27/07/2016
Kavuledurga Fort ಕವಲೇದುರ್ಗದ ಕೋಟೆ
Kavuledurga Fort Kannada ಕವಲೇದುರ್ಗದ ಕೋಟೆ is a 9th-century fort, located at the distance of 18 km from Thirthahalli, Shivamogga (Shimoga) District.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಕವಲೇದುರ್ಗ ಕೋಟೆ ಶಿಸ್ತಿಗೆ ಹೆಸರುವಾಸಿಯಾಗಿದ್ದ ಶಿವಪ್ಪ ನಾಯಕನ ಕಾಲದ್ದು. ಐತಿಹಾಸಿಕ ಮಹತ್ವದ ಈ ಕೋಟೆ ಈಗಲೂ ತನ್ನ ಆಕರ್ಷಣೆ ಉಳಿಸಿಕೊಂಡಿದೆ. ಪ್ರತಿದಿನ ನೂರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಕೋಟೆಯ ಅಂದವನ್ನು ಕಣ್ತುಂಬಿಕೊಳ್ಳುತ್ತಾರೆ.
The fort was built in the 9th century and then it was renovated in the 14th century by Cheluvarangappa. Kavaledurga also called Bhuvanagiri was a stronghold of the Nayakas of Keladi who were the feudatories under the Vijayaanagara rulers and later became independent after the fall of the Vijayanagara kingdom.
ಮಲ್ಲವ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಇದು 80 ಎಕರೆಗೂ ಹೆಚ್ಚು ವಿಸ್ತಾರದಲ್ಲಿದೆ.ಮಲ್ಲವರು ಕವಲೇದುರ್ಗ ಕೋಟೆಯನ್ನು ವಶಕ್ಕೆ ಪಡೆದು ಭುವನಗಿರಿ ದುರ್ಗ ಎಂಬ ಹೆಸರಿಟ್ಟು ಆಳ್ವಿಕೆ ನಡೆಸಿದರು.
ಮಲ್ಲವ ವಂಶದಲ್ಲಿ ಪ್ರಖ್ಯಾತರಾದವರು ಶಿವಪ್ಪ ನಾಯಕ, ರಾಣಿ ಚೆನ್ನಮ್ಮಾಜಿ ಮತ್ತು ರಾಣಿ ವೀರಮ್ಮಾಜಿ.ಛತ್ರಪತಿ ಶಿವಾಜಿ ಮಹಾರಾಜನ ಮಗನಾದ ರಾಜಾರಾಮನಿಗೆ ಆಶ್ರಯ ನೀಡಿದ್ದು ಕವಲೇದುರ್ಗ ಸಂಸ್ಥಾನ ಎಂಬುದು ಇತಿಹಾಸ ಪುಟದಲ್ಲಿ ದಾಖಲಾಗಿದೆ.
18 ನೇ ಶತಮಾನದಲ್ಲಿ ಹೈದರಾಲಿ ಹಾಗೂ ಟಿಪ್ಪೂ ಸುಲ್ತಾನರ ದಾಳಿಯಿಂದ ಕವಲೇದುರ್ಗ ಕೋಟೆಯ ಸ್ವರೂಪ ಹಾಳಾಗಿದೆ. ಕವಲೇದುರ್ಗ ಆಳುತ್ತಿದ್ದವ ಕೆಳದಿ ನಾಯಕರು ಆರಂಭದಲ್ಲಿ ವಿಜಯನಗರ ಅರಸರ ಸಾಮಂತರಾಗಿದ್ದರು. ನಂತರ ಸ್ವಾತಂತ್ರ್ಯ ಘೋಷಿಸಿಕೊಂಡರು.
Venkatappa Nayaka (A.D. 1582-1629) fortified the place here. Built a palace and made it an Agrahara with a Mahattina Matha. A Sringeri Matha. A treasury, a granary, stables for elephants and horses and ponds.
The fort at Kavaledurga has three lines of walls, which are constructed of huge granite blocks following the natural contour of the hillock. Each fortification has a gateway flanked by guard- rooms on either side In between the fortifications there are temples, a ruined palace site and basement of structures.
At the summit of the hill almost at the centre overlooking the western sea is a small temple popularly known as Shikhareshvara or Srikanthesvara temple. A Nandi.mantapa and an entrance porch commanding a fine view of the setting sun beyond the western horizon. The palace site within the fort has ornate basement of a large terraced structure.
ವೆಂಕಟಕಪ್ಪ ನಾಯಕ ಈ ಕೋಟೆಯ ನಿರ್ಮಾತೃ. ಕೋಟೆಯ ಆವರಣದಲ್ಲಿ ಅರಮನೆ, ಮಹತ್ತಿನ ಮಠ, ಶೃಂಗೇರಿಮಠ, ಟಂಕಶಾಲೆ, ಕಣಜಗಳು, ಆನೆ ಮತ್ತು ಕುದುರೆ ಲಾಯಗಳಿದ್ದವು.ಕೊಳ ಮತ್ತು ನೀರಿನ ವ್ಯವಸ್ಥೆ ಮಾಡಿ ಇದನ್ನು ಸುಸಜ್ಜಿತ ಅಗ್ರಹಾರವನ್ನಾಗಿ ರೂಪಿಸಲಾಗಿತ್ತು. ಈಗಲೂ ಇವುಗಳು ಕಾಣಸಿಗುತ್ತವೆ. ಆದರೆ ಅದರ ಹಾಳುಬಿದ್ದ ಸ್ಥಿತಿ ಖೇದ ಉಂಟುಮಾಡುತ್ತದೆ.
