25/03/2026
ಹಲವು ದಿನಗಳಿಂದ ಬೈಲಹೊಂಗಲ ನಗರದ ಪಿಂಜಾರ ಗಲ್ಲಿಯಲ್ಲಿ ಸ್ಥಳೀಯ ಜನರ ಜೀವಕ್ಕೆ ಅಪಾಯಕಾರಿ ಸಮಸ್ಯೆಯಾಗಿದ್ದ ವಿದ್ಯುತ್ ತಂತಿಗಳು ಜೊತು ಬಿದ್ದು ಮನೆಯ ಛಾವಣಿಗೆ ತಾಗುತ್ತಿರುವದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಬೈಲಹೊಂಗಲ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮಲಿಕಜಾನ ಮುಲ್ಲಾ ರವರು "X" ಮೂಲಕ ಸರಕಾರದ ಗಮನಸೆಳೆದು ಸಮಸ್ಯೆಯನ್ನು ಬಗೆಹರಿಸಿದರು.