ್ಯಾಲಯ (1916):
• ಇದು ಭಾರತದ ಮೊದಲ ಪ್ರಾದೇಶಿಕ ವಿಶ್ವವಿದ್ಯಾಲಯ, ವಿಜ್ಞಾನ, ಕಲೆ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣಕ್ಕೆ ದಾರಿ ಮಾಡಿಕೊಟ್ಟಿತು.
• ಮೈಸೂರು ವಿಶ್ವವಿದ್ಯಾಲಯವು ಅನೇಕ ವಿದ್ವಾಂಸರು, ಸಾಹಿತ್ಯಕಾರರು ಮತ್ತು ವಿಜ್ಞಾನಿಗಳನ್ನು ದೇಶಕ್ಕೆ ನೀಡಿದೆ.
ಭಾರತೀಯ ವಿಜ್ಞಾನ ಸಂಸ್ಥೆ (IISc):
• ಜಗತ್ತಿನಲ್ಲಿ ಪ್ರಸಿದ್ಧವಾಗಿರುವ IISc ಬೆಂಗಳೂರು ಸ್ಥಾಪನೆಗೆ ಒಡೆಯರ್ ರ ಬೆಂಬಲ ಅತ್ಯಂತ ಮಹತ್ವದ್ದು.
• ತಾಂತ್ರಿಕ ಶಿಕ್ಷಣ ಮತ್ತು ವೈಜ್ಞಾನಿಕ ಸಂಶೋಧನೆಗೆ ಅವರು ನೀಡಿದ ಪ್ರೋತ್ಸಾಹ ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸಿತು.
ಮಹಿಳಾ ಶಿಕ್ಷಣ ಮತ್ತು ಸಬಲೀಕರಣ:
• ಮಹಾರಾಣಿ ಮಹಿಳಾ ಕಾಲೇಜು ಸ್ಥಾಪಿಸಿ, ಮಹಿಳೆಯರು ಉನ್ನತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿದರು.
• ಎಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ಬಾಲ್ಯ ವಿವಾಹವನ್ನು ನಿಷೇಧಿಸಿದರು.
• ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ ಭಾರತದ ಮೊದಲ ಆಡಳಿತಗಾರರಲ್ಲಿ ಒಡೆಯರ್ ಪ್ರಮುಖರು.
ತಾಂತ್ರಿಕ ಶಿಕ್ಷಣ:
• ತಾಂತ್ರಿಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ, ಮುಂದಿನ ದಿನಗಳಲ್ಲಿ IIT, IISC, ಇಂಜಿನಿಯರಿಂಗ್ ಕಾಲೇಜುಗಳು ಸ್ಥಾಪನೆಯ ಭಿತ್ತಿಕೆ ಹಾಕಿದರು.
ಶಿಕ್ಷಣದ ಜೊತೆಗೆ, ಉದ್ಯೋಗ ಸೃಷ್ಟಿ ಮತ್ತು ಕೈಗಾರಿಕಾ ಅಭಿವೃದ್ಧಿಯಲ್ಲಿಯೂ ಮೈಸೂರು ಒಡೆಯರ್ ರು ಮುಂಚೂಣಿಯಲ್ಲಿದ್ದರು:
• ಮೈಸೂರು ಸ್ಯಾಂಡಲ್ ಸೋಪ್ – ದೇಶ-ವಿದೇಶಗಳಲ್ಲಿ ಪ್ರಸಿದ್ಧವಾಗಿರುವ ಉದ್ಯಮ.
• ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಸ್ಥಾವರ (VISL) – ಕೈಗಾರಿಕಾ ಕ್ರಾಂತಿಗೆ ಮುನ್ನುಡಿ ಬರೆದಿತು.
• BHEL (ಭಾರತ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್) ಸ್ಥಾಪನೆಗೆ ಅಡಿಪಾಯ ಹಾಕಿದರು.
ಆ ಕಾಲಘಟ್ಟದಲ್ಲಿ ಶಿಕ್ಷಣ, ಮಹಿಳಾ ಹಕ್ಕುಗಳು, ತಾಂತ್ರಿಕ ಪ್ರಗತಿ ಹಾಗೂ ಕೈಗಾರಿಕಾ ವಿಕಾಸವನ್ನು ಒಟ್ಟಾಗಿ ಪ್ರೋತ್ಸಾಹಿಸಿದ ಒಡೆಯರ್ ಮಹಾರಾಜರ ಕಾರ್ಯವೈಖರಿಗಳು ಅಪಾರವಾಗಿದ್ದವು.
ಇವುಗಳು ನಮ್ಮ ಅರಸು ಸಮುದಾಯಕ್ಕೆ ಮತ್ತು ಕನ್ನಡನಾಡಿನ ಇಡೀ ಜನತೆಗೆ ಹೆಮ್ಮೆಯ ಸಂಗತಿ.
ಮೈಸೂರು ಸಂಸ್ಥಾನ – ಕರ್ನಾಟಕ ಶಿಕ್ಷಣ ಮತ್ತು ಪ್ರಗತಿಯ ಮೂಲಸ್ತಂಭ!