ಗುಡ್ಡದ ರೂಪರೇಷೆ ಅನುಸರಿಸಿ ಬೃಹತ್ ಕಲ್ಲುಗಳನ್ನು ಬಳಸಿ ಮೂರು ಸುತ್ತನ ಕೋಟೆಯನ್ನು ಕಟ್ಟಲಾಗಿದೆ. ಕೋಟೆಯ ಇಕ್ಕೆಲಗಳಲ್ಲಿ ಪ್ರತಿ ಸುತ್ತಿನಲ್ಲಿ ಕಾವಲುಗಾರರ ಕೋಠಿ ಸಹಿತ ಪ್ರವೇಶದ್ವಾರವಿದೆ. ಕೋಟೆಯ ತುದಿಯಲ್ಲಿ ಶ್ರೀಕಂಠೇಶ್ವರ ಎಂಬ ಸಣ್ಣ ದೇವಸ್ಥಾನವಿದೆ.
ಕೋಟೆಯಲ್ಲಿ ಶಿಥಿಲಗೊಂಡ ಅರಮನೆ ನಿವೇಶನಗಳು ಮತ್ತು ಕಟ್ಟಡಗಳ ಅವಶೇಷಗಳಿವೆ. ಸಾಕಷ್ಟು ಮಾಹಿತಿಯನ್ನು ಪುರಾತತ್ವ ಸರ್ವೇಕ್ಷಣೆ ಇಲಾಖೆಯು ಕೋಟೆ ಪ್ರವೇಶದ್ವಾರದ ಫಲಕದಲ್ಲಿ ತಿಳಿಸಿದೆ.
ಕವಲೇದುರ್ಗದಲ್ಲಿ ವಿಶ್ವನಾಥೇಶ್ವರ ದೇವಾಲಯವಿದೆ. ಈ ದೇವಾಲಯದ ಹೊರಭಾಗದಲ್ಲಿ ಅನೇಕ ಕಲಾಕೃತಿಗಳನ್ನು ಕಾಣಬಹುದು. ಕಾಶಿಯಿಂದ ತಂದ ಅಮೃತಶಿಲೆಯ ವಿಶ್ವನಾಥೇಶ್ವರನ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಕೋಟೆ ವೀಕ್ಷಣೆಗೆ ಹೋಗುವ ವರಿಂದ ಶುಲ್ಕ ಸಂಗ್ರಹಿಸಿಕೊಳ್ಳುತ್ತಾರೆ.
ಸುತ್ತಲಿನ ಪ್ರೇಕ್ಷಣೀಯ ಸ್ಥಳಗಳುಕವಲೇದುರ್ಗದಿಂದ ಸುಮಾರು 60 ಕಿ.ಮೀ. ದೂರದಲ್ಲಿ ಅರುಣಗಿರಿ ಎಂಬ ಸ್ಥಳವಿದೆ. 900 ಕ್ಕೂ ಹೆಚ್ಚು ಮೆಟ್ಟಿಲುಗಳಿರುವ ಬೆಟ್ಟದ ಮೇಲೆ ವೆಂಕಟರಮಣ ಸ್ವಾಮಿ ದೇವಾಲಯವಿದೆ. ಅದು ಬಿಟ್ಟರೆ ಸಿಬ್ಬಲು ಗುಡ್ಡೆ ಇದೆ. ಕುವೆಂಪು ಅವರ ಸಾಹಿತ್ಯದಲ್ಲಿ ಪ್ರಸ್ತಾಪವಾಗುವ ಸಿಬ್ಬಲುಗುಡ್ಡೆ ಸಹ ಕವಲೇದುರ್ಗಕ್ಕೆ ಸಮೀಪವಿದೆ.ಸೂರ್ಯಾಸ್ತ ವೀಕ್ಷಣೆಕವಲೇದುರ್ಗ ಕೋಟೆಯಲ್ಲಿ ಸೂರ್ಯಸ್ತ ವೀಕ್ಷಣೆಗೆ ಸುಂದರ ಸ್ಥಳವಿದೆ. ಆಗುಂಬೆಯಲ್ಲಿ ಕಾಣಿಸುವಂತೆ ಸೂರ್ಯ ಕೆಂಬಣ್ಣದಲ್ಲಿ ಮುಳುಗುವುದನ್ನು ಸವಿಯಬಹುದು. ಆದರೆ ಶುಭ್ರ ಆಕಾಶ ಇರಬೇಕಷ್ಟೇ.
ಕವಲೇದುರ್ಗ ಎಲ್ಲಿದೆ? ಬೆಂಗಳೂರಿನಿಂದ 340 ಕಿ.ಮೀ, ತೀರ್ಥಹಳ್ಳಿಯಿಂದ 24 ಕಿ.ಮೀ ಹಾಗೂ ಶಿವಮೊಗ್ಗದಿಂದ 75 ಕಿ.ಮೀ ದೂರದಲ್ಲಿದೆ. ತೀರ್ಥಹಳ್ಳಿ - ಸಾಲೂರು ಮಾರ್ಗವಾಗಿ ಕವಲೇದುರ್ಗ ತಲುಪಬೇಕು.