29/11/2024
ಅಖಿಲ ಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆಯ ನಾಯಕ ಮತAIRS ೆಡ್ಸ್ಟಾರ್ ಸದಸ್ಯರಾದ ಕಾಮ್ರೇಡ್ ನಿರಂಜನ್ (ಅಂಜನ ಆಜಾದ್) ಜತೆ ಒಗ್ಗಟ್ಟಾಗಿ ನಿಲ್ಲೋಣಾ!
#ಕಾಮ್ರೇಡ್ #ನಿರಂಜನ್ ಬರೆಯುತ್ತಾರೆ :
ಕಳೆದ ಎರಡು ವಾರಗಳಲ್ಲಿ, ಕೇರಳದ ರಾಜ್ಯ ವಿಶೇಷ ಶಾಖೆ ಮತ್ತು ಗುಪ್ತಚರ ಬ್ಯೂರೋ ನಿರಂತರವಾಗಿ ನನ್ನ ಮನೆ, ನನ್ನ ನೆರೆಹೊರೆ ಮತ್ತು ನನ್ನ ಗ್ರಾಮಕ್ಕೆ ಭೇಟಿ ನೀಡಿ ಪರಿಚಯಸ್ಥರಲ್ಲಿ ನನ್ನ ಬಗ್ಗೆ ವಿಚಾರಿಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ನಾನು ಕೇರಳಕ್ಕೆ ಹೋಗಿರಲಿಲ್ಲ. ನಿನ್ನೆ ಟ್ಯಾಪಿಂಗ್ ಘಟನೆ ನಡೆದಾಗ, ಕೆಲವು ಸೆಕೆಂಡುಗಳ ಕಾಲ, ನನ್ನನ್ನು ಫೋನ್ ಮೂಲಕ ಕರೆದ ಒಡನಾಡಿಗೆ ನನ್ನ ಧ್ವನಿ ಕೇಳಲಿಲ್ಲ. ಕರೆಯನ್ನು ಟ್ಯಾಪ್ ಮಾಡುತ್ತಿದ್ದ ವ್ಯಕ್ತಿಯ ಧ್ವನಿ ಮಾತ್ರ ಕೇಳಿಸಿತು. ನನ್ನನ್ನು ಠಾಣೆಗೆ ಕರೆದೊಯ್ದಿದ್ದಾರೆ ಎಂದು ಭಾವಿಸಿ ನನ್ನೊಂದಿಗೆ ಮಾತಾಡುತ್ತಿದ್ದವರು ಭಯಗೊಂಡರು. ಕೇಂದ್ರ ಪೊಲೀಸ್ ಪಡೆಗಳು, ಕೇರಳ ಪೊಲೀಸರೊಂದಿಗೆ (ಇವರು ಏಕಕಾಲದಲ್ಲಿ #ಸಿಪಿಎಂ ಸರ್ಕಾರ ಮತ್ತು #ಆರ್ಎಸ್ಎಸ್ನಿಂದ ನಿಯಂತ್ರಿಸಲ್ಪಡುತ್ತಾರೆ) ಒಟ್ಟಾಗಿ ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ. ಎಸ್ಎಫ್ಐ ಅಥವಾ ಇತರ ಯಾವುದೇ ಮುಖ್ಯವಾಹಿನಿಯ ಸಂಘಟನೆಯೊಂದಿಗೆ ಕೆಲಸ ಮಾಡುವ ಕೇರಳದ ಯಾವುದೇ ವ್ಯಕ್ತಿ ಇತ್ತೀಚೆಗೆ ಇಂಥ ಸಮಸ್ಯೆಯನ್ನು ಎದುರಿಸಲಿಲ್ಲ. ಇದರ ಮೂಲಕ,ಫ್ಯಾಸಿಸ್ಟ್ರು ಮತ್ತು ವಿವಿಧ ರಾಜ್ಯಗಳ ಆಡಳಿತ ವರ್ಗದ ಪಕ್ಷಗಳ ನಡುವಿನ ನಂಟು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು.
#ಅಂಜನ #ಅಜಾದ್
ೇಂದ್ರ